AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ತವರಿನಲ್ಲಿ ಬಿಜೆಪಿ ಅಧಿಕಾರ ಮುಂದುವರಿಕೆ; ಗುಜರಾತ್ ಮಾಡೆಲ್​​ನಿಂದ ಕಲಿಯಬೇಕಾದ ಪಾಠಗಳಿವು

2017 ರಲ್ಲಿ 182 ಸ್ಥಾನಗಳಲ್ಲಿ ಬಿಜೆಪಿ ಕೇವಲ 99 ಸ್ಥಾನಗಳನ್ನು ಗೆದ್ದಾಗ ಈ ಕಳಪೆ ಪ್ರದರ್ಶನವು 2022ರ ಚುನಾವಣೆಗೆ ಪಕ್ಷವನ್ನು ಮರುಸಂಘಟಿಸಲು ಮತ್ತು ರಾಜ್ಯದಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿಯಾದ ಕಾಂಗ್ರೆಸ್ ಅನ್ನು ಎದುರಿಸಲು ಸಿದ್ಧವಾಗುವಂತೆ ಮಾಡಿತು.

ಮೋದಿ ತವರಿನಲ್ಲಿ ಬಿಜೆಪಿ ಅಧಿಕಾರ ಮುಂದುವರಿಕೆ; ಗುಜರಾತ್ ಮಾಡೆಲ್​​ನಿಂದ ಕಲಿಯಬೇಕಾದ ಪಾಠಗಳಿವು
ಗುಜರಾತ್ ಚುನಾವಣೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 09, 2022 | 10:28 AM

ದೆಹಲಿ: 2013 ರಲ್ಲಿ ಬಿಜೆಪಿ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿಯವರ (Narendra Modi) ಉಮೇದುವಾರಿಕೆಯನ್ನು ಘೋಷಿಸಿದಾಗ ಮತದಾರರ ಗಮನ ಸೆಳೆದ ಚುನಾವಣಾ ಮಂತ್ರ ಎಂದರೆ ಗುಜರಾತ್ ಮಾದರಿಯ(Gujarat Model) ಅಭಿವೃದ್ಧಿ. ಆ ಹೊತ್ತಿಗೆ 12 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮೋದಿಯವರು, ಬದಲಾವಣೆ ಮಾಡುವವರಾಗಿ, ಅಭಿವೃದ್ಧಿಯ ಹರಿಕಾರರಾಗಿ ಮತ್ತು ಗುಜರಾತ್‌ನ(Gujarat) ಮುಖವನ್ನು ಬದಲಿಸಿದ ಆಡಳಿತಗಾರರಾಗಿ ಹೊರಹೊಮ್ಮಿದರು. ಬೃಹತ್ ಹೂಡಿಕೆ ಮತ್ತು ಕೈಗಾರಿಕೆಗಳು, ರಫ್ತುಗಳು ಮತ್ತು ಆರ್ಥಿಕತೆ ಮತ್ತು ಸಾಮಾನ್ಯ ಗುಜರಾತಿಗಳು ಇತರ ರಾಜ್ಯಗಳಲ್ಲಿನ ತಮ್ಮ ಸಹವರ್ತಿಗಳಿಗಿಂತ ಹೆಚ್ಚು ಆರಾಮದಾಯಕ ಜೀವನವನ್ನು ಹೇಗೆ ನಡೆಸುತ್ತಾರೆ ಎಂಬುದರ ಕುರಿತು ಮಾತನಾಡಲಾಯಿತು. 2002 ರ ಗಲಭೆಗಳ ಕಳಂಕ, ಜನಾಕ್ರೋಶ ಮತ್ತು ಗುಣಮಟ್ಟದ ಆರೋಗ್ಯ ಮತ್ತು ಶಿಕ್ಷಣದ ಕೊರತೆಯನ್ನು ತೋರುವ ಸೂಚ್ಯಂಕಗಳನ್ನು ದೂರತಳ್ಳಿದ ಬಿಜೆಪಿ 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರದಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಅಷ್ಟರಲ್ಲಿ ಗುಜರಾತ್ ಎಂಬುದು ನವ ಭಾರತ ನಿರ್ಮಾಣದ ಯೋಜನೆಗಾಗಿ ಬಿಜೆಪಿ ಸ್ಥಾಪಿಸಿದ ಮಾದರಿಯಾಗಿತ್ತು.ಆದ್ದರಿಂದ, ಸ್ಪಷ್ಟ ಜನಾದೇಶದೊಂದಿಗೆ ಗುಜರಾತ್‌ನಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಯಾವಾಗಲೂ ಆದ್ಯತೆಯಾಗಿದೆ. ಈ ಹೊತ್ತಲ್ಲಿ ಗುಜರಾತಿನಲ್ಲಿ ಬಿಜೆಪಿಯ ಚುನಾವಣಾ ಇತಿಹಾಸದಿಂದ ಕಲಿಯಬೇಕಾದ ನಾಲ್ಕು ಮುಖ್ಯ ಪಾಠಗಳು ಇಲ್ಲಿವೆ.

ಗೆದ್ದರೂ ವಿಶ್ರಾಂತಿ ಪಡೆಯಬೇಡಿ

2017 ರಲ್ಲಿ 182 ಸ್ಥಾನಗಳಲ್ಲಿ ಬಿಜೆಪಿ ಕೇವಲ 99 ಸ್ಥಾನಗಳನ್ನು ಗೆದ್ದಾಗ ಈ ಕಳಪೆ ಪ್ರದರ್ಶನವು 2022ರ ಚುನಾವಣೆಗೆ ಪಕ್ಷವನ್ನು ಮರುಸಂಘಟಿಸಲು ಮತ್ತು ರಾಜ್ಯದಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿಯಾದ ಕಾಂಗ್ರೆಸ್ ಅನ್ನು ಎದುರಿಸಲು ಸಿದ್ಧವಾಗುವಂತೆ ಮಾಡಿತು. ಆಮ್ ಆದ್ಮಿ ಪಕ್ಷ (AAP) ತನ್ನ ವೋಟ್ ಬ್ಯಾಂಕ್ ಮೇಲೆ ಕಣ್ಣಿಡದಂತೆ ಅದು ಜಾಗ್ರತೆ ವಹಿಸಿತು. ವಿಧಾನಸಭಾ ಚುನಾವಣೆಯಲ್ಲಿ ತನ್ನ ದೊಡ್ಡ ಗೆಲುವಿನ ಮೂಲಕ, ಬಿಜೆಪಿ ತಾನು ಅಧಿಕಾರ ಬಿಟ್ಟು ಕೊಡುವುದಿಲ್ಲ ಎಂಬ ಜಿದ್ದಿನಿಂದ ಚುನಾವಣೆ ಜಯಿಸಿದ್ದನ್ನು ನೋಡಬಹುದು. ಮೊದಲ ಬಾರಿ ಬಿಜೆಪಿ ಒಟ್ಟು ಪಡೆದ ಒಟ್ಟು ಮತಗಳಲ್ಲಿ ಶೇ 50ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದೆ. ಇದನ್ನು ಪಕ್ಷದ ಮಾಜಿ ಅಧ್ಯಕ್ಷ ಅಮಿತ್ ಶಾ ಅವರು ಅಧ್ಯಕ್ಷರಾಗಿದ್ದಾಗ ನಿಗದಿಪಡಿಸಿದ್ದರು.

ಇದನ್ನೂ ಓದಿ
Image
ಗುಜರಾತಿನಲ್ಲಿ ಬಿಜೆಪಿ ಆಡಳಿತ ಮುಂದುವರಿಕೆ; ಯಾವ ರಾಜ್ಯದಲ್ಲಿ ಯಾವ ಪಕ್ಷ ಸುದೀರ್ಘ ಕಾಲ ಅಧಿಕಾರದಲ್ಲಿದ್ದವು? ಇಲ್ಲಿದೆ ಮಾಹಿತಿ
Image
Gujarat Election Result 2022: ಗುಜರಾತಿನಲ್ಲಿ ಸಿಕ್ಕಿತು 4 ಸ್ಥಾನ; AAP ಈಗ ರಾಷ್ಟ್ರೀಯ ಪಕ್ಷ ಎಂದು ಜನತೆಗೆ ಧನ್ಯವಾದ ಹೇಳಿದ ಕೇಜ್ರಿವಾಲ್
Image
Gujarat Election Result 2022 ಗುಜರಾತಿನಲ್ಲಿ ದಾಖಲೆಯ ಗೆಲುವು ಸಾಧಿಸಲು ಕಾರಣವಾಗಿದ್ದು ಮೋದಿ- ಶಾ ನಾಯಕತ್ವ, ಹೇಗಿತ್ತು ಬಿಜೆಪಿ ಕಾರ್ಯತಂತ್ರ?

ರಾಜ್ಯ ನಾಯಕರನ್ನು ಬೆಳೆಸುವುದು ಮುಖ್ಯ

ಹಿಮಾಚಲ ಪ್ರದೇಶದಲ್ಲಿ ಮತ್ತು ಉತ್ತರ ಪ್ರದೇಶದ ಉಪಚುನಾವಣೆ ನಡೆದ ಮೂರು ಕ್ಷೇತ್ರಗಳ ಪೈಕಿ ಎರಡರಲ್ಲಿ ಬಿಜೆಪಿ ಸೋತಿದೆ. ಆದರೆ ಗುಜರಾತ್‌ನಲ್ಲಿ ಬಿಜೆಪಿ 156 ಸ್ಥಾನಗಳ ಭರ್ಜರಿ ಗೆಲುವು ಸಾಧಿಸಿದೆ. ಗುಜರಾತ್‌ನಲ್ಲಿ ಸ್ಪಷ್ಟವಾದ ಜನಾದೇಶವು ಪ್ರಧಾನಿ ಮೋದಿಯವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಪಕ್ಷದ ನಾಯಕರು ಪ್ರತಿಪಾದಿಸಿದರೂ, ಇದು ಬಿಜೆಪಿಯನ್ನು ತನ್ನ ಕಾರ್ಯಕ್ಷಮತೆಯನ್ನು ಕುಗ್ಗಿಸುವ ಮತ್ತು ಪ್ರತಿಪಕ್ಷಗಳ ದಾಳಿ, ಸಮಸ್ಯೆಗಳಿಂದ ರಕ್ಷಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮೋದಿ ಪಕ್ಷದ ಬಲವರ್ಧನೆ ಮಾಡುವವರಾಗಿದ್ದರೂ ಗುಜರಾತ್‌ನ ಗೆಲುವಿನ ಶ್ರೇಯಸ್ಸು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿಖರವಾದ ಯೋಜನೆ ಮತ್ತು 2020 ರಲ್ಲಿ ಅಧಿಕಾರ ವಹಿಸಿಕೊಂಡ ಬಿಜೆಪಿಯ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಅವರ ಕೆಲಸದ ಪರಿಣಾಮ ಎಂದು ಅಲ್ಲಿನ ನಾಯಕರು ಹೇಳುತ್ತಾರೆ. ಬಿಜೆಪಿಯ ನಾಯಕತ್ವದ ಸಾಲು ಕೂಡ ಪ್ರಬಲವಾಗಿದೆ ಎಂಬುದನ್ನು ಈ ಚುನಾವಣೆ ಸಾಬೀತು ಮಾಡಿದೆ. ಮೂಲಭೂತವಾಗಿ ತೆರೆಮರೆಯ ತಂತ್ರಗಾರನಾಗಿ ಕಾಣುತ್ತಿದ್ದ ಶಾ, ಈಗ ಲೆಕ್ಕಾಚಾರ ಮಾಡಲು ಪ್ರಚಾರಕನಾಗಿ ಹೊರಹೊಮ್ಮಿದ್ದಾರೆ. ಅವರ ನೇತೃತ್ವದಲ್ಲಿ 35 ರ್ಯಾಲಿಗಳು ಮತ್ತು ಎರಡು ರೋಡ್‌ಶೋ ನಡೆದಿವೆ. ಅವರೊಬ್ಬ ಕ್ರೌಡ್ ಪುಲ್ಲರ್ ಮತ್ತು ಯೋಜಕ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಪಕ್ಷದ ಮತ್ತೊಬ್ಬ ನಾಯಕ ಹೇಳಿದ್ದಾರೆ

ಎರಡು ಧ್ರುವಗಳ ಹೋರಾಟವೇ ಸವಾಲು

ಹಿಮಾಚಲದಲ್ಲಿ ಬಿಜೆಪಿ ಪಕ್ಷಕ್ಕೆ ಬಂಡಾಯವೇ ಮುಳುವಾಗಿತ್ತು. ಅಲ್ಲಿ ರಾಜ್ಯ ಘಟಕವು ದುರ್ಬಲವಾಗಿದ್ದು, ಮೋದಿ ವರ್ಚಸ್ಸನ್ನೇ ಮುಂದಿಟ್ಟು ಕಣಕ್ಕಿಳಿದಿತ್ತು. ರಾಜ್ಯ ಘಟಕದ ಆಂತರಿಕ ಕಚ್ಚಾಟ ಮತ್ತು ದುರ್ಬಲ ನಾಯಕತ್ವವು ಪಕ್ಷವು ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗದಿರಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಚುನಾವಣೆಗಳನ್ನು ಎದುರಿಸಲು ಸಜ್ಜಾಗುತ್ತಿರುವ ಪಕ್ಷಕ್ಕೆ ಇದು ಎಚ್ಚರಿಕೆಯಾಗಿ ಧ್ವನಿಸಬೇಕು. ಕರ್ನಾಟಕದಲ್ಲಿಯೂ ಬಿಜೆಪಿ ಸರ್ಕಾರವು ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಚುನಾವಣಾ ಭಾಷಣದ ಸಾಮರ್ಥ್ಯ

ಪಕ್ಷವು ತನ್ನ ಆರ್ಥಿಕ ನೀತಿಗಳು ಮತ್ತು ಸಾಮಾನ್ಯ ಜನರಿಗೆ ನೋವುಂಟುಮಾಡುವ ಅಗತ್ಯ ವಸ್ತುಗಳ ಗಗನಕ್ಕೇರಿರುವ ಬೆಲೆಗಳ ಬಗ್ಗೆ ಟೀಕೆಗಳನ್ನು ಎದುರಿಸುತ್ತಲೇ ಇದೆ. ಆದರೆ ಕೋವಿಡ್ -19 ಸಾಂಕ್ರಾಮಿಕದ ವೇಳೆ ಬೃಹತ್ ವ್ಯಾಕ್ಸಿನೇಷನ್ ಡ್ರೈವ್ ಅನ್ನು ನಡೆಸುವಲ್ಲಿ ಕೇಂದ್ರ ಸರ್ಕಾರವು ಮಾಡಿದ ಕೆಲಸವನ್ನು ಈ ಟೀಕೆಗಳ ಸದ್ದು ಹೆಚ್ಚಾಗದಂತೆ ಮಾಡಿತು. ಉಚಿತ ಆಹಾರ ಧಾನ್ಯ ಮತ್ತು ಇತರ ಸಾಮಾಜಿಕ ಕಲ್ಯಾಣ ಯೋಜನೆಗಳು ಬೆಲೆ ಏರಿಕೆ ಮತ್ತು ಉದ್ಯೋಗ ಕಡಿತದಿಂದ ಉಂಟಾದ ನೋವನ್ನು ಇದು ಶಮನಗೊಳಿಸುವಲ್ಲಿ ಯಶಸ್ವಿಯಾಯಿತು. ಆದರೆ ಹಳೆಯ ಪಿಂಚಣಿ ಯೋಜನೆಗೆ ಹಿಂದಿರುಗುವ ಭರವಸೆಯಂತಹ ಆರ್ಥಿಕ ಸಮಸ್ಯೆಗಳ ಆಧಾರದ ಮೇಲೆ ಹಿಮಾಚಲದಲ್ಲಿ ಚಿತ್ತವನ್ನು ತಿರುಗಿಸುವ ಕಾಂಗ್ರೆಸ್‌ನ ಸಾಮರ್ಥ್ಯವು ದೊಡ್ಡ ರಾಷ್ಟ್ರೀಯ ಭಾಷಣದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಎಷ್ಟು ಮಟ್ಟಿಗೆ ಒಳಗೊಳ್ಳಬಹುದು ಎಂಬುದನ್ನು ಒತ್ತಿಹೇಳುತ್ತದೆ. ಆದರೆ ಬಿಜೆಪಿ ಭಾಷಣದಲ್ಲಿ ಸೈದ್ಧಾಂತಿಕ ಸಮಸ್ಯೆಗಳು, ರಾಮಮಂದಿರ, ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯ ರದ್ದತಿ ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿ, ಸೈದ್ಧಾಂತಿಕ ವಿಷಯಗಳ ಬಗ್ಗೆ ಬಿಜೆಪಿ ನಾಯಕತ್ವದ ನಿರಂತರ ಉಲ್ಲೇಖಗಳು, ಹಿಂದುತ್ವ ವಿಚಾರಗಳು ಪದೇ ಪದೇ ಕೇಳಿಬಂದಿದ್ದವು.

ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು