Agent Movie: ‘ಸ್ಕ್ರಿಪ್ಟ್​ ಇಲ್ಲದೇ ಶೂಟಿಂಗ್​ ಶುರು ಮಾಡಿದ್ವಿ, ಈಗ ಚಿತ್ರ ಸೋತಿದೆ’: ‘ಏಜೆಂಟ್​’ ನಿರ್ಮಾಪಕನ ಪ್ರಾಮಾಣಿಕ ಮಾತು

Producer Anil Sunkara: ಅಖಿಲ್​ ಅಕ್ಕಿನೇನಿ ಅವರು ಮಾಸ್​ ಅವತಾರದಲ್ಲಿ ಕಾಣಿಸಿಕೊಂಡ ಸಿನಿಮಾ ಎಂಬ ಕಾರಣಕ್ಕೆ ‘ಏಜೆಂಟ್​’ ಮೇಲೆ ಹೈಪ್​ ಸೃಷ್ಟಿ ಆಗಿತ್ತು. ಆದರೆ ಈ ಸಿನಿಮಾಗೆ ಜನರಿಂದ ಮೆಚ್ಚುಗೆ ಸಿಕ್ಕಿಲ್ಲ.

Agent Movie: ‘ಸ್ಕ್ರಿಪ್ಟ್​ ಇಲ್ಲದೇ ಶೂಟಿಂಗ್​ ಶುರು ಮಾಡಿದ್ವಿ, ಈಗ ಚಿತ್ರ ಸೋತಿದೆ’: ‘ಏಜೆಂಟ್​’ ನಿರ್ಮಾಪಕನ ಪ್ರಾಮಾಣಿಕ ಮಾತು
ಏಜೆಂಟ್ ಸಿನಿಮಾ ಪೋಸ್ಟರ್​
Follow us
| Updated By: ರಾಜೇಶ್ ದುಗ್ಗುಮನೆ

Updated on:May 02, 2023 | 6:31 AM

ಸಿನಿಮಾ ರಿಲೀಸ್​ ಆದ ದಿನವೇ ಸಕ್ಸಸ್​ ಮೀಟ್​ ಮಾಡಿಕೊಳ್ಳುವ ನಿರ್ಮಾಪಕರು ಚಿತ್ರರಂಗದಲ್ಲಿ ಇದ್ದಾರೆ. ಬಾಕ್ಸ್​ ಆಫೀಸ್​ (Box Office) ಲೆಕ್ಕಚಾರವನ್ನು ಮರೆಮಾಚಿ, ತಮ್ಮ ಸಿನಿಮಾ ಸೂಪರ್​ ಹಿಟ್​ ಎನ್ನುವ ಹೀರೋಗಳು ಇದ್ದಾರೆ. ಆದರೆ ಇಲ್ಲೊರ್ವ ನಿರ್ಮಾಪಕರು ಪ್ರಾಮಾಣಿಕವಾಗಿ ಸೋಲಿನ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ಆ ಸೋಲಿಗೆ ಕಾರಣ ಏನು ಎಂಬುದನ್ನು ಕೂಡ ವಿವರಿಸಿದ್ದಾರೆ. ಅವರು ಬೇರಾರೂ ಅಲ್ಲ.. ‘ಏಜೆಂಟ್​’ ಚಿತ್ರದ ನಿರ್ಮಾಪಕ ಅನಿಲ್​ ಸುಂಕರ. ಟಾಲಿವುಡ್​ನಲ್ಲಿ ಬ್ಯುಸಿ ಆಗಿರುವ ಅನಿಲ್​ ಸುಂಕರ (Anil Sunkara) ಅವರು ಬಹುಕೋಟಿ ರೂಪಾಯಿ ಬಂಡವಾಳ ಸುರಿದು ‘ಏಜೆಂಟ್​’ ಸಿನಿಮಾ (Agent Movie) ಮಾಡಿದ್ದರು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹೀನಾಯವಾಗಿ ಸೋತಿದೆ. ಅಖಿಲ್​ ಅಕ್ಕಿನೇನಿ ನಟನೆಯ ಈ ಸಿನಿಮಾದ ಸೋಲಿನ ಬಗ್ಗೆ ನಿರ್ಮಾಪಕರು ಟ್ವೀಟ್​ ಮಾಡಿದ್ದಾರೆ. ಏನೆಲ್ಲ ಆಯ್ತು ಎಂಬುದನ್ನು ಅವರು ಪ್ರಾಮಾಣಿಕವಾಗಿ ವಿವರಿಸಿದ್ದಾರೆ.

‘ಏಜೆಂಟ್​’ ಸಿನಿಮಾದ ಬಗ್ಗೆ ಸಖತ್​ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಅಖಿಲ್​ ಅಕ್ಕಿನೇನಿ ಅವರು ಮಾಸ್​ ಅವತಾರದಲ್ಲಿ ಕಾಣಿಸಿಕೊಂಡ ಸಿನಿಮಾ ಎಂಬ ಕಾರಣಕ್ಕೆ ಈ ಚಿತ್ರ ಹೈಪ್​ ಸೃಷ್ಟಿ ಮಾಡಿತ್ತು. ಟ್ರೇಲರ್​ ಸಿಕ್ಕಾಪಟ್ಟೆ ಅದ್ದೂರಿಯಾಗಿ ಮೂಡಿಬಂದಿತ್ತು. ಬಾಲಿವುಡ್​ನ ಖ್ಯಾತ ನಟ ದಿನೋ ಮೋರಿಯಾ ಅವರು ಈ ಚಿತ್ರದಲ್ಲಿ ವಿಲನ್​ ಪಾತ್ರ ಮಾಡುವ ಮೂಲಕ ಟಾಲಿವುಡ್​ಗೆ ಕಾಲಿಟ್ಟಿದ್ದು ಕೂಡ ಹೈಪ್​ ಹೆಚ್ಚಲು ಕಾರಣ ಆಗಿತ್ತು. ಇಷ್ಟೆಲ್ಲ ಕ್ರೇಜ್​ ಇದ್ದರೂ ಕೂಡ ಈ ಸಿನಿಮಾಗೆ ಜನರಿಂದ ಮೆಚ್ಚುಗೆ ಸಿಕ್ಕಿಲ್ಲ.

‘ಏಜೆಂಟ್​ ಚಿತ್ರದ ಸೋಲಿನ ಸಂಪೂರ್ಣ ಹೊಣೆಯನ್ನು ನಾವೇ ಹೊತ್ತುಕೊಳ್ಳಬೇಕು. ಗೆಲ್ಲುವ ಭರವಸೆ ನಮಗೆ ಇತ್ತು. ಆದರೆ ವಿಫಲವಾದೆವು. ಬೌಂಡ್​ ಸ್ಕ್ರಿಪ್ಟ್​ ಇಲ್ಲದೇ ಶೂಟಿಂಗ್​ ಶುರು ಮಾಡಿದ್ದು ನಮ್ಮಿಂದಾದ ಪ್ರಮಾದ. ಕೊವಿಡ್​ ಮುಂತಾದ ಅಡೆಚಣೆಗಳು ಎದುರಾದವು. ಈಗ ನೆಪಗಳನ್ನು ನೀಡಲು ನಾವು ಇಷ್ಟಪಡಲ್ಲ. ಮಾಡಿದ ದುಬಾರಿ ತಪ್ಪಿನಿಂದ ಪಾಠ ಕಲಿಯುತ್ತೇವೆ. ಮತ್ತೆ ಇಂಥ ತಪ್ಪು ಮಾಡಲ್ಲ. ನಮ್ಮ ಮೇಲೆ ನಂಬಿಕೆ ಇಟ್ಟಿದ್ದ ಎಲ್ಲರಲ್ಲೂ ನಾವು ಕ್ಷಮೆ ಕೇಳುತ್ತೇವೆ. ಈ ನಷ್ಟ ಭರಿಸಿಕೊಳ್ಳಲು ಮುಂದಿನ ದಿನಗಳಲ್ಲಿ ನಾವು ಸೂಕ್ತ ಪ್ಲ್ಯಾನ್​ ಮತ್ತು ಪರಿಶ್ರಮದಿಂದ ಕೆಲಸ ಮಾಡುತ್ತೇವೆ’ ಎಂದು ಅನಿಲ್​ ಸುಂಕರ ಅವರು ಟ್ವೀಟ್​ ಮಾಡಿದ್ದಾರೆ.

ಬಾಕ್ಸ್​ ಆಫೀಸ್​ನಲ್ಲಿ ಮುಗ್ಗರಿಸಿದ ‘ಶಾಕುಂತಲಂ’ ಸಿನಿಮಾ; ಈ ಬಾರಿ ನಡೆಯಲಿಲ್ಲ ಸಮಂತಾ ಮ್ಯಾಜಿಕ್​

‘ಏಜೆಂಟ್​’ ಸಿನಿಮಾದ ನಿರ್ಮಾಪಕರ ಈ ಟ್ವೀಟ್​ ವೈರಲ್​ ಆಗಿದೆ. ಅನಿಲ್​ ಸುಂಕರ ಅವರ ಪ್ರಾಮಾಣಿಕತೆಗೆ ಅನೇಕರು ಭೇಷ್​ ಎಂದು ಕಮೆಂಟ್​ ಮಾಡಿದ್ದಾರೆ. ಈ ನಡುವೆ ಕೆಲವರು ಅಖಿಲ್​ ಅಕ್ಕಿನೇನಿ ಅವರ ತಂದೆ ನಾಗಾರ್ಜುನ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಆದರೆ ಅದು ಸರಿಯಲ್ಲ ಎಂಬ ಅಭಿಪ್ರಾಯ ಕೂಡ ನೆಟ್ಟಿಗರಿಂದ ವ್ಯಕ್ತವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:24 pm, Mon, 1 May 23

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು