AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯ ಅರಿಶಿನ ಶಾಸ್ತ್ರದ ವೇಳೆ ನೃತ್ಯ ಮಾಡುವಾಗ ಹೃದಯಾಘಾತದಿಂದ ವಧು ಸಾವು

ಉತ್ತರ ಪ್ರದೇಶದ ಬದೌನ್‌ನಲ್ಲಿ ಮದುವೆಗೆ ಒಂದು ದಿನ ಮೊದಲು ಅರಿಶಿನ ಶಾಸ್ತ್ರ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದಾಗ ವಧು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಅರಿಶಿನ ಶಾಸ್ತ್ರದ ಸಮಾರಂಭ ನಡೆಯುವಾಗ ಮದುವೆಗೂ ಕೆಲವೇ ಗಂಟೆಗಳಿರುವಾಗ ವಧು ಹೃದಯಾಘಾತದಿಂದ ಹಠಾತ್ತನೆ ನಿಧನಳಾಗಿದ್ದಾಳೆ. ತನ್ನ ಗ್ರಾಮದಲ್ಲಿ ಅರಿಶಿನ ಶಾಸ್ತ್ರದ ಸಮಾರಂಭದಲ್ಲಿ ಉತ್ಸಾಹದಿಂದ ನೃತ್ಯ ಮಾಡುತ್ತಿದ್ದ 22 ವರ್ಷದ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ.

ಮದುವೆಯ ಅರಿಶಿನ ಶಾಸ್ತ್ರದ ವೇಳೆ ನೃತ್ಯ ಮಾಡುವಾಗ ಹೃದಯಾಘಾತದಿಂದ ವಧು ಸಾವು
Girl Heart Attack
Follow us
ಸುಷ್ಮಾ ಚಕ್ರೆ
|

Updated on: May 05, 2025 | 10:25 PM

ಬದೌನ್, ಮೇ 5: ಉತ್ತರ ಪ್ರದೇಶದ ಬದೌನ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಮದುವೆ ಆಚರಣೆಯ ವೇಳೆ ವಧು ಸಾವನ್ನಪ್ಪಿದ್ದಾಳೆ. ತನ್ನ ಅರಿಶಿನ ಶಾಸ್ತ್ರದ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದ ವಧು ಬಾತ್ ರೂಂಗೆ ಹೋದಾಗ ಅಲ್ಲಿ ಹೃದಯಾಘಾತದಿಂದ ನಿಧನಳಾಗಿದ್ದಾಳೆ. ಉತ್ಸಾಹದಿಂದ ನೃತ್ಯ ಮಾಡುತ್ತಿದ್ದಾಗ 22 ವರ್ಷದ ಯುವತಿ ಕುಸಿದು ಬಿದ್ದು ಸ್ನಾನಗೃಹದಲ್ಲಿ ಸಾವನ್ನಪ್ಪಿದ್ದಾಳೆ. ಈ ಸಮಾರಂಭದ ಸಮಯದಲ್ಲಿ ಯುವತಿ ನೃತ್ಯ ಮಾಡುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಈ ಘಟನೆ ಭಾನುವಾರ (ಮೇ 4) ರಾತ್ರಿ ಬದೌನ್ ಜಿಲ್ಲೆಯ ಇಸ್ಲಾಂನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ನೂರ್ಪುರ್ ಪಿನೋನಿ ಗ್ರಾಮದಲ್ಲಿ ನಡೆದಿದೆ. ವಧು ಮತ್ತು ಆಕೆಯ ಕುಟುಂಬವು ತಮ್ಮ ಜೀವನದ ಅತ್ಯಂತ ಸಂತೋಷದ ದಿನಗಳಲ್ಲಿ ಒಂದಕ್ಕೆ ತಯಾರಿ ನಡೆಸುತ್ತಿದ್ದರು. ಹಳದಿ ಸಮಾರಂಭವು ಆಗಷ್ಟೇ ಪೂರ್ಣಗೊಂಡಿತ್ತು. ಮನೆ ತುಂಬ ನಗು, ಸಂಗೀತ ಮತ್ತು ನೃತ್ಯ ತುಂಬಿತ್ತು.

ಅರಿಶಿನ ಶಾಸ್ತ್ರದ ಆಚರಣೆಯ ನಂತರ ಆ ವಧು ತನ್ನ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಂತೋಷದಿಂದ ನೃತ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದಳು. ಅಲ್ಲಿದ್ದವರು ಸಹಾಯ ಮಾಡಲು ತಕ್ಷಣ ಪ್ರಯತ್ನಿಸಿದರೂ ಯುವತಿಯನ್ನು ಉಳಿಸಲಾಗಲಿಲ್ಲ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು. ಆಕೆಗೆ ಹೃದಯಾಘಾತವಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ಫಾಲೋವರ್ ಕಡಿಮೆಯಾಗಿದ್ದಕ್ಕೆ ಇನ್​ಫ್ಲುಯೆನ್ಸರ್ ಸಾವು, ಮೊದಲೇ ಊಹಿಸಿದ್ದೆ ಎಂದ ನಟಿ

ವರನ ಮದುವೆ ಮೆರವಣಿಗೆ (ಬರಾತ್) ಇಂದು ಬೆಳಿಗ್ಗೆ ಬರಬೇಕಿತ್ತು. ಮದುವೆಗೆ ವಧುವನ್ನು ಸುಂದರವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಕಳುಹಿಸುವ ಬದಲು, ಆಕೆಯ ಶವವನ್ನು ಅಂತ್ಯಕ್ರಿಯೆಗಾಗಿ ಹೊತ್ತೊಯ್ಯಲಾಯಿತು. ವಧುವಿನ ಹಠಾತ್ ಸಾವು ಆಕೆಯ ಕುಟುಂಬವನ್ನು ಆಘಾತಗೊಳಿಸಿದೆ. ಆಕೆಯ ತಾಯಿ ಆಘಾತ ಮತ್ತು ದುಃಖದಿಂದ ಪ್ರಜ್ಞೆ ಕಳೆದುಕೊಂಡರು. ಮದುವೆಗೆ ಹಾಜರಾಗಲು ರೇಷ್ಮೆ ಉಡುಪಿನಲ್ಲಿ ಆಗಮಿಸಿದ್ದ ಸಂಬಂಧಿಕರು ಅಂತ್ಯಕ್ರಿಯೆಯಲ್ಲಿ ಅಳುತ್ತಾ ನಡೆದರು.

ಸ್ಥಳೀಯ ನಿವಾಸಿಯೊಬ್ಬರು, “ಆ ಹುಡುಗಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಳು. ಅವಳಿಗೆ ಯಾವುದೇ ಕಾಯಿಲೆ ಇರಲಿಲ್ಲ. ಆಕೆಗೆ ಇಂತಹ ದುರಂತ ಸಾವು ಸಂಭವಿಸಬಹುದು ಎಂದು ನಾವು ಎಂದಿಗೂ ಊಹಿಸಿರಲಿಲ್ಲ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ