Karnataka Assembly Elections 2023: ಕಾಂಗ್ರೆಸ್​ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ: ಯಾರ್ಯಾರಿಗೆ ಸಿಕ್ತು ಟಿಕೆಟ್? ಇಲ್ಲಿದೆ​​

Congress Candidates Second List: ಕಾಂಗ್ರೆಸ್​ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಎಐಸಿಸಿ ಬಿಡುಗಡೆ ಮಾಡಿದೆ. 2ನೇ ಪಟ್ಟಿಯಲ್ಲಿ ಯಾರಿಗೆಲ್ಲ ಟಿಕೆಟ್​ ಸಿಕ್ಕಿದೆ ಎನ್ನುವುದು ಈ ಕೆಳಗಿನಂತಿದೆ.

Karnataka Assembly Elections 2023: ಕಾಂಗ್ರೆಸ್​ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ: ಯಾರ್ಯಾರಿಗೆ ಸಿಕ್ತು ಟಿಕೆಟ್? ಇಲ್ಲಿದೆ​​
ಬಿಜೆಪಿ ಲಿಂಗಾಯತ ವಿರೋಧಿ ಎಂದು ಬಿಂಬಿಸುವ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದೆ.
Follow us
|

Updated on:Apr 06, 2023 | 3:32 PM

ಬೆಂಗಳೂರು:  ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಕಾಂಗ್ರೆಸ್​ ಅಭ್ಯರ್ಥಿಗಳ ಎಡನೇ ಪಟ್ಟಿ ಪ್ರಕಟವಾಗಿದೆ. ಇಂದು(ಏಪ್ರಿಲ್ 06) ಎಐಸಿಸಿ 42 ಕ್ಷೇತ್ರಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.  ವಿಶೇಷ ಅಂದ್ರೆ ಎಡರನೇ ಪಟ್ಟಿಯಲ್ಲಿ ವಲಸಿಗರಿಗೆ ಕಾಂಗ್ರೆಸ್ ಹೈಕಮಾಮಡ್​ ಮಣೆ ಹಾಕಿದೆ.  ಆದ್ರೆ, ಕೋಲಾರ ಟಿಕೆಟ್ ಯಾರಿಗೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿ ಉಳಿದಿದೆ. ಪ್ರಮುಖವಾಗಿ ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರ್ಪಡೆಯಾದ್ದ ಮಾಜಿ ಶಾಸಕ ವೈ.ಎಸ್​.ವಿ.ದತ್ತಾ ಅವರಿಗೆ ಕೊಕ್ ನೀಡಲಾಗಿದೆ. ದತ್ತಾ ಅವರ ಬದಲಿಗೆ ಆನಂದ್ ಕೆ.ಎಸ್ ಅವರಿಗೆ ಟಿಕೆಟ್​ ನೀಡಲಾಗಿದೆ. ಇದು ಅಚ್ಚರಿಗೆ ಕಾರಣವಾಗಿದೆ.

ಕಳೆದ ಮಾರ್ಚ್​ 25ರಂದು ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್​ ಬಿಡುಗಡೆ ಮಾಡಿತ್ತು. ಬಾಕಿ ಇದ್ದ 100 ಕ್ಷೇತ್ರಗಳ ಪೈಕಿ 2ನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನು 58 ಅಭ್ಯರ್ಥಿಗಳ ಪಟ್ಟಿ ಬಾಕಿ ಉಳಿಸಿಕೊಂಡಿದೆ.

ಇತ್ತೀಚೆಗೆ ಜೆಡಿಎಸ್ ಹಾಗೂ ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಯಾದ ಕೆಲವರಿಗೆ ಎರಡನೇ ಪಟ್ಟಿಯಲ್ಲಿ ಟಿಕೆಟ್​ ಘೋಷಣೆ ಮಾಡಲಾಗಿದೆ. ಮುಖ್ಯವಾಗಿ ಇತ್ತೀಚೆಗಷ್ಟೇ ಕೂಡ್ಲಿಗಿ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎನ್​.ವೈ ಗೋಪಾಲಕೃಷ್ಣ ಅವರಿಗೆ ಮೊಣಕಾಲ್ಮೂರು ಕ್ಷೇತ್ರದ ಟಿಕೆಟ್​ ನೀಡಲಾಗಿದೆ. ಇನ್ನು ಸಿದ್ದರಾಮಯ್ಯನವರ ಆಪ್ತ ಹೆಚ್​ ಆಂಜನೇಯ್ಯ ಅವರಿಗೆ ಹೊಳಲ್ಕೇರೆ ಟಿಕೆಟ್​​ ಸಿಕ್ಕಿದೆ.

42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು

  • ನಾಗಠಾಣ ಕ್ಷೇತ್ರ(ಎಸ್​ಸಿ) – ವಿಠ್ಠಲ್​ ಕಟಕದೊಂಡ
  • ವಿಜಯಪುರ ಕ್ಷೇತ್ರ – ಅಬ್ದುಲ್​​​ ಹಮೀದ್​ ಖಾಜಾಸಾಹೇಬ್​​
  •  ಬಾಗಲಕೋಟೆ ವಿಧಾನಸಭಾ ಕ್ಷೇತ್ರ – ಹೆಚ್​.ವೈ.ಮೇಟಿ
  • ಬಾದಾಮಿ ಕ್ಷೇತ್ರ- ಭೀಮ್​ಸೇನ್ ಚಿಮ್ಮನಕಟ್ಟಿ
  • ಬೀಳಗಿ ಕ್ಷೇತ್ರ -ಜೆ.ಟಿ.ಪಾಟೀಲ್
  •  ಮುಧೋಳ ಕ್ಷೇತ್ರ(ಎಸ್​ಸಿ) – ರಾಮಪ್ಪ ಬಾಳಪ್ಪ ತಿಮ್ಮಾಪುರ
  •  ಸವದತ್ತಿ ಕ್ಷೇತ್ರ- ವಿಶ್ವಾಸ್​ ವಸಂತ್ ವೈದ್ಯ
  • ಕಿತ್ತೂರು ಕ್ಷೇತ್ರ-ಬಾಬಾಸಾಹೇಬ್​ ಬಿ.ಪಾಟೀಲ್​
  •  ಗೋಕಾಕ್ ಕ್ಷೇತ್ರ – ಡಾ.ಮಹಾಂತೇಶ್​ ಕಡಾಡಿ
  •  ನಿಪ್ಪಾಣಿ ಕ್ಷೇತ್ರ-ಕಾಕಾ ಸಾಹೇಬ್ ಪಾಟೀಲ್
  • ಅಫಜಲಪುರ -ಎಂ.ವೈ. ಪಾಟೀಲ್
  • ಯಾದಗಿರಿ -ಚನ್ನಾರೆಡ್ಡಿ ಪಾಟೀಲ್ ತುನ್ನೂರ್
  • ಗುರುಮಿಠಕಲ್ ಕ್ಷೇತ್ರ -ಬಾಬುರಾವ್ ಚಿಂಚನಸೂರ್
  • ಗುಲಬರ್ಗಾ ದಕ್ಷಿಣ ಕ್ಷೇತ್ರ -ಅಲ್ಲಮಪ್ರಭು ಪಾಟೀಲ್
  • ಬಸವಕಲ್ಯಾಣ ಕ್ಷೇತ್ರ -ವಿಜಯ ಧರ್ಮಸಿಂಗ್
  • ಗಂಗಾವತಿ ಕ್ಷೇತ್ರ -ಇಕ್ಬಾಲ್ ಅನ್ಸಾರಿ
  • ನರಗುಂದ ಕ್ಷೇತ್ರ -ಬಿ.ಆರ್​.ಯಾವಗಲ್
  • ಧಾರವಾಡ ಕ್ಷೇತ್ರ -ವಿನಯ್ ಕುಲಕರ್ಣಿ
  • ಕಲಘಟಗಿ ಕ್ಷೇತ್ರ -ಸಂತೋಷ್ ಲಾಡ್
  • ಶಿರಸಿ ಕ್ಷೇತ್ರ -ಭೀಮಣ್ಣ ನಾಯಕ್
  • ಕೊಳ್ಳೇಗಾಲ ಕ್ಷೇತ್ರ -ಎ.ಆರ್‌.ಕೃಷ್ಣಮೂರ್ತಿ
  • ಚಾಮುಂಡೇಶ್ವರಿ ಕ್ಷೇತ್ರ -ಸಿದ್ದೇಗೌಡ
  • ಮಡಿಕೇರಿ ಕ್ಷೇತ್ರ -ಡಾ.ಮಂಥರ್ ಗೌಡ
  •  ಬೇಲೂರು-ಬಿ. ಶಿವರಾಂ
  • ಕೃಷ್ಣರಾಜ ಪೇಟೆ ಕ್ಷೇತ್ರ -ಬಿ.ಎಸ್. ದೇವರಾಜ್
  • ಮಂಡ್ಯ ಕ್ಷೇತ್ರ -ಪಿ. ರವಿಕುಮಾರ್
  • ಮೇಲುಕೋಟೆ ಕ್ಷೇತ್ರ -ದರ್ಶನ್ ಪುಟ್ಟಣ್ಣಯ್ಯ
  • ಪದ್ಮನಾಭನಗರ ಕ್ಷೇತ್ರ -ವಿ.ರಘುನಾಥ್ ನಾಯ್ಡು
  • ಮಹಾಲಕ್ಷ್ಮೀ ಲೇಔಟ್ ಕ್ಷೇತ್ರ -ಕೇಶವಮೂರ್ತಿ
  • ಯಶವಂತಪುರ ಕ್ಷೇತ್ರ -ಎಸ್​.ಬಾಲರಾಜಗೌಡ
  • ಯಲಹಂಕ ಕ್ಷೇತ್ರ -ಕೇಶವ ರಾಜಣ್ಣ.ಬಿ
  • ಗುಬ್ಬಿ ಕ್ಷೇತ್ರ -ಎಸ್​.ಆರ್​.ಶ್ರೀನಿವಾಸ್
  • ತುಮಕೂರು ನಗರ ಕ್ಷೇತ್ರ -ಇಕ್ಬಾಲ್​ ಅಹ್ಮದ್
  • ಕಡೂರು ಕ್ಷೇತ್ರ -ಆನಂದ್ ಕೆ.ಎಸ್
  • ಉಡುಪಿ ಕ್ಷೇತ್ರ -ಪ್ರಸಾದ್ ರಾಜ್​ ಕಂಚನ್
  • ತೀರ್ಥಹಳ್ಳಿ ಕ್ಷೇತ್ರ -ಕಿಮ್ಮನೆ ರತ್ನಾಕರ್
  • ಚನ್ನಗಿರಿ ಕ್ಷೇತ್ರ-ಬಸವರಾಜು.ವಿ

Published On - 11:05 am, Thu, 6 April 23