AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Opening Bell: ಸೆನ್ಸೆಕ್ಸ್ 950ಕ್ಕೂ ಪಾಯಿಂಟ್ಸ್, ನಿಫ್ಟಿ 291 ಪಾಯಿಂಟ್ಸ್​ನಷ್ಟು ಭಾರೀ ಕುಸಿತ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಫೆಬ್ರವರಿ 11ನೇ ತಾರೀಕಿನ ಶುಕ್ರವಾರದ ಆರಂಭದ ವಹಿವಾಟಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇಳಿಕೆ, ಏರಿಕೆ ಕಂಡ ಷೇರುಗಳ ವಿವರ ಇಲ್ಲಿದೆ.

Opening Bell: ಸೆನ್ಸೆಕ್ಸ್ 950ಕ್ಕೂ ಪಾಯಿಂಟ್ಸ್, ನಿಫ್ಟಿ 291 ಪಾಯಿಂಟ್ಸ್​ನಷ್ಟು ಭಾರೀ ಕುಸಿತ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 11, 2022 | 11:39 AM

Share

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಫೆಬ್ರವರಿ 11ನೇ ತಾರೀಕಿನ ಶುಕ್ರವಾರದ ಬೆಳಗಿನ ವಹಿವಾಟಿನಲ್ಲಿ ಭಾರೀ ಕುಸಿತ ಕಂಡಿದೆ. ಸೆನ್ಸೆಕ್ಸ್ 908.91 ಪಾಯಿಂಟ್ಸ್​ ಅಥವಾ ಶೇ 1.54ರಷ್ಟು ಕೆಳಗಿಳಿದು ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ 270.50 ಪಾಯಿಂಟ್ಸ್​ ಅಥವಾ ಶೇ 1.54ರಷ್ಟು ಕುಸಿದು, 17,335 ಪಾಯಿಂಟ್ಸ್​​ನಲ್ಲಿ ವ್ಯವಹಾರ ಮಾಡುತ್ತಿತ್ತು. ನಿಫ್ಟಿ ಬ್ಯಾಂಕ್ ಸೂಚ್ಯಂಕ 502.70 ಪಾಯಿಂಟ್ಸ್ ಅಥವಾ ಶೇ 1.29ರಷ್ಟು ಕುಸಿದು, 38,508.25 ಪಾಯಿಂಟ್ಸ್​​ನೊಂದಿಗೆ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕವು 919.55 ಪಾಯಿಂಟ್ಸ್​ ಅಥವಾ ಶೇ 2.60ರಷ್ಟು ನೆಲ ಕಚ್ಚಿತ್ತು. ನಿಫ್ಟಿ ಲೋಹದ ಸೂಚ್ಯಂಕವು 32.50 ಪಾಯಿಂಟ್ಸ್ ಅಥವಾ ಶೇ 0.54ರಷ್ಟು ಕುಸಿದಿತ್ತು.

ಮದುವೆ ಹಾಗೂ ಸಮಾರಂಭಗಳ ಬಟ್ಟೆ ಸೆಗ್ಮೆಂಟ್​ಗಳ ಭಾರತದ ಅತಿದೊಡ್ಡ ಕಂಪೆನಿಯಾದ ವೇದಾಂತ್ ಫ್ಯಾಷನ್ಸ್ ಐಪಿಒ ಷೇರು ವಿತರಣೆ ಫೆಬ್ರವರಿ 11ನೇ ತಾರೀಕಿನಂದು ವಿತರಣೆ ಮಾಡಲಿದೆ. ಹೂಡಿಕೆದಾರರು ಎರಡು ಬಗೆಯಲ್ಲಿ ತಮ್ಮ ವಿತರಣೆ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಬಹುದು. ಐಪಿಒ ರಿಜಿಸ್ಟ್ರಾರ್ ವೆಬ್​ಸೈಟ್​ ಅಥವಾ ಬಿಎಸ್​ಇ ವೆಬ್​ಸೈಟ್​ನಲ್ಲಿ ಪರೀಕ್ಷಿಸಬಹುದು. ಇನ್ನು ಭಾರತದ ರೂಪಾಯಿ ಮೌಲ್ಯವು ಡಾಲರ್ ವಿರುದ್ಧ ಶುಕ್ರವಾರ 45 ಪೈಸೆ ಇಳಿಕೆಯಲ್ಲಿ ಆರಂಭವಾಗಿದ್ದು, ಈ ಹಿಂದಿನ ಸೆಷನ್​ನಲ್ಲಿ 74.94ಕ್ಕೆ ಕೊನೆಗೊಂಡಿತ್ತು. ಈ ಲೇಖನ ಸಿದ್ಧವಾಗುವ ಹೊತ್ತಿಗೆ ಸೆನ್ಸೆಕ್ಸ್ 970 ಪಾಯಿಂಟ್ಸ್​ಗೂ ಹೆಚ್ಚು, ನಿಫ್ಟಿ 291 ಪಾಯಿಂಟ್ಸ್ ನೆಲ ಕಚ್ಚಿತ್ತು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ

ಐಒಸಿ ಶೇ 1.21

ಬಿಪಿಸಿಎಲ್ ಶೇ 0.43

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ

ಗ್ರಾಸಿಮ್ ಶೇ -3.14

ಇನ್ಫೋಸಿಸ್ ಶೇ -2.97

ಟೆಕ್​ ಮಹೀಂದ್ರಾ ಶೇ -2.89

ಬ್ರಿಟಾನಿಯಾ ಶೇ -2.68

ನೆಸ್ಟ್ಲೆ ಶೇ -2.55

ಇದನ್ನೂ ಓದಿ: Adani Wilmar Listing: ಅದಾನಿ ವಿಲ್ಮರ್ ಶೇ 4ರ ರಿಯಾಯಿತಿಗೆ ಷೇರು ಮಾರ್ಕೆಟ್​ನಲ್ಲಿ ಲಿಸ್ಟಿಂಗ್

Follow Us
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್