AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಪಾತಿ ವಿಷ್ಯಕ್ಕೆ ಜಗಳ; ಬಿಗ್ ಬಾಸ್ ಕಿಚನ್​ನಲ್ಲಿ ಕಿಚ್ಚು ಹತ್ತಿಸಿದ್ದು ಯಾರು?

ಬಿಗ್ ಬಾಸ್ ಮನೆಯಲ್ಲಿ ಕಿಚನ್ ಒಂದು ಹಾಟ್ ಸ್ಪಾಟ್. ಕೆಲಸ ಮಾಡೋದು ಯಾರು? ಹೆಚ್ಚು ತಿನ್ನೋದು ಯಾರು? ಇತ್ಯಾದಿ ವಿಚಾರಗಳ ಬಗ್ಗೆ ಅಲ್ಲಿ ಚರ್ಚೆ-ವಾಗ್ವಾದಗಳು ಸಾಮಾನ್ಯ. ಬಿಗ್ ಬಾಸ್ ಸೂಚಿಸಿದ ನಿಯಮದಂತೆಯೇ ತಿನ್ನಬೇಕು. ಅಷ್ಟೂ ಜನ ಹೊಂದಿಕೊಂಡು ಇರಬೇಕು ಅನ್ನೋದು ಮತ್ತೂ ಸವಾಲಿನ ಸಂಗತಿ.

ಚಪಾತಿ ವಿಷ್ಯಕ್ಕೆ ಜಗಳ; ಬಿಗ್ ಬಾಸ್ ಕಿಚನ್​ನಲ್ಲಿ ಕಿಚ್ಚು ಹತ್ತಿಸಿದ್ದು ಯಾರು?
ಪ್ರಶಾಂತ್ ಸಂಬರಗಿ-ವೈಷ್ಣವಿ
TV9 Web
| Edited By: |

Updated on:Apr 05, 2022 | 12:45 PM

Share

ಬಿಗ್ ಬಾಸ್ ಮನೆಯಲ್ಲಿ ಎಷ್ಟು ಅನ್ಯೋನ್ಯತೆ ಇರುತ್ತದೋ ಅದಕ್ಕಿಂತ ಹೆಚ್ಚು ಗೇಮ್ ಪ್ಲಾನ್ ಇರುತ್ತೆ ಅನ್ನೋದು ದೊಡ್ಮನೆ ಅಭಿಮಾನಿಗಳ ಅಭಿಪ್ರಾಯ. ಅದಕ್ಕೇ ಅಲ್ಲಿ ಜಗಳವೂ ಹೆಚ್ಚು. ಟಾಸ್ಕ್, ಸೋಲು, ಗೆಲುವುಗಳ ನಡುವೆ ಎಲ್ಲರೂ ಪೈಪೋಟಿಗೆ ಬಿದ್ದಿರುತ್ತಾರೆ. ಆಗಾಗ ಒಬ್ಬರ ಮೇಲೊಬ್ಬರು ಆರೋಪ ಹೊರಿಸುವುದು, ಗಲಾಟೆ, ಗದ್ದಲ ಮಾಡುವುದು ಆಗುತ್ತಿರುತ್ತದೆ. ಇಂದಿನ ಸಂಚಿಕೆಯಲ್ಲೂ ಅಂಥದ್ದೊಂದು ಜಗಳ ಆಗಿದೆ ಎಂದು ವಾಹಿನಿ ಹಂಚಿಕೊಂಡಿರುವ ಪ್ರೋಮೋ ಮೂಲಕ ತಿಳಿದುಬಂದಿದೆ.

ಬಿಗ್ ಬಾಸ್ ಮನೆಯಲ್ಲಿ ಕಿಚನ್ ಒಂದು ಹಾಟ್ ಸ್ಪಾಟ್. ಕೆಲಸ ಮಾಡೋದು ಯಾರು? ಹೆಚ್ಚು ತಿನ್ನೋದು ಯಾರು? ಇತ್ಯಾದಿ ವಿಚಾರಗಳ ಬಗ್ಗೆ ಅಲ್ಲಿ ಚರ್ಚೆ-ವಾಗ್ವಾದಗಳು ಸಾಮಾನ್ಯ. ಬಿಗ್ ಬಾಸ್ ಸೂಚಿಸಿದ ನಿಯಮದಂತೆಯೇ ತಿನ್ನಬೇಕು. ಅಷ್ಟೂ ಜನ ಹೊಂದಿಕೊಂಡು ಇರಬೇಕು ಅನ್ನೋದು ಮತ್ತೂ ಸವಾಲಿನ ಸಂಗತಿ. ಈ ನಡುವೆ ಇಂದು ಕಿಚನ್​ನಲ್ಲಿ ಕಿಚ್ಚು ಹತ್ತಿಕೊಂಡಿದೆ ಎಂದು ಸುಳುಹು ಸಿಕ್ಕಿದೆ.

ಪ್ರಶಾಂತ್ ಸಂಬರಗಿ ಮತ್ತು ಬ್ರೋ ಗೌಡ ಕಿಚನ್​ನಲ್ಲಿ ಚಪಾತಿ ತಿನ್ನುತ್ತಿದ್ದರು. ಚಹಾ ಜೊತೆಗೆ ಚಪಾತಿ ತಿನ್ನುತ್ತಿದ್ದಾರೆ ಎಂದು ಆರಂಭದ ಅಸ್ಪಷ್ಟ ಸಂಭಾಷಣೆ ಕೇಳಿದರೆ ತಿಳಿದುಬರುತ್ತದೆ. ಹಾಗೇ ಅವರಿಬ್ಬರು ತಿನ್ನುತ್ತಾ, ಮಾತನಾಡುತ್ತಾ ಇರುವಂತೆ ಆ ಕಡೆಯಿಂದ ರಾಜೀವ್ ಅವರನ್ನು ತಡೆದಿದ್ದಾರೆ. ವೈಷ್ಣವಿ ಕೂಡ ಪ್ರಶಾಂತ್ ಸಂಬರಗಿ, ಬ್ರೋ ಗೌಡ ವಿಚಾರಕ್ಕೆ ಆಕ್ಷೇಪಿಸಿದಂತೆ ಕಾಣುತ್ತಿದೆ.

ಎಲ್ಲರಿಗೂ ಊಟ ಮಾಡ್ಬೇಕಾಗುತ್ತೆ. ಎಲ್ಲಾರ್ಗೂ ಹೊಟ್ಟೆ ಇದೆ. ಎಲ್ಲರಿಗೂ ಸಮಾನವಾಗಿ ಊಟ ಸಿಗಬೇಕು ಎಂದು ವೈಷ್ಣವಿ ವೈಲೆಂಟ್ ಆಗಿದ್ದಾರೆ. ಆ ಬಳಿಕ ರಾಜೀವ್, ಪ್ರಶಾಂತ್ ನಿಂಗೆ ಹೊಟ್ಟೆ ಹಸಿವಾಗ್ತಿದ್ಯಾ ಎಂದು ಕೇಳಿದ್ದಾರೆ. ಅದಕ್ಕೆ ಪ್ರಶಾಂತ್ ಸಂಬರಗಿ, ಇಲ್ಲಪ್ಪಾ ನಾನ್ ಟೀ ಕುಡಿತಾ ಇದ್ದೀನಿ ಎಂದು ಉತ್ತರಿಸಿದ್ದಾರೆ.

ರಾಜೀವ್ ಮುಂದುವರಿದು, ಎಲ್ಲರೂ ತಿಂತಾ ಇರೋದಾ? ಒಂದ್ ಸೆನ್ಸ್ ಬೇಡ್ವಾ ಎಂದು ಕೇಳಿದ್ದಾರೆ. ಈ ಮಾತಿಗೆ ಸಂಬರಗಿ ರಾಂಗ್ ಆದಂತೆ ಕಂಡುಬಂದಿದ್ದಾರೆ. ಮಂಜು ಪಾವಗಡ ಕೂಡ ಸಂಬರಗಿಗೆ ಪ್ರಶ್ನೆ ಮಾಡಿರುವುದು ಕೇಳಿಬಂದಿದೆ. ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯಲ್ಲಿ ಏನಾಗಿದೆ ಎಂದು ಸರಿಯಾಗಿ ಇನ್ನಷ್ಟೇ ತಿಳಿದುಬರಬೇಕಿದೆ.

ಇದನ್ನೂ ಓದಿ: ಬೇರೆ ಬೇರೆ ತಂಡದಲ್ಲಿದ್ರೂ ದಿವ್ಯಾ-ದಿವ್ಯಾ ಹೊಸ ಗೇಮ್ ಪ್ಲಾನ್; ರೋಲ್ ಮಾಡೆಲ್ ಆಗೋ ಆಸೆಯಲ್ಲಿ ದಿವ್ಯಾ ಉರುಡುಗ

ಇದನ್ನೂ ಓದಿ: Viral Video: ಅಭಿಮಾನಿಯ ಫೋನ್ ಕಿತ್ತುಕೊಂಡ ನಟ ಅಜಿತ್; ಚುನಾವಣಾ ಮತಗಟ್ಟೆಯಲ್ಲಿ ನಡೆದಿದ್ದೇನು?

(Bigg Boss Kannada 8 Kitchen Fight between Prashanth Sambargi Vaishnavi Gowda Rajeev Manju Pavagada)

Published On - 9:38 pm, Tue, 6 April 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ