AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rupee Weakens: ಯೂರೋಪ್​ನಲ್ಲಿ ಇಂಧನ ಬಿಕ್ಕಟ್ಟು: ಡಾಲರ್ ಎದುರು 20 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ

Rupee Against Dollor: ಭಾರತದ ಕರೆನ್ಸಿ ರೂಪಾಯಿಯೂ 20 ವರ್ಷಗಳ ಕನಿಷ್ಠ ಮಟ್ಟಕ್ಕೆ ಮುಟ್ಟಿದೆ.

Rupee Weakens: ಯೂರೋಪ್​ನಲ್ಲಿ ಇಂಧನ ಬಿಕ್ಕಟ್ಟು: ಡಾಲರ್ ಎದುರು 20 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Sep 05, 2022 | 10:43 AM

Share

ಮುಂಬೈ: ರಷ್ಯಾ-ಉಕ್ರೇನ್​ ಯುದ್ಧವು (Russia Ukraine War) ಭಾರತದ ಆರ್ಥಿಕತೆಯ (Indian Economy) ಮೇಲೆ ಕೆಟ್ಟ ಪರಿಣಾಮ ಬೀರುವುದು ಮುಂದುವರಿದಿದೆ. ಯೂರೋಪ್​ಗೆ ಇಂಧನ ಪೂರೈಸುವ ಪ್ರಮುಖ ಗ್ಯಾಸ್​ ಪೈಪ್​ಲೈನ್​  (Gas Pipline) ಒಂದನ್ನು ರಷ್ಯಾ ಸ್ಥಗಿತಗೊಳಿಸಿರುವುದರಿಂದ ಐರೋಪ್ಯ ಒಕ್ಕೂಟದ ಕರೆನ್ಸಿ ಯೂರೊ ಮೌಲ್ಯವು ಕುಸಿತದತ್ತ ಸಾಗಿದೆ. ಇದರ ಪರಿಣಾಮವಾಗಿ ಭಾರತದ ಕರೆನ್ಸಿ ರೂಪಾಯಿಯೂ 20 ವರ್ಷಗಳ ಕನಿಷ್ಠ ಮಟ್ಟಕ್ಕೆ ಮುಟ್ಟಿದೆ. ಭಾರತದ ಕರೆನ್ಸಿಯು ಸೋಮವಾರ (ಸೆಪ್ಟೆಂಬರ್ 5) ಬೆಳಿಗ್ಗೆ ಒಂದು ಡಾಲರ್ ಎದುರು ₹ 79.8138ಕ್ಕೆ ವಹಿವಾಟು ಆಯಿತು ಎಂದು ಬ್ಲೂಮ್​ಬರ್ಗ್​​ ಜಾಲತಾಣವು ವರದಿ ಮಾಡಿದೆ. ಶುಕ್ರವಾರದ (ಸೆಪ್ಟೆಂಬರ್ 2) ಅಂತ್ಯಕ್ಕೆ ಭಾರತದ ಕರೆನ್ಸಿಯು ₹ 79.8025ಕ್ಕೆ ವಹಿವಾಟು ಮುಗಿಸಿತ್ತು. ಇದು ಗುರುವಾರದ (ಸೆಪ್ಟೆಂಬರ್ 1) ವಹಿವಾಟು ಮೊತ್ತಕ್ಕೆ ಹೋಲಿಸಿದರೆ ಇದು ಕಡಿಮೆಯಾಗಿತ್ತು. ಕಳೆದ ವಾರಾಂತ್ಯದ ವಹಿವಾಟು ಗಮನಿಸಿದರೆ ಇದು ಶೇ 0.1ರಷ್ಟು ಹೆಚ್ಚಾಗಿತ್ತು.

ರೂಪಾಯಿ ಮೌಲ್ಯವು ಸತತ ಕುಸಿತ ಕಾಣುತ್ತಿರುವುದು ಭಾರತದ ವಿದೇಶಿ ಮೀಸಲು ಅನುಪಾತದ ಮೇಲೆ ಪರಿಣಾಮ ಬೀರುತ್ತಿದೆ. ಪ್ರಸ್ತುತ ಭಾರತದ ವಿದೇಶಿ ಮೀಸಲು ನಿಧಿಯು ಕಳೆದ ವರ್ಷದ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ 80 ಶತಕೋಟಿ ರೂಪಾಯಿಯಷ್ಟು ಕಡಿಮೆಯಾಗಿದೆ. ಕಳೆದ ವಾರ ಭಾರತದ ಕರೆನ್ಸಿಯು ಡಾಲರ್ ಎದುರು ₹ 70.30 ಮತ್ತು ₹ 80.12ರ ನಡುವೆ ವಹಿವಾಟು ನಡೆಸಿತು. ಭಾರತೀಯ ರಿಸರ್ವ್​ ಬ್ಯಾಂಕ್​ನ ಮಧ್ಯಪ್ರವೇಶ ಮತ್ತು ಅಮೆರಿಕದ ಡಾಲರ್​ ಸದೃಢಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯದ ಕುಸಿತ ಮುಂದುವರಿದಿದೆ.

ಕಳೆದ ವಾರದ ವಹಿವಾಟಿನಲ್ಲಿ ರೂಪಾಯಿ-ಡಾಲರ್​ ಹೊಯ್ದಾಟುವ ಹೊಸ ಸಪೋರ್ಟ್ ಮತ್ತು ರೆಸಿಸ್ಟೆನ್ಸ್​ ಮಟ್ಟ ಮುಟ್ಟಿದೆ. ₹ 80 ಎನ್ನುವುದು ಬಹಳ ಮುಖ್ಯವಾದ ಮಟ್ಟವಾಗಿದ್ದು ಈ ಹಂತದಲ್ಲಿ ರೂಪಾಯಿ ಉಳಿದರೆ ಒಳ್ಳೆಯದು. ಹಲವು ರಫ್ತುದಾರರು ಮತ್ತು ದಲ್ಲಾಳಿಗಳು ಇದೇ ಮಟ್ಟದಲ್ಲಿ ವಹಿವಾಟು ನಡೆಸಲು ಆಸಕ್ತಿ ತೋರುತ್ತಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಮನಿಕಂಟ್ರೋಲ್’ ಜಾಲತಾಣ ವರದಿ ಮಾಡಿದೆ.

ಯೂರೋಪ್​ಗೆ ಇಂಧನ ಸರಬರಾಜು ಮಾಡುವ ಮುಖ್ಯ ಪೈಪ್​ಲೈನ್ ಸ್ಥಗಿತಗೊಳಿಸಲು ರಷ್ಯಾ ಮುಂದಾದ ಹಿನ್ನೆಲೆಯಲ್ಲಿ ‘ಯೂರೊ’ ಸಹ ಡಾಲರ್ ಎದುರು ಕುಸಿತ ಕಂಡಿದೆ. ಮುಂದಿನ ದಿನಗಳಲ್ಲಿ ಯೂರೋಪ್​ನ ಕೈಗಾರಿಕಾ ಪ್ರಗತಿ ಮತ್ತು ಆರ್ಥಿಕ ಸ್ಥಿತಿಗತಿಯ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು