AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GDP, Inflation Projection: 2025-26ರಲ್ಲಿ ಜಿಡಿಪಿ ದರ ಶೇ. 6.5; ಹಣದುಬ್ಬರ ಶೇ 4: ಆರ್​​ಬಿಐ ಅಂದಾಜು

RBI MPC meeting points: ಆರ್​​ಬಿಐ ಮಾನಿಟರಿ ಪಾಲಿಸಿ ಸಭೆಯಲ್ಲಿ ಮಾಡಲಾದ ಅಂದಾಜು ಪ್ರಕಾರ 2024-25ರಲ್ಲಿ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು. 2025-26ರ ಆರ್ಥಿಕ ವರ್ಷದಲ್ಲೂ ಜಿಡಿಪಿ ಶೇ. 6.5ರಷ್ಟು ಬೆಳೆಯಲಿದೆ ಎಂದು ಆರ್​​ಬಿಐ ಅಂದಾಜಿಸಿದೆ. ಹಣದುಬ್ಬರವು ಆರ್​​ಬಿಐನ ಗುರಿಯಾದ ಶೇ. 4ಕ್ಕೆ ಬಂದು ಇಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

GDP, Inflation Projection: 2025-26ರಲ್ಲಿ ಜಿಡಿಪಿ ದರ ಶೇ. 6.5; ಹಣದುಬ್ಬರ ಶೇ 4: ಆರ್​​ಬಿಐ ಅಂದಾಜು
ಜಿಡಿಪಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 09, 2025 | 10:50 AM

Share

ನವದೆಹಲಿ, ಏಪ್ರಿಲ್ 9: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಮತ್ತು ಹಣದುಬ್ಬರ ಎಷ್ಟಿರಬಹುದು ಎಂದು ಆರ್​​ಬಿಐ ಅಂದಾಜಿಸಿದ್ದು, ತನ್ನ ಹಿಂದಿನ ನಿಲುವಿನಲ್ಲಿ ತುಸು ಬದಲಾವಣೆ ಮಾಡಿದೆ. ಆರ್​​ಬಿಐ ಎಂಪಿಸಿ ಸಭೆ (RBI MPC meeting) ಬಳಿಕ ಸುದ್ದಿಗೋಷ್ಠಿ ನಡೆಸಿದ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, 2025-26ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು ಎಂದಿದ್ದಾರೆ. ಹಿಂದಿನ ಹಣಕಾಸು ವರ್ಷದಲ್ಲಿ (2024-25) ಜಿಡಿಪಿ ಶೇ. 6.5ರಷ್ಟು ಬೆಳೆದಿರಬಹುದು ಎಂದೂ ಅವರು ಹೇಳಿದ್ದಾರೆ. ಫೆಬ್ರುವರಿಯಲ್ಲಿ ನಡೆದ ಸಭೆಯಲ್ಲಿ ಆ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.7ರಷ್ಟಿರಬಹುದು ಎಂದು ಅಂದಾಜಿಸಲಾಗಿತ್ತು. ಈಗ ವೃದ್ಧಿ ಪ್ರಮಾಣದ ಅಂದಾಜನ್ನು ಆರ್​​ಬಿಐ ತಗ್ಗಿಸಿದೆ.

ಈ ವರ್ಷದ ವಿವಿಧ ಕ್ವಾರ್ಟರ್​​ಗಳಲ್ಲಿ ಜಿಡಿಪಿ ದರ

2025-26ರ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ದರ ಶೇ. 6.5ರಷ್ಟಿರಬಹುದು ಎಂದು ಎಂಪಿಸಿ ಅಂದಾಜು ಮಾಡಿದೆ. ಮೊದಲ ಕ್ವಾರ್ಟರ್​​​ನಲ್ಲಿ ಶೇ 6.5, ಎರಡನೇ ಕ್ವಾರ್ಟರ್​​ನಲ್ಲಿ ಶೇ 7, ಮೂರನೇ ಕ್ವಾರ್ಟರ್​​ನಲ್ಲಿ ಶೇ 6.6, ಮತ್ತು ನಾಲ್ಕನೇ ಕ್ವಾರ್ಟರ್​​ನಲ್ಲಿ ಶೇ 6.3ನಷ್ಟು ಜಿಡಿಪಿ ಹೆಚ್ಚುವ ಸಾಧ್ಯತೆ ಇದೆ ಎಂದು ಆರ್​​ಬಿಐ ಗವರ್ನರ್ ಅವರು ತಿಳಿಸಿದರು.

ಇದನ್ನೂ ಓದಿ: ಬಡ್ಡಿದರ 25 ಅಂಕ ಇಳಿಸಿದ ಆರ್​​ಬಿಐ; ರಿಪೋ ದರ ಶೇ. 6ಕ್ಕೆ ಇಳಿಕೆ

ಇದನ್ನೂ ಓದಿ
Image
ಬಡ್ಡಿದರ ಶೇ. 6ಕ್ಕೆ ಇಳಿಸಿದ ಆರ್​​ಬಿಐ
Image
ಯುಎಎನ್ ಆ್ಯಕ್ಟಿವೇಶನ್​​ಗೆ ಫೇಸ್ ಅಥೆಂಟಿಕೇಶನ್ ಫೀಚರ್
Image
ಟ್ರಂಪ್ ಟ್ಯಾರಿಫ್; ಭಾರತದ ಮೇಲೇನು ಪರಿಣಾಮ?
Image
4.3 ಟ್ರಿಲಿಯನ್ ಡಾಲರ್ ಆದ ಭಾರತದ ಜಿಡಿಪಿ

ಹಣದುಬ್ಬರ ಶೇ. 4ರಷ್ಟಾಗಬಹುದು: ಆರ್​​ಬಿಐ ಅಂದಾಜು

ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಹಣದುಬ್ಬರ ದರ ಶೇ 4ರಷ್ಟಿರಬಹುದು ಎನ್ನುವ ಅಂದಾಜಿಗೆ ಬರಲಾಗಿದೆ ಎಂದು ಆರ್​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದರು. ಹಿಂದಿನ ಎಂಪಿಸಿ ಸಭೆಯಲ್ಲಿ ಮಾಡಲಾದ ಅಂದಾಜು ಪ್ರಕಾರ ಹಣದುಬ್ಬರ ಶೇ. 4.4ರಷ್ಟಾಗಬಹುದು ಎನ್ನಲಾಗಿತ್ತು. ಆದರೆ, ಉತ್ತಮ ಮಳೆಯಿಂದ ಫಸಲು ಚೆನ್ನಾಗಿ ಆಗುವುದರಿಂದ ಹಣದುಬ್ಬರವು ತುಸು ಕೆಳಮಟ್ಟದಲ್ಲಿ ಇರಬಹುದು ಎಂದು ಮಲ್ಹೋತ್ರಾ ಹೇಳಿದರು.

ಶೇ. 4ರ ಹಣದುಬ್ಬರವು ಆರ್​​ಬಿಐ ನಿಗದಿ ಮಾಡಿಕೊಂಡ ಗುರಿಯೇ ಆಗಿರುವುದು ಕುತೂಹಲ. ಶೇ. 2ರಿಂದ 6ರವರೆಗೆ ಹಣದುಬ್ಬರ ದರದ ತಾಳಿಕೆ ಮಿತಿಯಾಗಿ ಆರ್​​ಬಿಐ ನಿಗದಿ ಮಾಡಿದೆ. ಕಳೆದ ಎರಡು ವರ್ಷದಿಂದಲೂ ಬಹುತೇಕ ಇದೇ ತಾಳಿಕೆ ಮಿತಿಯಲ್ಲಿ ಹಣದುಬ್ಬರ ಇರುವುದು ಗಮನಾರ್ಹ.

ಇದನ್ನೂ ಓದಿ: ಟ್ರಂಪ್ ಟ್ಯಾರಿಫ್​​ನಿಂದ ಭಾರತದ ಆರ್ಥಿಕತೆಗೆ, ವಿವಿಧ ಸೆಕ್ಟರ್​​ಗಳಿಗೆ ಎಷ್ಟು ಹಾನಿ? ಇಲ್ಲಿದೆ ಡೀಟೇಲ್ಸ್

ಪ್ರಸಕ್ತ ಹಣಕಾಸು ವರ್ಷದ ವಿವಿಧ ಕ್ವಾರ್ಟರ್​​ಗಳಲ್ಲಿ ಹಣದುಬ್ಬರ ಎಷ್ಟಿರಬಹುದು ಎನ್ನುವ ಅಂದಾಜು ಮಾಹಿತಿಯನ್ನೂ ಆರ್​​ಬಿಐ ಗವರ್ನರ್ ಬಿಚ್ಚಿಟ್ಟರು. ಅವರ ಪ್ರಕಾರ, 2025-26ರ ಮೊದಲ ಕ್ವಾರ್ಟರ್​​ನಲ್ಲಿ ಶೇ. 3.6, ಎರಡನೇ ಕ್ವಾರ್ಟರ್​​ನಲ್ಲಿ ಶೇ. 3.9, ಮೂರನೇ ಕ್ವಾರ್ಟರ್​​ನಲ್ಲಿ ಶೇ. 3.8 ಮತ್ತು ನಾಲ್ಕನೇ ಕ್ವಾರ್ಟರ್​​ನಲ್ಲಿ ಶೇ. 4.4ರಷ್ಟು ಹಣದುಬ್ಬರ ಇರಬಹುದು.

ಎಂಪಿಸಿ ಸಭೆ: ರಿಪೋ ದರ ಶೇ 6ಕ್ಕೆ ಇಳಿಕೆ

ಇದೇ ವೇಳೆ, ಏಪ್ರಿಲ್ 7ರಿಂದ ಸಭೆ ಸೇರಿದ್ದ ಆರ್​​ಬಿಐ ಹಣಕಾಸು ನೀತಿ ಸಮಿತಿಯು ರಿಪೋ ದರ ಅಥವಾ ಬಡ್ಡಿದರವನ್ನು ಶೇ. 6.25ರಿಂದ ಶೇ. 6ಕ್ಕೆ ಇಳಿಸಲು ನಿರ್ಧರಿಸಿದೆ. ಹಿಂದಿನ ಸಭೆಯಲ್ಲಿ 25 ಮೂಲಾಂಕಗಳಷ್ಟು ಬಡ್ಡಿದರ ಇಳಿಸಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮೋದಿ ಮನೆ ಮುಂದೆ ರಸ್ತೇಲಿ ಎಷ್ಟು ಗುಂಡಿಗಳಿವೆ ನೋಡಿ: ಡಿಕೆ ಶಿವಕುಮಾರ್
ಮೋದಿ ಮನೆ ಮುಂದೆ ರಸ್ತೇಲಿ ಎಷ್ಟು ಗುಂಡಿಗಳಿವೆ ನೋಡಿ: ಡಿಕೆ ಶಿವಕುಮಾರ್
ವಿದ್ಯುತ್ ಕಂಬ ಏರಿ ತಂತಿ ಹಿಡಿದು ನೇತಾಡಿದ ಮಕ್ಕಳು
ವಿದ್ಯುತ್ ಕಂಬ ಏರಿ ತಂತಿ ಹಿಡಿದು ನೇತಾಡಿದ ಮಕ್ಕಳು
ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?