AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜತ್ ದತ್ ಕಾಲ್​ಶೀಟ್​ಗಾಗಿ ಕಾದು ಖಿನ್ನತೆಗೆ ಒಳಗಾಗಿದ್ದ ನಿರ್ಮಾಪಕ  

ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರು ತಮ್ಮ 'ನಿದಾನ್' ಚಿತ್ರಕ್ಕೆ ಸಂಜಯ್ ದತ್ ಅವರನ್ನು ಅತಿಥಿ ಪಾತ್ರಕ್ಕೆ ಕರೆಸಿಕೊಳ್ಳಲು ಹೆಣಗಾಡಿದ್ದನ್ನು ವಿವರಿಸಿದ್ದಾರೆ. ಸಂಜಯ್ ದತ್ ಅವರ ಕಾಲ್ಶೀಟ್ ಪಡೆಯುವುದು ಅತ್ಯಂತ ಕಷ್ಟಕರವಾಗಿತ್ತು. ಕೊನೆಗೆ ಸಿಕ್ಕ ಅವಕಾಶದಲ್ಲೂ, 8 ಗಂಟೆ ತಡವಾಗಿ ಬಂದು ಕೇವಲ ಕೆಲವೇ ಗಂಟೆಗಳ ಕಾಲ ಮಾತ್ರ ಶೂಟಿಂಗ್ ಮಾಡಿದರು. ಈ ಘಟನೆಯನ್ನು ಮಹೇಶ್ ಮಂಜ್ರೇಕರ್ ಅವರು ತಮ್ಮ ಅನುಭವವಾಗಿ ಹಂಚಿಕೊಂಡಿದ್ದಾರೆ.

ಸಂಜತ್ ದತ್ ಕಾಲ್​ಶೀಟ್​ಗಾಗಿ ಕಾದು ಖಿನ್ನತೆಗೆ ಒಳಗಾಗಿದ್ದ ನಿರ್ಮಾಪಕ  
ಸಂಜಯ್ ದತ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Feb 27, 2025 | 8:01 AM

Share

ನಟ ಸಂಜಯ್ ದತ್ ಅವರು ಮೊದಲು ಸಾಕಷ್ಟು ಬೇಡಿಕೆ ಹೊಂದಿರೋ ನಟ ಆಗಿದ್ದರು. ಅವರ ಕಾಲ್​ಶೀಟ್ ಸುಲಭದಲ್ಲಿ ಸಿಗುತ್ತಿರಲಿಲ್ಲ. ಆ ಬಳಿಕ ಅವರ ಬಗ್ಗೆ ಇರೋ ಚಿತ್ರಣ ಬದಲಾಯಿತು ಎಂಬುದು ಬೇರೆ ವಿಚಾರ. ಅದೇನೇ ಇರಲಿ 2000ನೇ ಇಸವಿ ಸಂದರ್ಭದಲ್ಲಿ ನಿರ್ದೇಶಕರೊಬ್ಬರು ಸಂಜಯ್ ದತ್ ಅವರನ್ನು ಸಿನಿಮಾದಲ್ಲಿ ಅತಿಥಿ ಪಾತ್ರಕ್ಕೆ ಕರೆಸೋ ಪ್ಲ್ಯಾನ್ ಮಾಡಿದ್ದರು. ಅವರನ್ನು ಕರೆತರಲು ಸಾಹಸಪಟ್ಟು ಖಿನ್ನತೆಗೆ ಒಳಗಾಗಬೇಕಾದ ಪರಿಸ್ಥಿತಿ ಎದುರಾಗಿತ್ತು.

ಅವರು ಬೇರಾರೂ ಅಲ್ಲ ಬಾಲಿವುಡ್​ನ ಹಿರಿಯ ನಿರ್ದೇಶಕ ಮಹೇಶ್ ಮಂಜ್ರೇಕರ್. 2000ನೇ ಇಸ್ವಿಯಲ್ಲಿ ಅವರು ನಿರ್ದೇಶನ ಮಾಡಿದ ‘ನಿದಾನ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ಸಂಜಯ್ ದತ್ ಅವರ ಕಾಲ್​​ಶೀಟ್ ಪಡೆಯಲು ಪ್ರಯತ್ನಿಸಿ ಮಹೇಶ್ ಮಂಜ್ರೇಕರ್​ಗೆ ಸುಸ್ತಾಗಿತ್ತು. ಕೊನೆಗೂ ಸಂಜಯ್ ದತ್ ಶೂಟ್​​ಗೇನೋ ಬಂದರು. ಆದರೆ, 8 ಗಂಟೆ ಆಗಲೇ ತಡವಾಗಿತ್ತು.

‘ಸಂಜಯ್ ದತ್ ನನ್ನ ಫೇವರಿಟ್ ಹೀರೋ. ಅವರಂತೆ ಉದ್ದ ಕೂದಲು ಬಿಡಲು ನನಗೆ ಇಷ್ಟ ಆಗಿತ್ತು. ನಾನು ನಿದಾನ್ ಹೆಸರಿನ ಸಿನಿಮಾ ಮಾಡುತ್ತಿದ್ದೆ. ಹುಡುಗಿಯೊಬ್ಬಳಿಗೆ ಎಚ್​​ಐವಿ ತಗಲೋ ಕಥೆ ಇದು. ಅವಳು ಸಂಜಯ್​ ದತ್​ನ ದೊಡ್ಡ ಅಭಿಮಾನಿ ಎಂಬುದು ಚಿತ್ರದ ಕಥೆ. ಹೀಗಾಗಿ, ಅವರು ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಬೇಕಿತ್ತು’ ಎಂದಿದ್ದಾರೆ ಮಹೇಶ್.

ಸಂಜಯ್ ದತ್ ಮ್ಯಾನೇಜರ್ ಬಳಿ ಮಾತನಾಡಿದೆ. ಅವರ ಬಳಿ ಡೇಟ್ಸ್ ಇಲ್ಲ ಎಂದು ಹೇಳಿದರು. ಆಗ ಜಾಕಿ ಶ್ರಾಫ್ ಹಾಗೂ ಸಂಜಯ್ ದತ್ ಒಟ್ಟಾಗಿ ನಟಿಸುತ್ತಿದ್ದಾರೆ ಅನ್ನೋದು ಗೊತ್ತಾಯಿತು. ಅವರ ಬಳಿ ಭೇಟಿಗೆ ಅವಕಾಶ ಕೇಳಿದೆ. ಒಂದು ತಿಂಗಳು ಬಿಟ್ಟು ಸಂಜಯ್ ದತ್​ನ ಭೇಟಿ ಮಾಡೋ ಅವಕಾಶ ಸಿಕ್ಕಿತು. ಅದಕ್ಕೂ ಮೊದಲು ಒಮ್ಮೆ ಸಂಜಯ್​ನ ಭೇಟಿ ಮಾಡಿದ್ದೆ. ಆಗ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುವ ಭರವಸೆ ನೀಡಿದ್ದರು. ಆದರೆ, ನಂತರ ಅವರು ನನ್ನ ಗುರುತು ಹಿಡಿಯಲೇ ಇಲ್ಲ’ ಎಂದಿದ್ದರು ಮಹೇಶ್.

ಇದನ್ನೂ ಓದಿ: ಹಾಲಿವುಡ್ ಸಿನಿಮಾದಲ್ಲಿ ಸಲ್ಮಾನ್ ಖಾನ್, ಸಂಜಯ್ ದತ್; ಸಿಕ್ತು ಬಿಗ್ ನ್ಯೂಸ್

‘ನಾನು ಅವರ ಬಳಿ ಡೇಟ್ ಕೇಳಿದಾಗ ಅವರು ಮುಂದಕ್ಕೆ ಹಾಕುತ್ತಲೇ ಬರುತ್ತಿದ್ದರು. ನನಗೆ ಒಂದು ಹಂತದಲ್ಲಿ ಖಿನ್ನತೆ ಉಂಟಾಯಿತು. ಒಂದು ದಿನ ಅವರು ಸಿನಿಮಾ ಸೆಟ್​ಗೆ ಬರೋದಾಗಿ ಹೇಳಿದರು. ಆದರೆ, ಒಂದೇ ದಿನ ಎಂದು ಹೇಳಿದರು. ನಾವಿಲ್ಲಿ 3 ದಿನಕ್ಕಾಗುವಷ್ಟು ಪ್ಲ್ಯಾನ್ ಮಾಡಿಕೊಂಡಿದ್ದೆವು. ಮಧ್ಯಾಹ್ನ ಬರುತ್ತೇನೆ ಎಂದವರು ರಾತ್ರಿ 10 ಗಂಟೆಗೆ ಬಂದರು. ಮಧ್ಯರಾತ್ರಿವರೆಗೆ ಮಾತ್ರ ಇರೋದಾಗಿ ಹೇಳಿದರು. 2 ಗಂಟೆಯಲ್ಲಿ ಶೂಟ್ ಸಾಧ್ಯ ಇರಲಿಲ್ಲ.  ನಂತರ ಮುಂಜಾನೆ 4 ಗಂಟೆವರೆಗೆ ಶೂಟ್ ಮಾಡಿದೆವು’ ಎಂದಿದ್ದರು ಮಹೇಶ್.  ನಂತರ ‘ವಾಸ್ತವ್’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದರು. ಈ ಸಿನಿಮಾ ಯಶಸ್ಸು ಕಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ