Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಹುಬಲಿ’ ಮಾಡಲು ಹೋಗಿ 100 ಕೋಟಿ ಕಳೆದುಕೊಂಡ ನೆಟ್​ಫ್ಲಿಕ್ಸ್​ಗೆ ಮತ್ತೊಂದು ಶಾಕ್​

‘ಬಾಹುಬಲಿ: ದಿ ಬಿಗಿನಿಂಗ್’​ ಮತ್ತು ‘ಬಾಹುಬಲಿ: ದಿ ಕನ್​ಕ್ಲೂಷನ್​’ ಸಿನಿಮಾಗಳ ಪ್ರೀಕ್ವೆಲ್​ ಮಾಡಲು ಈ ಹಿಂದೆ ಪ್ಲ್ಯಾನ್​ ಮಾಡಲಾಗಿತ್ತು. ಅದಕ್ಕೆ ‘ಬಾಹುಬಲಿ: ಬಿಫೋರ್​ ದಿ ಬಿಗಿನಿಂಗ್​’ ಎಂದು ಹೆಸರಿಡಲಾಗಿತ್ತು.

'ಬಾಹುಬಲಿ' ಮಾಡಲು ಹೋಗಿ 100 ಕೋಟಿ ಕಳೆದುಕೊಂಡ ನೆಟ್​ಫ್ಲಿಕ್ಸ್​ಗೆ ಮತ್ತೊಂದು ಶಾಕ್​
ಬಾಹುಬಲಿ - ನೆಟ್​ಫ್ಲಿಕ್ಸ್​ ವೆಬ್​ ಸಿರೀಸ್​
Follow us
ರಾಜೇಶ್ ದುಗ್ಗುಮನೆ
|

Updated on:Mar 24, 2021 | 7:31 PM

ಎಸ್​.ಎಸ್​. ರಾಜಮೌಳಿ ಆ್ಯಕ್ಷನ್​ ಕಟ್​ ಹೇಳಿದ್ದ ಬಾಹುಬಲಿ ಸಿನಿಮಾ ಎರಡು ಪಾರ್ಟ್​ಗಳಲ್ಲಿ ಮೂಡಿಬಂದಿತ್ತು. ಎರಡೂ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದ್ದವು. ಈಗ ಮೊದಲ ಪಾರ್ಟ್​ಗಿಂತಲೂ ಮುಂಚಿನ ಕಥೆ ಏನು ಎಂಬುದನ್ನು ತೋರಿಸಲು ನೆಟ್​​ಫ್ಲಿಕ್ಸ್​ ಹೊಸ ಯೋಜನೆ ರೂಪಿಸಿತ್ತು. ಆದರೆ, ಈ ಯೋಜನೆಯನ್ನು ಅರ್ಧಕ್ಕೆ ಕೈಬಿಟ್ಟಿದ್ದ ನೆಟ್​ಫ್ಲಿಕ್ಸ್​ ಈಗ ಎಲ್ಲವನ್ನೂ ಮೊದಲಿನಿಂದ ಶೂಟ್​ ಮಾಡಲು ಮುಂದಾಗಿದೆ. ಹೀಗಿರುವಾಗಲೇ ತಂಡಕ್ಕೆ ಮತ್ತೊಂದು ಶಾಕ್​ ಎದುರಾಗಿದೆ. ‘ಬಾಹುಬಲಿ: ದಿ ಬಿಗಿನಿಂಗ್’​ ಮತ್ತು ‘ಬಾಹುಬಲಿ: ದಿ ಕನ್​ಕ್ಲೂಷನ್​’ ಸಿನಿಮಾಗಳ ಪ್ರೀಕ್ವೆಲ್​ ಮಾಡಲು ಈ ಹಿಂದೆ ಪ್ಲ್ಯಾನ್​ ಮಾಡಲಾಗಿತ್ತು. ಅದಕ್ಕೆ ‘ಬಾಹುಬಲಿ: ಬಿಫೋರ್​ ದಿ ಬಿಗಿನಿಂಗ್​’ ಎಂದು ಹೆಸರಿಡಲಾಗಿತ್ತು. 9 ಎಪಿಸೋಡ್​ಗಳ ಈ ವೆಬ್​ಸರಣಿಯಲ್ಲಿ ರಾಜಮಾತೆ ಶಿವಗಾಮಿಯ ಕಥೆ ಹೇಳುವುದು ಇದರ ಉದ್ದೇಶವಾಗಿತ್ತು. ಶಿವಗಾಮಿ ಪಾತ್ರದಲ್ಲಿ ಮೃಣಾಲ್​ ಠಾಕೂರ್ ಕಾಣಿಸಿಕೊಂಡಿದ್ದರು.

ಅಚ್ಚರಿ ಎಂದರೆ, ಶೇ.70 ಭಾಗದ ಶೂಟ್​ ಪೂರ್ಣಗೊಂಡಿತ್ತು. ಇದಕ್ಕಾಗಿ 100 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಆದರೆ, ಇದು ನೆಟ್​ಫ್ಲಿಕ್ಸ್​ನವರಿಗೆ ಅಷ್ಟಾಗಿ ಖುಷಿ ನೀಡಿಲ್ಲ. ಹೀಗಾಗಿ, 200 ಕೋಟಿ ಬಜೆಟ್​ನಲ್ಲಿ ಇದನ್ನು ಮೊದಲಿನಿಂದ ಶೂಟ್​ ಮಾಡುವ ಆಲೋಚನೆ ಹಾಕಿಕೊಳ್ಳಲಾಗಿದೆ. ಆದರೆ, ಮೃಣಾಲ್​ ಠಾಕೂರ್ ಬಳಿ ಡೇಟ್ಸ್​ ಇಲ್ಲ. ಮತ್ತೆ ಮೊದಲಿನಿಂದ ಶೂಟ್​ ಮಾಡುವುದಾದರೆ ನಾನು ನಟಿಸಲು ಸಾಧ್ಯವೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಇಡೀ ಚಿತ್ರದಲ್ಲಿ ಕಥೆ ಹೈಲೈಟ್​ ಆಗೋದೆ ಶಿವಗಾಮಿಯ ಮೇಲೆ. ಹೀಗಿರುವಾಗ, ಮುಖ್ಯ ಪಾತ್ರಧಾರಿಯೇ ಕೈ ಕೊಟ್ಟಿರೋದು ತಂಡಕ್ಕೆ ತಲೆನೋವು ತಂದಿದೆ.

ಆದರೆ, ನೆಟ್​ಫ್ಲಿಕ್ಸ್​ ಸುಮ್ಮನೆ ಕೂತಿಲ್ಲ. ಈ ವೆಬ್​ಸೀರಿಸ್​ಗೆ ಸೂಟ್​ ಎನಿಸುವು ಮತ್ತೊಂದು ನಾಯಕಿಯನ್ನು ಕರೆ ತಂದಿದ್ದಾರೆ. ಲವ್​ ಆಜ್​ ಕಲ್​ ಮೊದಲಾದ ಸಿನಿಮಾಗಳಲ್ಲಿ ನಟಿಸಿರುವ ವಮಿಕಾ ಗಬ್ಬಿ ಅವರನ್ನು ಶಿವಗಾಮಿ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇವರು ಈ ಪಾತ್ರಕ್ಕೆ ಸೂಟ್​ ಆಗಲಿದ್ದಾರೆ ಎನ್ನುವ ಕಾರಣಕ್ಕೆ ಇವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

Wamiqa Gabbi

ವಮಿಕಾ

ಇದನ್ನೂ ಓದಿ: ‘ಬಾಹುಬಲಿ’ ನಂಬಿ 100 ಕೋಟಿ ರೂ. ಕಳೆದುಕೊಂಡ ನೆಟ್​ಫ್ಲಿಕ್ಸ್​! 200 ಕೋಟಿಯಲ್ಲಿ ಈಗ ಇನ್ನೊಂದು ಪ್ಲ್ಯಾನ್​

Published On - 6:44 pm, Wed, 24 March 21

Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!