AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ವಿಮಾ ಮಾರುಕಟ್ಟೆಗೆ ಸ್ವಿಸ್ ಸಂಸ್ಥೆ ಆಗಮನ; ಕೋಟಕ್ ಇನ್ಷೂರೆನ್ಸ್ ಖರೀದಿಸಿದ ಜುರಿಚ್

Zurich Insurance Enters Indian Market: ಸ್ವಿಟ್ಜರ್​ಲೆಂಡ್ ದೇಶದ ಜುರಿಚ್ ಇನ್ಷೂರೆನ್ಸ್ ಸಂಸ್ಥೆ ಕೋಟಕ್ ಜನರಲ್ ಇನ್ಷೂರೆನ್ಸ್ ಕಂಪನಿಯ ಬಹು ಪಾಲನ್ನು ಖರೀದಿಸಿದೆ. 4,051 ಕೋಟಿ ರೂ ಮೊತ್ತಕ್ಕೆ ಶೇ. 51ರಷ್ಟು ಪಾಲನ್ನು ಖರೀದಿಸಿದೆ. ಕೋಟಕ್ ಜನರಲ್ ಇನ್ಷೂರೆನ್ಸ್​ನ ಮಾಲಕ ಸಂಸ್ಥೆ ಕೋಟಕ್ ಮಹೀಂದ್ರ ಬ್ಯಾಂಕ್ ಈ ವಿಚಾರವನ್ನು ರೆಗುಲೇಟರಿ ಫೈಲಿಂಗ್​ನಲ್ಲಿ ತಿಳಿಸಿದೆ. ಈ 51 ಪ್ರತಿಶತ ಪಾಲು ಖರೀದಿಸಿದ ಬಳಿಕ 3 ವರ್ಷದಲ್ಲಿ ಇನ್ನೂ ಶೇ. 19ರಷ್ಟು ಷೇರುಗಳನ್ನು ಜುರಿಚ್ ಇನ್ಷೂರೆನ್ಸ್ ಖರೀದಿಸಲಿದೆ.

ಭಾರತದ ವಿಮಾ ಮಾರುಕಟ್ಟೆಗೆ ಸ್ವಿಸ್ ಸಂಸ್ಥೆ ಆಗಮನ; ಕೋಟಕ್ ಇನ್ಷೂರೆನ್ಸ್ ಖರೀದಿಸಿದ ಜುರಿಚ್
ಜುರಿಚ್ ಇನ್ಷೂರೆನ್ಸ್, ಕೋಟಕ್ ಜನರಲ್ ಇನ್ಷೂರೆನ್ಸ್,
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 02, 2023 | 5:03 PM

Share

ನವದೆಹಲಿ, ನವೆಂಬರ್ 2: ಎಂಟು ವರ್ಷದ ಬಳಿಕ ಭಾರತದ ಇನ್ಷೂರೆನ್ಸ್ ವಲಯದಲ್ಲಿ ಮೊದಲ ಬಾರಿಗೆ ವಿದೇಶೀ ಹೂಡಿಕೆ (foreign investment) ಆಗುತ್ತಿದೆ. ಸ್ವಿಟ್ಜರ್​ಲೆಂಡ್ ದೇಶದ ಜುರಿಚ್ ಇನ್ಷೂರೆನ್ಸ್ (Zurich Insurance) ಸಂಸ್ಥೆ ಕೋಟಕ್ ಜನರಲ್ ಇನ್ಷೂರೆನ್ಸ್ ಕಂಪನಿಯ ಬಹು ಪಾಲನ್ನು ಖರೀದಿಸಿದೆ. 4,051 ಕೋಟಿ ರೂ ಮೊತ್ತಕ್ಕೆ ಶೇ. 51ರಷ್ಟು ಪಾಲನ್ನು ಖರೀದಿಸಿದೆ. ಕೋಟಕ್ ಜನರಲ್ ಇನ್ಷೂರೆನ್ಸ್​ನ ಮಾಲಕ ಸಂಸ್ಥೆ ಕೋಟಕ್ ಮಹೀಂದ್ರ ಬ್ಯಾಂಕ್ ಈ ವಿಚಾರವನ್ನು ರೆಗುಲೇಟರಿ ಫೈಲಿಂಗ್​ನಲ್ಲಿ ತಿಳಿಸಿದೆ. ಈ 51 ಪ್ರತಿಶತ ಪಾಲು ಖರೀದಿಸಿದ ಬಳಿಕ 3 ವರ್ಷದಲ್ಲಿ ಇನ್ನೂ ಶೇ. 19ರಷ್ಟು ಷೇರುಗಳನ್ನು ಜುರಿಚ್ ಇನ್ಷೂರೆನ್ಸ್ ಖರೀದಿಸಲಿದೆ.

ಈ ಒಪ್ಪಂದದಲ್ಲಿ ಮಧ್ಯವರ್ತಿಯಾಗಿ ಮತ್ತು ಸಲಹೆಗಾರನಾಗಿ ಮಾರ್ಗನ್ ಸ್ಟಾನ್ಲೀ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಜುರಿಚ್ ಇನ್ಷೂರೆನ್ಸ್ ಸ್ವಿಟ್ಜರ್​ಲ್ಯಾಂಡ್ ದೇಶದ ಅತಿದೊಡ್ಡ ವಿಮಾ ಸಂಸ್ಥೆಯಾಗಿದೆ. ಪ್ರೀಮಿಯಮ್ ಲೆಕ್ಕಾಚಾರದಲ್ಲಿ ವಿಶ್ವದ 21ನೇ ಅತಿದೊಡ್ಡ ಇನ್ಷೂರೆನ್ಸ್ ಸಂಸ್ಥೆಯೂ ಹೌದು. ಅತಿಹೆಚ್ಚು ಷೇರುಸಂಪತ್ತು ಹೊಂದಿರುವ ಸಾಮಾನ್ಯ ವಿಮಾ ಸಂಸ್ಥೆಗಳ ಪೈಕಿ ಜುರಿಚ್ ಇನ್ಷೂರೆನ್ಸ್ 7ನೇ ಸ್ಥಾನದಲ್ಲಿದೆ. ಇದರ ಒಟ್ಟಾರೆ ಷೇರುಸಂಪತ್ತು 67 ಬಿಲಿಯನ್ ಡಾಲರ್ (6 ಲಕ್ಷ ಕೋಟಿ ರೂಗೂ ಅಧಿಕ) ಇದೆ.

ಇದನ್ನೂ ಓದಿ: ಭಾರತೀಯರು ಎಂಥ ಅಪಾಯದಲ್ಲಿದ್ದಾರೆ ಗೊತ್ತಾ? ಬರ್ಬಾದ್ ಆಗಲು ಈ ಒಂದೇ ದುರ್ಘಟನೆ ಸಾಕು ಎನ್ನುತ್ತಾರೆ ನಿತಿನ್ ಕಾಮತ್; ಏನಿದು ಎಚ್ಚರಿಕೆಯ ಕರೆಗಂಟೆ?

ಇನ್ನು, ಕೋಟಕ್ ಮಹೀಂದ್ರ ಲೈಫ್ ಇನ್ಷೂರೆನ್ಸ್ ಕಂಪನಿ 2001ರಲ್ಲಿ ಆರಂಭವಾಗಿದ್ದು ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಭಾರತದಾದ್ಯಂತ 4 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿದೆ. ಹೆಲ್ತ್ ಇನ್ಷೂರೆನ್ಸ್ ಮತ್ತು ಮೋಟಾರ್ ಇನ್ಷೂರೆನ್ಸ್ ವಿಭಾಗದಲ್ಲಿ ಅದರ ಕವರೇಜ್ ಇದೆ. ಅದರಲ್ಲೂ ಅದರ ಆರೋಗ್ಯ ವಿಮೆಗಳ ಒಟ್ಟು ಪ್ರೀಮಿಯಮ್ ಮೊತ್ತ 57.1 ಕೋಟಿ ರೂನಷ್ಟಿದೆ.

‘ವಿಶ್ವದ ಮುಖ್ಯ ಇನ್ಷೂರೆನ್ಸ್ ಮಾರುಕಟ್ಟೆಯಲ್ಲಿ ಭಾರತವೂ ಇದೆ. ಕೋಟಕ್ ಮಹೀಂದ್ರ ಗ್ರೂಪ್​ಗೆ ಭಾರತೀಯ ಹಣಕಾಸು ಸೇವಾ ಕ್ಷೇತ್ರದಲ್ಲಿ ಪರಿಣಿತಿ ಇದೆ. ಜುರಿಚ್ ಇನ್ಷೂರೆನ್ಸ್ ಸಂಸ್ಥೆ ರೀಟೆಲ್ ಮತ್ತು ಕಮರ್ಷಿಯಲ್ ಇನ್ಷೂರೆನ್ಸ್​ನಲ್ಲಿ ಸಮರ್ಥವಾಗಿದೆ. ಈ ಪಾಲುದಾರಿಕೆಯು ಭಾರತೀಯ ವಿಮಾ ಮಾರುಕಟ್ಟೆಯಲ್ಲಿ ಅತ್ಯುತ್ತಮ ಗ್ರಾಹಕ ಅನುಭವ ತರಬಲ್ಲುದು,’ ಎಂದು ಜುರಿಚ್ ಇನ್ಷೂರೆನ್ಸ್ ಕಂಪನಿಯ ಏಷ್ಯಾ ಪೆಸಿಫಿಕ್ ವಿಭಾಗದ ಸಿಇಒ ತುಳಸಿ ನಾಯ್ಡು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:00 pm, Thu, 2 November 23

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ