AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಳೆಯಲ್ಲಿ ನೆನೆಯುತ್ತ ಡ್ಯಾನ್ಸ್​ ಮಾಡಲ್ಲ’ ಎಂದು ಅಸಲಿ ಕಾರಣ ವಿವರಿಸಿದ ನಟಿ ನಿಧಿ

ಮಾಡಿರುವುದು ಕೆಲವೇ ಸಿನಿಮಾಗಳಾದರೂ ನಿಧಿ ಅಗರ್​ವಾಲ್​ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ಕೆಲವು ಬಾಲಿವುಡ್ ಚಿತ್ರತಂಡಗಳ ಜೊತೆಗೂ ಅವರು ಮಾತುಕತೆ ಮಾಡುತ್ತಿದ್ದಾರೆ.

‘ಮಳೆಯಲ್ಲಿ ನೆನೆಯುತ್ತ ಡ್ಯಾನ್ಸ್​ ಮಾಡಲ್ಲ’ ಎಂದು ಅಸಲಿ ಕಾರಣ ವಿವರಿಸಿದ ನಟಿ ನಿಧಿ
ನಿಧಿ ಅಗರ್​ವಾಲ್​
TV9 Web
| Updated By: ಮದನ್​ ಕುಮಾರ್​|

Updated on: Jul 25, 2021 | 4:50 PM

Share

ಪಾತ್ರ ಚೆನ್ನಾಗಿ ಮೂಡಿಬರಲಿ ಎಂದು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ ಸಿನಿಮಾ ಕಲಾವಿದರು. ಆದರೆ ಕೆಲವರಿಗೆ ಕೆಲವು ನಿರ್ದಿಷ್ಟ ದೃಶ್ಯಗಳ ಬಗ್ಗೆ ಹಿಂಜರಿಕೆ ಇರುತ್ತದೆ. ಕೆಲವರು ಕಿಸ್ಸಿಂಗ್​ ದೃಶ್ಯಕ್ಕೆ ನೋ ಎನ್ನುತ್ತಾರೆ. ಬೆಡ್​ ರೂಂ ಸೀನ್​ ಇದ್ದರೆ ಕೆಲವು ನಟಿಯರು ಖಂಡಿತಾ ಒಪ್ಪಿಕೊಳ್ಳುವುದಿಲ್ಲ. ಅದೇ ರೀತಿ ಗ್ಲಾಮರಸ್​ ಬೆಡಗಿ ನಿಧಿ ಅಗರ್​ವಾಲ್​ ಅವರು ಕೆಲವೊಂದು ಇತಿಮಿತಿಗಳನ್ನು ಹಾಕಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಮಳೆಯಲ್ಲಿ ನೆನೆಯುವ ಸಾಂಗ್​ನಲ್ಲಿ ಡ್ಯಾನ್ಸ್​ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮಳೆ ಸಾಂಗ್​ಗಳು ಚಿತ್ರರಂಗದಲ್ಲಿ ತುಂಬಾ ಫೇಮಸ್​. ತುಂಬ ಹಿಂದಿನ ಕಾಲದಿಂದಲೂ ಅಂಥ ಕೆಲವು ಸಾಂಗ್​ಗಳು ಸೂಪರ್​ ಹಿಟ್​ ಆಗಿವೆ. ಈಗಲೂ ಕೂಡ ನಿರ್ದೇಶಕರು ಕೆಲವು ಸಿನಿಮಾಗಳಲ್ಲಿ ಮಳೆ ಸಾಂಗ್​ಗೆ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ನಟಿ ನಿಧಿ ಅಗರ್​ವಾಲ್ ಅವರಿಗೆ ಆ ರೀತಿ ಹಾಡಿನಲ್ಲಿ ನರ್ತಿಸುವುದು ಎಂದರೆ ಅಲರ್ಜಿ. ತಮ್ಮ ಈ ನಿಲುವಿಗೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿಧಿ ಅಗರ್​ವಾಲ್​ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಮಳೆ ಹಾಡಿನಲ್ಲಿ ನರ್ತಿಸುವುದು ಅಷ್ಟು ಸುಲಭವಲ್ಲ. ಮಳೆಯಲ್ಲಿ ನೆನೆಯಬೇಕು. ಶಾಟ್ಸ್​ ನಡುವಿನ ಬ್ರೇಕ್​ನಲ್ಲಿ ಮೈ ಒಣಗಿಸಿಕೊಳ್ಳಬೇಕು. ಮತ್ತೆ ನೆನೆಯಬೇಕು. ಅದರಲ್ಲೂ ಮಳೆ ಸುರಿಯುತ್ತಿರುವಾಗ ಕಣ್ಣು ಬಿಟ್ಟುಕೊಂಡು ನಟಿಸುವುದು, ಡ್ಯಾನ್ಸ್​ ಮಾಡುವುದು ತುಂಬ ಕಷ್ಟ. ಅದೇ ಕಾರಣಕ್ಕಾಗಿ ನಾನು ಸದ್ಯಕ್ಕೆ ಮಳೆ ಸಾಂಗ್​ಗಳಲ್ಲಿ ನಟಿಸಲು ಒಪ್ಪಿಕೊಳ್ಳುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ಮಾಡಿರುವುದು ಕೆಲವೇ ಸಿನಿಮಾಗಳಾದರೂ ನಿಧಿ ಅಗರ್​ವಾಲ್​ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. 2019ರಲ್ಲಿ ತೆರೆಕಂಡ ಇಸ್ಮಾರ್ಟ್​ ಶಂಕರ್​ ಚಿತ್ರದಲ್ಲಿ ಅವರಿಗೆ ಭರ್ಜರಿ ಹಿಟ್ ಸಿಕ್ಕಿದೆ. ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಅವರು ಸಿನಿಪ್ರಿಯರಿಗೆ ಇಷ್ಟ ಆಗಿದ್ದಾರೆ. ಮಾಡೆಲ್​ ಕೂಡ ಆಗಿರುವ ಅವರು ಹಲವು ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದಾರೆ. ‘ಹರಿ ಹರ ವೀರ ಮಲ್ಲು’ ಸಿನಿಮಾದಲ್ಲಿ ಅವರು ‘ಪವರ್​ ಸ್ಟಾರ್​’ ಪವನ್​ ಕಲ್ಯಾಣ್​ ಜೊತೆ ನಟಿಸುತ್ತಿದ್ದಾರೆ. ಮಹೇಶ್​ ಬಾಬು ಸಂಬಂಧಿ ಅಶೋಕ್​ ಗಲ್ಲಾ ಅವರ ಚೊಚ್ಚಲ ಚಿತ್ರಕ್ಕೂ ನಿಧಿ ಹೀರೋಯಿನ್​. ಕೆಲವು ಬಾಲಿವುಡ್ ಚಿತ್ರತಂಡಗಳ ಜೊತೆಗೂ ಅವರು ಮಾತುಕತೆ ಮಾಡುತ್ತಿದ್ದಾರೆ.

ಇದನ್ನೂ ಓದಿ:

ಶಾರುಖ್​ ಪುತ್ರಿ ಸುಹಾನಾ ಖಾನ್​ ಹಾಟ್​ ಫೋಟೋಶೂಟ್ ವೈರಲ್​; ಅಪ್ಪನ ಕಮೆಂಟ್​ ಏನು?​

ದಕ್ಷಿಣ ಭಾರತದ ಈ ಖ್ಯಾತ ನಟಿಯರ ವಿದ್ಯಾರ್ಹತೆ ಏನು? ಇಲ್ಲಿದೆ ಮಾಹಿತಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ