ಬಿಜೆಪಿಗೆ ಬಹುಮತದ ಕೊರತೆ; ಕಿಂಗ್​ಮೇಕರ್ ಆದ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು!

|

Updated on: Jun 04, 2024 | 9:51 PM

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ 400 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿತ್ತು. ಆದರೆ, 300ರ ಗಡಿಯನ್ನು ಕೂಡ ದಾಟಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಬಳಿ ಮ್ಯಾಜಿಕ್ ನಂಬರ್ ಇಲ್ಲದ ಹಿನ್ನೆಲೆಯಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಕಿಂಗ್ ಮೇಕರ್ ಆಗುವ ಸಾಧ್ಯತೆಯಿದೆ.

ಬಿಜೆಪಿಗೆ ಬಹುಮತದ ಕೊರತೆ; ಕಿಂಗ್​ಮೇಕರ್ ಆದ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು!
ನಿತೀಶ್ ಕುಮಾರ್
Follow us on

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ (Lok Sabha Polls 2024) ಬಿಜೆಪಿಗೆ ಬಹುಮತದ ಕೊರತೆ ಎದುರಾಗುತ್ತಿದ್ದಂತೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಹಾಗೂ ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು (Chandrababu Naidu) ಕಿಂಗ್ ಮೇಕರ್ ಆಗಿದ್ದಾರೆ. ಈ ನಡುವೆ ನಿತೀಶ್ ಕುಮಾರ್ ಹೆಸರು ಕೂಡ ಮತ್ತೆ ಪ್ರಧಾನಿ ರೇಸ್​ನಲ್ಲಿ ಕೇಳಿಬರುತ್ತಿದೆ. ನಿತೀಶ್ ಕುಮಾರ್ ಅವರಿಗಿಂತ ಉತ್ತಮ ಪ್ರಧಾನಿ ಯಾರು? ನಿತೀಶ್ ಕುಮಾರ್ ಅವರು ಸಮಾಜ ಮತ್ತು ದೇಶವನ್ನು ಅರ್ಥಮಾಡಿಕೊಳ್ಳುವ ಅನುಭವಿ ರಾಜಕಾರಣಿ. ಅವರು ಎಲ್ಲಾ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಗೌರವಿಸುತ್ತಾರೆ. ನಾವು ಮುಂದೆಯೂ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುತ್ತೇವೆ. ಆದರೆ, ಮೊದಲು ಮತ್ತು ಇಂದು ಜನರು ನಿತೀಶ್ ಕುಮಾರ್ ಅವರೇ ಪ್ರಧಾನಿಯಾಗಬೇಕೆಂದು ಬಯಸಿದ್ದರು. ಇಂದಿನ ಫಲಿತಾಂಶದ ನಂತರ ಜನರ ನಿರೀಕ್ಷೆ ಹೆಚ್ಚಿದೆ’ ಎಂದಿದ್ದಾರೆ.

ಜೆಡಿಯು ಇಂಡಿಯ ಬಣಕ್ಕೆ ಬೆಂಬಲ ನೀಡದೆ ಎನ್​ಡಿಎಗೆ ತನ್ನ ಬೆಂಬಲವನ್ನು ಮುಂದುವರೆಸಲು ನಿರ್ಧರಿಸಿದೆ. ಜೆಡಿಯು ತಾನು ಪ್ರಧಾನಿ ಮೋದಿಯವರನ್ನು ಮಾತ್ರ ಬೆಂಬಲಿಸುವುದಾಗಿ ಸ್ಪಷ್ಟಪಡಿಸಿದೆ. ಜೆಡಿಯು ಪಕ್ಷ ಬದಲಾಯಿಸುವುದಿಲ್ಲ ಮತ್ತು ವಿರೋಧ ಪಕ್ಷದ ನಾಯಕರೊಂದಿಗೆ ಮಾತನಾಡುವುದಿಲ್ಲ ಎಂದು ಮುಖ್ಯ ವಕ್ತಾರ ಕೆಸಿ ತ್ಯಾಗಿ ಹೇಳಿದ್ದಾರೆ. ಹಾಗೇ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಎನ್‌ಡಿಎ ಸಂಚಾಲಕರಾಗುವ ಸಾಧ್ಯತೆ ಇದೆ. 1999ರಲ್ಲಿ ಅವರು ಎನ್​ಡಿಎ ಸರ್ಕಾರ ರಚನೆಯಲ್ಲಿ ಬಹಳ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು.

ಇದನ್ನೂ ಓದಿ: ಲಕ್ಷ್ಮಣ್ ವಿರುದ್ಧ ಗೆದ್ದು ಬೀಗಿದ ಯದುವೀರ್ ಒಡೆಯರ್​

ಆದರೆ, ಇದುವರೆಗೂ ಜೆಡಿಯು ಮತ್ತು ಟಿಡಿಪಿ ಎನ್​ಡಿಎಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ನೀಡಿಲ್ಲ. ಇದೀಗ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಎನ್ ಚಂದ್ರಬಾಬು ನಾಯ್ಡು ಕಿಂಗ್ ಮೇಕರ್ ಗಳಾಗಿ ಹೊರಹೊಮ್ಮಿದ್ದಾರೆ. ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಳೆ ಇತರ ಇಂಡಿಯ ಬಣದ ಮಿತ್ರಪಕ್ಷಗಳೊಂದಿಗೆ ಸಭೆ ನಡೆಸಿ, ಮುಂದಿನ ನಡೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನೂತನ ಸಚಿವ ಸಂಪುಟದ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ: Kangana Ranaut: ಮೊದಲ ಚುನಾವಣೆಯಲ್ಲೇ ಭರ್ಜರಿ ಜಯ ಕಂಡ ಕಂಗನಾ ರಣಾವತ್; ಮೋದಿ ಹೆಸರಿಂದಲೇ ಈ ಗೆಲುವು ಎಂದ ನಟಿ

ಸದ್ಯಕ್ಕೆ ಇಂಡಿಯ ಬಣದ ಮಿತ್ರಪಕ್ಷಗಳು ಒಟ್ಟಾಗಿ 234 ಸ್ಥಾನಗಳನ್ನು ಗೆದ್ದಿವೆ. ಇದಕ್ಕೆ ಬಹುಮತಕ್ಕೆ 39 ಸ್ಥಾನಗಳು ಕಡಿಮೆ ಇವೆ. ಬಿಜೆಪಿ ನೇತೃತ್ವದ ಎನ್‌ಡಿಎ 290 ಸ್ಥಾನಗಳನ್ನು ಪಡೆದಿದೆ. ಬಿಜೆಪಿ ತನ್ನ ಸ್ವಂತ ಬಲದಿಂದ 239 ಸ್ಥಾನ ಗಳಿಸಿದೆ. ಅದಕ್ಕೆ ಮ್ಯಾಜಿಕ್ ಫಿಗರ್‌ಗಿಂತ 33 ಸ್ಥಾನಗಳು ಕಡಿಮೆ ಇವೆ. 19 ಸೇರದ ಸಂಸದರ ಪೈಕಿ ನಾಲ್ವರು ವೈಎಸ್‌ಆರ್‌ಸಿಪಿ ಮತ್ತು ಪಕ್ಷೇತರರು. ಆದ್ದರಿಂದ, ಇಂಡಿಯ ಬಣವು ಅಧಿಕಾರವನ್ನು ಪಡೆಯಲು ಬಯಸಿದರೆ, ಅವರಿಗೆ ಜೆಡಿಯು, ಟಿಡಿಪಿ ಮತ್ತು ಕೆಲವು ಸ್ವತಂತ್ರರ ಬೆಂಬಲದ ಅಗತ್ಯವಿದೆ. ಮತ್ತೊಂದೆಡೆ, ಬಿಜೆಪಿಯು ಅಧಿಕಾರದಲ್ಲಿ ಉಳಿಯಬೇಕಾದರೆ ಅವರನ್ನು ಉಳಿಸಿಕೊಳ್ಳಲೇಬೇಕಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ