AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿಂಗಳಿಗೆ ಕೇವಲ 28 ರೂಪಾಯಿ ಪಾವತಿಸಿದಲ್ಲಿ 4 ಲಕ್ಷ ರೂಪಾಯಿಯಷ್ಟು ಅನುಕೂಲ ಪಡೆಯಬಹುದು!

ತಿಂಗಳಿಗೆ 28 ರೂಪಾಯಿಯಷ್ಟನ್ನು ಉಳಿತಾಯ ಮಾಡಿ, ಸರ್ಕಾರದ ಈ ಎರಡು ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ರೂ. 4 ಲಕ್ಷ ರೂಪಾಯಿಯಷ್ಟು ಅನುಕೂಲ ದೊರೆಯುತ್ತದೆ. ಅದು ಹೇಗೆ ಎಂಬುದರ ವಿವರ ಇಲ್ಲಿದೆ.

ತಿಂಗಳಿಗೆ ಕೇವಲ 28 ರೂಪಾಯಿ ಪಾವತಿಸಿದಲ್ಲಿ 4 ಲಕ್ಷ ರೂಪಾಯಿಯಷ್ಟು ಅನುಕೂಲ ಪಡೆಯಬಹುದು!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 05, 2021 | 7:13 PM

ನೀವೇನಾದರೂ ಬ್ಯಾಂಕ್ ಆಫ್ ಬರೋಡಾದ ಖಾತೆದಾರರಾ? ಹಾಗಿದ್ದಲ್ಲಿ ಈ ಎರಡು ಸರ್ಕಾರಿ ಯೋಜನೆಗಳಿಂದ ಅನುಕೂಲ ಪಡೆಯುವ ಅವಕಾಶ ನಿಮಗಿದೆ. ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನಾ ಇವೆರಡೂ ಯೋಜನೆಯಿಂದ ಪ್ರತಿ ತಿಂಗಳು ಕೇವಲ 28 ರೂಪಾಯಿ ಉಳಿತಾಯ ಮಾಡಿದರಾಯಿತು, 4 ಲಕ್ಷ ರೂಪಾಯಿ ತನಕ ಗಳಿಸಬಹುದು. “ನಿಮ್ಮ ಭವಿಷ್ಯದ ಸುರಕ್ಷತೆಗೆ ಇದೀಗ ಕೇವಲ ಒಂದು ಹೆಜ್ಜೆ ದೂರವಿದ್ದೀರಿ! ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ, ಅಟಲ್ ಪೆನ್ಷನ್ ಯೋಜನಾಗೆ ನೋಂದಣಿ ಆಗಿ ಮತ್ತು ಭವಿಷ್ಯ ಭದ್ರ ಪಡಿಸಿಕೊಳ್ಳುವ ಕಡೆಗೆ ಮತ್ತೊಂದು ಹೆಜ್ಜೆಯನ್ನು ತೆಗೆದುಕೊಳ್ಳಿ,” ಎಂದು ಬ್ಯಾಂಕ್ ಆಫ್ ಬರೋಡಾ ಟ್ವೀಟ್ ಮಾಡಿ.

ಈ ಲೆಕ್ಕಾಚಾರವನ್ನು ಗಮನಿಸಿ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ (PMSBY) ಈ ಸರ್ಕಾರಿ ಯೋಜನೆಗಳಿಂದ 4 ಲಕ್ಷ ರೂಪಾಯಿ ಅನುಕೂಲ ಪಡೆಯಬಹುದು. ಅದಕ್ಕಾಗಿ ವಾರ್ಷಿಕವಾಗಿ ಒಟ್ಟಾರೆ ಮೊತ್ತ 342 ರೂಪಾಯಿ ಹೂಡಿಕೆ ಮಾಡಬೇಕು. ಇದರ ಅರ್ಥ ಏನೆಂದರೆ, ತಿಂಗಳಿಗೆ ಕೇವಲ 28 ರೂಪಾಯಿ ವೆಚ್ಚ ಮಾಡಿದರೆ ಸಾಕು. ಜೀವ ಮತ್ತು ಅಂಗವೈಕಲ್ಯ ಈ ಎರಡೂ ಸಹ ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನಾ ಅಡಿಯಲ್ಲಿ ಕವರ್ ಆಗುತ್ತದೆ. ಇನ್ನು ಮೃತಪಟ್ಟಲ್ಲಿ ರೂ. 2 ಲಕ್ಷ ಆಗುತ್ತದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ 2 ಲಕ್ಷ ರೂಪಾಯಿ ಅಪಘಾತದ ಸಾವು (ಒಟ್ಟು 4 ಲಕ್ಷ ರೂಪಾಯಿ), ಅಸಂಘಟಿತ ಕಾರ್ಮಿಕರಿಗೆ ವಾರ್ಷಿಕ ಪ್ರೀಮಿಯಂ ರೂ. 342 (ರೂ. 330 PMJJBY+ ರೂ. 12 PMSBY) ಆಯಾ ವ್ಯಕ್ತಿಗಳ ಅರ್ಹತೆ ಮೇಲೆ ಆಗುತ್ತದೆ.

ಒಟ್ಟಾರೆ ಪ್ರೀಮಿಯಂ ರೂ.342 ಅನ್ನು ವಯಕ್ತಿಕವಾಗಿ/ರಾಜ್ಯ ಸರ್ಕಾರದಿಂದ ಪೂರ್ತಿ ಪ್ರೀಮಿಯಂ ಅಡಿಯಲ್ಲಿ 1.4.2020ರಿಂದ ಅನ್ವಯ ಆಗುವಂತೆ ಭರಿಸಬೇಕಾಗುತ್ತದೆ. ಕೇಂದ್ರ ಸರ್ಕಾರದ ಪಾಲಾದ PMJJBY/PMSBY ಪ್ರೀಮಿಯಂ ಅನ್ನು ಎಲ್​ಐಸಿಯಿಂದ ಇದೇ ಉದ್ದೇಶಕ್ಕೆ ಮೀಸಲಾದ ಸಾಮಾಜಿಕ ಭದ್ರತಾ ನಿಧಿಯಿಂದ ಪಾವತಿಸಲಾಗುತ್ತದೆ.

ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?
ಭಾರತ ಏನು ಮಾಡಬಹುದು ಎಂದು ಪಾಕಿಸ್ತಾನಕ್ಕೆ ಈಗ ಅರ್ಥವಾಗಿರಬಹುದು
ಭಾರತ ಏನು ಮಾಡಬಹುದು ಎಂದು ಪಾಕಿಸ್ತಾನಕ್ಕೆ ಈಗ ಅರ್ಥವಾಗಿರಬಹುದು