AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Satya Nadella: ನನ್ನ ನೀನು ಮೋಸಗೊಳಿಸಲಾರೆ; ದಕ್ಷಿಣ ಭಾರತದ ತಿಂಡಿ ಬಗ್ಗೆ ಚಾಟ್​ಜಿಪಿಟಿ ಜತೆ ಸತ್ಯ ನಾದೆಲ್ಲಾ ಹೀಗೊಂದು ಸಂಭಾಷಣೆ!

‘ಚಾಟ್​ಜಿಪಿಟಿ’ ಓಪನ್ ಎಇಐ (ಕೃತಕ ಬುದ್ಧಿಮತ್ತೆ) ಯಿಂದ ಅಭಿವೃದ್ಧಿಪಡಿಸಿದ ಸಾಫ್ಟ್​​ವೇರ್ ಆಗಿದ್ದು, ಇದರ ಸ್ಥಾಪಕರಲ್ಲಿ ಉದ್ಯಮಿ ಎಲಾನ್​ ಮಸ್ಕ್ ಸಹ ಒಬ್ಬರಾಗಿದ್ದಾರೆ. ‘ಚಾಟ್​ಜಿಪಿಟಿ’ ಮತ್ತು ನಾದೆಲ್ಲಾ ನಡುವೆ ನಡೆದ ಸ್ವಾರಸ್ಯಕರ ಸಂಭಾಷಣೆ ಇಲ್ಲಿದೆ.

Satya Nadella: ನನ್ನ ನೀನು ಮೋಸಗೊಳಿಸಲಾರೆ; ದಕ್ಷಿಣ ಭಾರತದ ತಿಂಡಿ ಬಗ್ಗೆ ಚಾಟ್​ಜಿಪಿಟಿ ಜತೆ ಸತ್ಯ ನಾದೆಲ್ಲಾ ಹೀಗೊಂದು ಸಂಭಾಷಣೆ!
ಸತ್ಯ ನಾದೆಲ್ಲಾ
TV9 Web
| Edited By: |

Updated on: Jan 09, 2023 | 12:04 PM

Share

ಬೆಂಗಳೂರು: ‘ಹೇಯ್, ಹಾಗೆಲ್ಲ ನೀನು ನನ್ನನ್ನು ಮೋಸಗೊಳಿಸಲಾಗದು. ಅದ್ಹೇಗೆ ಬಿರಿಯಾನಿಯನ್ನು (Biryani) ದಕ್ಷಿಣ ಭಾರತದ ಬೆಳಗ್ಗಿನ ಉಪಾಹಾರದ ತಿಂಡಿ ಎನ್ನುತ್ತೀ?’ ಹೀಗೆಂದು ಹೇಳಿದ್ದು ಮೈಕ್ರೋಸಾಫ್ಟ್ ಕಂಪನಿ ಮುಖ್ಯಸ್ಥ ಸತ್ಯ ನಾದೆಲ್ಲಾ (Satya Nadella). ಯಾರ ಜೊತೆ ಗೊತ್ತೇ? ಕೃತಕ ಬುದ್ಧಿಮತ್ತೆಯಿಂದ ಅಭಿವೃದ್ಧಿಪಡಿಸಿದ ಸಾಫ್ಟ್​ವೇರ್ ‘ಚಾಟ್​ಜಿಪಿಟಿ (ChatGPT)’ ಜತೆ! ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಟೆಕ್ ಸಮ್ಮಿಟ್​ಗೆ ಬಂದಿದ್ದ ಸತ್ಯ ನಾದೆಲ್ಲಾ, ‘ಚಾಟ್​ಜಿಪಿಟಿ’ ಜತೆ ಸಂಭಾಷಣೆ ನಡೆಸಿ, ದಕ್ಷಿಣ ಭಾರತದ ಬೆಳಗ್ಗಿನ ಉಪಾಹಾರದ ತಿಂಡಿಗಳು ಯಾವುವೆಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ‘ಚಾಟ್​ಜಿಪಿಟಿ’ ಇಡ್ಲಿ, ವಡಾ, ಉತ್ತಪ್ಪ, ದೋಸೆ, ಪೊಂಗಲ್ ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸುಗಳು ಎಂದಿದೆ. ಜತೆಗೆ ಬಿರಿಯಾನಿಯನ್ನೂ ಸೇರಿಸಿದೆ.

ತಕ್ಷಣವೇ ಪ್ರತಿಕ್ರಿಯಿಸಿದ ನಾದೆಲ್ಲಾ, ಬಿರಿಯಾನಿ ಬೆಳಗ್ಗಿನ ತಿಂಡಿ ಎಂದು ಹೇಳಿ ನನ್ನನ್ನು ಅವಮಾನಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ‘ಚಾಟ್​ಜಿಪಿಟಿ’, ನೀವು ಹೇಳಿದ್ದು ನಿಜ. ಬಿರಿಯಾನಿಯನ್ನು ದಕ್ಷಿಣ ಭಾರತದ ಬೆಳಗ್ಗಿನ ತಿಂಡಿ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಭಾರತದ ಪ್ರಸ್ತುತ ಪರಿಸ್ಥಿತಿ ನೋಡಿ ನಾನು ಎದೆಗುಂದಿದ್ದೇನೆ; ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾಡೆಲ್ಲ

ನಂತರ ದೋಸೆ, ವಡಾ ಮತ್ತು ಇಡ್ಲಿಗೆ ಸಂಬಂಧಿಸಿ ಪ್ಲೇ ಕ್ರಿಯೇಟ್ ಮಾಡುವಂತೆ ‘ಚಾಟ್​ಜಿಪಿಟಿ’ಗೆ ನಾದೆಲ್ಲಾ ಸೂಚಿಸಿದರು. ತಕ್ಷಣವೇ ಉತ್ತಮ ರೋಲ್​ಪ್ಲೇ ಕ್ರಿಯೇಟ್ ಮಾಡಿದ ‘ಚಾಟ್​ಜಿಪಿಟಿ’, ಮುಂಬೈಯ ಸ್ಟ್ರೀಟ್​​ ಫುಡ್ ವಡಾ ಪಾವ್, ಪಾವ್​ ಬಾಜಿ ಬಗ್ಗೆಯೂ ವಿಶ್ಲೇಷಿಸಿತು.

‘ಚಾಟ್​ಜಿಪಿಟಿ’ ಓಪನ್ ಎಇಐ (ಕೃತಕ ಬುದ್ಧಿಮತ್ತೆ) ಯಿಂದ ಅಭಿವೃದ್ಧಿಪಡಿಸಿದ ಸಾಫ್ಟ್​​ವೇರ್ ಆಗಿದ್ದು, ಇದರ ಸ್ಥಾಪಕರಲ್ಲಿ ಉದ್ಯಮಿ ಎಲಾನ್​ ಮಸ್ಕ್ ಸಹ ಒಬ್ಬರಾಗಿದ್ದಾರೆ. ‘ಚಾಟ್​ಜಿಪಿಟಿ’ ಮತ್ತು ನಾದೆಲ್ಲಾ ನಡುವೆ ನಡೆದ ಸ್ವಾರಸ್ಯಕರ ಸಂಭಾಷಣೆಯ ಬಗ್ಗೆ ‘ಮನಿ ಕಂಟ್ರೋಲ್’ ಸುದ್ದಿ ತಾಣ ವರದಿ ಮಾಡಿ ಗಮನ ಸೆಳೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೈ ಕೊಟ್ಟ ಮುಂಗಾರು:ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು
ಕೈ ಕೊಟ್ಟ ಮುಂಗಾರು:ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ