AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲಿಮಿನೇಷನ್​ ಬಳಿಕ ಕಿಚ್ಚನ ಎದುರು ಚಂದ್ರಕಲಾ ಸಂದರ್ಶನ; 5 ನೇರ ಪ್ರಶ್ನೆಗೆ ಖಡಕ್​ ಉತ್ತರ ನೀಡಿದ ನಟಿ!

Bigg Boss Kannada: ಬಿಗ್​ ಬಾಸ್​ ಕನ್ನಡ ಸೀಸನ್​ 8ರ ನಾಲ್ಕನೇ ವಾರದ ಎಲಿಮಿನೇಷನ್​ನಲ್ಲಿ ಕಿರುತೆರೆ ನಟಿ ಚಂದ್ರಕಲಾ ಮೋಹನ್​ ಔಟ್​ ಆಗಿದ್ದಾರೆ. ಮನೆಯಿಂದ ಹೊರಬಂದ ಅವರಿಗೆ ಸುದೀಪ್​ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಎಲಿಮಿನೇಷನ್​ ಬಳಿಕ ಕಿಚ್ಚನ ಎದುರು ಚಂದ್ರಕಲಾ ಸಂದರ್ಶನ; 5 ನೇರ ಪ್ರಶ್ನೆಗೆ ಖಡಕ್​ ಉತ್ತರ ನೀಡಿದ ನಟಿ!
ಚಂದ್ರಕಲಾ ಮೋಹನ್​ - ಕಿಚ್ಚ ಸುದೀಪ್​
ಮದನ್​ ಕುಮಾರ್​
|

Updated on: Mar 29, 2021 | 12:03 PM

Share

ಕಿರುತೆರೆಯ ಅನುಭವಿ ನಟಿ ಚಂದ್ರಕಲಾ ಮೋಹನ್​ ಅವರು ನಾಲ್ಕನೇ ವಾರ ದೊಡ್ಮನೆಯಿಂದ ಹೊರಬಿದ್ದಿದ್ದಾರೆ. ಇದ್ದಷ್ಟು ದಿನ ಅವರು ಎಲ್ಲ ಟಾಸ್ಕ್​ನಲ್ಲಿಯೂ ಚೆನ್ನಾಗಿ ಆಟ ಆಡಿದ್ದರು. ಆದರೆ ವೀಕ್ಷಕರಿಂದ ಹೆಚ್ಚಿನ ವೋಟ್​ ಪಡೆಯುವಲ್ಲಿ ಅವರು ವಿಫಲರಾದರು. ನಾಲ್ಕು ವಾರಗಳ ಅವರ ಬಿಗ್​ ಬಾಸ್​ ಜರ್ನಿ ಬಗ್ಗೆ ಸುದೀಪ್​ ಒಂದು ಸಣ್ಣ ಮಾತುಕತೆ ನಡೆಸಿದ್ದಾರೆ. ಕಿಚ್ಚ ಕೇಳಿದ ಪ್ರಶ್ನೆಗಳಿಗೆ ಚಂದ್ರಕಲಾ ನೇರ ಉತ್ತರ ನೀಡಿದ್ದಾರೆ. ಆ ಸಂಭಾಷಣೆ ವಿವರ ಇಲ್ಲಿದೆ…

ಸುದೀಪ್​: ಈ ಮನೆಯಲ್ಲಿ ನಾಲ್ಕು ದಿನ ಉಳಿಯೋದು ಕಷ್ಟ. ಅಂಥದ್ದರಲ್ಲಿ ನಾಲ್ಕು ವಾರ ಚಿಕ್ಕದಲ್ಲ. ನಿಮ್ಮ ಸಾಮರ್ಥ್ಯಕ್ಕೆ ಈ ಅವಧಿ ಕಡಿಮೆ ಆಯ್ತು ಎನಿಸಿತು. ಯಾಕೆ ಹೀಗಾಯ್ತು? ಚಂದ್ರಕಲಾ: ಇನ್ನೂ ನನಗೆ ಟೈಮ್​ ಬೇಕಿತ್ತು. ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಿದ್ದೆ. ನಾನು ಮುಂದಕ್ಕೆ ಹೋಗುತ್ತಿದ್ದಾಗ ಕೆಲವೊಬ್ಬರು ಹಿಂದಕ್ಕೆ ತಳ್ಳುತ್ತಿದ್ದರು.

ಸುದೀಪ್​: ಹಾಗೆ ಹಿಡಿದು ಹಿಂದಕ್ಕೆ ತಳ್ಳುವವರು ಯಾರು? ಚಂದ್ರಕಲಾ: ಕೆಲವರ ಬಗ್ಗೆ ನನಗೆ ಹಾಗೆ ಅನಿಸಿತು. ಅವರ ಬಗ್ಗೆ ಮಾತನಾಡೋಕೆ ಇಷ್ಟ ಇಲ್ಲ. ಯಾಕೆಂದರೆ ಎಲ್ಲರೂ ನನ್ನ ಫ್ರೆಂಡ್ಸ್​ ಆಗಿದ್ದಾರೆ. ಒಬ್ಬೊಬ್ಬರು ಒಂದೊಂದು ಥರ ನಡೆದುಕೊಳ್ಳುತ್ತಾರೆ. ಎಲ್ಲರ ಥರ ನಾನು ಇರಬೇಕು ಎಂದೇನಿಲ್ಲ. ನಾನು ಬದಲಾಗೋಕೆ ಆಗಲ್ಲ. ನನಗೆ ಕೆಲವು ಮಾತು ಇಷ್ಟ ಆಗಲ್ಲ. ಅತಿಯಾಗಿ ಪ್ರತಿಕ್ರಿಯೆ ನೀಡೋದು ಕೂಡ ಇಷ್ಟ ಆಗಲ್ಲ.

ಸುದೀಪ್​: ಬಿಗ್​ ಬಾಸ್​ ಮನೆಯಲ್ಲಿ ವಯಸ್ಸು ಮತ್ತು ಅನುಭವ ಮುಖ್ಯ ಆಗುತ್ತಾ? ಯಾಕೆಂದರೆ ಶಂಕರ್​ ಅಶ್ವತ್ಥ್​ ಬಿಟ್ಟರೆ ನೀವೇ ಹಿರಿಯರಾಗಿದ್ರಿ.. ಚಂದ್ರಕಲಾ: ವಯಸ್ಸು ಮುಖ್ಯವಾಗುವುದಿಲ್ಲ. ನಮ್ಮ ಬುದ್ಧಿ ಶಕ್ತಿ ಮತ್ತು ಯೋಚನೆ ಮಾಡುವ ರೀತಿ ಮುಖ್ಯವಾಗುತ್ತದೆ.

ಸುದೀಪ್​: ಒಂದು ವಾರ ನೀವು ಕಿಚನ್​ನಿಂದ ಹೊರಗಿದ್ರಿ. ಅದು ನಿಮ್ಮ ಆಟಕ್ಕೆ ಬೇಕಿತ್ತು ಅನಿಸುತ್ತಾ? ಚಂದ್ರಕಲಾ: ನನಗೆ ಅದು ಬೇಡವಾಗಿತ್ತು. ಬಿಗ್​ ಬಾಸ್​ ಮನೆಯೊಳಗೆ ಬರುವಾಗಲೇ ನಾನು ನನ್ನ ಟ್ಯಾಲೆಂಟ್​ ಚೆನ್ನಾಗಿ ಬಳಕೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ. ಬರುತ್ತಿದ್ದಂತೆಯೇ ನನ್ನನ್ನು ಕಿಚನ್​ಗೆ ಹಾಕಿದರು. 2 ಮತ್ತು 3ನೇ ವಾರವೂ ಅದು ಮುಂದುವರಿಯಿತು. ಅದರಿಂದ ನನಗೆ ತೊಂದರೆ ಆಯಿತು.

ಸುದೀಪ್​: ಎಷ್ಟೋ ಸಂದರ್ಭಗಳಲ್ಲಿ ನಿಮ್ಮ ವಯಸ್ಸು 15 ವರ್ಷ ಕಡಿಮೆ ಆದಂತೆ ಅನಿಸಿತು. ನೀವು ಇರುವುದೇ ಹಾಗೆನಾ? ಅಥವಾ ಸಂದರ್ಭ ಹಾಗೆ ಮಾಡಿಸಿತಾ? ಚಂದ್ರಕಲಾ: ನಾನು ಇರುವುದೇ ಹಾಗೆ. ಎಲ್ಲವನ್ನೂ ನಾನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ಯಾಕೆಂದರೆ ಜೀವನದಲ್ಲಿ ತುಂಬ ಕಷ್ಟ ನೋಡಿಕೊಂಡು ಬಂದಿರುವುದರಿಂದ ಮತ್ತೆ ಮತ್ತೆ ಅದೇ ವಿಚಾರಗಳನ್ನು ಹೇಳಿಕೊಂಡು ಗೋಳಾಡೋಕೆ ಇಷ್ಟ ಇಲ್ಲ. ನಾನಿರೋದೇ ಹಾಗೆ. ಬಿಗ್​ ಬಾಸ್​ಗಾಗಿ ಬದಲಾಗಿಲ್ಲ. ಇನ್ನೂ ಹೆಚ್ಚಿನ ಎನರ್ಜಿ ನನಗಿದೆ.

ಇದನ್ನೂ ಓದಿ: ‘ಸ್ಕರ್ಟ್​ ಹಾಕ್ಕೊಂಡು ಮಲಗಿದ್ದಾಗ ನಮ್ಮ ತಂದೆಯೇ ಕೆಟ್ಟದಾಗಿ ನಡೆದುಕೊಂಡ್ರು’: ಬಿಗ್​ ಬಾಸ್​ ಚಂದ್ರಕಲಾ ಬದುಕಿನ ಕಹಿ ಘಟನೆ!

13ನೇ ವಯಸ್ಸಿಗೆ ಮದುವೆ, 14ಕ್ಕೆ ಮಗು! ಇದು ಬಿಗ್​ ಬಾಸ್​ ಚಂದ್ರಕಲಾ ರಿಯಲ್​ ಲೈಫ್​ ಕಷ್ಟದ ಕಥೆ!

ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?