AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಲ್​ಗಾಗಿ ಸಂಪರ್ಕಿಸಿ.. ವಕೀಲನ ಕಾರನ್ನೇ ಕದ್ದ ಕಿಲಾಡಿಗಳು; ಆಮೇಲೆ ಏನ್ಮಾಡಿದ್ರು ಗೊತ್ತಾ?

ಬೆಂಗಳೂರು: ಕದ್ದ ಕಾರಿನಲ್ಲಿ ಊರೂರು ಸುತ್ತುತ್ತಿದ್ದ ಇಬ್ಬರು ಕಳ್ಳರನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಹಫೀಜ್ ಮತ್ತು ರೆಹಮಾನ್ ಮನ್ಸೂರ್​ ಬಂಧಿತ ಆರೋಪಿಗಳು. ಅಕ್ಟೋಬರ್​ 5ರಂದು ಫ್ರೇಜರ್​ಟೌನ್​ನಲ್ಲಿ ವಕೀಲ ನಾಗರಾಜುಗೆ ಸೇರಿದ ಇಟಿಯೋಸ್ ಕಾರನ್ನು ಚೋರರು ಕಳವು ಮಾಡಿದ್ದರು. ಅಷ್ಟೇ ಅಲ್ಲ, ಕದ್ದ ಕಾರಿನಲ್ಲೇ ಜಾಲಿ ಟ್ರಿಪ್​ ಅಂತಾ ಖದೀಮರು ಮಹಾರಾಷ್ಟ್ರದ ಪುಣೆಯಲ್ಲಿರುವ ದರ್ಗಾಗೆ ತೆರಳಿದ್ದರು. ಕೇಸ್​ವೊಂದಕ್ಕೆ ಸಂಬಂಧಿಸಿ ಜಾಮೀನಿಗಾಗಿ ನಿಮ್ಮ ಸಲಹೆ ಬೇಕು ಎಂದು ಆರೋಪಿಗಳು ವಕೀಲ ನಾಗರಾಜುರನ್ನು ಸಂಪರ್ಕಿಸಿ ಫ್ರೇಜರ್​ಟೌನ್​ನ ಬಂಕ್​ ಬಳಿಗೆ […]

ಬೇಲ್​ಗಾಗಿ ಸಂಪರ್ಕಿಸಿ.. ವಕೀಲನ ಕಾರನ್ನೇ ಕದ್ದ ಕಿಲಾಡಿಗಳು; ಆಮೇಲೆ ಏನ್ಮಾಡಿದ್ರು ಗೊತ್ತಾ?
KUSHAL V
| Edited By: ಸಾಧು ಶ್ರೀನಾಥ್​|

Updated on: Oct 20, 2020 | 3:49 PM

Share

ಬೆಂಗಳೂರು: ಕದ್ದ ಕಾರಿನಲ್ಲಿ ಊರೂರು ಸುತ್ತುತ್ತಿದ್ದ ಇಬ್ಬರು ಕಳ್ಳರನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಹಫೀಜ್ ಮತ್ತು ರೆಹಮಾನ್ ಮನ್ಸೂರ್​ ಬಂಧಿತ ಆರೋಪಿಗಳು.

ಅಕ್ಟೋಬರ್​ 5ರಂದು ಫ್ರೇಜರ್​ಟೌನ್​ನಲ್ಲಿ ವಕೀಲ ನಾಗರಾಜುಗೆ ಸೇರಿದ ಇಟಿಯೋಸ್ ಕಾರನ್ನು ಚೋರರು ಕಳವು ಮಾಡಿದ್ದರು. ಅಷ್ಟೇ ಅಲ್ಲ, ಕದ್ದ ಕಾರಿನಲ್ಲೇ ಜಾಲಿ ಟ್ರಿಪ್​ ಅಂತಾ ಖದೀಮರು ಮಹಾರಾಷ್ಟ್ರದ ಪುಣೆಯಲ್ಲಿರುವ ದರ್ಗಾಗೆ ತೆರಳಿದ್ದರು.

ಕೇಸ್​ವೊಂದಕ್ಕೆ ಸಂಬಂಧಿಸಿ ಜಾಮೀನಿಗಾಗಿ ನಿಮ್ಮ ಸಲಹೆ ಬೇಕು ಎಂದು ಆರೋಪಿಗಳು ವಕೀಲ ನಾಗರಾಜುರನ್ನು ಸಂಪರ್ಕಿಸಿ ಫ್ರೇಜರ್​ಟೌನ್​ನ ಬಂಕ್​ ಬಳಿಗೆ ಕರೆತಂದಿದ್ದರು. ವಕೀಲ ನಾಗರಾಜು ಬಂಕ್​ ಮ್ಯಾನೇಜರ್​ ಬಳಿ ಮಾತಾಡ್ತಿದ್ದ ವೇಳೆ ಮೊಹಮ್ಮದ್ ಮತ್ತು ರೆಹಮಾನ್ ಕಾರು ಕದ್ದು ಪರಾರಿಯಾಗಿದ್ದಾರೆ.

ಕಾರು ಕಳ್ಳತನ ಕುರಿತು ವಕೀಲ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟರಲ್ಲೇ ಕಳ್ಳರು ಕದ್ದ ಕಾರಿನಲ್ಲೇ ಪುಣೆ ಸೇರಿದಂತೆ ಹಲವೆಡೆ ಟ್ರಿಪ್​ಗೆ ಹೋಗಿ ಜಾಲಿ ಮಾಡಿಬಿಟ್ಟಿದ್ದರು. ಟ್ರಿಪ್​ ಮುಗಿಸಿ ಹಿಂದಿರುಗುವಾಗ ಶಿರಾ ಬಳಿ ಖಾಕಿಗೆ ಲಾಕ್​ ಆಗಿದ್ದಾರೆ.

Follow Us
ಜೈಲಿನಲ್ಲಿ ರಾಜಾರೋಷವಾಗಿ ಫೋನ್​​​​ನಲ್ಲಿ ಮಾತನಾಡಿರುವ ಪ್ರಜ್ವಲ್
ಜೈಲಿನಲ್ಲಿ ರಾಜಾರೋಷವಾಗಿ ಫೋನ್​​​​ನಲ್ಲಿ ಮಾತನಾಡಿರುವ ಪ್ರಜ್ವಲ್
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
ಕೈ ಹೈಕಮಾಂಡ್ ಶಿಫಾರಸ್ಸಿನ ಪಟ್ಟಿಯಲ್ಲಿ ಮತ್ತೊಂದು ಬದಲಾವಣೆ
ಕೈ ಹೈಕಮಾಂಡ್ ಶಿಫಾರಸ್ಸಿನ ಪಟ್ಟಿಯಲ್ಲಿ ಮತ್ತೊಂದು ಬದಲಾವಣೆ
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
'ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ'; ರಾಹುಲ್ ಗಾಂಧಿ ವ್ಯಂಗ್ಯ
'ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ'; ರಾಹುಲ್ ಗಾಂಧಿ ವ್ಯಂಗ್ಯ
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ