AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾನೇ ಸಲಹೆ ಕೊಟ್ಟು ಒಡಹುಟ್ಟಿದ ಅಕ್ಕನಿಗೆ ಮೋಸ ಮಾಡಿದ ತಮ್ಮ

ಹಣಕ್ಕೆ ಸತ್ತ ಹೆಣವೂ ಬಾಯಿ ತೆರೆಯುತ್ತೆ ಎನ್ನುವ ಗಾದೆಯಂತೆ, ಸ್ವತಃ ತಮ್ಮನೇ ತನ್ನ ಒಡಹುಟ್ಟಿದ ಅಕ್ಕನಿಗೆ ಸಲಹೆ ಕೊಟ್ಟು ಆಕೆಯ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ್ದಾನೆ. ಮಗಳ ವಿದ್ಯಾಭ್ಯಾಸಕ್ಕೆಂದು ಬಾಂಕ್​ ನಲ್ಲಿ ಡಿಪಾಸಿಟ್ ಇಡುವ ಸಲಹೆ ನೀಡಿ ಬಳಿಕ ಹಣವನ್ನು ಎಗರಿಸಿದ್ದಾನೆ. ಈ ಸಂಬಂಧ ಇದೀಗ ಅಕ್ಕ, ತನ್ನ ತಮ್ಮನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ತಾನೇ ಸಲಹೆ ಕೊಟ್ಟು ಒಡಹುಟ್ಟಿದ ಅಕ್ಕನಿಗೆ ಮೋಸ ಮಾಡಿದ ತಮ್ಮ
Nelamangala Police Sation
TV9 Web
| Edited By: |

Updated on: Jul 15, 2025 | 5:40 PM

Share

ಬೆಂಗಳೂರು, (ಜುಲೈ 15): ಅಕ್ಕನಿಗೆ ಸಹೋರದನೇ ಸಲಹೆಕೊಟ್ಟು ಬಳಿಕ ಆಕೆಗೆ ಮೋಸ ಮಾಡಿರುವ ಘಟನೆ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡಿಪಾಸಿಟ್ ಮಾಡುವಂತೆ ಅಕ್ಕ ಕೊಟ್ಟಿದ್ದ ಹಣವನ್ನು ಸಹೋದರ ಬಳಸಿಕೊಂಡು ಮೋಸ ಮಾಡಿದ್ದಾನೆ. ಹೌದು..ಶ್ರೀಧರ್ ಎನ್ನುವಾತ ಹಣ ಪಡೆದು ಬ್ಯಾಂಕ್ ನಲ್ಲಿ ಡಿಪಾಸಿಟ್ ಇಡದೇ ಸ್ವಂತಕ್ಕೆ ಬಳಕೆ ಮಾಡಿಕೊಂಡಿರುವುದಾಗಿ ಅಕ್ಕ ಶೋಭಾ ಆರೋಪ ಮಾಡಿದ್ದು, ಈ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ನೆಲಮಂಗಲದ ನಿವಾಸಿಯಾಗಿರುವ ಶೋಭಾ,ತನ್ನ ಮಗಳ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಹಣ ಕೂಡಿಟ್ಟಿದ್ದಳು. ಈ ಹಣವನ್ನು ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡುವಂತೆ ಅಕ್ಕನಿಗೆ ಶ್ರೀಧರ್ ಸಲಹೆ ನೀಡಿದ್ದ. ಹಣ ಬ್ಯಾಂಕ್ ನಲ್ಲಿ ಡಿಪಾಸಿಟ್ ಮಾಡು ಮುಂದಿನ ದಿನಗಳಲ್ಲಿ ಬೇಕಾಗುತ್ತದೆ ಎಂದು ಹೇಳಿದ್ದ. ಇದನ್ನು ನಂಬಿದ್ದ ಅಕ್ಕ ಶೋಭಾ, ಹೇಗೋ ನೀನೇ ಬ್ಯಾಂಕ್​​ ಕ್ಯಾಷಿಯರ್ ಅಲ್ವಾ ಹೋಗಿ ಡಿಪಾಸಿಟ್ ಮಾಡಿಕೋ ಎಂದು 8 ಲಕ್ಷ ರೂ. ಹಣ ನೀಡಿದ್ದಾಳೆ. ಆದ್ರೆ, ಶ್ರೀಧರ್, ಹಣ ಡಿಪಾಸಿಟ್ ಮಾಡದೇ ಬಳಸಿಕೊಂಡಿದ್ದಾನೆ.

ಹೀಗೆ ಶೋಭಾ ಒಂದು ದಿನ ಬ್ಯಾಂಕ್​ ಗೆ ಹೋಗಿ ವಿಚಾರಿಸಿದಾಗ ಸಹೋದರ ಹಣ ಡಿಪಾಸಿಟ್ ಮಾಡದೇ 8 ಲಕ್ಷ ರೂ ಹಣ ಬಳಸಿಕೊಂಡು ವಂಚನೆ ಮಾಡುವುದು ಬೆಳಕಿಗೆ ಬಂದಿದೆ. ಬಳಿಕ ಶೋಭಾ ಹಣ ವಾಪಸ್ ಕೊಡುವಂತೆ ಒತ್ತಾಯಿಸಿದ್ದಾಳೆ. ಆದ್ರೆ ಶ್ರೀಧರ್ ಹಣ ಕೊಡದಿದ್ದರಿಂದ ಶೋಭಾ, ನೆಲಮಂಗಲ ಟೌನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ