AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CSAB Counseling 2026: NIT, IIIT ಗಳಲ್ಲಿ ಖಾಲಿ ಇರುವ B.Tech ಸೀಟುಗಳ ಭರ್ತಿಗೆ ಜುಲೈ 28 ರಿಂದ ನೋಂದಣಿ ಆರಂಭ!

ಜುಲೈ 28 ರಿಂದ CSAB ವಿಶೇಷ ಕೌನ್ಸೆಲಿಂಗ್ ನೋಂದಣಿ ಆರಂಭವಾಗಲಿದೆ. 2026ರ JEE Main ಅಂಕಗಳ ಆಧಾರದ ಮೇಲೆ NIT, IIIT, GFTI ಸಂಸ್ಥೆಗಳಲ್ಲಿ ಖಾಲಿ ಉಳಿದ B.Tech ಸೀಟುಗಳನ್ನು ಭರ್ತಿ ಮಾಡಲು ಇದು ಸುವರ್ಣಾವಕಾಶ. JoSAA ಕೌನ್ಸೆಲಿಂಗ್‌ನಲ್ಲಿ ಸೀಟು ಸಿಗದವರಿಗೆ ಅಥವಾ ಉತ್ತಮ ಆಯ್ಕೆ ಬಯಸುವವರಿಗೆ ಇದು ಕೊನೆಯ ಸುತ್ತು. ಹೊಸ ನೋಂದಣಿ ಕಡ್ಡಾಯ.

CSAB Counseling 2026: NIT, IIIT ಗಳಲ್ಲಿ ಖಾಲಿ ಇರುವ B.Tech ಸೀಟುಗಳ ಭರ್ತಿಗೆ ಜುಲೈ 28 ರಿಂದ ನೋಂದಣಿ ಆರಂಭ!
CSAB ವಿಶೇಷ ಕೌನ್ಸೆಲಿಂಗ್
ಅಕ್ಷತಾ ವರ್ಕಾಡಿ
|

Updated on: Jul 23, 2026 | 12:55 PM

Share

ಮುಖ್ಯಾಂಶಗಳು

  • ಜುಲೈ 28 ರಿಂದ CSAB ವಿಶೇಷ ಕೌನ್ಸೆಲಿಂಗ್ ನೋಂದಣಿ ಆರಂಭವಾಗಲಿದೆ.
  • ಖಾಲಿ ಉಳಿದ B.Tech ಸೀಟುಗಳನ್ನು ಭರ್ತಿ ಮಾಡಲು ಇದು ಸುವರ್ಣಾವಕಾಶ.
  • ಉತ್ತಮ ಆಯ್ಕೆ ಬಯಸುವವರಿಗೆ ಇದು ಕೊನೆಯ ಸುತ್ತು.

ನವದೆಹಲಿ: JoSAA (ಜಾಯಿಂಟ್ ಸೀಟ್ ಅಲೋಕೇಶನ್ ಅಥಾರಿಟಿ) ಕೌನ್ಸೆಲಿಂಗ್‌ನ ಎಲ್ಲಾ ಸುತ್ತುಗಳು ಮುಕ್ತಾಯಗೊಂಡ ನಂತರ, ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಖಾಲಿ ಉಳಿದಿರುವ ಸೀಟುಗಳನ್ನು ಭರ್ತಿ ಮಾಡಲು ಕೇಂದ್ರ ಸೀಟ್ ಹಂಚಿಕೆ ಮಂಡಳಿ (CSAB) ವಿಶೇಷ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಘೋಷಿಸಿದೆ. JEE Main 2026 ಅಂಕಗಳ ಆಧಾರದ ಮೇಲೆ ನಡೆಯುವ ಈ ವಿಶೇಷ ಕೌನ್ಸೆಲಿಂಗ್ ಮೂಲಕ NIT, IIIT ಹಾಗೂ ಇತರ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ (GFTI) ಪ್ರವೇಶ ಪಡೆಯಲು ಜುಲೈ 28 ರಿಂದ ನೋಂದಣಿ ಆರಂಭವಾಗಲಿದೆ. JoSAA ನಲ್ಲಿ ಸೀಟು ಪಡೆಯಲು ಸಾಧ್ಯವಾಗದ ಅಥವಾ ಉತ್ತಮ ಆಯ್ಕೆಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಇದು ಕೊನೆಯ ಮತ್ತು ಸುವರ್ಣ ಅವಕಾಶವಾಗಿದೆ.

ಜುಲೈ 28 ರಿಂದ ನೋಂದಣಿ:

CSAB ವಿಶೇಷ ಕೌನ್ಸೆಲಿಂಗ್ ಪ್ರಕ್ರಿಯೆಯು 2 ವಿಶೇಷ ಸುತ್ತುಗಳಲ್ಲಿ ನಡೆಯಲಿದ್ದು, ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ:

  • ಜುಲೈ 28, 2026: ಖಾಲಿ ಸೀಟುಗಳ ಪಟ್ಟಿ ಪ್ರಕಟಣೆ, ಹೊಸ ನೋಂದಣಿ ಮತ್ತು ಆಯ್ಕೆ ಭರ್ತಿ (Choice Filling) ಆರಂಭ.
  • ಜುಲೈ 31: ಮೊದಲ ಅಣಕು ಸೀಟು ಹಂಚಿಕೆ (Mock Seat Allotment) ಪ್ರಕಟಣೆ.
  • ಆಗಸ್ಟ್ 5 : ನೋಂದಣಿ ಹಾಗೂ ಆಯ್ಕೆಗಳನ್ನು ಲಾಕ್ ಮಾಡಲು ಕೊನೆಯ ದಿನ.
  • ಆಗಸ್ಟ್ 6: ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ.
  • ಆಗಸ್ಟ್ 12: ಎರಡನೇ ಸುತ್ತಿನ ಅಂತಿಮ ಫಲಿತಾಂಶ ಬಿಡುಗಡೆ.

ಈ ಪ್ರಕ್ರಿಯೆಯ ಮೂಲಕ ದೇಶಾದ್ಯಂತ ಇರುವ 31 NITಗಳು, 26 IIITಗಳು, IIEST, 3 SPAಗಳು ಹಾಗೂ 50ಕ್ಕೂ ಹೆಚ್ಚು GFTI ಸಂಸ್ಥೆಗಳಲ್ಲಿ ಖಾಲಿ ಇರುವ B.Tech ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ.

ಸಾವಿರಾರು ಖಾಲಿ ಸೀಟುಗಳು ಲಭ್ಯ: ಕಡಿಮೆ ರ‍್ಯಾಂಕ್ ಬಂದವರಿಗೂ ಪ್ರವೇಶದ ಭರವಸೆ!

ಪ್ರತಿ ವರ್ಷ JoSAA ಕೌನ್ಸೆಲಿಂಗ್ ಮುಗಿದ ನಂತರ ದೇಶದ ಪ್ರಮುಖ ತಾಂತ್ರಿಕ ಸಂಸ್ಥೆಗಳಲ್ಲಿ ಸರಿಸುಮಾರು 13,000 ರಿಂದ 14,000 ಸೀಟುಗಳು ಖಾಲಿ ಉಳಿಯುತ್ತವೆ. ಹೀಗಾಗಿ, JEE Main ನಲ್ಲಿ ಕೊಂಚ ಕಡಿಮೆ ರ‍್ಯಾಂಕ್ ಅಥವಾ ಅಂಕ ಪಡೆದ ಅಭ್ಯರ್ಥಿಗಳಿಗೂ CSAB ಸುತ್ತಿನಲ್ಲಿ ತಮ್ಮಿಷ್ಟದ ಕಾಲೇಜು ಅಥವಾ ಎಂಜಿನಿಯರಿಂಗ್ ವಿಭಾಗ (Branch) ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. JoSAA ಗಿಂತಲೂ ಕೊಂಚ ಸಡಿಲವಾದ ಕಟ್-ಆಫ್ ಶ್ರೇಣಿಯಲ್ಲಿ ಸೀಟುಗಳು ದೊರೆಯುವುದು CSAB ನ ಪ್ರಮುಖ ವೈಶಿಷ್ಟ್ಯವಾಗಿದೆ.

ಇದನ್ನೂ ಓದಿ: ಎಸ್​​ಐಆರ್​​ ಕಾರ್ಯಕ್ಕೆ ಶೇ.30ರಷ್ಟು ಶಿಕ್ಷಕರ ಬಳಕೆ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾಡೋರಿಲ್ಲ ಪಾಠ ಪ್ರವಚನ!

ಯಾರಿಗೆಲ್ಲ ಸಿಗಲಿದೆ ಅರ್ಜಿ ಸಲ್ಲಿಸಲು ಅರ್ಹತೆ?

JEE Main 2026 ರಲ್ಲಿ ಅರ್ಹತೆ ಪಡೆದ ಪ್ರತಿಯೊಬ್ಬ ಅಭ್ಯರ್ಥಿಯೂ CSAB ವಿಶೇಷ ಕೌನ್ಸೆಲಿಂಗ್‌ಗೆ ಅರ್ಜಿ ಸಲ್ಲಿಸಬಹುದು. JoSAA ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿ ಸೀಟು ಸಿಗದವರು. JoSAA ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದಿರುವವರು ಅಥವಾ ಸೀಟು ಸಿಕ್ಕರೂ ರದ್ದು ಮಾಡಿಕೊಂಡವರು ಅರ್ಜಿ ಸಲ್ಲಿಸಬಹುದು. ಸಾಮಾನ್ಯ/OBC/EWS ವರ್ಗದ ಅಭ್ಯರ್ಥಿಗಳು 12ನೇ ತರಗತಿಯಲ್ಲಿ ಕನಿಷ್ಠ ಶೇ.75 ಅಂಕಗಳನ್ನು ಪಡೆದಿರಬೇಕು (SC/ST/PwD ಅಭ್ಯರ್ಥಿಗಳಿಗೆ ಕನಿಷ್ಠ ಶೇ.65 ಅಂಕಗಳು ಕಡ್ಡಾಯ).

ಹೊಸ ನೋಂದಣಿ ಮತ್ತು ಆಯ್ಕೆ ಭರ್ತಿ ಕಡ್ಡಾಯ!

JoSAA ಕೌನ್ಸೆಲಿಂಗ್‌ನಲ್ಲಿ ಮಾಡಿದ ನೋಂದಣಿ ಅಥವಾ ಆಯ್ಕೆಗಳು CSAB ಕೌನ್ಸೆಲಿಂಗ್‌ಗೆ ಮಾನ್ಯವಾಗುವುದಿಲ್ಲ. ಅಭ್ಯರ್ಥಿಗಳು CSAB ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹೊಸದಾಗಿ ನೋಂದಾಯಿಸಿಕೊಂಡು, ತಮ್ಮ ಆದ್ಯತೆಯ ಕಾಲೇಜು ಮತ್ತು ಕೋರ್ಸ್‌ಗಳನ್ನು ಮತ್ತೊಮ್ಮೆ ನಮೂದಿಸಬೇಕಾಗುತ್ತದೆ. ಒಮ್ಮೆ ಆಯ್ಕೆಗಳನ್ನು ಲಾಕ್ ಮಾಡಿದ ನಂತರ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲವಾದ್ದರಿಂದ, ವಿದ್ಯಾರ್ಥಿಗಳು ಗಮನವಿಟ್ಟು ಕಾಲೇಜುಗಳನ್ನು ಆಯ್ಕೆ ಮಾಡಲು ಸೂಚಿಸಲಾಗಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ