AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC IPO: ಪ್ರತಿ ಷೇರಿಗೆ 949ರ ದರದಲ್ಲಿ ಎಲ್​ಐಸಿ ಐಪಿಒ ಮೂಲಕ 20,560 ಕೋಟಿ ರೂಪಾಯಿ ಸಂಗ್ರಹ

ಎಲ್​ಐಸಿ ಐಪಿಒ ಮೂಲಕ ಮೇಲ್​ಸ್ತರದ ದರ ಬ್ಯಾಂಡ್​ನಲ್ಲಿ 20,560 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರವು ಸಂಗ್ರಹಿಸಿದೆ.

LIC IPO: ಪ್ರತಿ ಷೇರಿಗೆ 949ರ ದರದಲ್ಲಿ ಎಲ್​ಐಸಿ ಐಪಿಒ ಮೂಲಕ 20,560 ಕೋಟಿ ರೂಪಾಯಿ ಸಂಗ್ರಹ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:May 13, 2022 | 3:01 PM

Share

ಭಾರತವು ತನ್ನ ಅತಿದೊಡ್ಡ ಐಪಿಒ ಆದ ಎಲ್​ಐಸಿ ಐಪಿಒದ (LIC IPO) ಮೇಲ್​ಸ್ತರ ದರದ ಬ್ಯಾಂಡ್​ ಲೆಕ್ಕಾಚಾರದಲ್ಲಿ 205.6 ಶತಕೋಟಿ ರೂಪಾಯಿಗಳನ್ನು (2.7 ಶತಕೋಟಿ ಯುಎಸ್​ಡಿ) ಸಂಗ್ರಹಿಸಿದೆ. ಸ್ಥಳೀಯ ಹೂಡಿಕೆದಾರರಿಂದ ಬಲವಾದ ಬೇಡಿಕೆ ಮತ್ತು ವಿದೇಶಿ ಫಂಡ್​ಗಳಿಂದ ಕೊನೆ ನಿಮಿಷದ ಆಸಕ್ತಿ ನಂತರ ಈ ಮೊತ್ತದ ಸಂಗ್ರಹ ಆಗಿದೆ. ಭಾರತೀಯ ಜೀವ ವಿಮಾ ನಿಗಮವು ಒಂದು ಷೇರನ್ನು 949 ರೂಪಾಯಿಗಳಿಗೆ ನೀಡಲಿದೆ ಎಂದು ಸರ್ಕಾರಿ ಸಂಸ್ಥೆಯು ಶುಕ್ರವಾರ ಸಲ್ಲಿಸಿದ ಪ್ರಾಸ್ಪೆಕ್ಟಸ್‌ನಲ್ಲಿ ತಿಳಿಸಿದೆ. ವಿನಿಮಯ ಕೇಂದ್ರದಲ್ಲಿ ಮೇ 17ರಿಂದ ವಹಿವಾಟು ಪ್ರಾರಂಭವಾಗಲಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈ ವಾರ ಸಬ್​ಸ್ಕ್ರಿಪ್ಷನ್ ಮುಕ್ತಾಯದ ಕೊನೆಯ ಕ್ಷಣದಲ್ಲಿ ಮಾರಾಟಕ್ಕಾಗಿ ತಮ್ಮ ಬಿಡ್‌ಗಳನ್ನು ಹೆಚ್ಚಿಸಿದರು. ಕರೆನ್ಸಿ ಅಪಾಯಗಳು ಮತ್ತು ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆಗಳ ಆಚೆಗೆ ಈ ಐಪಿಒ ದೂರವಿಟ್ಟರು. ಗಲ್ಫ್ ತೈಲ ದೈತ್ಯ ಕಂಪೆನಿಯಾದ ಸೌದಿ ಅರೇಬಿಯನ್ ಆಯಿಲ್ ಕಂಪೆನಿ 2019ರಲ್ಲಿ 29.4 ಬಿಲಿಯನ್ ಯುಎಸ್​ಡಿ ಲಿಸ್ಟಿಂಗ್ ಅನ್ನು ಉಲ್ಲೇಖಿಸಿ, ಇದನ್ನು ಭಾರತದ “ಅರಾಮ್ಕೊ ಕ್ಷಣ” ಎಂದು ಕರೆಯಲಾಗಿದೆ. ಅದು ವಿಶ್ವದ ಅತಿದೊಡ್ಡ ಐಪಿಒ ಆಗಿತ್ತು. ಎಲ್​ಐಸಿಯ ಐಪಿಒ ಅರಾಮ್ಕೋ ಐಪಿಒ ಅನ್ನು ಪ್ರಮಾಣದಲ್ಲಿ ಮಾತ್ರವಲ್ಲದೆ ಅದರ ಅವಲಂಬನೆಯಲ್ಲಿಯೂ ಹೋಲುತ್ತದೆ.

ಕೆಲವು ವಿದೇಶಿ ಖರೀದಿದಾರರು ಅದನ್ನು ತುಂಬಾ ದುಬಾರಿ ಎಂದು ಪರಿಗಣಿಸಿದರು. ಆ ನಂತರ ದೇಶೀಯ ಹೂಡಿಕೆದಾರರ ಮೇಲೆ ಭರವಸೆ ಇಡಲಾಯಿತು. ರೀಟೇಲ್ ಹೂಡಿಕೆದಾರರಿಗೆ ಆಫರ್ ಬೆಲೆಯಲ್ಲಿ 45 ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗಿದ್ದರೆ, ಪಾಲಿಸಿದಾರರು 60 ರೂಪಾಯಿಗಳ ರಿಯಾಯಿತಿಯನ್ನು ಪಡೆದರು.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: LIC IPO Allotment Status: ಎಲ್​ಐಸಿ ಐಪಿಒ ಹಂಚಿಕೆ ಮೇ 12ಕ್ಕೆ ಸಾಧ್ಯತೆ; ಆನ್​ಲೈನ್​ನಲ್ಲಿ ಸ್ಥಿತಿ ತಿಳಿಯಲು ಹೀಗೆ ಮಾಡಿ

Published On - 2:57 pm, Fri, 13 May 22

ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್