ಕರ್ನಾಟಕದ ಬಗ್ಗೆ ಗೌರವ, ಆದರ ಹೊಂದಿದ್ದ ರತನ್ ಟಾಟಾ; ಹೇಗಿತ್ತು ಈ ರಾಜ್ಯದೊಂದಿಗೆ ಅವರ ಸಂಬಂಧ?

Ratan Tata connection with Karnataka: ದಿವಂಗತ ರತನ್ ಟಾಟಾ ಅವರಿಗೆ ಕರ್ನಾಟಕದ ಬಗ್ಗೆ ಭಾರೀ ಒಲವಿತ್ತು. ಹೂಡಿಕೆ ಮಾಡಲು ಕರ್ನಾಟಕ ಪ್ರಶಸ್ತ ಸ್ಥಳ ಎನ್ನುತ್ತಿದ್ದರು. ಯಲಹಂಕದಲ್ಲಿ ನಡೆಯುವ ಏರೋಶೋ ಬಗ್ಗೆ ಅವರಿಗೆ ಸಿಕ್ಕಾಪಟ್ಟೆ ಹುಚ್ಚು. ಫೈಟರ್ ಜೆಟ್​ಗಳನ್ನು ಅವರು ಓಡಿಸುತ್ತಿದ್ದರು. 2011ರಲ್ಲಿ ಅವರು ಅಂಥ ಫೈಟರ್ ವಿಮಾನ ಚಲಾಯಿಸಿದ್ದರು. ಆ ದಶಕದಲ್ಲಿ ತನಗೆ ಅತ್ಯಂತ ಅವಿಸ್ಮರಣೀಯ ಸಂದರ್ಭ ಎಂದು ವರ್ಣಿಸಿದ್ದರು.

ಕರ್ನಾಟಕದ ಬಗ್ಗೆ ಗೌರವ, ಆದರ ಹೊಂದಿದ್ದ ರತನ್ ಟಾಟಾ; ಹೇಗಿತ್ತು ಈ ರಾಜ್ಯದೊಂದಿಗೆ ಅವರ ಸಂಬಂಧ?
ರತನ್ ಟಾಟಾ
Follow us
|

Updated on:Oct 10, 2024 | 12:58 PM

ಬೆಂಗಳೂರು, ಅಕ್ಟೋಬರ್ 10: ನಿನ್ನೆ ಸಂಜೆ ವಿಧಿವಶರಾದ ಟಾಟಾ ಗ್ರೂಪ್ ಮಾಜಿ ಛೇರ್ಮನ್ ರತನ್ ಟಾಟಾ ಕರ್ನಾಟಕದ ಬಗ್ಗೆ, ಅದರಲ್ಲೂ ಬೆಂಗಳೂರಿನ ಬಗ್ಗೆ ಅಪಾರ ಒಲವು ಹೊಂದಿದ್ದರು. ಬಾಂಬೆಯಲ್ಲಿ (ಇಂದಿನ ಮುಂಬೈ) ಹುಟ್ಟಿದ್ದ 87 ವರ್ಷದ ರತನ್​ಜಿಗೆ ಬೆಂಗಳೂರಿನ ಸಂಬಂಧ ವ್ಯಾವಹಾರಿಕವೂ ಆಗಿತ್ತು, ಭಾವನಾತ್ಮಕವೂ ಆಗಿತ್ತು. ಫಿಲಾಂತ್ರೋಫಿ (ಸಮಾಜ ಸೇವೆ) ಕೆಲಸಗಳಿಂದ ಹಿಡಿದು ವಿವಿಧ ಉದ್ದಿಮೆಗಳವರೆಗೆ ರಾಜ್ಯದಲ್ಲಿ ಅವರ ಹೆಜ್ಜೆ ಗುರುತುಗಳಿವೆ.

ಬೆಂಗಳೂರಿನ ಏರ್​ಶೋ ಎಂದರೆ ಟಾಟಾಗೆ ಪಂಚಪ್ರಾಣ

ರತನ್ ಟಾಟಾ ಅವರಿಗೆ ಬೆಂಗಳೂರಿನಲ್ಲಿ ನಡೆಯುವ ಏರೋಶೋಗಳೆಂದರೆ ಬಹಳ ಪ್ರಿಯ. ಯಲಹಂಕದ ವಾಯು ನೆಲೆಯಲ್ಲಿ ನಡೆಯುವ ಈ ಏರೋ ಶೋನಲ್ಲಿ ಅವರು ಫೈಟರ್ ಜೆಟ್​ಗಳನ್ನು ಏರಿ ಹೋಗುತ್ತಿದ್ದರು. ಇಳಿವಯಸ್ಸಿನಲ್ಲೂ ಅವರು ಸಮರ ಸೇನಾನಿಯಂತೆ ಭಾಸವಾಗುತ್ತಿತ್ತು. ಫೈಟರ್ ಜೆಟ್​ನಲ್ಲಿ ಕೂತು ಅದನ್ನು ಚಲಾಯಿಸುವುದಕ್ಕೆ ಚಾಲಾಕಿತನದ ಜೊತೆಗೆ ಗಂಡೆದೆಯೂ ಬೇಕು. ರತನ್ ಟಾಟಾ ಇಂಥ ರೈಡ್​ಗಳನ್ನು ಬಹಳ ಇಷ್ಟಪಡುತ್ತಿದ್ದರು.

ಇಂಥದ್ದೇ ಒಂದು ಶೋನಲ್ಲಿ ಅವರು ಎಫ್18 ಸೂಪರ್ ಹಾರ್ನೆಟ್ ಫೈಟರ್ ಜೆಟ್ ಅನ್ನು ಚಲಾಯಿಸಿದ್ದರು. ಅದು 2011ರಲ್ಲಿ ಆದ ಘಟನೆ. 2020ರಲ್ಲಿ ಅವರು ಈ ಸಂದರ್ಭವನ್ನು ಮೆಲುಕು ಹಾಕುತ್ತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಒಂಬತ್ತು ವರ್ಷದ ಹಿಂದಿನ ಆ ಘಟನೆ ಈ ದಶಕದ ತನ್ನ ಅವಿಸ್ಮರಣೀಯ ಸಂದರ್ಭ ಎಂದು ಹೇಳಿದ್ದರು.

ಇದನ್ನೂ ಓದಿ: Tata Family Tree: ನುಸ್ಸರ್​ವಾಂಜಿಯಿಂದ ರತನ್ ಟಾಟಾವರೆಗೆ ಪ್ರತಿಷ್ಠಿತ ಟಾಟಾ ಕುಟುಂಬದ ವಂಶವೃಕ್ಷ ಇಲ್ಲಿದೆ

ಕರ್ನಾಟಕದಲ್ಲಿ ಹಲವು ಕ್ಯಾನ್ಸರ್ ಆಸ್ಪತ್ರೆಗಳ ಸ್ಥಾಪನೆ

ರತನ್ ಟಾಟಾ ಭಾರತ ಕಂಡ ಅತ್ಯಂತ ಯಶಸ್ವಿ ಉದ್ಯಮಿಯಷ್ಟೇ ಅಲ್ಲ, ಶ್ರೇಷ್ಠ ದಾನಿ, ಸಮಾಜಸೇವಕರೂ ಹೌದು. ಟಾಟಾ ಟ್ರಸ್ಟ್ಸ್ ಮೂಲಕ ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲಿ 10 ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿದ್ದರು. ಈ ಆಸ್ಪತ್ರೆಗಳಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಉತ್ಕೃಷ್ಟವಾದ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದೆ.

ಪಾರ್ಸಿ ಜನಾಂಗಕ್ಕೆ ಸೇರಿದರೂ ಅವರು ಯಾವತ್ತೂ ತಮ್ಮ ಸಮುದಾಯಕ್ಕೆ ಸೀಮಿತರಾದವರಲ್ಲ. ಸಾಕಷ್ಟು ಆದಾಯವನ್ನು ಅವರು ಫಿಲಾಂತ್ರೋಪಿ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದರು.

ಟಾಟಾ ಸ್ಥಾಪಿಸಿದ್ದು ಬೆಂಗಳೂರಿನ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್

ಭಾರತದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರಿನಲ್ಲಿದೆ. ಇದನ್ನು ಸ್ಥಾಪಿಸಿದ್ದು ಜಮ್​ಶೆಡ್​ಜಿ ಟಾಟಾ. ಮೂಲತಃ ಇದು ಟಾಟಾ ಇನ್ಸ್​ಟ್ಯೂಟ್. ಈಗ ಐಐಎಸ್​ಸಿ ಎಂದು ಬದಲಾದರೂ ಟಾಟಾ ಇನ್ಸ್​ಟಿಟ್ಯೂಟ್ ಗುರುತು ಈಗಲೂ ಇದೆ. ಟಾಟಾ ಗ್ರೂಪ್​ನಿಂದ ಈ ಸಂಸ್ಥೆಗೆ ಈಗಲೂ ಫಂಡಿಂಗ್ ಸಿಗುತ್ತದೆ.

ಕರ್ನಾಟಕದಲ್ಲಿ ಟಾಟಾ ಉದ್ದಿಮೆಗಳು…

ಬೆಂಗಳೂರಿನ ಏರ್​ಪೋರ್ಟ್​ನಲ್ಲಿ ಟಾಟಾ ಗ್ರೂಪ್​ನಿಂದ ಹಲವು ಯೋಜನೆಗಳು ಚಾಲನೆಯಲ್ಲಿವೆ. ಏರ್ ಇಂಡಿಯಾ ಸಂಸ್ಥೆಯ ಎಂಆರ್​ಒ ಘಟಕವು ಏರ್ಪೋರ್ಟ್​ನಲ್ಲಿ ಸ್ಥಾಪನೆ ಆಗುತ್ತಿದೆ.

ಇದನ್ನೂ ಓದಿ: Ratan Tata: ಸಾಕು ನಾಯಿಗೋಸ್ಕರ ಬ್ರಿಟನ್ ರಾಜಮನೆತನದ ಪ್ರತಿಷ್ಠಿತ ಪ್ರಶಸ್ತಿ ತಿರಸ್ಕರಿಸಿದ್ದ ರತನ್ ಟಾಟಾ

ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಸಂಸ್ಥೆಗಳು ಏರ್​ಪೋರ್ಟ್​ನಲ್ಲಿ ವಿವಿಧ ಯೋಜನೆಗಳಿಗೆ ಇತ್ತೀಚೆಗೆ ಎಂಒಯು ಮಾಡಿಕೊಂಡಿವೆ. ಅದರಲ್ಲಿ ಎಂಆರ್​ಒ ಘಟಕ ಸ್ಥಾಪನೆಯೂ ಸೇರಿದೆ. ಏರ್​ಕ್ರಾಫ್ಟ್ ಕನ್ವರ್ಷನ್, ಗನ್ ತಯಾರಿಕೆ, ಏರೋಸ್ಪೇಸ್ ಮತ್ತು ಡಿಫೆನ್ಸ್ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ ಸ್ಥಾಪನೆ ಇತ್ಯಾದಿ ಹಲವು ಯೋಜನೆಗಳು ಒಳಗೊಂಡಿವೆ.

ಹೂಡಿಕೆಗೆ ಕರ್ನಾಟಕ ಬೆಸ್ಟ್ ಎಂದಿದ್ದ ಟಾಟಾ

ಟಾಟಾ ಗ್ರೂಪ್ ಸಂಸ್ಥೆಗಳು ಯಾವುದೇ ಒಂದು ರಾಜ್ಯ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ. ದೇಶದ ಹಲವೆಡೆ ಅದರ ಉದ್ದಿಮೆಗಳು ಹರಡಿವೆ. ಆದರೂ ಕೂಡ ರತನ್ ಟಾಟಾ ಅವರಿಗೆ ಹೂಡಿಕೆ ವಿಚಾರದಲ್ಲಿ ಕರ್ನಾಟಕದ ಬಗ್ಗೆ ಒಲವು ಇತ್ತು. ಹಿಂದೊಮ್ಮೆ ರಾಜ್ಯದಲ್ಲಿ ನಡೆದ ಗ್ಲೋಬಲ್ ಇನ್ವೆಸ್ಟರ್ಸ್ ಸಮಾವೇಶದಲ್ಲಿ ಮಾತನಾಡುತ್ತಾ, ಹೂಡಿಕೆಗೆ ಕರ್ನಾಟಕ ಪ್ರಶಸ್ತ ಸ್ಥಳ ಎಂದಿದ್ದರು. ಕರ್ನಾಟಕದಲ್ಲಿ ಉನ್ನತ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಲಭ್ಯತೆ ಇದೆ ಎಂಬುದು ಅವರು ನೀಡುತ್ತಿದ್ದ ಒಂದು ಕಾರಣ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:27 am, Thu, 10 October 24

ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!
ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!
ಭಾರತ ರತ್ನ ರತನ್ ಟಾಟಾ ನಿಧನಕ್ಕೆ ಮುಂಬೈನಲ್ಲಿ ಪ್ರಕೃತಿಯಿಂದಲೂ ಶೋಕಾಚರಣೆ
ಭಾರತ ರತ್ನ ರತನ್ ಟಾಟಾ ನಿಧನಕ್ಕೆ ಮುಂಬೈನಲ್ಲಿ ಪ್ರಕೃತಿಯಿಂದಲೂ ಶೋಕಾಚರಣೆ
ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್​ಗೆ ಪ್ರೇಕ್ಷಕರು ನಿಬ್ಬೆರಗು
ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್​ಗೆ ಪ್ರೇಕ್ಷಕರು ನಿಬ್ಬೆರಗು
ಹರಿವ ನೀರಲ್ಲಿ ಕಾರುಗಳನ್ನು ಮುಂದಕ್ಕೆ ಓಡಿಸಲು ಚಾಲಕರ ಪಡಿಪಾಟಲು
ಹರಿವ ನೀರಲ್ಲಿ ಕಾರುಗಳನ್ನು ಮುಂದಕ್ಕೆ ಓಡಿಸಲು ಚಾಲಕರ ಪಡಿಪಾಟಲು
ನರಕದವರನ್ನು ಒಲಿಸಲು ತಪ್ಪು ನಿರ್ಧಾರ ತೆಗೆದುಕೊಂಡ್ರಾ ಹಂಸಾ?
ನರಕದವರನ್ನು ಒಲಿಸಲು ತಪ್ಪು ನಿರ್ಧಾರ ತೆಗೆದುಕೊಂಡ್ರಾ ಹಂಸಾ?
Navaratri 2024: ನವರಾತ್ರಿ 8ನೇ ದಿನ ಪೂಜಿಸಲಾಗುವ ಮಹಾಗೌರಿ ಮಹತ್ವವೇನು?
Navaratri 2024: ನವರಾತ್ರಿ 8ನೇ ದಿನ ಪೂಜಿಸಲಾಗುವ ಮಹಾಗೌರಿ ಮಹತ್ವವೇನು?
ಈ ರಾಶಿಯವರಿಗೆ ಮರೆವಿನ ಕಾರಣಕ್ಕೆ ಉದ್ಯೋಗದಲ್ಲಿ ಹಿನ್ನಡೆಯೆನಿಸುವುದು
ಈ ರಾಶಿಯವರಿಗೆ ಮರೆವಿನ ಕಾರಣಕ್ಕೆ ಉದ್ಯೋಗದಲ್ಲಿ ಹಿನ್ನಡೆಯೆನಿಸುವುದು
ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದ ಭಾರತೀಯರು: ಇಲ್ಲಿದೆ ನೋಡಿ ಹೈಲೈಟ್ಸ್
ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದ ಭಾರತೀಯರು: ಇಲ್ಲಿದೆ ನೋಡಿ ಹೈಲೈಟ್ಸ್
ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ
ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ