AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mobile recharge hike: ಏರ್​ಟೆಲ್, ವೊಡಾಫೋನ್ ಐಡಿಯಾ ಪ್ರೀಪೇಯ್ಡ್ ದರಗಳ ಏರಿಕೆಗೆ ಸಿದ್ಧರಾಗಿ!

ಆಗಸ್ಟ್​ ತಿಂಗಳಿನಿಂದ ಅನ್ವಯ ಆಗುವಂತೆ ಮೊಬೈಲ್ ಪ್ರೀಪೇಯ್ಡ್ ರೀಚಾರ್ಜ್ ಹೆಚ್ಚಾಗಲಿವೆ. ಹೇಗೆ, ಏನು, ಎತ್ತ ಎಂಬಿತ್ಯಾದಿ ವಿವರಗಳು ಈ ಲೇಖನದಲ್ಲಿ ಇವೆ.

Mobile recharge hike: ಏರ್​ಟೆಲ್, ವೊಡಾಫೋನ್ ಐಡಿಯಾ ಪ್ರೀಪೇಯ್ಡ್ ದರಗಳ ಏರಿಕೆಗೆ ಸಿದ್ಧರಾಗಿ!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 30, 2021 | 7:32 PM

Share

ನಿಮ್ಮ ಮೊಬೈಲ್ ಫೋನ್ ರೀಚಾರ್ಜ್​ಗಳ ಮೇಲೆ ಹೆಚ್ಚಿನ ದರವನ್ನು ಪಾವತಿಸಲು ಮುಂದಾಗಿ. ಏಕೆಂದರೆ ಮುಂದಿನ ತಿಂಗಳಿಂದ ಎರಡು ಪ್ರಮುಖ ಟೆಲಿಕಾಂ ಆಪರೇಟರ್​ಗಳಾದ ಏರ್​ಟೆಲ್​ ಮತ್ತು ವೊಡಾಫೋನ್ ಐಡಿಯಾದಿಂದ ರೀಚಾರ್ಜ್​ ಪ್ಲಾನ್​ ದರಗಳ ಏರಿಕೆಗೆ ಎಲ್ಲ ಸಿದ್ಧತೆ ನಡೆದಿದೆ. ಏರ್​ಟೆಲ್​ನಿಂದ ಈಗಾಗಲೇ ಆರಂಭಿಕ ಹಂತದ ಪ್ಲಾನ್​ ಆದ 49 ರೂಪಾಯಿಯದ್ದನ್ನು ಕೊನೆಗೊಳಿಸಲಾಗಿದೆ. ಈಗ ಪ್ಲಾನ್ ದರ ಶೇ 60ರಷ್ಟು ಹೆಚ್ಚಾಗಿ, 79 ರೂಪಾಯಿ ಮುಟ್ಟಿದೆ. ಕಾರ್ಪೊರೇಟ್ ಗ್ರಾಹಕರು ಈ ಬೆಲೆ ಏರಿಕೆ ಬಿಸಿ ತಟ್ಟಿದೆ. ಕನಿಷ್ಠ ಪ್ರಮಾಣ ಕಾರ್ಪೊರೇಟ್ ಪ್ಲಾನ್​ನಲ್ಲಿ ಶೇ 30ರಷ್ಟು ಏರಿಕೆ ಮಾಡಲಾಗಿದೆ. ಇನ್ನು ತಜ್ಞರ ಅಭಿಪ್ರಾಯದಂತೆ, ವೊಡಾಫೋನ್ ಐಡಿಯಾ ಸಹ ಬೇಸಿಕ್ ಪ್ರೀಪೇಯ್ಡ್ ಪ್ಲಾನ್ ಹೆಚ್ಚಿಸಲು ಯೋಜನೆ ಹಾಕಿಕೊಂಡಿದೆ.

ನಗದು ಬಿಕ್ಕಟ್ಟಿನಲ್ಲಿ ಇರುವ ಟೆಲಿಕಾಂ ಕಂಪೆನಿ ವೊಡಾಫೋನ್ ಐಡಿಯಾದಿಂದ ಬೇಸ್​ ಪ್ರೀಪೇಯ್ಡ್ ದರವನ್ನು ಏರಿಕೆ ಮಾಡುವುದಕ್ಕೆ ಯೋಜನೆ ಮಾಡಿದೆ. ಕೆಲವು ವೃತ್ತಗಳಲ್ಲಿ ವೊಡಾಫೋನ್ ಐಡಿಯಾ ಬೇಸ್ ಹಂತದ ರೀಚಾರ್ಜ್​ ದರದಲ್ಲಿ ಬದಲಾವಣೆ ಮಾಡಿದೆ. ಮಹಾರಾಷ್ಟ್ರ ಹಾಗೂ ಗುಜರಾತ್​ನಲ್ಲಿ Viನಿಂದ 49 ರೂಪಾಯಿಯ ಪ್ಲಾನ್​ ಅನ್ನು 14 ದಿನಕ್ಕೆ ಇಳಿಸಲಾಗಿದೆ. ಈ ಹಿಂದೆ ಅದು 28 ದಿನ ಇತ್ತು. Vi ಗ್ರಾಹಕರು ಈಗ 28 ದಿನದ ಪ್ಲಾನ್​ಗೆ ಈ ಮೇಲ್ಕಂಡ ಪ್ರದೇಶಗಳಲ್ಲಿ 79 ರೂಪಾಯಿ ಪಾವತಿಸಬೇಕು. ಸದ್ಯದಲ್ಲಿ ಪ್ರೀಪೇಯ್ಡ್ ಪ್ಲಾನ್​ಗಳ ದರವನ್ನು ದೇಶದಾದ್ಯಂತ ಬದಲಾಯಿಸಲಾಗುತ್ತದೆ. ಏರ್​ಟೆಲ್​ನಿಂದ ಬದಲಾವಣೆ ಮಾಡಿದ ಮೇಲೆ, ಎಂಟರ್​ಪ್ರೈಸ್ ಗ್ರಾಹಕರ ಬಿಜಿನೆಸ್ ಪ್ಲಸ್ ಪೋಸ್ಟ್​ಪೇಯ್ಡ್​ ಪ್ಲಾನ್​ಗಳ ಮೇಲೆ ಡೇಟಾ ಅನುಕೂಲಗಳು ಕಡಿಮೆ ಮಾಡಲಾಗಿದೆ.

ನಗದು ಹರಿವನ್ನು ಹೆಚ್ಚು ಮಾಡಿಕೊಳ್ಳಲು ಟೆಲಿಕಾಂ ಕಂಪೆನಿಗಳು ನಾನಾ ದಾರಿಗಳನ್ನು ಎದುರು ನೋಡುತ್ತಿದೆ. ಮುಂಬರುವ ಅಡ್ಜಸ್ಟಡ್ ಗ್ರಾಸ್ ರೆವೆನ್ಯೂ (ಎಜಿಆರ್) ಬಾಕಿಯನ್ನು ಪಾವತಿಸಬೇಕಿದೆ. ವೊಡಾಫೋನ್ ಐಡಿಯಾ ಹಾಗೂ ಏರ್​ಟೆಲ್ ಎಜಿಆರ್​ನ ಗ್ರಾಸ್ ಆದಾಯ ಬಾಕಿ ಕ್ರಮವಾಗಿ 9000 ಕೋಟಿ ರೂಪಾಯಿ ಹಾಗೂ 4,100 ಕೋಟಿ ರೂಪಾಯಿ ಮೊತ್ತವನ್ನು ಮಾರ್ಚ್​ 22ನೇ ತಾರೀಕಿನೊಳಗೆ ಪಾವತಿಸಬೇಕು. ಈ ದರ ಹೆಚ್ಚಳದಿಂದ ಟೆಲಿಕಾಂ ಕಂಪೆನಿಗಳ ಆ್ಯವರೇಜ್ ರೆವೆನ್ಯೂ ಪರ್ ಯೂಸರ್ (ARPU) ಚೇತರಿಸಿಕೊಳ್ಳುವುದಕ್ಕೆ ಈ ಹೆಚ್ಚಳದಿಂದ ಅನುಕೂಲ ಆಗುತ್ತದೆ.

ಇದನ್ನೂ ಓದಿ: Vodafone Idea: ಅನಿಯಮಿತ ಕರೆ ಮತ್ತು 100 GB ಡೇಟಾ: ಅತ್ಯುತ್ತಮ ರಿಚಾರ್ಜ್​ ಪ್ಲ್ಯಾನ್ ಪರಿಚಯಿಸಿದ VI

ಇದನ್ನೂ ಓದಿ: Jio-Airtel-Vi ನಡುವೆ ಭರ್ಜರಿ ಪೈಪೋಟಿ: 28 ದಿನಗಳ ವ್ಯಾಲಿಡಿಟಿ ಪ್ಲಾನ್​ನಲ್ಲಿ ಬಂಪರ್ ಬೆನಿಫಿಟ್

(Your Mobile Prepaid Charge Become Costly From August Know Why And How)

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?