ಸೈಬರ್ ವಂಚನೆ ತಡೆಯಲು ಆರ್​ಬಿಐ ಕ್ರಮ; ಬ್ಯಾಂಕುಗಳಿಗೆ ಬೇರೆ ಡೊಮೇನ್, ಅಂತಾರಾಷ್ಟ್ರೀಯ ಪಾವತಿಗೆ ಹೆಚ್ಚುವರಿ ಸೆಕ್ಯುರಿಟಿ

RBI measures to bring safety in internet banking: ಇಂಟರ್ನೆಟ್ ಬ್ಯಾಂಕಿಂಗ್​ನಲ್ಲಿ ವಂಚನೆ ತಡೆಯಲು ಆರ್​ಬಿಐ ಕೆಲ ಕ್ರಮಗಳನ್ನು ಅವಲೋಕಿಸಿದೆ. ಬ್ಯಾಂಕುಗಳಿಗೆ ಮತ್ತು ಎನ್​ಬಿಎಫ್​ಸಿಗಳಿಗೆ ಪ್ರತ್ಯೇಕ ಇಂಟರ್ನೆಟ್ ಡೊಮೇನ್ ಅಳವಡಿಕೆಯನ್ನು ಜಾರಿಗೊಳಿಸಲಾಗುತ್ತಿದೆ. ಏಪ್ರಿಲ್​ನಿಂದ ಈ ಕ್ರಮ ಬರಬಹುದು. ಹಾಗೆಯೇ, ಭಾರತದೊಳಗಿನ ಡಿಜಿಟಲ್ ಪಾವತಿಗಳಿಗೆ ಇರುವಂತೆ ಅಂತಾರಾಷ್ಟ್ರೀಯ ಆನ್​ಲೈನ್ ಹಣ ಪಾವತಿಗೆ ಹೆಚ್ಚುವರಿ ದೃಢೀಕರಣ ವ್ಯವಸ್ಥೆಯನ್ನು ಜಾರಿಗೆ ತರಲು ಆರ್​ಬಿಐ ನಿರ್ಧರಿಸಿದೆ.

ಸೈಬರ್ ವಂಚನೆ ತಡೆಯಲು ಆರ್​ಬಿಐ ಕ್ರಮ; ಬ್ಯಾಂಕುಗಳಿಗೆ ಬೇರೆ ಡೊಮೇನ್, ಅಂತಾರಾಷ್ಟ್ರೀಯ ಪಾವತಿಗೆ ಹೆಚ್ಚುವರಿ ಸೆಕ್ಯುರಿಟಿ
ಬ್ಯಾಂಕಿಂಗ್

Updated on: Feb 07, 2025 | 12:40 PM

ನವದೆಹಲಿ, ಫೆಬ್ರುವರಿ 7: ರಸ್ತೆಯಲ್ಲಿ ಹೋಗುವಾಗ ಅಪಘಾತವಾಗುವ ರಿಸ್ಕ್ ಇರುವಂತೆ ಅಂತರ್ಜಾಲದಲ್ಲಿರುವಾಗ ವಂಚನೆಗೊಳಗಾಗುವ ರಿಸ್ಕ್ ಇರಬಹುದು. ಆನ್​ಲೈನ್​ನಲ್ಲಿ ಹಣಕಾಸು ವಂಚನೆ ನಿಗ್ರಹಿಸಲು ಸರ್ಕಾರ ನಿರಂತರವಾಗಿ ಒಂದಿಲ್ಲೊಂದು ಕ್ರಮ ತೆಗೆದುಕೊಳ್ಳುತ್ತಿರುತ್ತದೆ. ಆರ್​ಬಿಐ ಇದೀಗ ಇಂಟರ್ನೆಟ್ ಬ್ಯಾಂಕಿಂಗ್​ನ ಸುರಕ್ಷತೆ ಹೆಚ್ಚಿಸಲು ಕೆಲ ಹೊಸ ಕ್ರಮಗಳನ್ನು ಜಾರಿ ಮಾಡುತ್ತಿದೆ. ಆರ್​​ಬಿಐನ ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಎಂಪಿಸಿ ಸಭೆ ಬಳಿಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತೀಯ ಬ್ಯಾಂಕುಗಳಿಗೆ ಮತ್ತು ಹಣಕಾಸು ವಲಯಕ್ಕೆ ಬೇರೆ ಬೇರೆ ಡೊಮೈನ್​ಗಳನ್ನು ನೀಡುವುದೂ ಕೂಡ ಈ ಕ್ರಮಗಳಲ್ಲಿ ಒಂದು.

ಭಾರತೀ ಬ್ಯಾಂಕುಗಳಿಗೆ ಪ್ರತ್ಯೇಕವಾದ ‘bank.in’ ಎನ್ನುವ ಇಂಟರ್ನೆಟ್ ಡೊಮೈನ್ ಅನ್ನು ನಿಗದಿ ಮಾಡಲಾಗುತ್ತದೆ. ಈ ವರ್ಷದ ಏಪ್ರಿಲ್​ನಿಂದ ಈ ಡೊಮೈನ್ ಹೆಸರಿನ ನೊಂದಣಿ ಶುರುವಾಗುತ್ತದೆ ಎಂದು ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.

ಇದನ್ನೂ ಓದಿ: ಎಂಪಿಸಿ ಸಭೆ ಬಳಿಕ ಆರ್​ಬಿಐನ ಎಸ್​ಡಿಎಫ್, ರಿಪೋ, ಎಸ್​ಎಲ್​ಆರ್ ಇತ್ಯಾದಿ ಎಷ್ಟಿವೆ? ಇಲ್ಲಿದೆ ಇತ್ತೀಚಿನ ದರಗಳ ವಿವರ

ಈ ಡೊಮೈನ್ ಬದಲಾವಣೆಯಿಂದ ಬ್ಯಾಂಕಿಂಗ್ ವಂಚನೆಗಳು ತಡೆಯಲು ನೆರವಾಗಬಹುದು ಎಂದು ನಿರೀಕ್ಷಿಸಿರುವ ಅವರು, ಬ್ಯಾಂಕ್ ಡೊಮೈನ್ ಬದಲಾವಣೆ ಬಳಿಕ ಹಣಕಾಸು ವಲಯದ ಸಂಸ್ಥೆಗಳ (ಎನ್​ಬಿಎಫ್​ಸಿ) ವೆಬ್​​ಸೈಟುಗಳಿಗೆ ಪ್ರತ್ಯೇಕವಾದ ‘fin.in’ ಎನ್ನುವ ಡೊಮೈನ್ ಅನ್ನು ಅಳವಡಿಸಲಾಗುವುದು ಎಂದಿದ್ದಾರೆ.

ಅಡಿಶನಲ್ ಫ್ಯಾಕ್ಟರ್ ಅಥೆಂಟಿಕೇಶನ್

ಡಿಜಿಟಲ್ ಫ್ರಾಡ್​ಗಳನ್ನು ನಿಗ್ರಹಿಸಲು ಆರ್​ಬಿಐ ಈಗಾಗಲೇ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಅಡಿಶನಲ್ ಫ್ಯಾಕ್ಟರ್ ಆಫ್ ಅಥೆಂಟಿಕೇಶನ್ ಅಥವಾ ಎಎಫ್​ಎ ಒಂದು. ಪಾಸ್ವರ್ಡ್ ಜೊತೆಗೆ ಒಟಿಪಿ ಮೂಲಕ ಪಡೆಯಲಾಗುವ ಹೆಚ್ಚುವರಿ ದೃಢೀಕರಣ. ಭಾರತದೊಳಗೆ ಡಿಜಿಟಲ್ ಪಾವತಿಗೆ ಇದು ಜಾರಿಯಲ್ಲಿದೆ. ಈಗ ಇದನ್ನು ಅಂತಾರಾಷ್ಟ್ರೀಯ ಡಿಜಿಟಲ್ ಪಾವತಿಗಳಿಗೂ ವಿಸ್ತರಿಸಲಾಗುತ್ತದೆ.

ಇದನ್ನೂ ಓದಿ: ಮುಂದಿನ ವರ್ಷ ಜಿಡಿಪಿ ದರ ಶೇ. 6.7; ಹಣದುಬ್ಬರ ಶೇ. 4.2; ಆರ್​ಬಿಐ ಅಂದಾಜು

ಬ್ಯಾಂಕುಗಳು ಮತ್ತು ಎನ್​ಬಿಎಫ್​ಸಿಗಳು ಸೈಬರ್ ಅಪಾಯಗಳನ್ನು ನಿಗ್ರಹಿಸಲು ನಿರಂತರವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಅವಲೋಕಿಸುತ್ತಿರಬೇಕು. ವಂಚನೆ ಘಟನೆ ನಡೆದ ನಂತರದ ಕ್ಷಿಪ್ರ ಸ್ಪಂದನೆ ಇತ್ಯಾದಿ ಕ್ರಮಗಳಿರುವ ಪ್ರಬಲ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಆರ್​ಬಿಐ ಗವರ್ನರ್ ಅವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us