AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಲ್​ಗಾಗಿ ಸಂಪರ್ಕಿಸಿ.. ವಕೀಲನ ಕಾರನ್ನೇ ಕದ್ದ ಕಿಲಾಡಿಗಳು; ಆಮೇಲೆ ಏನ್ಮಾಡಿದ್ರು ಗೊತ್ತಾ?

ಬೆಂಗಳೂರು: ಕದ್ದ ಕಾರಿನಲ್ಲಿ ಊರೂರು ಸುತ್ತುತ್ತಿದ್ದ ಇಬ್ಬರು ಕಳ್ಳರನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಹಫೀಜ್ ಮತ್ತು ರೆಹಮಾನ್ ಮನ್ಸೂರ್​ ಬಂಧಿತ ಆರೋಪಿಗಳು. ಅಕ್ಟೋಬರ್​ 5ರಂದು ಫ್ರೇಜರ್​ಟೌನ್​ನಲ್ಲಿ ವಕೀಲ ನಾಗರಾಜುಗೆ ಸೇರಿದ ಇಟಿಯೋಸ್ ಕಾರನ್ನು ಚೋರರು ಕಳವು ಮಾಡಿದ್ದರು. ಅಷ್ಟೇ ಅಲ್ಲ, ಕದ್ದ ಕಾರಿನಲ್ಲೇ ಜಾಲಿ ಟ್ರಿಪ್​ ಅಂತಾ ಖದೀಮರು ಮಹಾರಾಷ್ಟ್ರದ ಪುಣೆಯಲ್ಲಿರುವ ದರ್ಗಾಗೆ ತೆರಳಿದ್ದರು. ಕೇಸ್​ವೊಂದಕ್ಕೆ ಸಂಬಂಧಿಸಿ ಜಾಮೀನಿಗಾಗಿ ನಿಮ್ಮ ಸಲಹೆ ಬೇಕು ಎಂದು ಆರೋಪಿಗಳು ವಕೀಲ ನಾಗರಾಜುರನ್ನು ಸಂಪರ್ಕಿಸಿ ಫ್ರೇಜರ್​ಟೌನ್​ನ ಬಂಕ್​ ಬಳಿಗೆ […]

ಬೇಲ್​ಗಾಗಿ ಸಂಪರ್ಕಿಸಿ.. ವಕೀಲನ ಕಾರನ್ನೇ ಕದ್ದ ಕಿಲಾಡಿಗಳು; ಆಮೇಲೆ ಏನ್ಮಾಡಿದ್ರು ಗೊತ್ತಾ?
KUSHAL V
| Updated By: ಸಾಧು ಶ್ರೀನಾಥ್​|

Updated on: Oct 20, 2020 | 3:49 PM

Share

ಬೆಂಗಳೂರು: ಕದ್ದ ಕಾರಿನಲ್ಲಿ ಊರೂರು ಸುತ್ತುತ್ತಿದ್ದ ಇಬ್ಬರು ಕಳ್ಳರನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಹಫೀಜ್ ಮತ್ತು ರೆಹಮಾನ್ ಮನ್ಸೂರ್​ ಬಂಧಿತ ಆರೋಪಿಗಳು.

ಅಕ್ಟೋಬರ್​ 5ರಂದು ಫ್ರೇಜರ್​ಟೌನ್​ನಲ್ಲಿ ವಕೀಲ ನಾಗರಾಜುಗೆ ಸೇರಿದ ಇಟಿಯೋಸ್ ಕಾರನ್ನು ಚೋರರು ಕಳವು ಮಾಡಿದ್ದರು. ಅಷ್ಟೇ ಅಲ್ಲ, ಕದ್ದ ಕಾರಿನಲ್ಲೇ ಜಾಲಿ ಟ್ರಿಪ್​ ಅಂತಾ ಖದೀಮರು ಮಹಾರಾಷ್ಟ್ರದ ಪುಣೆಯಲ್ಲಿರುವ ದರ್ಗಾಗೆ ತೆರಳಿದ್ದರು.

ಕೇಸ್​ವೊಂದಕ್ಕೆ ಸಂಬಂಧಿಸಿ ಜಾಮೀನಿಗಾಗಿ ನಿಮ್ಮ ಸಲಹೆ ಬೇಕು ಎಂದು ಆರೋಪಿಗಳು ವಕೀಲ ನಾಗರಾಜುರನ್ನು ಸಂಪರ್ಕಿಸಿ ಫ್ರೇಜರ್​ಟೌನ್​ನ ಬಂಕ್​ ಬಳಿಗೆ ಕರೆತಂದಿದ್ದರು. ವಕೀಲ ನಾಗರಾಜು ಬಂಕ್​ ಮ್ಯಾನೇಜರ್​ ಬಳಿ ಮಾತಾಡ್ತಿದ್ದ ವೇಳೆ ಮೊಹಮ್ಮದ್ ಮತ್ತು ರೆಹಮಾನ್ ಕಾರು ಕದ್ದು ಪರಾರಿಯಾಗಿದ್ದಾರೆ.

ಕಾರು ಕಳ್ಳತನ ಕುರಿತು ವಕೀಲ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟರಲ್ಲೇ ಕಳ್ಳರು ಕದ್ದ ಕಾರಿನಲ್ಲೇ ಪುಣೆ ಸೇರಿದಂತೆ ಹಲವೆಡೆ ಟ್ರಿಪ್​ಗೆ ಹೋಗಿ ಜಾಲಿ ಮಾಡಿಬಿಟ್ಟಿದ್ದರು. ಟ್ರಿಪ್​ ಮುಗಿಸಿ ಹಿಂದಿರುಗುವಾಗ ಶಿರಾ ಬಳಿ ಖಾಕಿಗೆ ಲಾಕ್​ ಆಗಿದ್ದಾರೆ.

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು