Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepak Parekh: ಷೇರು ಬೇಡ, ಸಂಬಳ ಸಾಕು ಎನ್ನುವ ಮಾಲೀಕ; 5 ಲಕ್ಷ ಕೋಟಿ ಮೌಲ್ಯದ ಕಂಪನಿ ಛೇರ್ಮನ್​ನ ಸರಳತೆ ಎಲ್ಲರಿಗೂ ಮಾದರಿ

HDFC Chairman's Selfless Dedication: ಎಚ್​ಡಿಎಫ್​ಸಿಯ ಛೇರ್ಮನ್ ದೀಪಕ್ ಪರೇಖ್ ಹೊಂದಿರುವ ಷೇರುಪಾಲು ಶೇ. 0.04 ಮಾತ್ರ. ತನಗೆ ಷೇರಿಗಿಂತ ಸಂಬಳವೇ ಸಾಕು ಎನ್ನುವಷ್ಟು ಪ್ರಾಮಾಣಿಕ ಮತ್ತು ಸರಳ ವ್ಯಕ್ತಿ ದೀಪಕ್ ಪರೇಖ್.

Deepak Parekh: ಷೇರು ಬೇಡ, ಸಂಬಳ ಸಾಕು ಎನ್ನುವ ಮಾಲೀಕ; 5 ಲಕ್ಷ ಕೋಟಿ ಮೌಲ್ಯದ ಕಂಪನಿ ಛೇರ್ಮನ್​ನ ಸರಳತೆ ಎಲ್ಲರಿಗೂ ಮಾದರಿ
ದೀಪಕ್ ಪರೇಖ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 27, 2023 | 4:02 PM

ಗೃಹ ಸಾಲ ನೀಡುವ ಪ್ರಮುಖ ಖಾಸಗಿ ಹಣಕಾಸು ಸಂಸ್ಥೆ ಎಚ್​ಡಿಎಫ್​ಸಿ (HDFC) ಇದೀಗ 5 ಲಕ್ಷ ಕೋಟಿ ರೂನಷ್ಟು ಷೇರುಸಂಪತ್ತು ಹೊಂದಿರುವ ಕಂಪನಿ. ದೀಪಕ್ ಪರೇಖ್ (Deepak Parekh) ಈ ಸಂಸ್ಥೆಯ ಛೇರ್ಮನ್. ಈ ಸಂಸ್ಥೆಯನ್ನು ಸ್ಥಾಪಿಸಿದ್ದೇ ಇವರ ದೊಡ್ಡಪ್ಪ ಎಚ್.ಟಿ. ಪರೇಖ್. ದೊಡ್ಡಪ್ಪನಿಗೆ ದತ್ತು ಮಗನಾಗಿ, ವಿದೇಶದಲ್ಲಿ ಭರ್ಜರಿ ಸಂಬಳ ತರುವ ಕೆಲಸ ಬಿಟ್ಟು ಭಾರತಕ್ಕೆ ಬಂದು ಎಚ್​ಡಿಎಫ್​ಸಿಯನ್ನು ಉಳಿಸಿ ಇಂದು ಹೆಮ್ಮರವಾಗಿ ಬೆಳೆಸಿದವರು ದೀಪಕ್ ಪರೇಖ್. ಈ ಕಂಪನಿಯಲ್ಲಿ ಛೇರ್ಮನ್ ಆಗಿರುವ ಅವರು ಸಂಸ್ಥೆಯ ಒಟ್ಟು ಷೇರು ಸಂಪತ್ತಿನಲ್ಲಿ ಹೊಂದಿರುವ ಪಾಲು ಕೇವಲ ಶೇ. 0.04 ಮಾತ್ರ. ಅಂದರೆ ಪ್ರತೀ 10,000 ರುಪಾಯಿಗೆ ಇವರ ಪಾಲು 4 ಪೈಸೆ ಮಾತ್ರ. ಆದರೆ ಇಂದು ದೀಪಕ್ ಪರೇಖ್ ಅವರು ಭಾರತದ ಉದ್ಯಮ ಮತ್ತು ಹಣಕಾಸು ವಲಯದಲ್ಲಿ ಬಹಳ ಎತ್ತರದ ಮತ್ತು ಗೌರವಾನ್ವಿತ ಸ್ಥಾನದಲ್ಲಿದ್ದಾರೆ. ಹಲವು ಪ್ರಮುಖ ಉದ್ಯಮ ಸಂಸ್ಥೆಗಳ ವಿವಿಧ ಮಂಡಳಿಗಳು, ಸರ್ಕಾರಗಳ ಮಂಡಳಿಗಳಿಗೆ ಅವರ ಸೇವೆ ಬಳಸುವುದುಂಟು. ಅಷ್ಟರಮಟ್ಟಿಗೆ ಅವರು ಅನುಭವಸ್ಥರು ಮತ್ತು ಮಾದರಿ ವ್ಯಕ್ತಿತ್ವದವರು.

ದೊಡ್ಡ ಬ್ಯಾಂಕರ್ ಆಗಬಹುದಾಗಿದ್ದ ದೀಪಕ್ ಪರೇಖ್ ಎಚ್​ಡಿಎಫ್​ಸಿಗೆ ಬಂದ ಕತೆಯೇ ಬೇರೆ

ದೀಪಕ್ ಪರೇಖ್ ಮುಂಬೈನಲ್ಲಿ ಹುಟ್ಟಿ ಅಲ್ಲಿಯೇ ಶಾಲಾ ಶಿಕ್ಷಣ ಪಡೆದವರು. 1965ರಲ್ಲಿ ಇಂಗ್ಲೆಂಡ್​ನಲ್ಲಿ ವೃತ್ತಿಪರ ಶಿಕ್ಷಣ ಪಡೆದು ಅಲ್ಲಿಯೇ ಚಾರ್ಟರ್ಡ್ ಅಕೌಂಟೆಂಟ್ ಆದರು. ಲಂಡನ್​ನಲ್ಲಿ ವಿನ್ನೀ, ಸ್ಮಿತ್ ಅಂಡ್ ವಿನ್ನೀ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದರು. ಬಳಿಕ ಅವರು ಪ್ರತಿಷ್ಠಿತ ಸಿಎಐಐಬಿ (ಸರ್ಟಿಫೈಡ್ ಅಸೋಷಿಯೇಶನ್ ಆಫ್ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಬ್ಯಾಂಕರ್ಸ್) ಪರೀಕ್ಷೆ ಪೂರ್ಣಗೊಳಿಸಿದರು. ಇದಾದ ಬಳಿಕ ಅವರು ಗ್ರಿಂಡ್ಲೇಸ್ ಬ್ಯಾಂಕ್, ಚೇಸ್ ಮನ್ಹಟನ್ ಬ್ಯಾಂಕ್​ಗಳಲ್ಲಿ ಕೆಲಸ ಮಾಡಿದರು. ವೃತ್ತಿಪರ ಬದುಕಿನಲ್ಲಿ ಬಹಳ ಎತ್ತರಕ್ಕೆ ಹೋಗುವ ಅವಕಾಶ ಹೊಂದಿದವರು.

ಇದನ್ನೂ ಓದಿMaruti Suzuki: ಮಾರುತಿ ಸುಜುಕಿ 1 ಲಕ್ಷ ಕೋಟಿ ರೂ ಆದಾಯ ದಾಟಿದ ಭಾರತದ ಮೊದಲ ಕಾರ್ ಕಂಪನಿ; ಷೇರುಗಳಿಗೆ ಭಾರೀ ಬೇಡಿಕೆ ಸಾಧ್ಯತೆ

ದೀಪಕ್ ಪರೇಖ್ ಎಚ್​ಡಿಎಫ್​ಸಿಗೆ ಅರ್ಧ ಸಂಬಳಕ್ಕೆ ಬಂದ ಕಥೆ

ಎಚ್​ಡಿಎಫ್​ಸಿ (ಹೌಸಿಂಗ್ ಡೆವಲಪ್ಮೆಂಟ್ ಅಂಡ್ ಫೈನಾನ್ಸ್ ಕಾರ್ಪೊರೇಶನ್ ಸಂಸ್ಥೆ) 1977ರಲ್ಲಿ ದೀಪಕ್ ಪರೇಖ್ ದೊಡ್ಡಪ್ಪ ಸ್ಥಾಪನೆ ಮಾಡಿದ್ದು. ಎಚ್.ಡಿ. ಪರೇಖ್ ಅವರ ವಯಸ್ಸು 65 ವರ್ಷ. ತೀರಾ ನಗಣ್ಯ ಸ್ಥಿತಿಯಲ್ಲಿ ಸಂಸ್ಥೆ ಇತ್ತು. ಆ ಸಂದರ್ಭದಲ್ಲಿ ಇಂಗ್ಲೆಂಡ್​ನಲ್ಲಿ ಉತ್ತಮ ಬ್ಯಾಂಕರ್ ವೃತ್ತಿ ಹೊಂದಿದ್ದ ದೀಪಕ್ ಪರೇಖ್ ಅವರನ್ನು ಎಚ್​ಡಿಎಫ್​ಸಿಗೆ ಸೇರುವಂತೆ ದೊಡ್ಡಪ್ಪ ಕೇಳಿದರು. ಮಕ್ಕಳಿಲ್ಲದ ದೊಡ್ಡಪ್ಪನಿಗೆ ದೀಪಕ್ ಪರೇಖ್ ಒಂದು ರೀತಿಯಲ್ಲಿ ದತ್ತುಪುತ್ರರೇ ಆಗಿದ್ದರು. ಇವರ ಮಾತು ನಿರಾಕರಿಸಲಾಗದೇ ದೀಪಕ್ ಪರೇಖ್ ಇಂಗ್ಲೆಂಡ್​ನಲ್ಲಿ ತಮಗೆ ಸಿಗುತ್ತಿದ್ದುದಕ್ಕಿಂತ ಅರ್ಧ ಸಂಬಳಕ್ಕೆ ಎಚ್​ಡಿಎಫ್​ಸಿಗೆ ಬಂದು ಕೆಲಸಕ್ಕೆ ಸೇರಿದರು. ಇದು ಆಗಿದ್ದು 1978ರಲ್ಲಿ. ಅಂದರೆ ಎಚ್​ಡಿಎಫ್​ಸಿ ಸ್ಥಾಪನೆಯಾಗಿ ಒಂದು ವರ್ಷದ ಬಳಿಕ.

ಎಚ್​ಡಿಎಫ್​ಸಿಯಲ್ಲಿ ದೀಪಕ್ ಪರೇಖ್ ಷೇರುಪಾಲು ಯಾಕೆ ಕಡಿಮೆ?

ದೀಪಕ್ ಪರೇಖ್ ಎಚ್​ಡಿಎಫ್​ಸಿಗೆ ಬಂದಾಗ ಕಡಿಮೆ ವೇತನ ಪಡೆದರಾದರೂ ಅವರ ಗುರಿ ಇದ್ದದ್ದು ಸಂಸ್ಥೆಯ ಉನ್ನತಿ. ಸಂಸ್ಥಾಪಕರಾದ ಅವರ ದೊಡ್ಡಪ್ಪರಿಗೆ ಆಗಲೇ ವಯಸ್ಸಾಗಿತ್ತಾದ್ದರಿಂದ 33 ವರ್ಷದ ದೀಪಕ್ ಪರೇಖ್ ಅವರ ಹೆಗಲಿಗೆ ಕಂಪನಿ ಕಟ್ಟುವ ಗುರುತರ ಹೊಣೆಗಾರಿಕೆ ಇತ್ತು. ಬಹಳ ಶ್ರಮಪಟ್ಟು ಈ ಕಾರ್ಯ ಮಾಡುವಾಗ ದೀಪಕ್ ಪರೇಖ್ ಅವರಿಗೆ ಎಚ್​ಡಿಎಫ್​ಸಿಯಲ್ಲಿ ಹೆಚ್ಚು ಷೇರುಪಾಲು ಹೊಂದಬೇಕೆಂಬ ಆಲೋಚನೆಯೇ ಸುಳಿಯಲಿಲ್ಲ.

ಇದನ್ನೂ ಓದಿBig Rise: ಬೆಂಗಳೂರು, ಹೈದರಾಬಾದ್​ನ ಈ ಪುಟ್ಟ ಮೆಷೀನ್ ಟೂಲ್ ಕಂಪನಿಗೆ ಹಣ ಹಾಕಿದವರೇ ಸಿರಿವಂತರು; 3 ವರ್ಷದಲ್ಲಿ 7 ಪಟ್ಟು ಬೆಳೆದಿದೆ ಷೇರು

ಈಗಲೂ ಕೂಡ ಅವರಿಗೆ ಹೆಚ್ಚು ಷೇರು ಇಲ್ಲದಿರುವ ಬಗ್ಗೆ ಯಾವ ನಿರಾಸೆಯೂ ಇಲ್ಲ. ತನ್ನ ದೊಡ್ಡಪ್ಪ ಕೂಡ ಸಂಬಳ ಮಾತ್ರ ಪಡೆಯುತ್ತಿದ್ದರು. ನಾನೂ ಸಂಬಳ ಮಾತ್ರವೇ ಪಡೆದು ಕೆಲಸ ಮಾಡಲು ಬಯಸುತ್ತೇನೆ. ಆದರೆ, ಸಂಬಳದ ಉದ್ಯೋಗಿಗಳಂತೆ ಅವರು ನಿರ್ದಿಷ್ಟ ಸಮಯ, ಕೆಲಸಕ್ಕೆ ಸೀಮಿತರಾಗದೇ ಮಾಲೀಕರಂತೆ ಸರ್ವಮುಖಿಯಾಗಿ ಕೆಲಸ ಮಾಡಿದ್ದಂತೂ ಹೌದು.

ದೀಪಕ್ ಪರೇಖ್ ಅವರಿಗೆ ಎಚ್​ಡಿಎಫ್​ಸಿ ಷೇರುಗಳೇ ಇಲ್ಲವೆಂದಲ್ಲ. ಅವರ ಬಳಿ ಇರುವ ಷೇರುಗಳ ಒಟ್ಟು ಮೌಲ್ಯ ಈಗ 155 ಕೋಟಿ ರೂ ಎನ್ನಲಾಗಿದೆ. 5 ಲಕ್ಷ ಕೋಟಿ ಷೇರುಸಂಪತ್ತಿನಲ್ಲಿ 155 ಕೋಟಿ ಯಾವ ಮೂಲೆಗೆ? ಇನ್ಫೋಸಿಸ್​ನಲ್ಲಿ ನಾರಾಯಣಮೂರ್ತಿ ಅವರ ಕುಟುಂಬಸದಸ್ಯರು ಶೇ. 5ರವರೆಗೆ ಷೇರುಪಾಲು ಹೊಂದಿದ್ದಾರೆ. ದೀಪಕ್ ಬಳಿ ಇರುವ ಷೇರುಪಾಲು ಶೇ. 0.04ಕೂಡ ಇಲ್ಲ.

ಇವತ್ತು ದೀಪಕ್ ಪರೇಖ್ ಅವರ ಶ್ರಮದ ಫಲವಾಗಿ ಎಚ್​ಡಿಎಫ್​ಸಿಗೆ ಗ್ರಾಹಕರ ಸಂಖ್ಯೆ 6.8 ಕೋಟಿಯಷ್ಟಿದೆ. 3,000 ನಗರ, ಪಟ್ಟಣಗಳಲ್ಲಿ 6,300ಕ್ಕೂ ಹೆಚ್ಚು ಶಾಖೆಗಳನ್ನು ಎಚ್​ಡಿಎಫ್​ಸಿ ಹೊಂದಿದೆ. ಈ ಎಚ್​ಡಿಎಫ್​ಸಿಯ ಅಂಗಸಂಸ್ಥೆಯೇ ಎಚ್​ಡಿಎಫ್​ಸಿ ಬ್ಯಾಂಕ್.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ