AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Satya Nadella: ನನ್ನ ನೀನು ಮೋಸಗೊಳಿಸಲಾರೆ; ದಕ್ಷಿಣ ಭಾರತದ ತಿಂಡಿ ಬಗ್ಗೆ ಚಾಟ್​ಜಿಪಿಟಿ ಜತೆ ಸತ್ಯ ನಾದೆಲ್ಲಾ ಹೀಗೊಂದು ಸಂಭಾಷಣೆ!

‘ಚಾಟ್​ಜಿಪಿಟಿ’ ಓಪನ್ ಎಇಐ (ಕೃತಕ ಬುದ್ಧಿಮತ್ತೆ) ಯಿಂದ ಅಭಿವೃದ್ಧಿಪಡಿಸಿದ ಸಾಫ್ಟ್​​ವೇರ್ ಆಗಿದ್ದು, ಇದರ ಸ್ಥಾಪಕರಲ್ಲಿ ಉದ್ಯಮಿ ಎಲಾನ್​ ಮಸ್ಕ್ ಸಹ ಒಬ್ಬರಾಗಿದ್ದಾರೆ. ‘ಚಾಟ್​ಜಿಪಿಟಿ’ ಮತ್ತು ನಾದೆಲ್ಲಾ ನಡುವೆ ನಡೆದ ಸ್ವಾರಸ್ಯಕರ ಸಂಭಾಷಣೆ ಇಲ್ಲಿದೆ.

Satya Nadella: ನನ್ನ ನೀನು ಮೋಸಗೊಳಿಸಲಾರೆ; ದಕ್ಷಿಣ ಭಾರತದ ತಿಂಡಿ ಬಗ್ಗೆ ಚಾಟ್​ಜಿಪಿಟಿ ಜತೆ ಸತ್ಯ ನಾದೆಲ್ಲಾ ಹೀಗೊಂದು ಸಂಭಾಷಣೆ!
ಸತ್ಯ ನಾದೆಲ್ಲಾ
TV9 Web
| Edited By: |

Updated on: Jan 09, 2023 | 12:04 PM

Share

ಬೆಂಗಳೂರು: ‘ಹೇಯ್, ಹಾಗೆಲ್ಲ ನೀನು ನನ್ನನ್ನು ಮೋಸಗೊಳಿಸಲಾಗದು. ಅದ್ಹೇಗೆ ಬಿರಿಯಾನಿಯನ್ನು (Biryani) ದಕ್ಷಿಣ ಭಾರತದ ಬೆಳಗ್ಗಿನ ಉಪಾಹಾರದ ತಿಂಡಿ ಎನ್ನುತ್ತೀ?’ ಹೀಗೆಂದು ಹೇಳಿದ್ದು ಮೈಕ್ರೋಸಾಫ್ಟ್ ಕಂಪನಿ ಮುಖ್ಯಸ್ಥ ಸತ್ಯ ನಾದೆಲ್ಲಾ (Satya Nadella). ಯಾರ ಜೊತೆ ಗೊತ್ತೇ? ಕೃತಕ ಬುದ್ಧಿಮತ್ತೆಯಿಂದ ಅಭಿವೃದ್ಧಿಪಡಿಸಿದ ಸಾಫ್ಟ್​ವೇರ್ ‘ಚಾಟ್​ಜಿಪಿಟಿ (ChatGPT)’ ಜತೆ! ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಟೆಕ್ ಸಮ್ಮಿಟ್​ಗೆ ಬಂದಿದ್ದ ಸತ್ಯ ನಾದೆಲ್ಲಾ, ‘ಚಾಟ್​ಜಿಪಿಟಿ’ ಜತೆ ಸಂಭಾಷಣೆ ನಡೆಸಿ, ದಕ್ಷಿಣ ಭಾರತದ ಬೆಳಗ್ಗಿನ ಉಪಾಹಾರದ ತಿಂಡಿಗಳು ಯಾವುವೆಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ‘ಚಾಟ್​ಜಿಪಿಟಿ’ ಇಡ್ಲಿ, ವಡಾ, ಉತ್ತಪ್ಪ, ದೋಸೆ, ಪೊಂಗಲ್ ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸುಗಳು ಎಂದಿದೆ. ಜತೆಗೆ ಬಿರಿಯಾನಿಯನ್ನೂ ಸೇರಿಸಿದೆ.

ತಕ್ಷಣವೇ ಪ್ರತಿಕ್ರಿಯಿಸಿದ ನಾದೆಲ್ಲಾ, ಬಿರಿಯಾನಿ ಬೆಳಗ್ಗಿನ ತಿಂಡಿ ಎಂದು ಹೇಳಿ ನನ್ನನ್ನು ಅವಮಾನಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ‘ಚಾಟ್​ಜಿಪಿಟಿ’, ನೀವು ಹೇಳಿದ್ದು ನಿಜ. ಬಿರಿಯಾನಿಯನ್ನು ದಕ್ಷಿಣ ಭಾರತದ ಬೆಳಗ್ಗಿನ ತಿಂಡಿ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಭಾರತದ ಪ್ರಸ್ತುತ ಪರಿಸ್ಥಿತಿ ನೋಡಿ ನಾನು ಎದೆಗುಂದಿದ್ದೇನೆ; ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾಡೆಲ್ಲ

ನಂತರ ದೋಸೆ, ವಡಾ ಮತ್ತು ಇಡ್ಲಿಗೆ ಸಂಬಂಧಿಸಿ ಪ್ಲೇ ಕ್ರಿಯೇಟ್ ಮಾಡುವಂತೆ ‘ಚಾಟ್​ಜಿಪಿಟಿ’ಗೆ ನಾದೆಲ್ಲಾ ಸೂಚಿಸಿದರು. ತಕ್ಷಣವೇ ಉತ್ತಮ ರೋಲ್​ಪ್ಲೇ ಕ್ರಿಯೇಟ್ ಮಾಡಿದ ‘ಚಾಟ್​ಜಿಪಿಟಿ’, ಮುಂಬೈಯ ಸ್ಟ್ರೀಟ್​​ ಫುಡ್ ವಡಾ ಪಾವ್, ಪಾವ್​ ಬಾಜಿ ಬಗ್ಗೆಯೂ ವಿಶ್ಲೇಷಿಸಿತು.

‘ಚಾಟ್​ಜಿಪಿಟಿ’ ಓಪನ್ ಎಇಐ (ಕೃತಕ ಬುದ್ಧಿಮತ್ತೆ) ಯಿಂದ ಅಭಿವೃದ್ಧಿಪಡಿಸಿದ ಸಾಫ್ಟ್​​ವೇರ್ ಆಗಿದ್ದು, ಇದರ ಸ್ಥಾಪಕರಲ್ಲಿ ಉದ್ಯಮಿ ಎಲಾನ್​ ಮಸ್ಕ್ ಸಹ ಒಬ್ಬರಾಗಿದ್ದಾರೆ. ‘ಚಾಟ್​ಜಿಪಿಟಿ’ ಮತ್ತು ನಾದೆಲ್ಲಾ ನಡುವೆ ನಡೆದ ಸ್ವಾರಸ್ಯಕರ ಸಂಭಾಷಣೆಯ ಬಗ್ಗೆ ‘ಮನಿ ಕಂಟ್ರೋಲ್’ ಸುದ್ದಿ ತಾಣ ವರದಿ ಮಾಡಿ ಗಮನ ಸೆಳೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ