ಲಾಡ್ಜ್​ನಲ್ಲಿ ಕತ್ತು ಹಿಸುಕಿ ಮಹಿಳೆಯ ಹತ್ಯೆ: ಪೊಲೀಸರಿಗೆ ಶರಣಾದ ವ್ಯಕ್ತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 05, 2023 | 5:10 PM

Tumakuru News: ಲಾಡ್ಜ್​ನಲ್ಲಿ ಕತ್ತು ಹಿಸುಕಿ ಮಹಿಳೆಯ ಹತ್ಯೆ ಮಾಡಿ, ಬಳಿಕ ಆರೋಪಿ ಪೊಲೀಸರಿಗೆ ಶರಣಾಗಿರುವಂತಹ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ದಿವ್ಯ ಲಾಡ್ಜ್​ನಲ್ಲಿ ನಡೆದಿದೆ.

ಲಾಡ್ಜ್​ನಲ್ಲಿ ಕತ್ತು ಹಿಸುಕಿ ಮಹಿಳೆಯ ಹತ್ಯೆ: ಪೊಲೀಸರಿಗೆ ಶರಣಾದ ವ್ಯಕ್ತಿ
ಪ್ರಾತಿನಿಧಿಕ ಚಿತ್ರ
Follow us on

ತುಮಕೂರು, ಆಗಸ್ಟ್​​ 05: ಲಾಡ್ಜ್​ನಲ್ಲಿ ಕತ್ತು ಹಿಸುಕಿ ಮಹಿಳೆಯ (woman) ಹತ್ಯೆ ಮಾಡಿ, ಬಳಿಕ ಆರೋಪಿ ಪೊಲೀಸರಿಗೆ ಶರಣಾಗಿರುವಂತಹ ಘಟನೆ ಜಿಲ್ಲೆಯ ಕುಣಿಗಲ್ ಪಟ್ಟಣದ ದಿವ್ಯ ಲಾಡ್ಜ್​ನಲ್ಲಿ ನಡೆದಿದೆ. ಮಾಗಡಿ ತಾಲೂಕಿನ ತಾವರೆಕೆರೆ ಮೂಲದ ಲಕ್ಷ್ಮಮ್ಮ ಕೊಲೆಯಾದ ಮಾಹಿಳೆ. ದಾವಣಗೆರೆ ಮೂಲದ ಮಂಜುನಾಥ್​ ಕೊಲೆಗೈದ ವ್ಯಕ್ತಿ. ನಿನ್ನೆ ರಾತ್ರಿ ಲಕ್ಷ್ಮಮ್ಮ ಹಾಗೂ ಮಂಜುನಾಥ್​ ಲಾಡ್ಜ್​​ನಲ್ಲಿ ತಂಗಿದ್ದರು ಎನ್ನಲಾಗಿದೆ. ಕೊಲೆಯಾದ ಲಕ್ಷ್ಮಮ್ಮ ವಿವಾಹವಾಗಿದ್ದು, ಪತಿಯಿಂದ ದೂರಾಗಿದ್ದಳು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ವಿಜಯಪುರ: ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿರುವಂತಹ ಘಟನೆ ನಗರದ ಕನಕದಾಸ ಬಡಾವಣೆ ಬಳಿ ನಡೆದಿದೆ. ಕಲ್ಲಿನಿಂದ ಹೊಡೆದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಬಲಗೈ‌ ಕತ್ತಸಲಾಗಿದೆ. ಕೊಲೆಯಾದ ವ್ಯಕ್ತಿಯ ಹೆಸರು ಪತ್ತೆಯಾಗಿಲ್ಲ. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಕೊಲೆಯಾದವನ ಹೆಸರು ವಿಳಾಸ ಪತ್ತೆಗೆ ಮುಂದಾಗಿದ್ದಾರೆ. ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳ ಬಸ್​ ನಿಲ್ದಾಣದ ಬಳಿ ನೈತಿಕ ಪೊಲೀಸ್ ​​ಗಿರಿ ಪ್ರಕರಣ: ಮೂವರ ಬಂಧನ

ದಾನೋಜಿಪಾಳ್ಯ ಬ್ರಿಡ್ಜ್ ಕೆಳಗೆ ಮೃತ ದೇಹ ಪತ್ತೆ: ಕೊಲೆ ಶಂಕೆ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ದಾನೋಜಿಪಾಳ್ಯ ಬ್ರಿಡ್ಜ್ ಕೆಳಗೆ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತಪಡಿಸಲಾಗಿದೆ. ದೊಡ್ಡಬಳ್ಳಾಪುರದ ಸಾಯಿ ಚಾಟ್ಸ್ ಅಂಗಡಿ ಮಾಲಿಕ ಸಂತೋಷ ಕುಮಾರ್ (32) ಮೃತ ವ್ಯಕ್ತಿ. ಶವದ ಮೇಲೆ ಗಾಯಗಳಾಗಿದ್ದು, ಕೊಲೆಗೈದು ಹಳ್ಳದಲ್ಲಿ ಹಾಕಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮೃತ ಸಂತೋಷ ಕುಮಾರ್ ನಾಲ್ಕು ದಿನದ ಹಿಂದೆ ಜಗಳವಾಡಿಕೊಂಡು ಮನೆ ಬಿಟ್ಟು ಬಂದಿದ್ದ. ಸದ್ಯ ಇದು  ಅಪಘಾತವೊ ಅಥವಾ ಕೊಲೆಯೋ ಎಂದು ಸಾವಿನ ಬಗ್ಗೆ ನೆಲಮಂಗಲ ಟೌನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಪೊಲೀಸರ ಕಾರ್ಯಾಚರಣೆ; ಅಂತರ್​ರಾಜ್ಯ ಮನೆಗಳ್ಳರ ಬಂಧನ, 70 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

ರಾತ್ರೋರಾತ್ರಿ ಅಂಗಡಿಗಳ ಶೆಟರ್ ಮುರಿದು ಸರಣಿ ಕಳ್ಳತನ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪಟ್ಟಣದಲ್ಲಿ ಒಂದೇ ರಾತ್ರಿ 3 ಮೊಬೈಲ್ ಅಂಗಡಿ, 2 ಬಟ್ಟೆ ಅಂಗಡಿಗಳಲ್ಲಿ ಸರಣಿ ಕಳ್ಳತನ ಮಾಡಲಾಗಿದೆ. ರಾತ್ರೋರಾತ್ರಿ ಅಂಗಡಿಗಳ ಶೆಟರ್ ಮುರಿದು ಲಕ್ಷಾಂತರ ಮೌಲ್ಯದ ಮೊಬೈಲ್, ಬಟ್ಟೆಗಳನ್ನು ಕಳ್ಳತನ ಮಾಡಿದ್ದಾರೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.