AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಗತ್ ಸಿಂಗ್ ಪಾಠ ಕೈಬಿಡಲಾಗಿದೆ, RSS ಸಂಸ್ಥಾಪಕ ಹೆಡ್ಗೆವಾರ್ ಭಾಷಣದ ತುಣುಕನ್ನ ಪಠ್ಯಕ್ಕೆ ಸೇರಿಸಿದ್ದೇವೆ -ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ

ಹೆಡ್ಗೆವಾರ್ ಭಾಷಣದ ಸಾರವನ್ನ ಗದ್ಯರೂಪದಲ್ಲಿ ಅಳವಡಿಸಿದ್ದೇವೆ ಅನ್ನೋ ಉದ್ದೇಶದಿಂದ ಈ ಗದ್ಯ ಪಾಠ ಸೇರ್ಪಡೆ ಮಾಡಿದ್ದೇವೆ. ಭಗತ್ ಸಿಂಗ್ ಪಾಠ ಕೈಬಿಟ್ಟುದ್ದು ನಿಜಾ. ಭಗತ್ ಸಿಂಗ್ ಪಠ್ಯ ಹೊರತಾಗಿ ಇದನ್ನು ಸೇರಿಸಿಲ್ಲ. ಭಗತ್ ಸಿಂಗ್ ಪಠ್ಯ ಪೂರಕ ಪಠ್ಯದಲ್ಲಿತ್ತು. ಭಗತ್ ಸಿಂಗ್ ಪಾಠ ಮುಖ್ಯ ಭಾಗದಲ್ಲಿ ಇರಲಿಲ್ಲ.

ಭಗತ್ ಸಿಂಗ್ ಪಾಠ ಕೈಬಿಡಲಾಗಿದೆ, RSS ಸಂಸ್ಥಾಪಕ ಹೆಡ್ಗೆವಾರ್ ಭಾಷಣದ ತುಣುಕನ್ನ ಪಠ್ಯಕ್ಕೆ ಸೇರಿಸಿದ್ದೇವೆ -ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ
RSS ಸಂಸ್ಥಾಪಕ ಹೆಡ್ಗೆವಾರ್
Follow us
TV9 Web
| Updated By: ಆಯೇಷಾ ಬಾನು

Updated on:May 16, 2022 | 6:06 PM

ಬೆಂಗಳೂರು: 10 ನೇ ತರಗತಿ ಪಠ್ಯ ಪುಸ್ತಕದಲ್ಲಿ ಈಗ ಆರ್ಎಸ್ಎಸ್(RSS) ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ ಮಾಡಿದ್ದೇವೆ. ಆದರ್ಶ ಪುರಷ ಯಾರಾಗಬೇಕು? ಏನೆಲ್ಲ ಗುಣ ಇರಬೇಕು? ಇದನ್ನೆಲ್ಲ ಮಕ್ಕಳು ಕಲಿಯಬೇಕು ಹೀಗಾಗಿ ಈ ಗದ್ಯ ಸೇರ್ಪಡೆ ಮಾಡಿದ್ದೇವೆ ಎಂದು ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ(Rohit Chakrathirtha) ತಿಳಿಸಿದ್ದಾರೆ.

ಹೆಡ್ಗೆವಾರ್ ಭಾಷಣದ ಸಾರವನ್ನ ಗದ್ಯರೂಪದಲ್ಲಿ ಅಳವಡಿಸಿದ್ದೇವೆ ಅನ್ನೋ ಉದ್ದೇಶದಿಂದ ಈ ಗದ್ಯ ಪಾಠ ಸೇರ್ಪಡೆ ಮಾಡಿದ್ದೇವೆ. ಭಗತ್ ಸಿಂಗ್ ಪಾಠ ಕೈಬಿಟ್ಟುದ್ದು ನಿಜಾ. ಭಗತ್ ಸಿಂಗ್ ಪಠ್ಯ ಹೊರತಾಗಿ ಇದನ್ನು ಸೇರಿಸಿಲ್ಲ. ಭಗತ್ ಸಿಂಗ್ ಪಠ್ಯ ಪೂರಕ ಪಠ್ಯದಲ್ಲಿತ್ತು. ಭಗತ್ ಸಿಂಗ್ ಪಾಠ ಮುಖ್ಯ ಭಾಗದಲ್ಲಿ ಇರಲಿಲ್ಲ. ಭಗತ್ ಸಿಂಗ್ ಪಾಠ ತುಂಬಾ ಸಣ್ಣ ಪಾಠವಾಗಿತ್ತು. ಭಗತ್ ಸಿಂಗ್ ಪಾಠದಲ್ಲಿ ಹೆಚ್ಚಾಗಿ ಮಾಹಿತಿ ಇರಲಿಲ್ಲ. ಹೀಗಾಗಿ ಪುನರಾವರ್ತನೆ ಬೇಡಾ ಅಂತಾ ತೆಗೆದು ಹಾಕಲಾಗಿದೆ. ಕೇಸರೀಕರಣ ಉದ್ದೇಶದಿಂದ ಹೆಡ್ಗೆವಾರ್ ಗದ್ಯ ಪಾಠ ಸೇರಿಸಿಲ್ಲ. ಕೇಸರೀಕರಣ ಉದ್ದೇಶವಾಗಿದ್ರೆ ನಾವು ಭಗತ್ ಸಿಂಗ್ ಪಾಠ ಕೈಬಿಡ್ತಾ ಇರಲಿಲ್ಲ. ಭಗತ್ ಸಿಂಗ್ ಪಾಠ 2014ರಲ್ಲಿ ಇರಲಿಲ್ಲ. ಬರಗೂರು ರಾಮಚಂದ್ರಪ್ಪನವರು ಭಗತ್ ಸಿಂಗ್ ಪಾಠವನ್ನ ಸೇರಿಸಿದ್ದಾರೆ. ಬರಗೂರುವರು ಭಗತ್ ಸಿಂಗ್ ಪಾಠವನ್ನ ಪೂರಕ ಭಾಗಕ್ಕೆ ಸೇರಿಸಿದ್ರು ಮುಖ್ಯ ಭಾಗಕ್ಕೆ ಅಲ್ಲ. ಪೂರಕ ಭಾಗದಲ್ಲಿ ಇದ್ದ ಕಾರಣಕ್ಕೆ ನಾವು ಕೈಬಿಟ್ಟಿದ್ದೇವೆ.

ಹಿಂದಿನ ಪಠ್ಯಪುಸ್ತಕ ಪರಿಷ್ಕರಣೆ ಮಾಡುವ ಚಿಂತಕರು ಹೆಡ್ಗೆವಾರ್ ಅವರನ್ನ ಕೈಬಿಟ್ಟಿದ್ದರು. ಹೆಡ್ಗೆವಾರ್ ಸ್ವಾತಂತ್ರ ಹೋರಾಟಗಾರರು, ಸ್ವಾತಂತ್ರಕ್ಕಾಗಿ ಜೈಲಿಗೆ ಹೋಗಿ ಬಂದಿದ್ದಾರೆ. ಮೊಹಮ್ಮದ್ ಅಲಿ ಜಿನ್ನಾ ಬಗ್ಗೆ, ನೆಹರು ಬಗ್ಗೆ ಮಾಹಿತಿ ಮಕ್ಕಳಿಗೆ ಇದೆ, ಅಧ್ಯಯನ ಮಾಡ್ತಾರೆ. ಆದ್ರೆ ಹೆಡ್ಗೆವಾರ್ ಬಗ್ಗೆ ಮಾಹಿತಿ ಇಲ್ಲ. ಮಕ್ಕಳಿಗೆ ಇತಂಹ ಚಿಂತಕರ ಪರಿಚಯವಾಗಲ್ಲ. ಹೆಡ್ಗೆವಾರ್ ಭಾಷಣ ಅನ್ನೊ ಕಾರಣಕ್ಕೆ ವಿವಾದ ವಾಗ್ತೀದೆ. ಇದೇ ಪಾಠದ ಸಾರ ನೆಹರು ಬಗ್ಗೆ ಆಗಿದ್ರೆ ಇಷ್ಟು ಚರ್ಚೆಯಾಗ್ತೀರಲಿಲ್ಲ. ಹೆಡ್ಗೆವಾರ್ RSS ಸ್ಥಾಪಕರು ಅನ್ನೊ ಕಾರಣಕ್ಕೆ ಚರ್ಚೆಯಾಗ್ತೀದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹೆಡ್ಗೆವಾರ್ ಭಾಷಣದ ತುಣುಕನ್ನ ಮಾತ್ರ ಪಠ್ಯಕ್ಕೆ ಸೇರಿಸಿದ್ದೇವೆ ಇನ್ನು 10ನೇ ತರಗತಿಯಲ್ಲಿ ಆರ್ಎಸ್ಎಸ್ ಸಂಸ್ಥಾಪಕ ಡಾ ಹೆಗ್ಡೆವಾರ್ ಪಠ್ಯ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿ ತುಮಕೂರಿನಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಪ್ರತಿಕ್ರಿಯಿಸಿದ್ದಾರೆ. ಭಾಷಣ ಅಳವಡಿಕೆ ಬಗ್ಗೆ ನನಗೆ ಪೂರ್ಣ ಮಾಹಿತಿ ಗೊತ್ತಿಲ್ಲ. ಹೆಡ್ಗೆವಾರ್ ಭಾಷಣದ ತುಣುಕನ್ನ ಮಾತ್ರ ಪಠ್ಯಕ್ಕೆ ಸೇರಿಸಿದ್ದೇವೆ. ಖಂಡಿತವಾಗಿಯೂ ಪಠ್ಯದಿಂದ ಭಗತ್ ಸಿಂಗ್ ಅವರನ್ನು ಬಿಟ್ಟಿಲ್ಲ. ಪಠ್ಯ ಪುಸ್ತಕದ ಸಮಿತಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಅನೇಕ ಶಿಕ್ಷಣ ತಜ್ಞರಿದ್ದರು. ಯಾವುದು ಇರಬೇಕು, ಇರಬಾರದು ಎಂದು ಸಂಶೋಧನೆ ಮಾಡಲಾಗಿದೆ. ಶಿಕ್ಷಣ ತಜ್ಞರಿಂದ ಪಠ್ಯ ಪುಸ್ತಕಗಳನ್ನು ತರುವಂತಹ ಕೆಲಸ ಆಗಿದೆ. ಊಹಾಪೋಹಗಳಿಗೆ ಉತ್ತರ ಕೊಡುವ ಪ್ರಯತ್ನ ಮಾಡಲ್ಲ. ಪುಸ್ತಕದಲ್ಲಿ ಮಕ್ಕಳಿಗೆ ಹೇಳಬಾರದ್ದು ಇಲ್ಲ ಎನ್ನುವ ವಿಶ್ವಾಸವಿದೆ ಎಂದರು.

ವಿವಾದ ಮಾಡೋರಿಗೆ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಅನ್ನೋ ರೀತಿ ಏನಿಲ್ಲದೇ ಇದ್ದರೂ ವಿವಾದ ಮಾಡ್ತಾರೆ. ಆ ರೀತಿ ಯಾರಿಗೆ ಇಷ್ಟವಿಲ್ಲ ಅವರಿಗೆ ವಿರೋದು ಮಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ಯಾವುದನ್ನ ಓದದೇ ಏನ್ ವಿಚಾರ ಇಲ್ಲದೇ, ಇದೇ ಅನ್ನೋದನ್ನ ತಿಳಿದುಕೊಂಡು ವಿರೋಧ ಮಾಡೋರ ಬಗ್ಗೆ ನಾನು ವಿರೋಧ ಮಾಡಲ್ಲ. ಆ ವಿಚಾರ ಬಗ್ಗೆ ತಲೆಯೂ ಕೆಡಿಸಿಕೊಳ್ಳಲ್ಲ. ಒಂದಷ್ಟು ಜನರಿಗೆ ಸುಳ್ಳು ಅಪಪ್ರಚಾರ ಮಾಡೋ ಚಟವಿದೆ. ಆ ಚಟದಲ್ಲಿ ಇದೊಂದು. ಯಾವುದೇ ರೀತಿಯಲ್ಲಿ ಹೆಗ್ಡೆವಾರ್ ಬಗ್ಗೆ ನಾವು ಅಳವಡಿಸಿಲ್ಲ. ಆದರೆ ಆದರ್ಶ ಅನ್ನೋದನ್ನ ಮುಂದಿನ ಜನರೇಷನ್ ಮಕ್ಕಳು ತೆಗೆದುಕೊಳ್ಳಬೇಕು.

ಆದರ್ಶ ಅನ್ನೋದು ವ್ಯಕ್ತಿನೋ ಅಥವಾ ವಿಚಾರನೋ ಅನ್ನೋ ಭಾಷಣದ ವಿಚಾರವನ್ನ ಅಳವಡಿಸುವ ಪ್ರಯತ್ನ ಮಾಡಲಾಗಿದೆ. ಭಗತ್ ಸಿಂಗ್ರ ಯಾವುದನ್ನೂ ಕೈ ಬಿಟ್ಟಿಲ್ಲ. ಕ್ರಾಂತಿಕಾರಿಗಳು ರಾಷ್ಟ್ರಭಕ್ತರು ಎನ್ನೋ ವಿಚಾರವನ್ನ ತಿಳಿಸುವಂತ ಪ್ರಯತ್ನ ನಮ್ಮ ಪಠ್ಯಗಳು ಮಾಡ್ತಿವೆ. ಇಷ್ಟು ದಿನ ಕ್ರಾಂತಿಕಾರಿಗಳನ್ನ ದೇಶದ್ರೋಹಿಗಳು ಅಂತಾ ಯಾವ ಪಕ್ಷ ಹೇಳಿತ್ತು ಅಂತಾ ಗೊತ್ತಿದೆ. ನಾವು ಕ್ರಾಂತಿಕಾರಿಗಳ ಬಗ್ಗೆ ಅವರ ತ್ಯಾಗವನ್ನ ಅವರ ದೇಶಪ್ರೇಮವನ್ನ ಮುಂದಿನ ಜನರೇಷನ್ಗೆ ತರುವ ಪ್ರಯತ್ನ ಬಿಜೆಪಿ ಮಾಡಿದೆ. ಭಾಷಣದ ಒಂದು ತುಣಕನ್ನ ಮಾತ್ರ ಅಳವಡಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.

ದೇಶ ಭಕ್ತಿ ಕುರಿತ ಎಲ್ಲಾ ಪಾಠಗಳನ್ನು ಕಲಿಸುವ ಅಗತ್ಯ ಇದೆ ಕಲಬುರಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಮಾತನಾಡಿದ್ದು, ದೇಶ ಭಕ್ತಿ ಕುರಿತ ಎಲ್ಲಾ ಪಾಠಗಳನ್ನು ಕಲಿಸುವ ಅಗತ್ಯ ಇದೆ ಎಂದರು. ಇನ್ನು ಬಜರಂಗದಳದಿಂದ ತ್ರಿಶೂಲ, ಏರ್ಗನ್ ತರಬೇತಿ ವಿಚಾರಕ್ಕೆ ಸಂಬಂಧಿಸಿ ಎಲ್ಲಿಯೂ ಶಾಲಾ ಮಕ್ಕಳಿಗೆ ತರಬೇತಿ ನೀಡಿಲ್ಲಾ. ಭಜರಂಗದಳದ ಕಾರ್ಯಕರ್ತರಿಗೆ ತ್ರಿಶೂಲ್ ನೀಡುತ್ತಾರೆ. ಅಭ್ಯಾಸ ವರ್ಗದಲ್ಲಿ ಬೇರೆ ಬೇರೆ ರೀತಿಯ ತರಬೇತಿ ನೀಡಲಾಗುತ್ತದೆ. ಶಾಲೆಯ ಆವರಣ ಭಜರಂಗದಳವದ ಕ್ಯಾಂಪ್ ಗೆ ಬಳಸಿಕೊಂಡಿರಬಹುದು. ಅದರಲ್ಲಿ ತಪ್ಪೇನಿಲ್ಲಾ. ಆದ್ರು ಸರ್ಕಾರ ನೋಟಿಸ್ ನೀಡಿದೆ ಎಂದರು.

Published On - 6:05 pm, Mon, 16 May 22

ಪಕ್ಷದ ಸಾರಥ್ಯ ನನ್ನ ಕೈಗೆ ಕೊಟ್ಟರೆ 150 ಸೀಟು ಗೆಲ್ಲುತ್ತೇನೆ: ಯತ್ನಾಳ್
ಪಕ್ಷದ ಸಾರಥ್ಯ ನನ್ನ ಕೈಗೆ ಕೊಟ್ಟರೆ 150 ಸೀಟು ಗೆಲ್ಲುತ್ತೇನೆ: ಯತ್ನಾಳ್
ರೈಲಿನಲ್ಲಿ ಅಂಗಿ, ಪ್ಯಾಂಟ್ ಬಿಚ್ಚಿ ನಿಂತ ಪ್ರಯಾಣಿಕ: ಮುಂದೇನಾಯ್ತು?
ರೈಲಿನಲ್ಲಿ ಅಂಗಿ, ಪ್ಯಾಂಟ್ ಬಿಚ್ಚಿ ನಿಂತ ಪ್ರಯಾಣಿಕ: ಮುಂದೇನಾಯ್ತು?
ದೆಹಲಿ: ಸಿದ್ದರಾಮಯ್ಯ ವರ್ತನೆ ಒತ್ತಡದಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ
ದೆಹಲಿ: ಸಿದ್ದರಾಮಯ್ಯ ವರ್ತನೆ ಒತ್ತಡದಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ
ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಗೆ ಕಿಸ್ ಕೊಟ್ಟ ಜಮೀರ್!
ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಗೆ ಕಿಸ್ ಕೊಟ್ಟ ಜಮೀರ್!
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ
ಮಿನಿಸ್ಟರ್ ಪಿಎ ಸರ್ಫ್ರಾಜ್​ರನ್ನು ರೂಪೇಶ್ ಬ್ಲ್ಯಾಕ್​ಮೇಲ್ ಮಾಡಿರುವ ಆರೋಪ
ಮಿನಿಸ್ಟರ್ ಪಿಎ ಸರ್ಫ್ರಾಜ್​ರನ್ನು ರೂಪೇಶ್ ಬ್ಲ್ಯಾಕ್​ಮೇಲ್ ಮಾಡಿರುವ ಆರೋಪ
ಯಾವ ಇಲಾಖೆ ಮೇಲೂ ಸರ್ಕಾರಕ್ಕೆ ನಿಯಂತ್ರಣವಿಲ್ಲ, ಅದೇ ನೋವು: ರಾಜು ಕಾಗೆ
ಯಾವ ಇಲಾಖೆ ಮೇಲೂ ಸರ್ಕಾರಕ್ಕೆ ನಿಯಂತ್ರಣವಿಲ್ಲ, ಅದೇ ನೋವು: ರಾಜು ಕಾಗೆ
ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿ ವಿಕೃತಿ ತೋರಿದ ಜನ
ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿ ವಿಕೃತಿ ತೋರಿದ ಜನ
ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗುವುದು ಯಾಕೆ? ವಿಜಯೇಂದ್ರ
ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗುವುದು ಯಾಕೆ? ವಿಜಯೇಂದ್ರ
ಮ್ಯೂಸಿಕ್​ ಫೆಸ್ಟಿವಲ್​ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ
ಮ್ಯೂಸಿಕ್​ ಫೆಸ್ಟಿವಲ್​ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ