AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Customer Alert: ಎಸ್​ಬಿಐ ಗ್ರಾಹಕರೇ ಎಚ್ಚರ, ಇಂಥ ನಕಲಿ ಸಂದೇಶಗಳಿಗೆ ಸ್ಪಂದಿಸದಿರಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ವಂಚನೆಯ ಸಂದೇಶಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

SBI Customer Alert: ಎಸ್​ಬಿಐ ಗ್ರಾಹಕರೇ ಎಚ್ಚರ, ಇಂಥ ನಕಲಿ ಸಂದೇಶಗಳಿಗೆ ಸ್ಪಂದಿಸದಿರಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: May 24, 2022 | 12:40 PM

Share

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಬಗ್ಗೆ ಹರಿದಾಡುತ್ತಿರುವ ನಕಲಿ ಎಸ್ಸೆಮ್ಮೆಸ್ ಬಗ್ಗೆ ಪ್ರೆಸ್ ಇನ್​ಫರ್ಮೇಷನ್ ಬ್ಯುರೋದಿಂದ ಎಚ್ಚರಿಕೆ ನೀಡಿದೆ. “ನಿಮ್ಮ ಖಾತೆ ಸ್ಥಗಿತವಾಗಿದೆ” ಎಂಬ ನಕಲಿ ಸಂದೇಶಗಳು ಬರುತ್ತಿರುವುದಾಗಿ ಮತ್ತು ಅಂಥ ಎಸ್ಸೆಮ್ಮೆಸ್​ಗಳಿಗೆ ಪ್ರತಿಕ್ರಿಯೆ ನೀಡದಂತೆ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲ, ಆ ರೀತಿಯ ಇಮೇಲ್​ಗಳಿಗೂ ಸ್ಪಂದಿಸದಂತೆ, ವೈಯಕ್ತಿಕ ಮಾಹಿತಿಯನ್ನೋ ಅಐವಾ ಬ್ಯಾಂಕ್​ ವಿವರಗಳನ್ನೋ ಹಂಚಿಕೊಳ್ಳದಂತೆ ಸೂಚಿಸಿದ್ದು, ಆ ಮೂಲಕ ವಂಚನೆಯ ಚಟುವಟಿಕೆಗಳನ್ನು ನಿಯಂತ್ರಿಸಬಹುದು ಎಂದು ಹೇಳಲಾಗಿದೆ. “ಒಂದು ಸಂದೇಶ ಹರಿದಾಡುತ್ತಿದೆ, ಅದರಲ್ಲಿ ನಿಮ್ಮ @TheOfficialSBI ಖಾತೆ ಬ್ಲಾಕ್ ಮಾಡಲಾಗಿದೆ ಎಂದಿರುವುದು #FAKE.” ಈ ವಂಚಕರ ಚಟುವಟಿಕೆಯನ್ನು ನಿಯಂತ್ರಿಸಲು ಪಿಐಬಿ ಈಚೆಗೆ ಟ್ವೀಟ್ ಮಾಡಿ, “ನಿಮ್ಮ ವೈಯಕ್ತಿಕ ಅಥವಾ ಬ್ಯಾಂಕಿಂಗ್ ಮಾಹಿತಿ ಕೋರಿದರೆ ಇಮೇಲ್/ಎಸ್ಸೆಮ್ಮೆಸ್ ಮೂಲಕ ಹಂಚಿಕೊಳ್ಳಬೇಡಿ. ಅಂಥ ಸಂದೇಶಗಳು ಬಂದಲ್ಲಿ ತಕ್ಷಣವೇ phishing@sbi.co.inಗೆ ವರದಿ ಮಾಡಿ,” ಎನ್ನಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಸಹ ನಕಲಿ ಎಸ್ಸೆಮ್ಮೆಸ್ ಮತ್ತು ಇಮೇಲ್ ವಿರುದ್ಧ ನಿರಂತರವಾಗಿ ಎಚ್ಚರಿಸುತ್ತಲೇ ಇದೆ. “ಯಾರಾದರೂ ಮೋಸ ಮಾಡಿ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ವಿಥ್​ಡ್ರಾ ಮಾಡಿದಲ್ಲಿ ಬ್ಯಾಂಕ್ ಗಮನಕ್ಕೆ ತಕ್ಷಣ ತನ್ನಿ,” ಎಂದು ಆರ್​ಬಿಐ ಸಲಹೆ ನೀಡಿದೆ. ಮಾರ್ಚ್​ನಲ್ಲಿ ರಿಸರ್ವ್​ ಬ್ಯಾಂಕ್ ಜಾಗೃತಿ ಬುಕ್​ಲೆಟ್ ಹಂಚಿತ್ತು. ಹೇಗೆ ವಂಚನೆ ನಡೆಯುತ್ತದೆ, ಅವುಗಳನ್ನು ನಿಯಂತ್ರಿಸಲು ಗ್ರಾಹಕರು ಏನು ಮಾಡಬೇಕು ಎಂಬುದನ್ನು ವಿವರಿಸಲಾಗಿತ್ತು. “ಅನುಮಾನಾಸ್ಪದ ಅಥವಾ ವಂಚನೆಯ ಲಿಂಕ್​ಗಳು ಅಜ್ಞಾತ ಮೂಲಗಳಿಂದ ಬಂದಲ್ಲಿ ಅಂಥ ಇಮೇಲ್​ಗಳನ್ನು ಎಂದಿಗೂ ತೆರೆಯಬೇಡಿ, ಪ್ರತಿಕ್ರಿಯಿಸಬೇಡಿ,” ಎಂದು ಒಂದಂಶದಲ್ಲಿ ವಿವರಣೆ ನೀಡಲಾಗಿದೆ.

ಎಸ್​ಬಿಐನಿಂದ ಗ್ರಾಹಕರಿಗೆ ನಕಲಿ ಎಸ್ಸೆಮ್ಮೆಸ್/ಇಮೇಲ್​ಗಳ ಬಗ್ಗೆ ಎಚ್ಚರಿಕೆ

“ಸರ್ಚ್​ ಎಂಜಿನ್​ಗಳಲ್ಲಿ ಲಿಸ್ಟ್ ಆದ ನಕಲಿ ವಂಚಕ ಗ್ರಾಹಕ ಸೇವಾ ಸಂಖ್ಯೆಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಸರಿಯಾದ ಸಂಪರ್ಕ ಮಾಹಿತಿ ಯಾವಾಗಲೂ ಎಸ್​ಬಿಐನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ,” ಎಂದು ಶನಿವಾರದಂದು ಗ್ರಾಹಕರಿಗೆ ಎಸ್​ಬಿಐ ಇನ್​ಫೋಸೆಕ್ ತಂಡವು ತಿಳಿಸಿದೆ. ಎಸ್​ಬಿಐ ಹೆಸರಲ್ಲಿ ಬರುತ್ತಿರುವ ನಕಲಿ ಸಂದೇಶಗಳ ಬಗ್ಗೆ ಕೂಡ ಕಳೆದ ತಿಂಗಳು ಸಾರ್ವಜನಿಕ ಬ್ಯಾಂಕ್ ಅಧಿಸೂಚನೆ ಹೊರಡಿಸಿದೆ. “ಅಂಥ ಎಸ್ಸೆಮ್ಮೆಸ್​ಗಳು ವಂಚನೆಗೆ ಎಡೆ ಮಾಡಿಕೊಡಬಹುದು, ಇದರಿಂದ ನಿಮ್ಮ ಉಳಿತಾಯ ಕಳೆದುಕೊಳ್ಳಬಹುದು. ಎಂಬೆಡ್ ಆದ ಲಿಂಕ್ ಕ್ಲಿಕ್ ಮಾಡಬೇಡಿ. ನಿಮಗೆ ಎಸ್ಸೆಮ್ಮೆಸ್ ಬಂದಾಗ ಸರಿಯಾದ ಎಸ್​ಬಿಐ ಶಾರ್ಟ್​ ಕೋಡ್​ಗಾಗಿ ನೋಡಿ. ಎಚ್ಚರಿಕೆಯಿಂದ ಇರಿ ಹಾಗೂ #SafeWithSBI,” ಎಂದು ಟ್ವೀಟ್​ನಲ್ಲಿ ಹೇಳಲಾಗಿದೆ.

“ಗ್ರಾಹಕರ ಮಾಹಿತಿ ಪಡೆಯುವುದಕ್ಕೆ ಎಸ್​ಬಿಐ ಎಂದಿಗೂ ಇಮೇಲ್ ಕಳುಹಿಸುವುದಿಲ್ಲ. ನಿಮ್ಮ ಯೂಸರ್ ನೇಮ್ ಅಥವಾ ಪಾಸ್​ವರ್ಡ್ ಅಥವಾ ಬೇರೆ ಯಾವುದೇ ಮಾಹಿತಿಯನ್ನು ಎಸ್​ಬಿಐ ಕೇಳುವುದಕ್ಕೆ ಇಮೇಲ್ ಕಳುಹಿಸುವುದಿಲ್ಲ. ಒಂದು ವೇಳೆ ಅಂಥ ಮೇಲ್ ಬಂದಲ್ಲಿ ವಂಚಕ ಮೇಲ್ ಆಗಿರುತ್ತದೆ,” ಎಂದು ಎಚ್ಚರಿಸಲಾಗಿದೆ. “ಸ್ಟೇಟ್ ಬ್ಯಾಂಕ್ ಅಥವಾ ಅದರ ಪ್ರತಿನಿಧಿಗಳು ಎಂದಿಗೂ ನಿಮ್ಮ ವೈಯಕ್ತಿಕ ಮಾಹಿತಿ, ಪಾಸ್​ವರ್ಡ್​ ಅಥವಾ ಒನ್​ಟೈಮ್​ ಎಸ್ಸೆಮ್ಮೆಸ್​ ಪಾಸ್​ವರ್ಡ್​ಗಾಗಿ ಇಮೇಲ್/ಎಸ್ಸೆಮ್ಮೆಸ್​ಗಳು ಅಥವಾ ಫೋನ್ ಕರೆ ಮಾಡುವುದಿಲ್ಲ.”

ಅಂಥ ಇ-ಮೇಲ್, ಎಸ್ಸೆಮ್ಮೆಸ್ ಅಥವಾ ಫೋನ್​ ಕರೆ ಮೂಲಕ ನಿಮ್ಮ ಇಂಟರ್​ನೆಟ್ ಬ್ಯಾಂಕಿಂಗ್ ಖಾತೆಯಲ್ಲಿ ಹಣವನ್ನು ವಂಚಕ ದಾರಿಯಲ್ಲಿ ವಿಥ್​ಡ್ರಾ ಮಾಡಬಹುದು. ಇಂಥ ಇಮೇಲ್, ಟೆಕ್ಸ್ಟ್ ಸಂದೇಶ, ಅಥವಾ ಫೋನ್ ಕರೆಗೆ ಎಂದಿಗೂ ಸ್ಪಂದಿಸಬೇಡಿ. ಆ ಕೂಡಲೇ ಅದರ ಬಗ್ಗೆ ವರದಿ ಮಾಡಿ. ಅಂಥ ಇಮೇಲ್, ಎಸ್ಸೆಮ್ಮೆಸ್, ಇಮೇಲ್ ಅಥವಾ ಫೋನ್ ಕರೆ ಬಂದಲ್ಲಿ ಕೂಡಲೇ phishing@sbi.co.in ಸಂಪರ್ಕಿಸಿ. ಅಪ್ಪಿತಪ್ಪಿ ನಿಮ್ಮ ಕ್ರೆಡೆನ್ಷಿಯಲ್ಸ್ ತಿಳಿಸಿದ್ದಲ್ಲಿ ಕೂಡಲೇ ನಿಮ್ಮ ಪಾಸ್​ವರ್ಡ್​ ಬದಲಾಯಿಸಿ,” ಎಂದು ಎಸ್​ಬಿಐ ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Electric Car Loan: ಎಸ್​ಬಿಐನಿಂದ ಎಲೆಕ್ಟ್ರಿಕ್ ಕಾರು ಸಾಲ ಶೇ 7.25 ಬಡ್ಡಿ ದರದಿಂದ ಆರಂಭ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್