AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI mega property e-auction: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಆಸ್ತಿಗಳ ಮೆಗಾ ಇ-ಹರಾಜು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಅಕ್ಟೋಬರ್ 25ರಿಂದ ಆಸ್ತಿಗಳ ಮೆಗಾ ಇ- ಹರಾಜು ಆರಂಭವಾಗಿದೆ. ಆ ಬಗ್ಗೆ ವಿವರಗಳು ಇಲ್ಲಿ ಇದ್ದು, ಹಂತಹಂತವಾಗಿ ಮಾಹಿತಿ ನೀಡಲಾಗಿದೆ.

SBI mega property e-auction: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಆಸ್ತಿಗಳ ಮೆಗಾ ಇ-ಹರಾಜು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Oct 25, 2021 | 1:14 PM

Share

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India)ದಿಂದ ಆಸ್ತಿ ಖರೀದಿದಾರರಿಗೆ ಅದ್ಭುತವಾದ ಅವಕಾಶವೊಂದು ಸಿಗುತ್ತಿದೆ. ಇಂದಿನಿಂದ ಅನ್ವಯ ಆಗುವಂತೆ (ಅಕ್ಟೋಬರ್ 25, 2021) ಆಸ್ತಿಗಳ ಇ-ಹರಾಜು ಆರಂಭಿಸಿದೆ. ಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಿವಿಧ ಬಗೆಯ ಆಸ್ತಿಗಳ ಹರಾಜು ಮಾಡುವುದಾಗಿ ಹೇಳಿಕೊಂಡಿದೆ. ಎಲ್ಲ ಬಗೆಯ ಆಸ್ತಿಗಳು, ಸೆಕ್ಯೂರಿಟೀಸ್​ ಮತ್ತು ಅಡಮಾನ ಮಾಡಿದ ಆಸ್ತಿಗಳನ್ನು ಇ-ಹರಾಜು ಮಾಡಲಾಗುತ್ತದೆ. ವೆಬ್​ಸೈಟ್- https://www.bankeauctions.com/Sbi ಇದರಲ್ಲಿ ಆಸ್ತಿ, ಮೀಸಲು ಬೆಲೆಗಳು ಮತ್ತು ಇತರ ಮಾಹಿತಿಗಳ ಬಗ್ಗೆ ಪರಿಶೀಲನೆ ಮಾಡಬಹುದು. ಈ ಎಸ್​ಬಿಐ ಮೆಗಾ ಆಸ್ತಿ ಇ- ಹರಾಜಿನಲ್ಲಿ ಭಾಗವಹಿಸಬೇಕು ಅಂದರೆ ಎಸ್​ಬಿಐ ವೆಬ್​ಸೈಟ್​ನಲ್ಲಿ ಪ್ರಸ್ತಾವ ಮಾಡಿರುವ ದಾಖಲೆಗಳು ಇರಬೇಕು.

– ಇ-ಹರಾಜಿನ ನೋಟಿಸ್​ನಲ್ಲಿ ತಿಳಿಸಿರುವಂತೆ ಆ ನಿರ್ದಿಷ್ಟ ಆಸ್ತಿಯ ಇಎಂಡಿ ಇರಬೇಕು.

– ಸಂಬಂಧಪಟ್ಟ ಶಾಖೆಯಲ್ಲಿ ಕೆವೈಸಿ (ನೋ ಯುವರ್ ಕಸ್ಟಮರ್) ದಾಖಲಾತಿಗಳು ಸಲ್ಲಿಸಬೇಕು.

– ಸಿಂಧುವಾದ ಡಿಜಿಟಲ್ ಸಿಗ್ನೇಚರ್- ಬಿಡ್ಡರ್​ಗಳು ಇ-ಹರಾಜುದಾರರನ್ನು ಅಥವಾ ಯಾವುದಾದರೂ ಅಂಗೀಕೃತ ಸಂಸ್ಥೆಯಿಂದ ಡಿಜಿಟಲ್ ಸಿಗ್ನೇಚರ್ ಪಡೆಯಬೇಕು.

-ಲಾಗ್​ ಇನ್ ಐಡಿ ಮತ್ತು ಪಾಸ್​ವರ್ಡ್​- ಇದನ್ನು ಇಎಂಡಿ ಠೇವಣಿ ಸಲ್ಲಿಸಿ ಹಾಗೂ ಸಂಬಂಧಪಟ್ಟ ಶಾಖೆಯಲ್ಲಿ ಕೆವೈಸಿ ದಾಖಲಿಸಿದ ನಂತರ ಇ-ಹರಾಜುದಾರರು ಬಿಡ್ಡರ್​ನ ಇಮೇಲ್​ ಐಡಿಗೆ ಕಳುಹಿಸಲಾಗುತ್ತದೆ.

– ಬಿಡ್ಡರ್​ಗಳು ಲಾಗ್​ ಇನ್​ ಮಾಡಿ ಮತ್ತು ನಿಯಮಾವಳಿಯ ಪ್ರಕಾರ ಹರಾಜಿನ ಅವಧಿಯಲ್ಲಿ ಬಿಡ್ ಮಾಡಬೇಕು.

ಎಸ್​ಬಿಐ ಆಸ್ತಿ ಇ- ಹರಾಜಿನಲ್ಲಿ ಭಾಗವಹಿಸುವುದು ಹೇಗೆ? ಇ- ಹರಾಜಿಗೆ ಆನ್​ಲೈನ್​ನಲ್ಲಿ ಬಿಡ್​ ಮಾಡಬೇಕಾಗುತ್ತದೆ. ಒಂದು ವೇಳೆ ಈ ಡಿಜಿಟಲ್ ಹರಾಜಿನಲ್ಲಿ ಭಾಗವಹಿಸಲು ಬಯಸಿದರೆ ಮೊಬೈಲ್ ಫೋನ್​ ಸಂಖ್ಯೆ ಮತ್ತು ಇಮೇಲ್​ ಮೂಲಕ ನೋಂದಣಿ ಆಗಬೇಕು. ಆ ನಂತರ ಕೆವೈಸಿ ಕಾಗದಗಳನ್ನು ಅಪ್​ಲೋಡ್​ ಆದ ಮೇಲೆ ಒಂದು ಸಲ ದೃಢೀಕರಣ ಸಂಪೂರ್ಣವಾದ ನಂತರ ಆನ್​ಲೈನ್ ಚಲನ್ ಭರ್ತಿ ಮಾಡಬೇಕಾಗುತ್ತದೆ. ಆ ನಂತರ ಆನ್​ಲೈನ್​ನಲ್ಲಿ ಬಿಡ್ ಮಾಡಬಹುದು. ಸಾಮಾನ್ಯವಾಗಿ, ಯಾರು ಸಾಲವನ್ನು ಮರುಪಾವತಿ ಮಾಡಿರುವುದಿಲ್ಲವೋ ಅಂಥವರ ಆಸ್ತಿ ಇದಾಗಿರುತ್ತದೆ. ಹಾಗೆ ಸಾಲ ಬಾಕಿ ಉಳಿಸಿಕೊಂಡವರ ಆಸ್ತಿಯನ್ನು ಬ್ಯಾಂಕ್​ಗಳು ಇಂಡಿಯನ್ ಬ್ಯಾಂಕ್ಸ್ ಆಕ್ಷನ್ಸ್ ಮಾರ್ಟಗೇಜ್ಡ್ ಪ್ರಾಪರ್ಟೀಸ್ ಇನ್ಫರ್ಮೇಷನ್ (IBAPI) ಮೂಲಕ ಹರಾಜಿಗೆ ಇಡುತ್ತವೆ.

“ಇಂಡಿಯನ್ ಬ್ಯಾಂಕ್ಸ್ ಆಕ್ಷನ್ಸ್ ಮಾರ್ಟಗೇಜ್ಡ್ ಪ್ರಾಪರ್ಟೀಸ್ ಇನ್ಫರ್ಮೇಷನ್ (IBAPI) ಪೋರ್ಟಲ್ ಎಂಬುದು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್​ (IBA) ಉಪಕ್ರಮ. ಹಣಕಾಸು ಸೇವೆ ಇಲಾಖೆಯ (Department Of Financial Services) ಅಡಿಯಲ್ಲಿ ರೂಪಿಸಿರುವ ನೀತಿಗಳಲ್ಲಿ ಬರುತ್ತದೆ. ಹಣಕಾಸು ಸಚಿವಾಲಯ ಸಾಮಾನ್ಯ ಪ್ಲಾಟ್​ಫಾರ್ಮ್ ಒದಗಿಸಿದ್ದು, ಅಡಮಾನ ಮಾಡಿ ಸಾಲ ಹಿಂತಿರುಗಿಸದ ಆಸ್ತಿಯನ್ನು ಹರಾಜು ಮಾಡುವ ಮುನ್ನ ಅಲ್ಲಿ ಮಾಹಿತಿ ಪ್ರದರ್ಶಿಸಲಾಗುತ್ತದೆ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳಿಂದ ಇದು ಶುರುವಾಗುತ್ತದೆ. ಖರೀದಿ ಮಾಡಬೇಕು ಎಂದಿರುವವರು ಈ ಪೋರ್ಟಲ್ ಬಳಸಿ ಆಸ್ತಿಯ ಮಾಹಿತಿಯನ್ನು ಹುಡುಕಬಹುದು ಮತ್ತು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು,” ಎಂದು Ibapi ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ. ​

ಇದನ್ನೂ ಓದಿ: SBI Internet Banking: ಕನ್ನಡ, ತಮಿಳು, ತೆಲುಗು ಸೇರಿ 15 ಭಾಷೆಗಳಲ್ಲಿ ಎಸ್​ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಲಭ್ಯ

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ