AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಬ್ಲೂಟೂತ್​ ಹೆಡ್​ಫೋನ್​ ಕದ್ದವನ ಬಂಧಿಸಿದಾಗ ಹೊರ ಬಿತ್ತು ಶಾಕಿಂಗ್​ ವಿಚಾರ!

ನವೆಂಬರ್​ 25ರಂದು ಗಾಂಧಿನಗರದ ಮೊಬೈಲ್‌ ಶೋರೂಂಗೆ‌ ತೌಫೀಕ್ ಪಾಷಾ ಅಲಿಯಾಸ್​​ ತೌಫೀಕ್ ಎಂಬಾತ ತೆರಳಿದ್ದ. ಅಲ್ಲಿ  ಅಂಗಡಿಯವರ ಬಳಿ ಆತ ಹೆಡ್​​ಫೋನ್​ ಕೇಳಿದ್ದಾನೆ. ಅವರು ಹೆಡ್​ಫೋನ್​ ಇಲ್ಲ ನಾಳೆ ಬನ್ನಿ ಎಂದಿದ್ದಕ್ಕೆ ಗಲಾಟೆ ಮಾಡಿದ್ದ.

ಬೆಂಗಳೂರಲ್ಲಿ ಬ್ಲೂಟೂತ್​ ಹೆಡ್​ಫೋನ್​ ಕದ್ದವನ ಬಂಧಿಸಿದಾಗ ಹೊರ ಬಿತ್ತು ಶಾಕಿಂಗ್​ ವಿಚಾರ!
ಬಂಧಿತ ಆರೋಪಿ
ರಾಜೇಶ್ ದುಗ್ಗುಮನೆ
| Edited By: |

Updated on:Jan 02, 2021 | 4:52 PM

Share

ಬೆಂಗಳೂರು: ಕಳೆದ ನವೆಂಬರ್​ನಲ್ಲಿ ಬೆಂಗಳೂರಿನ ಗಾಂಧಿನಗರದ ಮೊಬೈಲ್‌ ಶೋರೂಂನಲ್ಲಿ ಗಲಾಟೆಯೊಂದು ನಡೆದಿತ್ತು. ಈ ಗಲಾಟೆ ವೇಳೆ ಹೆಡ್​ಫೋನ್​ ಕದ್ದು ಪರಾರಿಯಾದ ವ್ಯಕ್ತಿಯನ್ನು ಬಂಧಿಸಿದಾಗ ಶಾಕಿಂಗ್​ ವಿಚಾರವೊಂದು ಹೊರ ಬಿದ್ದಿದೆ.

ನವೆಂಬರ್​ 25ರಂದು ಗಾಂಧಿನಗರದ ಮೊಬೈಲ್‌ ಶೋರೂಂಗೆ‌ ತೌಫೀಕ್ ಪಾಷಾ ಅಲಿಯಾಸ್​​ ತೌಫೀಕ್ ಎಂಬಾತ ತೆರಳಿದ್ದ. ಅಲ್ಲಿ  ಅಂಗಡಿಯವರ ಬಳಿ ಆತ ಹೆಡ್​​ಫೋನ್​ ಕೇಳಿದ್ದಾನೆ. ಅವರು ಹೆಡ್​ಫೋನ್​ ಇಲ್ಲ ನಾಳೆ ಬನ್ನಿ ಎಂದಿದ್ದಕ್ಕೆ ಗಲಾಟೆ ಮಾಡಿದ್ದ. ಈ ವೇಳೆ ಅಂಗಡಿಯವನ ಮೇಲೆ ಹಲ್ಲೆ ನಡೆಸಿ ಬ್ಲೂಟೂತ್ ಹೆಡ್​ಫೋನ್​ ಕಸಿದು ಪರಾರಿಯಾಗಿದ್ದ.

ಈ ಪ್ರಕರಣದಲ್ಲಿ ತೌಫೀಕ್ ಬಂಧಿಸಿದ ವೇಳೆ ಆಘಾತಕಾರಿ ವಿಚಾರ ಒಂದು ಹೊರ ಬಿದ್ದಿದೆ. ಅದೇನೆಂದರೆ, ಈತ ಸರಗಳ್ಳತನ ಹಾಗ ಮನೆಗಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಈವರೆಗೆ ಒಟ್ಟು 3 ಸರಗಳ್ಳತನ ಹಾಗೂ ‌2 ಕನ್ನ ಕಳವು ಕೇಸ್​​ನಲ್ಲಿ ಈತನ ಕೈವಾಡ ಇರುವ ವಿಚಾರ ಬೆಳಕಿಗೆ ಬಂದಿದೆ. ಬಂಧಿತನಿಂದ 13 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಉಪ್ಪಾರಪೇಟೆ ಠಾಣೆ ಪೊಲೀಸರಿಂದ ತನಿಖೆ ಮುಂದುವರಿದಿದೆ.

ಕಳ್ಳತನ, ದರೋಡೆ ಎಸಗುತ್ತಿದ್ದ ಆರೋಪಿಗಳ ಬಂಧನ

Published On - 4:51 pm, Sat, 2 January 21

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More