Jan-dhan account: ಸಾಮಾನ್ಯ ಉಳಿತಾಯ ಖಾತೆಯನ್ನು ಜನ್-ಧನ್ ಖಾತೆಗೆ ಬದಲಾಯಿಸುವುದು ಹೇಗೆ?

ಸಾಮಾನ್ಯ ಉಳಿತಾಯ ಖಾತೆಯನ್ನು ಜನ್ ಧನ್ ಖಾತೆಯಾಗಿ ಬದಲಾವಣೆ ಮಾಡಿಕೊಳ್ಳುವುದು ಹೇಗೆ ಎಂಬುದು ನಿಮಗೆ ಗೊತ್ತಾ? ಇಲ್ಲಿದೆ ಆ ಬಗೆಗಿನ ಉಪಯುಕ್ತವಾದ ಮಾಹಿತಿ

Jan-dhan account: ಸಾಮಾನ್ಯ ಉಳಿತಾಯ ಖಾತೆಯನ್ನು ಜನ್-ಧನ್ ಖಾತೆಗೆ ಬದಲಾಯಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
|

Updated on: May 10, 2021 | 3:51 PM

ಸಾಮಾನ್ಯ ಉಳಿತಾಯ ಖಾತೆಗಳು ದೊರಕಿಸದ ಕೆಲವು ಸೌಲಭ್ಯಗಳನ್ನು ಜನ್ ಧನ್ ಖಾತೆಯು ನೀಡುತ್ತದೆ. ಕನಿಷ್ಠ ಬ್ಯಾಲೆನ್ಸ್ ಇಡಬೇಕು ಅಂತಿಲ್ಲ, ಉಚಿತ ಲೈಫ್ ಇನ್ಷೂರೆನ್ಸ್, ವಿಸ್ತೃತ ಬಡ್ಡಿ ದರ, ಓವರ್ ಡ್ರಾಫ್ಟ್ ವ್ಯವಸ್ಥೆ ಇತ್ಯಾದಿ ದೊರೆಯುತ್ತದೆ. ನಿಮಗೆ ಗೊತ್ತಾ, ಯಾರು ಬೇಕಾದರೂ ತಮ್ಮ ಸಾಮಾನ್ಯ ಉಳಿತಾಯ ಖಾತೆಯನ್ನು ಪ್ರಧಾನಮಂತ್ರಿ ಜನ್-ಧನ್ ಯೋಜನಾ ಖಾತೆಯಾಗಿ ಬದಲಾಯಿಸಿಕೊಳ್ಳಬಹುದು. ಅದಕ್ಕೆ ಕೆಲಸವು ಸರಳ ಹಂತಗಳನ್ನು ಅನುಸರಿಸಿದರೆ ಸಾಕು.

ಪ್ರಾಥಮಿಕ ಮಾನದಂಡಗಳು ಪ್ರಧಾನಮಂತ್ರಿ ಜನ್ ಧನ್ ಯೋಜನಾ (PMJDY)ಗೆ ಅಪ್ಲೈ ಮಾಡಲು ಅರ್ಜಿಯನ್ನು ಭರ್ತಿ ಮಾಡಬೇಕು. ಈ ಯೋಜನೆ ಅಡಿಯಲ್ಲಿ ಖಾತೆಯನ್ನು ತೆರೆಯಲು ಭಾರತದ ನಾಗರಿಕರಾಗಿರಬೇಕು. 10 ವರ್ಷದ ಮೇಲ್ಪಟ್ಟ ಅಪ್ರಾಪ್ತರು ಜನ್-ಧನ್ ಖಾತೆಯನ್ನು ತೆರೆಯಬಹುದು.

ಸಾಮಾನ್ಯ ಖಾತೆಯನ್ನು ಜನ್-ಧನ್ ಖಾತೆಯಾಗಿ ಬದಲಾವಣೆ ಮಾಡಿಕೊಳ್ಳುವುದು ಬ್ಯಾಂಕಿಂಗ್ ನಿಯಮಗಳದೇ ಭಾಗವಾಗಿದೆ. ಗ್ರಾಹಕರು ಎಲ್ಲಿ ಖಾತೆಯನ್ನು ಹೊಂದಿರುತ್ತಾರೋ ಆ ಬ್ಯಾಂಕ್ ಶಾಖೆಗೆ ತೆರಳಬೇಕು. ಲಿಖಿತ ಅರ್ಜಿಯನ್ನು, ಜತೆಗೆ ಕೆವೈಸಿ ದಾಖಲಾತಿಗಳನ್ನು ಸಲ್ಲಿಸಿ, ರುಪೇ ಕಾರ್ಡ್ ವಿತರಿಸುವಂತೆ ಹಾಗೂ ಪ್ರಸ್ತುತ ಉಳಿತಾಯ ಖಾತೆಯನ್ನು ವರ್ಗಾವಣೆ ಮಾಡುವಂತೆ ಮನವಿ ಮಾಡಿಕೊಳ್ಳಬೇಕು. ಈ ಅರ್ಜಿಯನ್ನು ಸಲ್ಲಿಸಿದ ನಂತರ, ರುಪೇ ಡೆಬಿಟ್ ಕಾರ್ಡ್ ವಿತರಿಸಿದ ಮೇಲೆ ಮೂರರಿಂದ- ನಾಲ್ಕು ವರ್ಕಿಂಗ್ ಡೇಗಳಲ್ಲಿ ಉಳಿತಾಯ ಖಾತೆಯು ತಾನಾಗಿಯೇ ಜನ್- ಧನ್ ಖಾತೆಯಾಗಿ ಮಾರ್ಪಾಟಾಗುತ್ತದೆ.

ಅಗತ್ಯ ದಾಖಲಾತಿಗಳು ಖಾತೆದಾರರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಬ್ಯಾಂಕ್​ನ ಶಾಖೆ ಹೆಸರು, ಉದ್ಯಮ/ಉದ್ಯೋಗ ಮಾಹಿತಿ, ಅವಲಂಬಿತರ ಸಂಖ್ಯೆ, ವಾರ್ಷಿಕ ಆದಾಯ, ನಾಮಿನಿ, ಹಳ್ಳಿಯ ಕೋಡ್ ಅಥವಾ ಪಟ್ಟಣದ ಕೋಡ್ ಇತ್ಯಾದಿ ಮಾಹಿತಿಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಆಧಾರ್ ಸಲ್ಲಿಸಬೇಕು. ಜತೆಗೆ ಪ್ಯಾನ್ ಕಾರ್ಡ್, ಪಾಸ್​ಪೋರ್ಟ್, ನರೇಗಾ ಜಾಬ್​ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಈ ಪೈಕಿ ಯಾವುದಾದರೂ ನೀಡಬೇಕು.

ಜನ್-ಧನ್ ಅಂಕಿ-ಅಂಶ ದೇಶದಲ್ಲಿ ಜನ್-ಧನ್ ಖಾತೆ ಫಲಾನುಭವಿಗಳ ಸಂಖ್ಯೆ 2020-21ರ ಹಣಕಾಸು ವರ್ಷದ ಕೊನೆಗೆ 42.20 ಕೋಟಿ ಇದೆ. ಆ ಸಂಖ್ಯೆ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ ತಿಂಗಳಲ್ಲಿ 11 ಲಕ್ಷ ಹೆಚ್ಚಾಗಿ 42.31 ಲಕ್ಷ ಮುಟ್ಟಿದೆ. ಆದರೂ ಜನ್-ಧನ್ ಖಾತೆಯ ಠೇವಣಿ ಸರಾಸರಿ ಮೊತ್ತ ಮಾರ್ಚ್ ಕೊನೆಗೆ 3,449 ರೂಪಾಯಿ ಇದ್ದದ್ದು ಏಪ್ರಿಲ್ ಕೊನೆಗೆ ರೂ. 3,386.85ಕ್ಕೆ ಕುಸಿತವಾಗಿದೆ.

ಇದನ್ನೂ ಓದಿ: Jan Dhan account: ಜನ್​ಧನ್ ಖಾತೆಯ ಫಲಾನುಭವಿಗಳ ಸಂಖ್ಯೆ ಏಪ್ರಿಲ್​ನಲ್ಲಿ 11 ಲಕ್ಷ ಹೆಚ್ಚಳ

(How to convert normal savings account to Jan Dhan scheme account. Here is the procedure to follow)

ತಾಜಾ ಸುದ್ದಿ
ಲೀಲಾವತಿ ಅಂತಿಮ ದರ್ಶನಕ್ಕೆ ಹೇಗಿದೆ ವ್ಯವಸ್ಥೆ:ಜಿಲ್ಲಾಧಿಕಾರಿ ನೀಡಿದ ಮಾಹಿತಿ
ಲೀಲಾವತಿ ಅಂತಿಮ ದರ್ಶನಕ್ಕೆ ಹೇಗಿದೆ ವ್ಯವಸ್ಥೆ:ಜಿಲ್ಲಾಧಿಕಾರಿ ನೀಡಿದ ಮಾಹಿತಿ
ಕಣ್ಣೀರು ಹಾಕುತ್ತಲೇ ಲೀಲಮ್ಮನ ಪೋಟೋಗೆ ವಿನೋದ್ ಪೂಜೆ; ಇಲ್ಲಿದೆ ಭಾವುಕ ಕ್ಷಣ
ಕಣ್ಣೀರು ಹಾಕುತ್ತಲೇ ಲೀಲಮ್ಮನ ಪೋಟೋಗೆ ವಿನೋದ್ ಪೂಜೆ; ಇಲ್ಲಿದೆ ಭಾವುಕ ಕ್ಷಣ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ