ಕೃಷಿಕರಿಗೆ ಸಿಹಿ ಸುದ್ದಿ..! ಕೇಂದ್ರದಿಂದ ರಸಗೊಬ್ಬರಕ್ಕೆ 22,303 ರೂ ಸಬ್ಸಿಡಿಗೆ ಅನುಮೋದನೆ

P&K Fertilizers Subsidy: ಎನ್​ಬಿಎಸ್ ಯೋಜನೆ ಅಡಿಯಲ್ಲಿ ನೈಟ್ರೋಜನ್, ಪೊಟ್ಯಾಶಿಕ್, ಫಾಸ್​ಫ್ಯಾಟಿಕ್ ಮತ್ತು ಸಲ್ಫರ್ ಅಂಶದ ರಸಗೊಬ್ಬರಗಳಿವೆ. ಒಂದು ಕಿಲೋ ನೈಟ್ರೋಜನ್ (N) ರಸಗೊಬ್ಬರಕ್ಕೆ 47 ರೂ ದರ ನಿಗದಿ ಮಾಡಲಾಗಿದೆ. ಒಂದು ಕಿಲೋ ಫಾಸ್​ಫೇಟ್​ಗೆ (ಪಿ) 20.82 ರೂ, ಒಂದು ಕಿಲೋ ಪೊಟ್ಯಾಶ್​ಗೆ (ಕೆ) 2.38 ರೂ ಹಾಗು ಸಲ್ಫರ್ ಅಥವಾ ರಂಜಕಕ್ಕೆ (ಎಸ್) 1.89 ರೂ ಸಬ್ಸಿಡಿ ಸಿಗುತ್ತದೆ.

ಕೃಷಿಕರಿಗೆ ಸಿಹಿ ಸುದ್ದಿ..! ಕೇಂದ್ರದಿಂದ ರಸಗೊಬ್ಬರಕ್ಕೆ 22,303 ರೂ ಸಬ್ಸಿಡಿಗೆ ಅನುಮೋದನೆ
ಕೃಷಿಕ
Follow us
|

Updated on: Oct 25, 2023 | 5:35 PM

ನವದೆಹಲಿ, ಅಕ್ಟೋಬರ್ 25: ಪೌಷ್ಟಿಕಾಂಶ ಆಧಾರಿತ ಸಬ್ಸಿಡಿಯಾದ ಎನ್​ಬಿಎಸ್ ಯೋಜನೆ ಅಡಿಯಲ್ಲಿ ರಸಗೊಬ್ಬರಕ್ಕೆ 22,303 ಕೋಟಿ ರೂ ಸಬ್ಸಿಡಿ ಒದಗಿಸುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಇಂದು ಬುಧವಾರ (ಅ. 25) ಅನುಮೋದನೆ ನೀಡಿದೆ. ಅಕ್ಟೋಬರ್​ನಿಂದ ಮಾರ್ಚ್​ವರೆಗೆ ಇರುವ ಹಿಂಗಾರು ಋತುವಿಗೆ ಈ ಸಬ್ಸಿಡಿ ಇದೆ. ಫಾಸ್ಫ್ಯಾಟಿಕ್ ಮತ್ತು ಪೊಟಾಸಿಕ್ (P & K Fertilizers) ರಸಗೊಬ್ಬರಗಳನ್ನು ಸಬ್ಸಿಡಿ ದರದಲ್ಲಿ ರೈತರು ಕೊಳ್ಳಬಹುದಾಗಿದೆ.

ಎನ್​ಬಿಎಸ್ ಯೋಜನೆ ಅಡಿಯಲ್ಲಿ ನೈಟ್ರೋಜನ್, ಪೊಟ್ಯಾಶಿಕ್, ಫಾಸ್​ಫ್ಯಾಟಿಕ್ ಮತ್ತು ಸಲ್ಫರ್ ಅಂಶದ ರಸಗೊಬ್ಬರಗಳಿವೆ. ಒಂದು ಕಿಲೋ ನೈಟ್ರೋಜನ್ (N) ರಸಗೊಬ್ಬರಕ್ಕೆ 47 ರೂ ದರ ನಿಗದಿ ಮಾಡಲಾಗಿದೆ. ಒಂದು ಕಿಲೋ ಫಾಸ್​ಫೇಟ್​ಗೆ (P) 20.82 ರೂ, ಒಂದು ಕಿಲೋ ಪೊಟ್ಯಾಶ್​ಗೆ (K) 2.38 ರೂ ಹಾಗು ಸಲ್ಫರ್ ಅಥವಾ ರಂಜಕಕ್ಕೆ (S) 1.89 ರೂ ಸಬ್ಸಿಡಿ ಸಿಗುತ್ತದೆ.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ, 15ನೇ ಕಂತಿನ ಹಣ ಬಿಡುಗಡೆ ಯಾವಾಗ? ಆಧಾರ್ ಪ್ರಕಾರ ನಿಮ್ಮ ಹೆಸರು ಬದಲಿಸುವುದು ಹೇಗೆ?

ಕಳೆದ ವರ್ಷಕ್ಕೆ ಹೋಲಿಸಿದರೆ ಈ ರಸಗೊಬ್ಬರಗಳ ಬೆಲೆ ಬಹಳಷ್ಟು ಕಡಿಮೆ ಆಗಿದೆ. ಅಂತಾರಾಷ್ಟ್ರೀಯ ದರಕ್ಕೆ ಅನುಗುಣವಾಗಿ ರಸಗೊಬ್ಬರ ಬೆಲೆ ಇಳಿಸಲಾಗಿದೆ.

2010ರಿಂದಲೂ ಎನ್​ಬಿಎಸ್ ಸ್ಕೀಮ್ ಇದ್ದು, ರೈತರಿಗೆ ಕಡಿಮೆ ದರದಲ್ಲಿ ರಸಗೊಬ್ಬರ ಸಿಗುವಂತೆ ಇದು ಕ್ರಮ ಕೈಗೊಳ್ಳುತ್ತದೆ.

ಡಿಎಪಿ ಗೊಬ್ಬರಕ್ಕೆ ಟನ್​ಗೆ 4,500 ರೂ ಸಬ್ಸಿಡಿ ಇದೆ. ಒಂದು ಚೀಲ ಡಿಎಪಿ ರಸಗೊಬ್ಬರ 1,350 ರೂಗೆ ಸಿಗುತ್ತದೆ. ಒಂದು ಚೀಲ ಎನ್​ಪಿಕೆ 1,470 ರೂಗೆ ಸಿಗುತ್ತದೆ.

ಈ ಹೊಸ ಸಬ್ಸಿಡಿ ದರಗಳು ಅಕ್ಟೋಬರ್ 1ರಿಂದ ಹಿಡಿದು 2024ರ ಮಾರ್ಚ್ 31ರವರೆಗೂ ಅನ್ವಯ ಆಗುತ್ತವೆ. ರಸಗೊಬ್ಬರ ಕಂಪನಿಗಳಿಗೆ ಸರ್ಕಾರ ಈ ಸಬ್ಸಿಡಿಗಳನ್ನು ಒದಗಿಸುತ್ತದೆ. ಈ ರಸಗೊಬ್ಬರಗಳನ್ನು ಕಡಿಮೆ ಬೆಲೆಗೆ ವಿತರಿಸುವ ಮೂಲಕ ಸಬ್ಸಿಡಿ ಲಾಭವನ್ನು ರೈತರಿಗೆ ವರ್ಗಾಯಿಸಲಾಗುತ್ತದೆ.

ಇದನ್ನೂ ಓದಿ: ತೆರಿಗೆ ಕಳ್ಳತನ ಆರೋಪ; ಆನ್ಲೈನ್ ಗೇಮಿಂಗ್ ಕಂಪನಿಗಳಿಗೆ 1 ಲಕ್ಷಕೋಟಿ ರೂ ಲೆಕ್ಕ ಕೇಳಿ ಶೋಕಾಸ್ ನೋಟೀಸ್

ಈ ರಸಗೊಬ್ಬರಗಳು ಮಣ್ಣಿಗೆ ಬೇಕಾದ ಪೌಷ್ಟಿಕಾಂಶಗಳನ್ನು ಒದಗಿಸಿ, ಬೆಳೆಗಳು ಹುಲುಸಾಗಿ ಬೆಳೆಯಲು ಸಹಾಯವಾಗುತ್ತವೆ. ಆದರೆ, ಅವುಗಳ ಅಡ್ಡಪರಿಣಾಮಗಳೂ ಹಲವುಂಟು. ಇವು ರಾಸಾಯನಿಕ ಗೊಬ್ಬರಗಳಾದ್ದರಿಂದ ಪರಿಸರಕ್ಕೆ ಮತ್ತು ಮಣ್ಣಿಗೆ ದೀರ್ಘ ಕಾಲದಲ್ಲಿ ಮಾರಕವಾಗಿ ಪರಿಣಮಿಸಬಹುದು. ಮಣ್ಣಿನಲ್ಲಿರುವ ಬಹಳ ಮುಖ್ಯ ಮೈಕ್ರೋಬ್​ಗಳನ್ನು ಇವು ನಾಶ ಮಾಡಬಹುದು. ಹೀಗಾಗಿ, ಹಲವು ಕೃಷಿ ತಜ್ಞರು ಸಾಂಪ್ರದಾಯಿಕ ಗೊಬ್ಬರ ಬಳಕೆಗೆ ಶಿಫಾರಸು ಮಾಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ