AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಘೋಷಣೆ ಆಯ್ತು ಹೊಸ ವೆಬ್​ ಸೀರಿಸ್ Love, Scandal and Doctors.. ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ

ರಾಹುಲ್ ದೇವ್ ಈ ವೆಬ್ ಸೀರಿಸ್​​ನ ಮುಖ್ಯ ಪಾತ್ರಧಾರಿ.ಅಧಿಕಾರ, ರಾಜಕೀಯ, ಸ್ವಜನಪಕ್ಷಪಾತದಂತಹ ವಿಚಾರಗಳನ್ನು ಎಲ್ಎಸ್​​​ಡಿಯಲ್ಲಿ ಹೇಳಲಾಗುತ್ತಿದೆ.

ಘೋಷಣೆ ಆಯ್ತು ಹೊಸ ವೆಬ್​ ಸೀರಿಸ್ Love, Scandal and Doctors.. ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ
LSD- Love Scandal and Doctors ಹೆಸರಿನ ಹೊಸ ವೆಬ್ ಸಿರೀಸ್. ರಾಹುಲ್ ದೇವ್ ಈ ವೆಬ್ ಸೀರಿಸ್​​ನ ಮುಖ್ಯ ಪಾತ್ರಧಾರಿ.
Skanda
| Updated By: ಸಾಧು ಶ್ರೀನಾಥ್​|

Updated on:Dec 03, 2020 | 5:14 PM

Share

ಮುಂಬೈ: ಕೊರೋನಾ ವೈರಸ್ ಕಾಣಿಸಿಕೊಂಡ ನಂತರ ಚಿತ್ರಮಂದಿರಗಳು ಮುಚ್ಚಿದ್ದವು. ಈಗ ಥಿಯೇಟರ್​​ಗಳು ಮತ್ತೆ ತೆರೆದಿವೆಯಾದರೂ ಜನರು ಮೊದಲಿನಷ್ಟು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಈ ಅವಧಿಯಲ್ಲಿ ಒಟಿಟಿ ಪ್ಲಾಟ್​ಫಾರ್ಮ್​ಗಳು ತಮ್ಮ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿವೆ. ಅಲ್ಲದೆ, ಹೊಸ ಹೊಸ ವೆಬ್ ಸೀರಿಸ್​​ಗಳನ್ನು ಕೂಡ ಪರಿಚಯ ಮಾಡುತ್ತಿವೆ. ಈಗ ಒಟಿಟಿ ವೇದಿಕೆಗಳಾದ ಎಎಲ್​ಟಿ ಬಾಲಾಜಿ ಮತ್ತು ಜೀ5 ಗುರುವಾರ ‘ಎಲ್ಎಸ್​​​ಡಿ- ಲವ್, ಸ್ಕ್ಯಾಂಡಲ್ ಮತ್ತು ಡಾಕ್ಟರ್ಸ್ LSD- Love Scandal and Doctors ಹೆಸರಿನ ಹೊಸ ವೆಬ್ ಸಿರೀಸ್ ಘೋಷಣೆ ಮಾಡಿದೆ.

ರಾಹುಲ್ ದೇವ್ ಈ ವೆಬ್ ಸೀರಿಸ್​​ನ ಮುಖ್ಯ ಪಾತ್ರಧಾರಿ. ಮೆಡಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಈ ವೆಬ್ ಸೀರಿಸ್ ಮೂಡಿ ಬರುತ್ತಿದೆ. ಅಧಿಕಾರ, ರಾಜಕೀಯ, ಸ್ವಜನ ಪಕ್ಷಪಾತದಂತಹ ವಿಚಾರಗಳನ್ನು ಎಲ್ಎಸ್​​​ಡಿಯಲ್ಲಿ ಹೇಳಲಾಗುತ್ತಿದೆ. ಸಾವಿನ ಸುತ್ತ ಈ ವೆಬ್ ಸೀರಿಸ್​​ನ ಕತೆ ಸಾಗಲಿದೆ. ಇದು ಸಹಜ ಸಾವೋ ಅಥವಾ ಕೊಲೆಯೋ ಎನ್ನುವುದನ್ನು ಪತ್ತೆ ಹಚ್ಚುವುದೇ ಚಿತ್ರದ ಮುಖ್ಯ ಎಳೆ.

ಜೀ5ನಲ್ಲಿ ಪ್ರಸಾರವಾದ ‘ಹೂ ಈಸ್ ಯುವರ್ ಡ್ಯಾಡಿ’ಯಲ್ಲಿ ನಟಿಸಿದ್ದ ದೇವ್, ಈ ವೆಬ್ ಸೀರಿಸ್ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈಗಷ್ಟೇ ಸಿನಿಮಾದ ಶೂಟಿಂಗ್ ಆರಂಭಗೊಂಡಿದೆ. “ಈ ವೆಬ್ ಸಿರೀಸ್ ಪಾತ್ರಕ್ಕಾಗಿ ನಾನು ಸಾಕಷ್ಟು ಸಿದ್ಧತೆ ನಡೆಸಿದ್ದೇನೆ. ಎಲ್ಎಸ್​​ಡಿ ಉತ್ತಮವಾಗಿ ಮೂಡಿ ಬರುವ ನಿರೀಕ್ಷೆ ಇದೆ,” ಎಂದು ದೇವ್ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಡಾ. ರಾಣಾ ಹೆಸರಿನ ಪಾತ್ರದಲ್ಲಿ ದೇವ್ ಕಾಣಿಸಿಕೊಳ್ಳಲಿದ್ದಾರೆ.

ಕಾರ್ವಾನ್ ಸಿನಿಮಾದಲ್ಲಿ ನಟಿಸಿದ್ದ ಸಿದ್ಧಾರ್ಥ್ ಮೆನನ್ ಈ ಸರಣಿಯಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಪುನೀತ್ ಪಾಠಕ್, ಶೃತಿ ರಿಂಧಾನಿ, ತಾನ್ಯಾ ಸಚ್ದೇವ ಮತ್ತು ಪುಲ್ಕಿತ್ ಈ ವೆಬ್ ಸಿರೀಸ್ನಲ್ಲಿ ನಟಿಸುತ್ತಿದ್ದಾರೆ. ಸೇಕ್ರೇಡ್ ಗೇಮ್ಸ್​​ನಲ್ಲಿ ಸಹಾಯಕ ನಿರ್ದೇಶಕರಾಗಿ ಕಾಣಿಸಿಕೊಂಡಿದ್ದ ಸಕೀಬ್ ಪಂಡೋರ್ ಎಲ್ಎಸ್​​ಡಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

OTT ವೇದಿಕೆಗೆ ಸೆನ್ಸಾರ್ ಶಿಪ್ ಲಗಾಮು! ಇನ್ನು ಸಿನಿಮಾ, ವೆಬ್ ಸಿರೀಸ್ ಮೇಲೆ ಸರ್ಕಾರದ ಹದ್ದಿನಕಣ್ಣು

Published On - 5:13 pm, Thu, 3 December 20

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ