
ಮನೆ ಸೇರಿದಂತೆ ಆಸ್ತಿಯ ದಾಖಲೆಗಳು ಎಲ್ಲರ ಬಳಿ ಇರುತ್ತದೆ. ಹೌದು, ಕೃಷಿ ಭೂಮಿಯ ಮಾಲೀಕತ್ವ, ಹಕ್ಕುಗಳು ಹಾಗೂ ಬೆಳೆಗಳ ವಿವರಗಳನ್ನು ತೋರಿಸುವ ಅಧಿಕೃತ ಆರ್ಟಿಸಿ (RTC) ದಾಖಲೆ ಇದಾಗಿದೆ. ಕೃಷಿ ಸಾಲ ಸೇರಿದಂತೆ ಇತರ ಅಗತ್ಯಗಳಿಗೆ ಪಹಣಿ ಅಗತ್ಯ. ಇದು ಭೂಮಿಯ ಒಡೆಯ ಯಾರು, ಜಮೀನಿನ ವಿಸ್ತೀರ್ಣ ಎಷ್ಟು ಮತ್ತು ಬೆಳೆಗಳ ವಿವರಗಳನ್ನು ಒಳಗೊಂಡಿದೆ. ಪಹಣಿಯು ನಿಮ್ಮ ತಂದೆಯ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳಬಹುದು. ಆರ್ ಟಿಸಿಯಲ್ಲಿನ ಹೆಸರು ತಿದ್ದುಪಡಿ ಮಾಡಿಕೊಳ್ಳಲು ಮಾರಾಟ ಪತ್ರ, ವಾರಸುದಾರಿಕೆಗೆ ಸಂಬಂಧಿಸಿದ ದಾಖಲೆಗಳು, ಆಧಾರ್ ಕಾರ್ಡ್ ಹಾಗೂ ಹಿಂದಿನ ಪಹಣಿಯ ಪ್ರತಿಗಳು ನಿಮ್ಮ ಬಳಿಯಿರಲೇ ಬೇಕು.
ಹಂತ 1: ನಿಮ್ಮ ಹತ್ತಿರದ ನಾಡ ಕಚೇರಿ ಅಥವಾ ಭೂಮಿ ಕೇಂದ್ರಕ್ಕೆ ಭೇಟಿ ನೀಡಿ.
ಹಂತ 2: ಮಾರಾಟ ಪತ್ರ, ದಾನ ಪತ್ರ ಅಥವಾ ವಾರಸುದಾರಿಕೆಗೆ ಸಂಬಂಧಿಸಿದ ದಾಖಲೆಗಳು, ಆಧಾರ್ ಕಾರ್ಡ್, ಗುರುತಿನ ಚೀಟಿ ಹಾಗೂ ಹಿಂದಿನ ಪಹಣಿಯ ಪ್ರತಿಯೊಂದಿಗೆ ಖಾತಾ ಬದಲಾವಣೆಗೆ ಅರ್ಜಿ ಸಲ್ಲಿಸಿ.
ಹಂತ 3: ಪಹಣಿಯಲ್ಲಿನ ತಿದ್ದುಪಡಿಗೆ ನಿಗದಿತ ಸರ್ಕಾರಿ ಶುಲ್ಕವನ್ನು ಪಾವತಿಸಿ.
ಹಂತ 4: ಪಹಣಿ ಪತ್ರದಲ್ಲಿನ ತಿದ್ದುಪಡಿಗೆ ಇಲಾಖೆಯು ಇತರರಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ನೋಟಿಸ್ ಹೊರಡಿಸುತ್ತದೆ.
ಹಂತ 5: ಯಾವುದೇ ಆಕ್ಷೇಪಣೆಗಳು ಬಾರದಿದ್ದಲ್ಲಿ, ನಿಮ್ಮ ಹೆಸರನ್ನು ಪಹಣಿಯಲ್ಲಿ ಅಧಿಕೃತವಾಗಿ ಸೇರಿಸುತ್ತದೆ.
ಇದನ್ನೂ ಓದಿ: ನಿಮ್ಮ ಆಧಾರ್ ಬಯೋಮೆಟ್ರಿಕ್ ಡೇಟಾ ಸುರಕ್ಷಿತವಾಗಿರಲು ಈ ರೀತಿ ಲಾಕ್ ಮಾಡಿ
ಪ್ರಶ್ನೆ: ಪಹಣಿ ಪತ್ರ ಎಂದರೇನು?
ಉತ್ತರ: ಭೂಮಿಯ ಮಾಲೀಕತ್ವವನ್ನು ತಿಳಿಸುವ ಅತ್ಯಂತ ಮುಖ್ಯವಾದ ದಾಖಲೆ.
ಪ್ರಶ್ನೆ: ಆರ್ ಟಿಸಿಯಲ್ಲಿನ ಮಾಲೀಕರ ಹೆಸರು ಬದಲಾವಣೆ ಅಥವಾ ತಿದ್ದುಪಡಿ ಮಾಡುವುದು ಹೇಗೆ?
ಉತ್ತರ: ನಿಮ್ಮ ಹತ್ತಿರದ ನಾಡ ಕಚೇರಿ ಅಥವಾ ಭೂಮಿ ಕೇಂದ್ರಕ್ಕೆ ಭೇಟಿ ನೀಡಿ ತಿದ್ದುಪಡಿ ಮಾಡಿಕೊಳ್ಳಬಹುದು.
ಪ್ರಶ್ನೆ: ಆರ್ ಟಿಸಿಯಲ್ಲಿ ಮಾಲೀಕರ ಹೆಸರು ಬದಲಾವಣೆಗೆ ಏನೆಲ್ಲಾ ದಾಖಲೆಗಳು ಬೇಕು?
ಉತ್ತರ: ಮಾರಾಟ ಪತ್ರ, ದಾನ ಅಥವಾ ವಾರಸುದಾರಿಕೆಗೆ ಸಂಬಂಧಿಸಿದ ದಾಖಲೆಗಳು, ಆಧಾರ್ ಕಾರ್ಡ್, ಗುರುತಿನ ಚೀಟಿ ಹಾಗೂ ಹಿಂದಿನ ಪಹಣಿಯ ಪ್ರತಿ ಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ