AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಳೆಯಲ್ಲಿ ನೆನೆಯುತ್ತ ಡ್ಯಾನ್ಸ್​ ಮಾಡಲ್ಲ’ ಎಂದು ಅಸಲಿ ಕಾರಣ ವಿವರಿಸಿದ ನಟಿ ನಿಧಿ

ಮಾಡಿರುವುದು ಕೆಲವೇ ಸಿನಿಮಾಗಳಾದರೂ ನಿಧಿ ಅಗರ್​ವಾಲ್​ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ಕೆಲವು ಬಾಲಿವುಡ್ ಚಿತ್ರತಂಡಗಳ ಜೊತೆಗೂ ಅವರು ಮಾತುಕತೆ ಮಾಡುತ್ತಿದ್ದಾರೆ.

‘ಮಳೆಯಲ್ಲಿ ನೆನೆಯುತ್ತ ಡ್ಯಾನ್ಸ್​ ಮಾಡಲ್ಲ’ ಎಂದು ಅಸಲಿ ಕಾರಣ ವಿವರಿಸಿದ ನಟಿ ನಿಧಿ
ನಿಧಿ ಅಗರ್​ವಾಲ್​
TV9 Web
| Edited By: |

Updated on: Jul 25, 2021 | 4:50 PM

Share

ಪಾತ್ರ ಚೆನ್ನಾಗಿ ಮೂಡಿಬರಲಿ ಎಂದು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ ಸಿನಿಮಾ ಕಲಾವಿದರು. ಆದರೆ ಕೆಲವರಿಗೆ ಕೆಲವು ನಿರ್ದಿಷ್ಟ ದೃಶ್ಯಗಳ ಬಗ್ಗೆ ಹಿಂಜರಿಕೆ ಇರುತ್ತದೆ. ಕೆಲವರು ಕಿಸ್ಸಿಂಗ್​ ದೃಶ್ಯಕ್ಕೆ ನೋ ಎನ್ನುತ್ತಾರೆ. ಬೆಡ್​ ರೂಂ ಸೀನ್​ ಇದ್ದರೆ ಕೆಲವು ನಟಿಯರು ಖಂಡಿತಾ ಒಪ್ಪಿಕೊಳ್ಳುವುದಿಲ್ಲ. ಅದೇ ರೀತಿ ಗ್ಲಾಮರಸ್​ ಬೆಡಗಿ ನಿಧಿ ಅಗರ್​ವಾಲ್​ ಅವರು ಕೆಲವೊಂದು ಇತಿಮಿತಿಗಳನ್ನು ಹಾಕಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಮಳೆಯಲ್ಲಿ ನೆನೆಯುವ ಸಾಂಗ್​ನಲ್ಲಿ ಡ್ಯಾನ್ಸ್​ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮಳೆ ಸಾಂಗ್​ಗಳು ಚಿತ್ರರಂಗದಲ್ಲಿ ತುಂಬಾ ಫೇಮಸ್​. ತುಂಬ ಹಿಂದಿನ ಕಾಲದಿಂದಲೂ ಅಂಥ ಕೆಲವು ಸಾಂಗ್​ಗಳು ಸೂಪರ್​ ಹಿಟ್​ ಆಗಿವೆ. ಈಗಲೂ ಕೂಡ ನಿರ್ದೇಶಕರು ಕೆಲವು ಸಿನಿಮಾಗಳಲ್ಲಿ ಮಳೆ ಸಾಂಗ್​ಗೆ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ನಟಿ ನಿಧಿ ಅಗರ್​ವಾಲ್ ಅವರಿಗೆ ಆ ರೀತಿ ಹಾಡಿನಲ್ಲಿ ನರ್ತಿಸುವುದು ಎಂದರೆ ಅಲರ್ಜಿ. ತಮ್ಮ ಈ ನಿಲುವಿಗೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿಧಿ ಅಗರ್​ವಾಲ್​ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಮಳೆ ಹಾಡಿನಲ್ಲಿ ನರ್ತಿಸುವುದು ಅಷ್ಟು ಸುಲಭವಲ್ಲ. ಮಳೆಯಲ್ಲಿ ನೆನೆಯಬೇಕು. ಶಾಟ್ಸ್​ ನಡುವಿನ ಬ್ರೇಕ್​ನಲ್ಲಿ ಮೈ ಒಣಗಿಸಿಕೊಳ್ಳಬೇಕು. ಮತ್ತೆ ನೆನೆಯಬೇಕು. ಅದರಲ್ಲೂ ಮಳೆ ಸುರಿಯುತ್ತಿರುವಾಗ ಕಣ್ಣು ಬಿಟ್ಟುಕೊಂಡು ನಟಿಸುವುದು, ಡ್ಯಾನ್ಸ್​ ಮಾಡುವುದು ತುಂಬ ಕಷ್ಟ. ಅದೇ ಕಾರಣಕ್ಕಾಗಿ ನಾನು ಸದ್ಯಕ್ಕೆ ಮಳೆ ಸಾಂಗ್​ಗಳಲ್ಲಿ ನಟಿಸಲು ಒಪ್ಪಿಕೊಳ್ಳುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ಮಾಡಿರುವುದು ಕೆಲವೇ ಸಿನಿಮಾಗಳಾದರೂ ನಿಧಿ ಅಗರ್​ವಾಲ್​ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. 2019ರಲ್ಲಿ ತೆರೆಕಂಡ ಇಸ್ಮಾರ್ಟ್​ ಶಂಕರ್​ ಚಿತ್ರದಲ್ಲಿ ಅವರಿಗೆ ಭರ್ಜರಿ ಹಿಟ್ ಸಿಕ್ಕಿದೆ. ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಅವರು ಸಿನಿಪ್ರಿಯರಿಗೆ ಇಷ್ಟ ಆಗಿದ್ದಾರೆ. ಮಾಡೆಲ್​ ಕೂಡ ಆಗಿರುವ ಅವರು ಹಲವು ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದಾರೆ. ‘ಹರಿ ಹರ ವೀರ ಮಲ್ಲು’ ಸಿನಿಮಾದಲ್ಲಿ ಅವರು ‘ಪವರ್​ ಸ್ಟಾರ್​’ ಪವನ್​ ಕಲ್ಯಾಣ್​ ಜೊತೆ ನಟಿಸುತ್ತಿದ್ದಾರೆ. ಮಹೇಶ್​ ಬಾಬು ಸಂಬಂಧಿ ಅಶೋಕ್​ ಗಲ್ಲಾ ಅವರ ಚೊಚ್ಚಲ ಚಿತ್ರಕ್ಕೂ ನಿಧಿ ಹೀರೋಯಿನ್​. ಕೆಲವು ಬಾಲಿವುಡ್ ಚಿತ್ರತಂಡಗಳ ಜೊತೆಗೂ ಅವರು ಮಾತುಕತೆ ಮಾಡುತ್ತಿದ್ದಾರೆ.

ಇದನ್ನೂ ಓದಿ:

ಶಾರುಖ್​ ಪುತ್ರಿ ಸುಹಾನಾ ಖಾನ್​ ಹಾಟ್​ ಫೋಟೋಶೂಟ್ ವೈರಲ್​; ಅಪ್ಪನ ಕಮೆಂಟ್​ ಏನು?​

ದಕ್ಷಿಣ ಭಾರತದ ಈ ಖ್ಯಾತ ನಟಿಯರ ವಿದ್ಯಾರ್ಹತೆ ಏನು? ಇಲ್ಲಿದೆ ಮಾಹಿತಿ

ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ