AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಘೋಷಣೆ ಆಯ್ತು ಹೊಸ ವೆಬ್​ ಸೀರಿಸ್ Love, Scandal and Doctors.. ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ

ರಾಹುಲ್ ದೇವ್ ಈ ವೆಬ್ ಸೀರಿಸ್​​ನ ಮುಖ್ಯ ಪಾತ್ರಧಾರಿ.ಅಧಿಕಾರ, ರಾಜಕೀಯ, ಸ್ವಜನಪಕ್ಷಪಾತದಂತಹ ವಿಚಾರಗಳನ್ನು ಎಲ್ಎಸ್​​​ಡಿಯಲ್ಲಿ ಹೇಳಲಾಗುತ್ತಿದೆ.

ಘೋಷಣೆ ಆಯ್ತು ಹೊಸ ವೆಬ್​ ಸೀರಿಸ್ Love, Scandal and Doctors.. ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ
LSD- Love Scandal and Doctors ಹೆಸರಿನ ಹೊಸ ವೆಬ್ ಸಿರೀಸ್. ರಾಹುಲ್ ದೇವ್ ಈ ವೆಬ್ ಸೀರಿಸ್​​ನ ಮುಖ್ಯ ಪಾತ್ರಧಾರಿ.
Skanda
| Edited By: ಸಾಧು ಶ್ರೀನಾಥ್​|

Updated on:Dec 03, 2020 | 5:14 PM

Share

ಮುಂಬೈ: ಕೊರೋನಾ ವೈರಸ್ ಕಾಣಿಸಿಕೊಂಡ ನಂತರ ಚಿತ್ರಮಂದಿರಗಳು ಮುಚ್ಚಿದ್ದವು. ಈಗ ಥಿಯೇಟರ್​​ಗಳು ಮತ್ತೆ ತೆರೆದಿವೆಯಾದರೂ ಜನರು ಮೊದಲಿನಷ್ಟು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಈ ಅವಧಿಯಲ್ಲಿ ಒಟಿಟಿ ಪ್ಲಾಟ್​ಫಾರ್ಮ್​ಗಳು ತಮ್ಮ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿವೆ. ಅಲ್ಲದೆ, ಹೊಸ ಹೊಸ ವೆಬ್ ಸೀರಿಸ್​​ಗಳನ್ನು ಕೂಡ ಪರಿಚಯ ಮಾಡುತ್ತಿವೆ. ಈಗ ಒಟಿಟಿ ವೇದಿಕೆಗಳಾದ ಎಎಲ್​ಟಿ ಬಾಲಾಜಿ ಮತ್ತು ಜೀ5 ಗುರುವಾರ ‘ಎಲ್ಎಸ್​​​ಡಿ- ಲವ್, ಸ್ಕ್ಯಾಂಡಲ್ ಮತ್ತು ಡಾಕ್ಟರ್ಸ್ LSD- Love Scandal and Doctors ಹೆಸರಿನ ಹೊಸ ವೆಬ್ ಸಿರೀಸ್ ಘೋಷಣೆ ಮಾಡಿದೆ.

ರಾಹುಲ್ ದೇವ್ ಈ ವೆಬ್ ಸೀರಿಸ್​​ನ ಮುಖ್ಯ ಪಾತ್ರಧಾರಿ. ಮೆಡಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಈ ವೆಬ್ ಸೀರಿಸ್ ಮೂಡಿ ಬರುತ್ತಿದೆ. ಅಧಿಕಾರ, ರಾಜಕೀಯ, ಸ್ವಜನ ಪಕ್ಷಪಾತದಂತಹ ವಿಚಾರಗಳನ್ನು ಎಲ್ಎಸ್​​​ಡಿಯಲ್ಲಿ ಹೇಳಲಾಗುತ್ತಿದೆ. ಸಾವಿನ ಸುತ್ತ ಈ ವೆಬ್ ಸೀರಿಸ್​​ನ ಕತೆ ಸಾಗಲಿದೆ. ಇದು ಸಹಜ ಸಾವೋ ಅಥವಾ ಕೊಲೆಯೋ ಎನ್ನುವುದನ್ನು ಪತ್ತೆ ಹಚ್ಚುವುದೇ ಚಿತ್ರದ ಮುಖ್ಯ ಎಳೆ.

ಜೀ5ನಲ್ಲಿ ಪ್ರಸಾರವಾದ ‘ಹೂ ಈಸ್ ಯುವರ್ ಡ್ಯಾಡಿ’ಯಲ್ಲಿ ನಟಿಸಿದ್ದ ದೇವ್, ಈ ವೆಬ್ ಸೀರಿಸ್ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈಗಷ್ಟೇ ಸಿನಿಮಾದ ಶೂಟಿಂಗ್ ಆರಂಭಗೊಂಡಿದೆ. “ಈ ವೆಬ್ ಸಿರೀಸ್ ಪಾತ್ರಕ್ಕಾಗಿ ನಾನು ಸಾಕಷ್ಟು ಸಿದ್ಧತೆ ನಡೆಸಿದ್ದೇನೆ. ಎಲ್ಎಸ್​​ಡಿ ಉತ್ತಮವಾಗಿ ಮೂಡಿ ಬರುವ ನಿರೀಕ್ಷೆ ಇದೆ,” ಎಂದು ದೇವ್ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಡಾ. ರಾಣಾ ಹೆಸರಿನ ಪಾತ್ರದಲ್ಲಿ ದೇವ್ ಕಾಣಿಸಿಕೊಳ್ಳಲಿದ್ದಾರೆ.

ಕಾರ್ವಾನ್ ಸಿನಿಮಾದಲ್ಲಿ ನಟಿಸಿದ್ದ ಸಿದ್ಧಾರ್ಥ್ ಮೆನನ್ ಈ ಸರಣಿಯಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಪುನೀತ್ ಪಾಠಕ್, ಶೃತಿ ರಿಂಧಾನಿ, ತಾನ್ಯಾ ಸಚ್ದೇವ ಮತ್ತು ಪುಲ್ಕಿತ್ ಈ ವೆಬ್ ಸಿರೀಸ್ನಲ್ಲಿ ನಟಿಸುತ್ತಿದ್ದಾರೆ. ಸೇಕ್ರೇಡ್ ಗೇಮ್ಸ್​​ನಲ್ಲಿ ಸಹಾಯಕ ನಿರ್ದೇಶಕರಾಗಿ ಕಾಣಿಸಿಕೊಂಡಿದ್ದ ಸಕೀಬ್ ಪಂಡೋರ್ ಎಲ್ಎಸ್​​ಡಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

OTT ವೇದಿಕೆಗೆ ಸೆನ್ಸಾರ್ ಶಿಪ್ ಲಗಾಮು! ಇನ್ನು ಸಿನಿಮಾ, ವೆಬ್ ಸಿರೀಸ್ ಮೇಲೆ ಸರ್ಕಾರದ ಹದ್ದಿನಕಣ್ಣು

Published On - 5:13 pm, Thu, 3 December 20

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ