‘ನೀನು ನನ್ನೊಂದಿಗೆ ರಾತ್ರಿ ಕಳೆಯುವುದಿಲ್ಲವೇ?’ ದಕ್ಷಿಣ ಭಾರತದ ನಿರ್ಮಾಪಕನ ನಿಜಮುಖ ಬಯಲು ಮಾಡಿದ ಬಾಲಿವುಡ್​ ನಟಿ

ದಕ್ಷಿಣ ಭಾರತದ ನಿರ್ಮಾಪಕ ನನಗೆ ಕರೆ ಮಾಡಿ ಸಿನಿಮಾ ಬಗ್ಗೆ ಮಾತನಾಡಬೇಕು ಎಂದರು. ಹೋಟೆಲ್​ ಒಂದರಲ್ಲಿ ಭೇಟಿ ಮಾಡೋಕೆ ಇಬ್ಬರೂ ನಿರ್ಧರಿಸಿದೆವು. ಆದರೆ, ನಿರ್ಮಾಪಕ ರೂಂಗೆ ಬರುವಂತೆ ಕರೆದಿದ್ದರು ಎಂದು ನೀತಾ ಹೇಳಿಕೊಂಡಿದ್ದಾರೆ.

‘ನೀನು ನನ್ನೊಂದಿಗೆ ರಾತ್ರಿ ಕಳೆಯುವುದಿಲ್ಲವೇ?’ ದಕ್ಷಿಣ ಭಾರತದ ನಿರ್ಮಾಪಕನ ನಿಜಮುಖ ಬಯಲು ಮಾಡಿದ ಬಾಲಿವುಡ್​ ನಟಿ
Follow us
| Updated By: ರಾಜೇಶ್ ದುಗ್ಗುಮನೆ

Updated on:Jun 17, 2021 | 8:15 PM

ಚಿತ್ರರಂಗದಲ್ಲಿ ಕಾಸ್ಟಿಂಗ್​ ಕೌಚ್​ ಒಂದು ಪಿಡುಗಿನಂತೆ ಕಾಡುತ್ತಿದೆ. ಅನೇಕರು ಈ ಬಗ್ಗೆ ಮಾತನಾಡಿದರೆ, ಇನ್ನೂ ಕೆಲವರು ಈ ವಿಚಾರದಲ್ಲಿ ಮೌನ ತಾಳಿದ್ದಾರೆ. ಬಾಲಿವುಡ್​ ಹಿರಿಯ ನಟಿ ನೀನಾ ಗುಪ್ತಾ ಇತ್ತೀಚೆಗೆ ಬರೆದುಕೊಂಡಿರುವ ‘ಸಚ್​ ಕಹೂ ತೋ’ ಆಟೋಬಯೋಗ್ರಫಿಯಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಮಗಾದ ಕಾಸ್ಟಿಂಗ್ ಕೌಚ್​ ವಿಚಾರದ ಬಗ್ಗೆಯೂ ಬರೆದುಕೊಂಡಿದ್ದಾರೆ.

‘ದಕ್ಷಿಣ ಭಾರತದ ನಿರ್ಮಾಪಕ ನನಗೆ ಕರೆ ಮಾಡಿ ಸಿನಿಮಾ ಬಗ್ಗೆ ಮಾತನಾಡಬೇಕು ಎಂದರು. ಹೋಟೆಲ್​ ಒಂದರಲ್ಲಿ ಭೇಟಿ ಮಾಡೋಕೆ ಇಬ್ಬರೂ ನಿರ್ಧರಿಸಿದೆವು. ಆದರೆ, ನಿರ್ಮಾಪಕ ರೂಂಗೆ ಬರುವಂತೆ ಕರೆದಿದ್ದರು. ಆಗ ನನಗೆ ಅನುಮಾನ ಹುಟ್ಟಿಕೊಂಡಿತ್ತು. ನನ್ನ ಒಳಮನಸ್ಸು ಕೆಟ್ಟದ್ದನ್ನು ಊಹಿಸುತ್ತಿತ್ತು. ನಾನು ಅವರಿಗೆ ಕೆಳಗೆ ಬರುವಂತೆ ಹೇಳಬೇಕು ಎಂದುಕೊಂಡಿದ್ದೆ. ಆದರೆ, ಸಿಕ್ಕ ಅವಕಾಶ ಕೈ ತಪ್ಪಿದರೆ ಎನ್ನುವ ಭಯ ಕಾಡಿತು. ಹೀಗಾಗಿ ಅವರಿದ್ದ ರೂಂಗೆ ತೆರಳಿದೆ’ ಎಂದು ನೀನಾ ಬರೆದುಕೊಂಡಿದ್ದಾರೆ.

‘ನನ್ನ ಪಾತ್ರದ ಬಗ್ಗೆ ಕೇಳಿದೆ. ನಿಮ್ಮದು ಹೀರೋಯಿನ್​ ಗೆಳತಿಯ ಪಾತ್ರ ಎನ್ನುವ ಉತ್ತರ ಆ ಕಡೆಯಿಂದ ಬಂತು. ನನಗೆ ಆ ಪಾತ್ರದಲ್ಲಿ ತೂಕ ಇಲ್ಲ ಎನಿಸಿತು. ಹೀಗಾಗಿ, ನಾನು ಹೊರಡುತ್ತೇನೆ. ನನ್ನ ಗೆಳತಿ ಕಾಯುತ್ತಿದ್ದಾಳೆ ಎಂದೆ. ‘ಎಲ್ಲಿಗೆ? ನೀನು ನನ್ನೊಂದಿಗೆ ರಾತ್ರಿ ಕಳೆಯುವುದಿಲ್ಲವೇ’ ಎಂದು ಅವರು ಪ್ರಶ್ನೆ ಮಾಡಿದರು. ಯಾರೋ ಹಿಮಗಡ್ಡೆಯನ್ನು ತಂದು ನನ್ನ ತಲೆಗೆ ಹಾಕಿದಂತೆ ಭಾಸವಾಯಿತು. ನನ್ನ ಮುಖದ ಭಯ ಆತನಿಗೆ ಅರ್ಥವಾಯಿತು ಎನಿಸುತ್ತದೆ. ನಿರ್ಮಾಪಕ ನನ್ನ ಬ್ಯಾಗ್​ ನನಗೆ ನೀಡಿ, ಒತ್ತಾಯ ಪೂರ್ವಕವಾಗಿ ನಾನು ಎನನ್ನೂ ಮಾಡುವುದಿಲ್ಲ ಎಂದ. ನಾನು ಅಲ್ಲಿಂದ ಓಡಿ ಬಂದೆ’ ಎಂದು ನೀನಾ ಕಾಸ್ಟಿಂಗ್​ ಕೌಚ್​ ಅನುಭವ ವಿವರಿಸಿದ್ದಾರೆ.

ಹಿರಿಯ ನಟಿ ನೀನಾ ಗುಪ್ತಾ ಅವರು 1980ರಲ್ಲಿ ಮಾಜಿ ಕ್ರಿಕೆಟಿಗ ವಿವ್​ ರಿಚರ್ಡ್ಸ್​ ಜತೆ ಪ್ರೀತಿಯಲ್ಲಿದ್ದರು. ಈ ವೇಳೆ ನೀನಾ ಗುಪ್ತಾ ಗರ್ಭ ಧರಿಸಿದ್ದರು. ಆಗ ಅವರ ಗೆಳೆಯ ಸತೀಶ್​ ಕೌಶಿಕ್​ ಮದುವೆ ಆಗೋಕೆ ಮುಂದೆ ಬಂದಿದ್ದರಂತೆ. ಮಗುವಿಗೆ ನಾನು ತಂದೆ ಆಗುತ್ತೇನೆ ಎಂದು ಹೇಳಿಕೊಂಡಿದ್ದರು. ಆದರೆ, ಈ ಮನವಿಯನ್ನು ನೀನಾ ತಿರಸ್ಕರಿಸಿದ್ದರು. ಈ ಬಗ್ಗೆಯೂ ನೀನಾ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

1982ರಲ್ಲೇ ನೀನಾ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಈ ಘಟನೆ ನಡೆದ ನಂತರವೂ ಚಿತ್ರರಂಗದಲ್ಲಿ ಮುಂದುವರಿದರು. ಈಗಲೂ ಸಾಕಷ್ಟು ಪೋಷಕ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಸದ್ಯ ಮೂರು ಚಿತ್ರಗಳು ಅವರ ಕೈಯಲ್ಲಿವೆ. ಇದಲ್ಲದೆ, ಕೆಲ ವೆಬ್​ ಸೀರಿಸ್​ಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: ಕ್ರಿಕೆಟಿಗನ ಜತೆಗಿನ ಸಂಬಂಧದಿಂದ ಬಾಲಿವುಡ್ ನಟಿಗೆ ಮಗು; ನಾನು ತಂದೆ ಆಗ್ತೀನಿ ಎಂದು ಮುಂದೆ ಬಂದಿದ್ದ ಗೆಳೆಯ

Published On - 8:15 pm, Thu, 17 June 21

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ