LIC IPO: ಪ್ರತಿ ಷೇರಿಗೆ 949ರ ದರದಲ್ಲಿ ಎಲ್​ಐಸಿ ಐಪಿಒ ಮೂಲಕ 20,560 ಕೋಟಿ ರೂಪಾಯಿ ಸಂಗ್ರಹ

ಎಲ್​ಐಸಿ ಐಪಿಒ ಮೂಲಕ ಮೇಲ್​ಸ್ತರದ ದರ ಬ್ಯಾಂಡ್​ನಲ್ಲಿ 20,560 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರವು ಸಂಗ್ರಹಿಸಿದೆ.

LIC IPO: ಪ್ರತಿ ಷೇರಿಗೆ 949ರ ದರದಲ್ಲಿ ಎಲ್​ಐಸಿ ಐಪಿಒ ಮೂಲಕ 20,560 ಕೋಟಿ ರೂಪಾಯಿ ಸಂಗ್ರಹ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on:May 13, 2022 | 3:01 PM

ಭಾರತವು ತನ್ನ ಅತಿದೊಡ್ಡ ಐಪಿಒ ಆದ ಎಲ್​ಐಸಿ ಐಪಿಒದ (LIC IPO) ಮೇಲ್​ಸ್ತರ ದರದ ಬ್ಯಾಂಡ್​ ಲೆಕ್ಕಾಚಾರದಲ್ಲಿ 205.6 ಶತಕೋಟಿ ರೂಪಾಯಿಗಳನ್ನು (2.7 ಶತಕೋಟಿ ಯುಎಸ್​ಡಿ) ಸಂಗ್ರಹಿಸಿದೆ. ಸ್ಥಳೀಯ ಹೂಡಿಕೆದಾರರಿಂದ ಬಲವಾದ ಬೇಡಿಕೆ ಮತ್ತು ವಿದೇಶಿ ಫಂಡ್​ಗಳಿಂದ ಕೊನೆ ನಿಮಿಷದ ಆಸಕ್ತಿ ನಂತರ ಈ ಮೊತ್ತದ ಸಂಗ್ರಹ ಆಗಿದೆ. ಭಾರತೀಯ ಜೀವ ವಿಮಾ ನಿಗಮವು ಒಂದು ಷೇರನ್ನು 949 ರೂಪಾಯಿಗಳಿಗೆ ನೀಡಲಿದೆ ಎಂದು ಸರ್ಕಾರಿ ಸಂಸ್ಥೆಯು ಶುಕ್ರವಾರ ಸಲ್ಲಿಸಿದ ಪ್ರಾಸ್ಪೆಕ್ಟಸ್‌ನಲ್ಲಿ ತಿಳಿಸಿದೆ. ವಿನಿಮಯ ಕೇಂದ್ರದಲ್ಲಿ ಮೇ 17ರಿಂದ ವಹಿವಾಟು ಪ್ರಾರಂಭವಾಗಲಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈ ವಾರ ಸಬ್​ಸ್ಕ್ರಿಪ್ಷನ್ ಮುಕ್ತಾಯದ ಕೊನೆಯ ಕ್ಷಣದಲ್ಲಿ ಮಾರಾಟಕ್ಕಾಗಿ ತಮ್ಮ ಬಿಡ್‌ಗಳನ್ನು ಹೆಚ್ಚಿಸಿದರು. ಕರೆನ್ಸಿ ಅಪಾಯಗಳು ಮತ್ತು ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆಗಳ ಆಚೆಗೆ ಈ ಐಪಿಒ ದೂರವಿಟ್ಟರು. ಗಲ್ಫ್ ತೈಲ ದೈತ್ಯ ಕಂಪೆನಿಯಾದ ಸೌದಿ ಅರೇಬಿಯನ್ ಆಯಿಲ್ ಕಂಪೆನಿ 2019ರಲ್ಲಿ 29.4 ಬಿಲಿಯನ್ ಯುಎಸ್​ಡಿ ಲಿಸ್ಟಿಂಗ್ ಅನ್ನು ಉಲ್ಲೇಖಿಸಿ, ಇದನ್ನು ಭಾರತದ “ಅರಾಮ್ಕೊ ಕ್ಷಣ” ಎಂದು ಕರೆಯಲಾಗಿದೆ. ಅದು ವಿಶ್ವದ ಅತಿದೊಡ್ಡ ಐಪಿಒ ಆಗಿತ್ತು. ಎಲ್​ಐಸಿಯ ಐಪಿಒ ಅರಾಮ್ಕೋ ಐಪಿಒ ಅನ್ನು ಪ್ರಮಾಣದಲ್ಲಿ ಮಾತ್ರವಲ್ಲದೆ ಅದರ ಅವಲಂಬನೆಯಲ್ಲಿಯೂ ಹೋಲುತ್ತದೆ.

ಕೆಲವು ವಿದೇಶಿ ಖರೀದಿದಾರರು ಅದನ್ನು ತುಂಬಾ ದುಬಾರಿ ಎಂದು ಪರಿಗಣಿಸಿದರು. ಆ ನಂತರ ದೇಶೀಯ ಹೂಡಿಕೆದಾರರ ಮೇಲೆ ಭರವಸೆ ಇಡಲಾಯಿತು. ರೀಟೇಲ್ ಹೂಡಿಕೆದಾರರಿಗೆ ಆಫರ್ ಬೆಲೆಯಲ್ಲಿ 45 ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗಿದ್ದರೆ, ಪಾಲಿಸಿದಾರರು 60 ರೂಪಾಯಿಗಳ ರಿಯಾಯಿತಿಯನ್ನು ಪಡೆದರು.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: LIC IPO Allotment Status: ಎಲ್​ಐಸಿ ಐಪಿಒ ಹಂಚಿಕೆ ಮೇ 12ಕ್ಕೆ ಸಾಧ್ಯತೆ; ಆನ್​ಲೈನ್​ನಲ್ಲಿ ಸ್ಥಿತಿ ತಿಳಿಯಲು ಹೀಗೆ ಮಾಡಿ

Published On - 2:57 pm, Fri, 13 May 22

ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!