ಬಾಗಲಕೋಟೆ ಲೋಕಸಭಾ ಚುನಾವಣೆ 2024 ಫಲಿತಾಂಶ: ಐದನೇ ಬಾರಿ ಗೆದ್ದು ದಾಖಲೆ ನಿರ್ಮಿಸಿದ ಗದ್ದಿಗೌಡರ್​

Bagalkot Lok Sabha Election Results 2024 Live Counting Updates: ಲೋಕಸಭಾ ಚುನಾವಣೆ-2024 ಫಲಿತಾಂಶ ಪ್ರಕಟವಾಗಿದೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಪಿಸಿ ಗದ್ದಿಗೌಡರ್ ಅವರು ಗೆದ್ದಿದ್ದಾರೆ. ಕಾಂಗ್ರೆಸ್​ ನಿಂದ ಸಚಿವ ಶಿವಾನಂದ ಪಾಟೀಲ್ ಪುತ್ರಿ, ಸಂಯುಕ್ತ ಪಾಟೀಲ್​​ ಅವರು ಸೋತಿದ್ದಾರೆ.

ಬಾಗಲಕೋಟೆ ಲೋಕಸಭಾ ಚುನಾವಣೆ 2024 ಫಲಿತಾಂಶ: ಐದನೇ ಬಾರಿ ಗೆದ್ದು ದಾಖಲೆ ನಿರ್ಮಿಸಿದ ಗದ್ದಿಗೌಡರ್​
ಪಿಸಿ ಗದ್ದಿಗೌಡರ್, ಸಂಯಕ್ತಾ ಪಾಟೀಲ್​
Follow us
|

Updated on:Jun 04, 2024 | 3:15 PM

ಬಾಗಲಕೋಟೆ, ಜೂನ್​ 4: ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ (Bagalkot Lok Sabha Constituency) ಬಿಜೆಪಿ (BJP) ಈ ಬಾರಿಯೂ ಕೂಡ ಪಿಸಿ ಗದ್ದಿಗೌಡರ್ (PC Gaddigoudar)​ ಅವರು ಗೆಲುವಿನ ನಗೆ ಬೀರಿದ್ದಾರೆ. ಸತತ ನಾಲ್ಕು ಬಾರಿ ಗೆದ್ದಿದ್ದ ಪಿಸಿ ಗದ್ದಿಗೌಡರ್​ ಅವರು ಐದನೇ ಬಾರಿಗೆ ವಿಜಯಶಾಲಿಯಾಗಿ ದಾಖಲೆ ನಿರ್ಮಿಸಿದ್ದಾರೆ . ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಈ ಚುನಾವಣೆಯಲ್ಲಿ ಸಚಿವ ಶಿವಾನಂದ ಪಾಟೀಲ್ ಪುತ್ರಿ,​ ಯುವ ಮುಖ ಸಂಯಕ್ತಾ ಪಾಟೀಲ್​ (Samyukta Shivanand Patil) ಅವರನ್ನು ಅಖಾಡಕ್ಕಿಳಿಸಿತ್ತು. ಆದರೆ ಸಂಯುಕ್ತ ಪಾಟೀಲ್​ ಅವರಿಗೆ ಗಜಕೇಸರಿ ಯೋಗ ಕೈ ಹಿಡಿದಿಲ್ಲ, ಸೋಲುಂಡಿದ್ದಾರೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18,06,183 ಮತದಾರರಿದ್ದಾರೆ. ಇದರಲ್ಲಿ 13,12,319 ಮತದಾರರು ಮತ ಚಲಾಯಿಸಿದ್ದಾರೆ. ಒಟ್ಟು ಶೇ 72.66 ರಷ್ಟು ಮತದಾನವಾಗಿದೆ.

ಪಿಸಿ ಗದ್ದಿಗೌಡರ: ಮತ ಅಂತರಗಳಿಂದ ಮುನ್ನಡೆ

ಸಂಯುಕ್ತ ಪಾಟೀಲ್​: 

ಪಿಸಿ ಗದ್ದಿಗೌಡರ ಕಳೆದ ಒಂದು ದಶಕದಿಂದ ಬಾಗಲೋಟೆ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಪಿಸಿ ಗದ್ದಿಗೌಡರ್​ ಅವರು 6,64,638 ಮತಗಳನ್ನು ಪಡೆದಿದ್ದರು. ಇನ್ನು ಇವರ ವಿರುದ್ಧ ನಿಂತಿದ್ದ ವೀಣಾ ಕಾಶಪ್ಪನವರ್​ 4,96,451 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ವೀಣಾ ಕಾಶಪ್ಪನವರ್ ಅವರು ಪಿಸಿ ಗದ್ದಿಗೌಡರ್ ಅವರ ಎದುರು ಪರಾಭವಗೊಂಡಿದ್ದರು.

2014ರ ಲೋಕಸಭಾ ಚುನಾವಣೆಯಲ್ಲಿ ಪಿಸಿ ಗದ್ದಿಗೌಡರ್ ಅವರು ವೀಣಾ ಕಾಶಪ್ಪನವರ್​ ಅವರ ವಿರುದ್ಧ ಒಂದು ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈ ಚುನಾವಣೆಯಲ್ಲಿ ಪಿಸಿ ಗದ್ದಿಗೌಡರ್​ 5,71,548 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್​ನ ವೀಣಾ ಕಾಶಪ್ಪನವರ್​ 4,54,988 ಮತಗಳನ್ನು ಪಡೆದಿದ್ದರು.

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್​ ಹಂಚಿಕೆ ಕಾಂಗ್ರೆಸ್​ಗೆ ಕಗ್ಗಂಟಾಗಿತ್ತು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​ ಅವರ ಪತ್ನಿ ವೀಣಾ ಕಾಶಪ್ಪನವರ್​ ಅವರು ಕೂಡ ಟಿಕೆಟ್​ಗಾಗಿ ಸಾಕಷ್ಟು ಪ್ರಯತ್ನ ಪಟ್ಟರೂ ಸಿಗಲಿಲ್ಲ.

ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:28 am, Tue, 4 June 24

ತಾಜಾ ಸುದ್ದಿ
Daily Devotional: ವಾಹನ ಯೋಗ ಹೇಗೆ ಪಡೆದುಕೊಳ್ಳುವುದು? ಈ ವಿಡಿಯೋ ನೋಡಿ
Daily Devotional: ವಾಹನ ಯೋಗ ಹೇಗೆ ಪಡೆದುಕೊಳ್ಳುವುದು? ಈ ವಿಡಿಯೋ ನೋಡಿ
ರೆಡ್ಮಿ Note 13 Pro ಸ್ಮಾರ್ಟ್​ಫೋನ್ ಈಗ ಹೊಸ ಬಣ್ಣದಲ್ಲಿ ಲಭ್ಯ
ರೆಡ್ಮಿ Note 13 Pro ಸ್ಮಾರ್ಟ್​ಫೋನ್ ಈಗ ಹೊಸ ಬಣ್ಣದಲ್ಲಿ ಲಭ್ಯ
ಸಂಗಾತಿಯ ಜೊತೆಗಿನ‌ ಮನಸ್ತಾಪವು ಉದ್ಯೋಗದ ಸ್ಥಳದಲ್ಲಿ ಪ್ರತಿಫಲಿಸುವುದು
ಸಂಗಾತಿಯ ಜೊತೆಗಿನ‌ ಮನಸ್ತಾಪವು ಉದ್ಯೋಗದ ಸ್ಥಳದಲ್ಲಿ ಪ್ರತಿಫಲಿಸುವುದು
ನನ್ನ ವಿರುದ್ಧ ಸೋತಿದ್ದಕ್ಕೆ ಸೋಮಣ್ಣಗೆ ಮಂತ್ರಿಯಾಗುವ ಯೋಗ! ಸಿದ್ದರಾಮಯ್ಯ
ನನ್ನ ವಿರುದ್ಧ ಸೋತಿದ್ದಕ್ಕೆ ಸೋಮಣ್ಣಗೆ ಮಂತ್ರಿಯಾಗುವ ಯೋಗ! ಸಿದ್ದರಾಮಯ್ಯ
ಬೆಳಗಿನ ಕಾಮೆಂಟ್​ಗೆ ವ್ಯತಿರಿಕ್ತವಾಗಿ ಕುಮಾರಸ್ವಾಮಿ, ಸಿಎಂ ಸಭೆಗೆ ಹಾಜರು!
ಬೆಳಗಿನ ಕಾಮೆಂಟ್​ಗೆ ವ್ಯತಿರಿಕ್ತವಾಗಿ ಕುಮಾರಸ್ವಾಮಿ, ಸಿಎಂ ಸಭೆಗೆ ಹಾಜರು!
ಸಭೆಗೆ ಬಂದ ಕುಮಾರಸ್ವಾಮಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ: ವಿಡಿಯೋ ನೋಡಿ
ಸಭೆಗೆ ಬಂದ ಕುಮಾರಸ್ವಾಮಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ: ವಿಡಿಯೋ ನೋಡಿ
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?