AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Satya Nadella: ನನ್ನ ನೀನು ಮೋಸಗೊಳಿಸಲಾರೆ; ದಕ್ಷಿಣ ಭಾರತದ ತಿಂಡಿ ಬಗ್ಗೆ ಚಾಟ್​ಜಿಪಿಟಿ ಜತೆ ಸತ್ಯ ನಾದೆಲ್ಲಾ ಹೀಗೊಂದು ಸಂಭಾಷಣೆ!

‘ಚಾಟ್​ಜಿಪಿಟಿ’ ಓಪನ್ ಎಇಐ (ಕೃತಕ ಬುದ್ಧಿಮತ್ತೆ) ಯಿಂದ ಅಭಿವೃದ್ಧಿಪಡಿಸಿದ ಸಾಫ್ಟ್​​ವೇರ್ ಆಗಿದ್ದು, ಇದರ ಸ್ಥಾಪಕರಲ್ಲಿ ಉದ್ಯಮಿ ಎಲಾನ್​ ಮಸ್ಕ್ ಸಹ ಒಬ್ಬರಾಗಿದ್ದಾರೆ. ‘ಚಾಟ್​ಜಿಪಿಟಿ’ ಮತ್ತು ನಾದೆಲ್ಲಾ ನಡುವೆ ನಡೆದ ಸ್ವಾರಸ್ಯಕರ ಸಂಭಾಷಣೆ ಇಲ್ಲಿದೆ.

Satya Nadella: ನನ್ನ ನೀನು ಮೋಸಗೊಳಿಸಲಾರೆ; ದಕ್ಷಿಣ ಭಾರತದ ತಿಂಡಿ ಬಗ್ಗೆ ಚಾಟ್​ಜಿಪಿಟಿ ಜತೆ ಸತ್ಯ ನಾದೆಲ್ಲಾ ಹೀಗೊಂದು ಸಂಭಾಷಣೆ!
ಸತ್ಯ ನಾದೆಲ್ಲಾ
TV9 Web
| Updated By: Ganapathi Sharma|

Updated on: Jan 09, 2023 | 12:04 PM

Share

ಬೆಂಗಳೂರು: ‘ಹೇಯ್, ಹಾಗೆಲ್ಲ ನೀನು ನನ್ನನ್ನು ಮೋಸಗೊಳಿಸಲಾಗದು. ಅದ್ಹೇಗೆ ಬಿರಿಯಾನಿಯನ್ನು (Biryani) ದಕ್ಷಿಣ ಭಾರತದ ಬೆಳಗ್ಗಿನ ಉಪಾಹಾರದ ತಿಂಡಿ ಎನ್ನುತ್ತೀ?’ ಹೀಗೆಂದು ಹೇಳಿದ್ದು ಮೈಕ್ರೋಸಾಫ್ಟ್ ಕಂಪನಿ ಮುಖ್ಯಸ್ಥ ಸತ್ಯ ನಾದೆಲ್ಲಾ (Satya Nadella). ಯಾರ ಜೊತೆ ಗೊತ್ತೇ? ಕೃತಕ ಬುದ್ಧಿಮತ್ತೆಯಿಂದ ಅಭಿವೃದ್ಧಿಪಡಿಸಿದ ಸಾಫ್ಟ್​ವೇರ್ ‘ಚಾಟ್​ಜಿಪಿಟಿ (ChatGPT)’ ಜತೆ! ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಟೆಕ್ ಸಮ್ಮಿಟ್​ಗೆ ಬಂದಿದ್ದ ಸತ್ಯ ನಾದೆಲ್ಲಾ, ‘ಚಾಟ್​ಜಿಪಿಟಿ’ ಜತೆ ಸಂಭಾಷಣೆ ನಡೆಸಿ, ದಕ್ಷಿಣ ಭಾರತದ ಬೆಳಗ್ಗಿನ ಉಪಾಹಾರದ ತಿಂಡಿಗಳು ಯಾವುವೆಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ‘ಚಾಟ್​ಜಿಪಿಟಿ’ ಇಡ್ಲಿ, ವಡಾ, ಉತ್ತಪ್ಪ, ದೋಸೆ, ಪೊಂಗಲ್ ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸುಗಳು ಎಂದಿದೆ. ಜತೆಗೆ ಬಿರಿಯಾನಿಯನ್ನೂ ಸೇರಿಸಿದೆ.

ತಕ್ಷಣವೇ ಪ್ರತಿಕ್ರಿಯಿಸಿದ ನಾದೆಲ್ಲಾ, ಬಿರಿಯಾನಿ ಬೆಳಗ್ಗಿನ ತಿಂಡಿ ಎಂದು ಹೇಳಿ ನನ್ನನ್ನು ಅವಮಾನಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ‘ಚಾಟ್​ಜಿಪಿಟಿ’, ನೀವು ಹೇಳಿದ್ದು ನಿಜ. ಬಿರಿಯಾನಿಯನ್ನು ದಕ್ಷಿಣ ಭಾರತದ ಬೆಳಗ್ಗಿನ ತಿಂಡಿ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಭಾರತದ ಪ್ರಸ್ತುತ ಪರಿಸ್ಥಿತಿ ನೋಡಿ ನಾನು ಎದೆಗುಂದಿದ್ದೇನೆ; ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾಡೆಲ್ಲ

ನಂತರ ದೋಸೆ, ವಡಾ ಮತ್ತು ಇಡ್ಲಿಗೆ ಸಂಬಂಧಿಸಿ ಪ್ಲೇ ಕ್ರಿಯೇಟ್ ಮಾಡುವಂತೆ ‘ಚಾಟ್​ಜಿಪಿಟಿ’ಗೆ ನಾದೆಲ್ಲಾ ಸೂಚಿಸಿದರು. ತಕ್ಷಣವೇ ಉತ್ತಮ ರೋಲ್​ಪ್ಲೇ ಕ್ರಿಯೇಟ್ ಮಾಡಿದ ‘ಚಾಟ್​ಜಿಪಿಟಿ’, ಮುಂಬೈಯ ಸ್ಟ್ರೀಟ್​​ ಫುಡ್ ವಡಾ ಪಾವ್, ಪಾವ್​ ಬಾಜಿ ಬಗ್ಗೆಯೂ ವಿಶ್ಲೇಷಿಸಿತು.

‘ಚಾಟ್​ಜಿಪಿಟಿ’ ಓಪನ್ ಎಇಐ (ಕೃತಕ ಬುದ್ಧಿಮತ್ತೆ) ಯಿಂದ ಅಭಿವೃದ್ಧಿಪಡಿಸಿದ ಸಾಫ್ಟ್​​ವೇರ್ ಆಗಿದ್ದು, ಇದರ ಸ್ಥಾಪಕರಲ್ಲಿ ಉದ್ಯಮಿ ಎಲಾನ್​ ಮಸ್ಕ್ ಸಹ ಒಬ್ಬರಾಗಿದ್ದಾರೆ. ‘ಚಾಟ್​ಜಿಪಿಟಿ’ ಮತ್ತು ನಾದೆಲ್ಲಾ ನಡುವೆ ನಡೆದ ಸ್ವಾರಸ್ಯಕರ ಸಂಭಾಷಣೆಯ ಬಗ್ಗೆ ‘ಮನಿ ಕಂಟ್ರೋಲ್’ ಸುದ್ದಿ ತಾಣ ವರದಿ ಮಾಡಿ ಗಮನ ಸೆಳೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್