AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Investors Wealth: ಷೇರುಪೇಟೆ ಹೂಡಿಕೆದಾರರ ಸಂಪತ್ತು ಒಂದು ತಿಂಗಳಲ್ಲಿ 30 ಲಕ್ಷ ಕೋಟಿ ರೂಪಾಯಿ ಹೆಚ್ಚಳ

ಕಳೆದ ಒಂದು ತಿಂಗಳಲ್ಲಿ ಷೇರುಪೇಟೆ ಹೂಡಿಕೆದಾರರ ಸಂಪತ್ತು 30 ಲಕ್ಷ ಕೋಟಿ ರೂಪಾಯಿ ಏರಿಕೆ ಆಗಿದೆ. ಇಂದಿನ ವಹಿವಾಟಿನಲ್ಲಿ ಷೇರುಪೇಟೆಯಲ್ಲಿ ಏನೇನಾಯಿತು ಎಂಬ ಮಾಹಿತಿ ಇಲ್ಲಿದೆ.

Investors Wealth: ಷೇರುಪೇಟೆ ಹೂಡಿಕೆದಾರರ ಸಂಪತ್ತು ಒಂದು ತಿಂಗಳಲ್ಲಿ 30 ಲಕ್ಷ ಕೋಟಿ ರೂಪಾಯಿ ಹೆಚ್ಚಳ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Apr 04, 2022 | 6:44 PM

Share

ಏಪ್ರಿಲ್ 4ನೇ ತಾರೀಕಿನ ಸೋಮವಾರದಂದು ಬಿಎಸ್​ಇ ಸೆನ್ಸೆಕ್ಸ್ 60,000 ಪಾಯಿಂಟ್ಸ್ ಗಡಿ ದಾಟಿದೆ. ಮತ್ತು ಕಳೆದ ಒಂದು ತಿಂಗಳಲ್ಲಿ ಹೂಡಿಕೆದಾರರ ಸಂಪತ್ತು 30 ಲಕ್ಷ ಕೋಟಿ ರೂಪಾಯಿ ಹೆಚ್ಚಾಗಿದೆ. ಉಕ್ರೇನ್- ರಷ್ಯಾ ಬಿಕ್ಕಟ್ಟು (Russia-Ukraine Crisis)  ತಮಣಿ ಆಗುತ್ತಾ ಇದ್ದಂತೆ ಹಾಗೂ ಎರಡೂ ದೇಶಗಳ ಮಧ್ಯೆ ಶಾಂತಿ ಮಾತುಕತೆಯು ಪಾಸಿಟಿವ್ ಆದಂಥ ಫಲಿತಾಂಶ ತೋರಿದ ಹಿನ್ನೆಲೆಯಲ್ಲಿ ಖೀವ್​ನಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ನಿರ್ಧರಿಸುವುದರೊಂದಿಗೆ ಈ ಏರಿಕೆಗೆ ಕಾರಣ ಆಯಿತು. ಅದರ ಫಲಿತಾಂಶವಾಗಿ ತೈಲದ ಬೆಲೆ ಬ್ಯಾರೆಲ್​ಗೆ 105 ಅಮೆರಿಕನ್ ಡಾಲರ್ ಆಯಿತು. ಇದರಿಂದ ಭಾರತದಂಥ ನಿವ್ವಳ ತೈಲ ಆಮದುದಾರ ದೇಶಗಳಿಗೆ ದೊಡ್ಡ ನಿರಾಳ ಆದಂತಾಗಿದೆ. ಭಾರತದ ಈಕ್ವಿಟಿಯಲ್ಲಿ ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಮತ್ತು ಖರೀದಿ ಆಸಕ್ತಿ ತೋರಿದ್ದಾರೆ. ಇದಕ್ಕೂ ಮುನ್ನ ಹಣಕಾಸು ವರ್ಷದ ದ್ವಿತೀಯಾರ್ಧದಕ್ಕು 2.3 ಲಕ್ಷ ಕೋಟಿ ರೂಪಾಯಿಯಷ್ಟು ಮಾರಾಟ ಮಾಡಿದ್ದರು. ಅವರಿಂದಲೂ ಬೆಂಬಲ ಕಂಡುಬಂದಿದೆ.

ಕಳೆದ ವಾರದಲ್ಲಿ ವಿದೇಶೀ ಸಾಂಸ್ಥಿಕ ಹೂಡಿಕೆದಾರರು 5,590 ಕೋಟಿ ರೂಪಾಯಿಗೂ ಹೆಚ್ಚು ಖರೀದಿ ಮಾಡಿದ್ದಾರೆ. ಈಚಿನ ಇಳಿಕೆ ನಂತರ ಮಾರುಕಟ್ಟೆ ಸೂಕ್ತವಾದ ಮೌಲ್ಯಮಾಪನ ಆಗಿದೆ ಮತ್ತು ಫೆಡರಲ್ ರಿಸರ್ವ್​ನಿಂದ ಭವಿಷ್ಯದ ದರ ಏರಿಕೆ ಬಗ್ಗೆ ಸ್ಪಷ್ಟ ದಿಕ್ಕು ದೊರೆತಿದೆ ಎಂಬ ಕಾರಣಗಳಿಗೆ ಎಫ್​ಐಐ ಹರಿವು ಉತ್ತಮಗೊಂಡಿರಬಹುದು. ಬಿಎಸ್​ಇ ಸೆನ್ಸೆಕ್ಸ್ 1335 ಪಾಯಿಂಟ್ಸ್ ಅಥವಾ ಶೇ 2.25ರಷ್ಟು ಮೇಲೇರಿ 60,611 ಪಾಯಿಂಟ್ಸ್​ನಲ್ಲಿ ಸೋಮವಾರ ದಿನಾಂತ್ಯ ಕಂಡರೆ, ನಿಪ್ಟಿ 50 ಸೂಚ್ಯಂಕವು 382.95 ಪಾಯಿಂಟ್ಸ್ ಅಥವಾ ಶೇ 2.17ರಷ್ಟು ಹೆಚ್ಚಳವಾಗಿ, 18053.40 ಪಾಯಿಂಟ್ಸ್​ನೊಂದಿಗೆ ವ್ಯವಹಾರ ಮುಗಿಸಿದೆ.

ಹೂಡಿಕೆದಾರರ ಸಂಪತ್ತು ಬಿಎಸ್​ಇ ಮಾರುಕಟ್ಟೆ ಬಂಡವಾಳ ಮೌಲ್ಯದ ಮೂಲಕ 3.50 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಾಗಿದೆ. ಅಂದಹಾಗೆ ಎಚ್​ಡಿಎಫ್​ಸಿ-ಎಚ್​ಡಿಎಫ್​ಸಿ ಬ್ಯಾಂಕ್ ವಿಲೀನ ಬಗ್ಗೆ ಘೋಷಣೆ ಮಾಡಲಾಗಿದೆ. ವಿಲೀನ ಆದ ನಂತರ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಮೂರನೇ ಅತಿದೊಡ್ಡ ಕಾರ್ಪೊರೇಟ್ ಆಗಲಿದೆ. ಅದು ಸಹ ಇಂದಿನ ಏರಿಕೆಗೆ ತನ್ನದೇ ಕೊಡುಗೆ ನೀಡಿದೆ. ಒಟ್ಟುಗೂಡಿ ಎರಡರಿಂದಲೂ ಬೆಂಚ್​ಮಾರ್ಕ್ ಸೂಚ್ಯಂಕದಿಂದ ಅತಿದೊಡ್ಡ ವೇಯ್ಟೇಜ್ ಆಗಿದೆ. ವಿಲೀನ ಸುದ್ದಿ ಹೊರಬಿದ್ದ ನಂತರ ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಎಚ್​ಡಿಎಫ್​ಸಿ ಅದ್ಭುತ ಗಳಿಕೆ ಕಂಡವು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಎಚ್​ಡಿಎಫ್​ಸಿ ಬ್ಯಾಂಕ್ ಶೇ 10.01 ಎಚ್​ಡಿಎಫ್​ಸಿ ಶೇ 9.29 ಅದಾನಿ ಪೋರ್ಟ್ಸ್ ಶೇ 4.17 ಎಚ್​ಡಿಎಫ್​ಸಿ ಲೈಫ್ ಶೇ 3.90 ಕೊಟಕ್ ಮಹೀಂದ್ರಾ ಶೇ 3.34

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಇನ್ಫೋಸಿಸ್ ಶೇ -1.08 ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ -0.22 ಟೈಟನ್ ಕಂಪೆನಿ ಶೇ -0.15

ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್