AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Financial Changes: ಇಪಿಎಫ್​​ಒ 3.0 ಸೇರಿದಂತೆ ಜೂನ್ ತಿಂಗಳಲ್ಲಿ ಹಣಕಾಸು ಪ್ರಭಾವಿಸುವ ಪ್ರಮುಖ ಬದಲಾವಣೆಗಳು

Important financial changes in June: ಜೂನ್ ತಿಂಗಳಲ್ಲಿ ಕೆಲ ಪ್ರಮುಖ ಹಣಕಾಸು ಬದಲಾವಣೆಗಳಿವೆ. ಇಪಿಎಫ್​​ಒದಿಂದ ಸುಧಾರಿತ ವ್ಯವಸ್ಥೆ ಜಾರಿಗೆ ಬರಲಿದೆ. ಆಧಾರ್ ಅನ್ನು ಆನ್​ಲೈನ್​​ನಲ್ಲಿ ಉಚಿತವಾಗಿ ಅಪ್​ಡೇಟ್ ಮಾಡುವ ಗಡುವು ಜೂನ್​​ನಲ್ಲಿ ಇದೆ. ಹಾಗೆಯೇ, ಟಿಡಿಎಸ್ ಸರ್ಟಿಫಿಕೇಟ್​​ಗಳು ನಿಮಗೆ ಇದೇ ಜೂನ್ 15ರೊಳಗೆ ಸಿಗಲಿದೆ.

Financial Changes: ಇಪಿಎಫ್​​ಒ 3.0 ಸೇರಿದಂತೆ ಜೂನ್ ತಿಂಗಳಲ್ಲಿ ಹಣಕಾಸು ಪ್ರಭಾವಿಸುವ ಪ್ರಮುಖ ಬದಲಾವಣೆಗಳು
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 29, 2025 | 6:58 PM

Share

ನವದೆಹಲಿ, ಮೇ 29: ಮುಂಬರುವ ಜೂನ್ ತಿಂಗಳಲ್ಲಿ ಸಾಮಾನ್ಯ ಜನರ ಹಣಕಾಸು ಸ್ಥಿತಿಯನ್ನು (financial changes) ಪ್ರಭಾವಿಸುವ ಕೆಲ ಬದಲಾವಣೆಗಳಾಗಲಿವೆ. ಕೆಲ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಪಾಲಿಸಿಗಳಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ಹಾಗೆಯೇ, ಹೊಸ ಅವತಾರದ ಇಪಿಎಫ್​​ಒ, ಆಧಾರ್, ಟಿಡಿಎಸ್ ಸರ್ಟಿಫಿಕೇಟ್ ಇತ್ಯಾದಿ ಸಂಗತಿಗಳು ಜೂನ್​​ನಲ್ಲಿ ಇವೆ. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ…

ಜೂನ್​​ನಲ್ಲಿ ಇಪಿಎಫ್​​ಒ 3.0

ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್​​ಒ ತನ್ನ ವ್ಯವಸ್ಥೆಯಲ್ಲಿ ಸುಧಾರಣೆ ತಂದಿದೆ. ಇಪಿಎಫ್​​ಒ 3.0 ಎನ್ನಲಾಗುವ ಈ ಸುಧಾರಿತ ವ್ಯವಸ್ಥೆಯು ಜೂನ್​​ನಲ್ಲಿ ಜಾರಿಗೆ ಬರಲಿದೆ. ಪಿಎಫ್ ಹಿಂಪಡೆಯುವ ಕ್ರಮ ಸರಳಗೊಳ್ಳಲಿದೆ. ಕೆವೈಸಿ ಅಪ್​​ಡೇಟ್ ಮಾಡುವ ಕ್ರಮವನ್ನೂ ಸರಳಗೊಳಿಸಲಾಗಿದೆ. ಕ್ಲೇಮ್ ಪ್ರೋಸಸಿಂಗ್ ಅವಧಿ ಕಡಿಮೆ ಆಗಲಿದೆ. ಎಟಿಎಂ ಕಾರ್ಡ್ ರೀತಿಯಲ್ಲಿ ಇಪಿಎಫ್​​ಒ ಹಣವನ್ನು ಎಟಿಎಂಗಳಲ್ಲಿ ವಿತ್​​ಡ್ರಾ ಮಾಡಲು ಕಾರ್ಡ್ ಪಡೆಯುವ ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ: ಇಪಿಎಸ್ ಪೆನ್ಷನ್ ಸ್ಕೀಮ್; ಕನಿಷ್ಠ ಪಿಂಚಣಿ 3,000 ರೂಗೆ ಏರುತ್ತಾ, 9,000 ರೂಗೆ ಏರುತ್ತಾ? ಇಲ್ಲಿದೆ ಡೀಟೇಲ್ಸ್

ಇದನ್ನೂ ಓದಿ
Image
ಕನಿಷ್ಠ ಇಪಿಎಸ್ ಪೆನ್ಷನ್ 9,000 ರೂಗೆ ಏರುತ್ತಾ?
Image
ಐಟಿಆರ್ ಸಲ್ಲಿಕೆ: ಸೆ. 15ಕ್ಕೆ ಡೆಡ್​​ಲೈನ್ ವಿಸ್ತರಣೆ
Image
ನಿಷ್ಕ್ರಿಯ ಇಪಿಎಫ್ ಖಾತೆಗಳಿಗೆ ಸಿಗುತ್ತದಾ ಬಡ್ಡಿ?
Image
ಇಪಿಎಫ್ ಖಾತೆಗಳನ್ನು ವಿಲೀನಗೊಳಿಸದಿದ್ದರೆ ಏನೇನು ಸಮಸ್ಯೆ?

ಟಿಡಿಎಸ್ ಸರ್ಟಿಫಿಕೇಟ್ ಪಡೆಯಲು ಗಡುವು

ತೆರಿಗೆ ಪಾವತಿದಾರರಿಗೆ ಫಾರ್ಮ್ 16 ಮತ್ತು ಫಾರ್ಮ್ 16ಎ, ಟಿಡಿಎಸ್ ಸರ್ಟಿಫಿಕೇಟ್​​ಗಳನ್ನು ನೀಡಲಾಗುತ್ತದೆ. ಇದಕ್ಕೆ ಡೆಡ್​​ಲೈನ್ ಜೂನ್ 15ಕ್ಕೆ ಇದೆ. ಸಂಬಳದಲ್ಲಿ ಟಿಡಿಎಸ್ ಮುರಿದುಕೊಳ್ಳಲಾಗಿದ್ದರೆ ಕಂಪನಿಯು ಉದ್ಯೋಗಿಗೆ ನೀಡುವ ಫಾರ್ಮ್ 16ನಲ್ಲಿ ಇವೆಲ್ಲವೂ ದಾಖಲಾಗಿರುತ್ತದೆ. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಜೂನ್ 15ರೊಳಗೆ ಫಾರ್ಮ್ 16 ಅನ್ನು ವಿತರಿಸಬಹುದು.

ಬ್ಯಾಂಕ್ ಎಫ್​​ಡಿಯನ್ನು ಹಿಂಪಡೆಯುವಾಗ ಟಿಡಿಎಸ್ ಮುರಿದುಕೊಳ್ಳಲಾಗುತ್ತದೆ. ಆಗ ಬ್ಯಾಂಕ್​ನಿಂದ ನೀವು ಟಿಡಿಎಸ್ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ. ಇವೆಲ್ಲವೂ ಕೂಡ ಐಟಿ ರಿಟರ್ನ್ ಫೈಲ್ ಮಾಡುವಾಗ ಅಗತ್ಯ ಬೀಳುತ್ತದೆ.

ಇದನ್ನೂ ಓದಿ: ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿ, ಐಟಿಆರ್ ಫೈಲಿಂಗ್​​ಗೆ ಡೆಡ್​​ಲೈನ್ ಜುಲೈ 31 ಅಲ್ಲ, ಸೆಪ್ಟೆಂಬರ್ 15ರವರೆಗೆ ವಿಸ್ತರಣೆ

ಆಧಾರ್ ಅನ್ನು ಉಚಿತವಾಗಿ ಅಪ್​ಡೇಟ್ ಮಾಡುವ ಡೆಡ್​​ಲೈನ್

ಆಧಾರ್ ಅನ್ನು ಆನ್​​ಲೈನ್​​ನಲ್ಲಿ ಉಚಿತವಾಗಿ ಅಪ್​​ಡೇಟ್ ಮಾಡಲು 2024ರ ಡಿಸೆಂಬರ್ 14ರವರೆಗೆ ಕಾಲಾವಕಾಶ ನೀಡಲಾಗಿತ್ತು. ಅದನ್ನು ಜೂನ್ 14ಕ್ಕೆ ವಿಸ್ತರಿಸಲಾಗಿದೆ. ಅಂದರೆ, ನಿಮ್ಮ ಉಚಿತ ಆಧಾರ್ ಅಪ್​​ಡೇಟ್ ಅವಕಾಶ ಜೂನ್ 14ಕ್ಕೆ ಮುಗಿಯುತ್ತದೆ. ಆ ಬಳಿಕ ನೀವು ಅಪ್​ಡೇಟ್ ಮಾಡಬೇಕೆಂದರೆ ಶುಲ್ಕ ಕಟ್ಟಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್