AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಬೈಜೂಸ್ ಟ್ಯೂಷನ್ ಸೆಂಟರ್ ಹೆಸರಿನಲ್ಲಿ ವಂಚನೆ

ಬೈಜೂಸ್ ಟ್ಯೂಷನ್ ಸೆಂಟರ್​ನ ಫೀಸ್​ನ್ನು ಮರಳಿ ನೀಡುತ್ತೇವೆ ಎಂದು ವಂಚನೆ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಂಚಕನ ವಿರುದ್ಧ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು: ಬೈಜೂಸ್ ಟ್ಯೂಷನ್ ಸೆಂಟರ್ ಹೆಸರಿನಲ್ಲಿ ವಂಚನೆ
ಸೈಬರ್ ಕ್ರೈಂ
ವಿವೇಕ ಬಿರಾದಾರ
|

Updated on: Sep 02, 2024 | 2:56 PM

Share

ಬೆಂಗಳೂರು, ಸೆಪ್ಟೆಂಬರ್​​ 02: ಬೈಜೂಸ್ ಟ್ಯೂಷನ್ ಸೆಂಟರ್ (BYJU’S) ಹೆಸರಿನಲ್ಲಿ ಸೈಬರ್ ವಂಚಕ (Cyber Crime) ಲಕ್ಷ ಲಕ್ಷ ಹಣ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಮ್ ಕೈಲಾಶ್ ಯಾದವ್ ಎಂಬವರು ತಮ್ಮ ಮಗನನ್ನ ಬೈಜೂಸ್ ಟ್ಯೂಷನ್ ಸೆಂಟರ್​ಗೆ ಸೇರಿಸಿದ್ದರು. ಸರಿಯಾಗಿ ಟ್ಯೂಷನ್ ಹೇಳದ ಕಾರಣ ಹಣ ಮರಳಿ ನೀಡುವಂತೆ ರಾಮ್ ಕೈಲಾಶ್ ಯಾದವ್ ಕೇಳಿದ್ದಾರೆ. ಈ ಮಧ್ಯೆ ಟ್ಯೂಷನ್​ ಇದ್ದ ಕಟ್ಟಡದ ಬಾಡಿಗೆ ಕಟ್ಟಿಲ್ಲ ಅಂತ ಬೈಜೂಸ್ ಟ್ಯೂಷನ್​​ ಸೆಂಟರ್​ ಬಂದ್​ ಆಗಿದೆ.

ನಂತರ ವಂಚಕ ರಾಮ್ ಕೈಲಾಶ್ ಯಾದವ್​​ಗೆ ಕರೆ ಮಾಡಿ, ನಿಮ್ಮ ಖಾತೆಗೆ ಹಣ ವರ್ಗವಾಗುತ್ತಿಲ್ಲ, ನಾನು ಒಂದು ಲಿಂಕ್ ಕಳುಹಿಸುತ್ತೇನೆ ಎಂದ rustdesk.apk ಎಂಬ ಲಿಂಕ್ ಕಳಿಸಿದ್ದಾನೆ.‌ ಬಳಿಕ ಆ್ಯಪ್​ ಇನ್ಸ್ಟಾಲ್​ ಆಗುತ್ತಿದ್ದಂತೆ, ವಂಚಕ ರಾಮ್ ಕೈಲಾಶ್ ಯಾದವ್ ಅಕೌಂಟ್​ನಿಂದ 1.30 ಲಕ್ಷ ಹಣ ಕನ್ನ ಹಾಕಿದ್ದಾನೆ. ಈ ಬಗ್ಗೆ ರಾಮ್ ಕೈಲಾಶ್ ಯಾದವ್ ಬ್ಯಾಂಕ್​​ಗೆ ವಿಚಾರ ತಿಳಿಸಿದ್ದಾರೆ. ಅಲ್ಲದೇ, ರಾಮ್ ಕೈಲಾಶ್ ಯಾದವ್ ಸೈಬರ್​ ಕ್ರೇಂ ಠಾಣೆಗೆ ದೂರು ನೀಡಿದ್ದಾರೆ.

ಆದರೆ ಬೈಜೂಸ್ ಟ್ಯೂಷನ್ ಸೆಂಟರ್​ನಿಂದ ನಿಮ್ಮ ಟ್ಯೂಶನ್​ ಶುಲ್ಕ ಬಾಕಿ ಇದೆ ಅಂತ ರಾಮ್ ಕೈಲಾಶ್ ಯಾದವ್ ಅವರ ಮೊಬೈಲ್​ಗೆ ಸಂದೇಶ ಬರುತ್ತಿದೆ. ರಾಮ್ ಕೈಲಾಶ್ ಯಾದವ್ ಅವರಿಗೆ ಸದ್ಯ ದಿಕ್ಕೇ ತೋಚದಂತಾಗಿದೆ.

ಇದನ್ನೂ ಓದಿ: ಬೈಕ್​ ಹೋಯ್ತು ಈಗ ಕಾರಿನಲ್ಲಿ ಬಂದು ಸರ ಎಗರಿಸ್ತಾರೆ

ಕೊರಿಯರ್ ಬಾಯ್​ಗೆ ಚಾಕು ಇರಿತ

ಬೆಂಗಳೂರು: ಮನೆ ಬಾಗಿಲಿಗೆ ಕೊರಿಯರ್ ತಂದುಕೊಡಲಿಲ್ಲ ಎಂದು ಕೊರಿಯರ್ ಬಾಯ್​ಗೆ ಚಾಕು ಇರಿದ ಅಶೋಕ್​ ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅರ್ಬಾಜ್ (29) ಬಂಧಿತ ಆರೋಪಿ. ಸದ್ಯ ಅಶೋಕ್ ನಗರ ಪೊಲೀಸರು ಆರೋಪಿ ಅರ್ಬಾಜ್​ನನ್ನು ಬಂಧಿಸಿದ್ದಾರೆ. ಕೊರಿಯರ್ ಬಾಯ್ ಮೊಹಮ್ಮದ್ ರಫಿ (32) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೊಹಮ್ಮದ್ ರಫಿ ಡಿಟಿಡಿಸಿ ಕೊರಿಯರ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಡಿಲಿವರಿಗಾಗಿ ಆನೇಪಾಳ್ಯಕ್ಕೆ ಬಂದಿದ್ದರು. ಮೊಹಮ್ಮದ್ ರಫಿ ಲೊಕೇಷನ್​ಗೆ ಬರದೆ, ಲ್ಯಾಂಡ್ ಮಾರ್ಕ್ ಬಳಿ ಬನ್ನಿ ಎಂದು ಅರ್ಬಾಜ್​ಗೆ ಹೇಳಿದ್ದಾರೆ. ಡೆಲೆವರಿ ತರಲು ಅರ್ಬಾಜ್ ತನ್ನ ತಾಯಿಯನ್ನ ಕಳಿಸಿದ್ದನು. ಆದರೆ ಒಟಿಪಿ ನಂಬರ್ ಬೇಕು ಎಂದು ಮೊಹಮ್ಮದ್ ರಫಿ ವಾಪಸ್ ಕಳಿಸಿದ್ದನು. ಇದರಿಂದ ಕೋಪಗೊಂಡ ಅರ್ಬಾಜ್​​​​ ಮನೆಯಿಂದ ಚಾಕು ತೆಗೆದುಕೊಂಡು ಹೋಗಿ ಮೊಹಮ್ಮದ್ ರಫಿಯ ಹೊಟ್ಟೆ ಮತ್ತು ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ. ಅಶೋಕ್ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಮೊಹಮ್ಮದ್ ರಫಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!