AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರವಿಂದ್​ಗೆ ಪ್ರೀತಿಯ ರಿಂಗ್​ ತೊಡಿಸಿದ ದಿವ್ಯಾ! ಮರುಕ್ಷಣವೇ ಇಬ್ಬರ ಲವ್​ನಲ್ಲಿ ಸುನಾಮಿ

Bigg Boss Kannada: ‘ಅರವಿಂದ್​ ಜೀವನಪರ್ಯಂತ ನನ್ನ ಜೊತೆಗೆ ಇರಬೇಕು. ಅವನು ನನಗೆ ನಿಜಕ್ಕೂ ಸ್ಪೆಷಲ್​. ನಮ್ಮ ಅಪ್ಪಾಜಿ ಕೊಟ್ಟಿರುವ ರಿಂಗ್​ ಅನ್ನು ನಾನು ಅರವಿಂದ್​ಗೆ ನೀಡುತ್ತೇನೆ’ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ!

ಅರವಿಂದ್​ಗೆ ಪ್ರೀತಿಯ ರಿಂಗ್​ ತೊಡಿಸಿದ ದಿವ್ಯಾ! ಮರುಕ್ಷಣವೇ ಇಬ್ಬರ ಲವ್​ನಲ್ಲಿ ಸುನಾಮಿ
ದಿವ್ಯಾ ಉರುಡುಗ - ಅರವಿಂದ್​ ಕೆ.ಪಿ.
ಮದನ್​ ಕುಮಾರ್​
|

Updated on: Apr 12, 2021 | 1:18 PM

Share

ಬಿಗ್​ ಬಾಸ್​ನಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆ.ಪಿ. ನಡುವೆ ಏನು ನಡೆಯುತ್ತಿದೆ ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ದಿನದಿಂದ ದಿನಕ್ಕೆ ಅವರಿಬ್ಬರ ಪ್ರೀತಿ ಒಂದೊಂದು ಹಂತ ಮೇಲೇರುತ್ತಿದೆ. ಅವರ ನಡುವಿನ ಸ್ನೇಹ-ಪ್ರೀತಿ ಕಂಡು ಮನೆಯ ಸದಸ್ಯರು ಅಚ್ಚರಿಪಡುತ್ತಿದ್ದಾರೆ. ಬಿಗ್​ ಬಾಸ್​ನಿಂದ ಹೊರಬಂದ ಬಳಿಕ ಅವರಿಬ್ಬರು ಮದುವೆ ಆದರೂ ಅಚ್ಚರಿ ಏನಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮಾತಿಗೆ ಇನ್ನಷ್ಟು ಪುಷ್ಠಿ ನೀಡುವಂತಹ ಘಟನೆ ನಡೆದಿದೆ. ಅರವಿಂದ್​ಗೆ ದಿವ್ಯಾ ಪ್ರೀತಿಯ ರಿಂಗ್​ ತೊಡಿಸಿದ್ದಾರೆ!

ಮನೆಯ ಸದಸ್ಯರಿಗೆ ಬಿಗ್​ ಬಾಸ್​ ಒಂದು ಚಟುವಟಿಕೆ ನೀಡಿದ್ದಾರೆ. ತಮ್ಮ ಮನಸ್ಸು ಗೆದ್ದ ಹುಡುಗಿಗೆ ಹುಡುಗರು ಹಾರ್ಟ್​ ಶೇಪ್​ನ ಬಲೂನ್​ ನೀಡಬೇಕು. ಹುಡುಗರಿಗೆ ಹುಡುಗಿಯರು ತಮ್ಮಿಷ್ಟದ ಒಂದು ವಸ್ತುವನ್ನು ನೀಡಬೇಕು. ಈ ವೇಳೆ ಅರವಿಂದ್​ ಕೆ.ಪಿ. ಮತ್ತು ದಿವ್ಯಾ ಉರುಡುಗ ನಡುವಿನ ಪ್ರೀತಿಯ ತೀವ್ರತೆ ಜಗಜ್ಜಾಹೀರಾಗಿದೆ. ‘ನಾನು ಜಾಸ್ತಿ ಮಾತನಾಡುವುದಿಲ್ಲ. ಮಾತು ಇಲ್ಲದೆಯೂ ಅವಳಿಗೆ ಅರ್ಥವಾಗುತ್ತದೆ’ ಎಂದು ದಿವ್ಯಾ ಬಗ್ಗೆ ಅರವಿಂದ್​ ಹೇಳಿದ್ದಾರೆ.

‘ಅರವಿಂದ್​ ಜೀವನಪರ್ಯಂತ ನನ್ನ ಜೊತೆಗೆ ಇರಬೇಕು. ಅವನು ನನಗೆ ನಿಜಕ್ಕೂ ಸ್ಪೆಷಲ್​. ನಮ್ಮ ಅಪ್ಪಾಜಿ ಕೊಟ್ಟಿರುವ ರಿಂಗ್​ ಅನ್ನು ನಾನು ಅರವಿಂದ್​ಗೆ ನೀಡುತ್ತೇನೆ’ ಎಂದು ದಿವ್ಯಾ ಹೇಳಿದಾಗ ಅರವಿಂದ್​ ಕಣ್ಣಲ್ಲಿ ಆನಂದಬಾಷ್ಪ ಸುರಿದಿದೆ. ಎಲ್ಲರ ಸಮ್ಮುಖದಲ್ಲಿ ಅವರಿಗೆ ದಿವ್ಯಾ ರಿಂಗ್​ ತೊಡಿಸಿದ್ದಾರೆ. ಇಬ್ಬರ ಪ್ರೀತಿ ಕಂಡು ಮನೆಯ ಸದಸ್ಯರೆಲ್ಲ ಚಪ್ಪಾಳೆ ತಟ್ಟಿದ್ದಾರೆ. ಆದರೆ ರಿಂಗ್​ ಪಡೆದುಕೊಂಡ ಕೆಲವೇ ಕ್ಷಣಗಳಲ್ಲಿ ಅಚಾತುರ್ಯ ನಡೆದುಹೋಗಿದೆ!

ಅರವಿಂದ್ ಮೇಲಿನ ಪ್ರೀತಿಗಾಗಿ ದಿವ್ಯಾ ಉರುಡುಗ ಆ ಉಂಗುರ ನೀಡಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಆ ಉಂಗುರುವನ್ನು ಅರವಿಂದ್​ ಕಳೆದುಕೊಂಡಿದ್ದಾರೆ! ಅಷ್ಟು ಪ್ರೀತಿಯಿಂದ ನೀಡಿದ ಉಂಗುರು ಈಗ ಕಳೆದುಹೋಗಿದೆ ಎಂಬ ವಿಷಯ ದಿವ್ಯಾಗೆ ಗೊತ್ತಾದರೆ ಆಘಾತ ಆಗುವುದು ಗ್ಯಾರಂಟಿ. ಹಾಗಾಗಿ ಈ ವಿಷಯವನ್ನು ಮುಚ್ಚಿಟ್ಟು, ಉಂಗುರು ಹುಡುಕುವ ಕಾಯಕದಲ್ಲಿ ಅರವಿಂದ್​ ತೊಡಗಿಕೊಂಡಿದ್ದಾರೆ. ಅವರಿಗೆ ಇಡೀ ಮನೆಯ ಸದಸ್ಯರು ಸಾಥ್​ ನೀಡುತ್ತಿದ್ದಾರೆ.

ಬಿರು ಬಿಸಿಲನ್ನೂ ಲೆಕ್ಕಿಸದೇ ಪೂರ್ತಿ ಮನೆಯನ್ನು ಗುಡಿಸಲಾಗುತ್ತಿದೆ. ಎಲ್ಲರೂ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ದಿವ್ಯಾಗೆ ಗೊತ್ತಾಗಿಲ್ಲ. ಎಷ್ಟೇ ಹುಡುಕಿದರೂ ಉಂಗುರು ಸಿಗುವುದು ಅನುಮಾನವಾಗಿದೆ. ಸತ್ಯವನ್ನು ದಿವ್ಯಾಗೆ ಹೇಳಿಬಿಡುತ್ತೇನೆ ಎಂದು ಅರವಿಂದ್​ ನಿರ್ಧಾರ ಮಾಡಿಕೊಂಡಿದ್ದಾರೆ. ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋನಲ್ಲಿ ಈ ಎಲ್ಲ ವಿಚಾರಗಳು ಗೊತ್ತಾಗಿವೆ. ಮುಂದೇನಾಯಿತು ಎಂಬುದನ್ನು ತಿಳಿದುಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಏ.12ರ ಎಪಿಸೋಡ್​ನಲ್ಲಿ ಈ ಎಲ್ಲ ಘಟನೆಗಳು ಪ್ರಸಾರ ಆಗಲಿವೆ.

ಇದನ್ನೂ ಓದಿ: ಯಾವ ಬಾಯಲ್ಲಿ ಅಕ್ಕ ಅಂತೀಯಾ? ಅದೇ ಬಾಯಲ್ಲಿ ಏನೇನೋ ಹೇಳಿದ್ದೀಯ! ಶಮಂತ್​ಗೆ ದಿವ್ಯಾ ಪಂಚ್​!

ದಿವ್ಯಾ ಉರುಡುಗ-ಅರವಿಂದ್​ ಪ್ರೀತಿಯ ಉತ್ಕಟತೆ ನೋಡಿ ಮನೆಯವರೇ ಕಂಗಾಲು; ಅಂಥದ್ದೇನಾಯ್ತು?

(Bigg Boss Kannada 8 : Divya Uruduga gives her favourite ring to Aravind KP in BBK8 )

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ