AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗಂಡಸರನ್ನು ಕಂಡರೆ ದಿವ್ಯಾ ಸುರೇಶ್​ಗೆ ವಾಕರಿಕೆ’! ಪ್ರಶಾಂತ್​ ಸಂಬರಗಿ ಗುಟ್ಟಾಗಿ ಇಂಥ ಮಾತು ಹೇಳಿದ್ದೇಕೆ?

Bigg Boss Kannada: ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ದಿವ್ಯಾ ಸುರೇಶ್​ ಹೈಲೈಟ್​ ಆಗುತ್ತಿದ್ದಾರೆ. ಅವರ ಬಗ್ಗೆ ಹಲವು ವಿಚಾರಗಳು ದೊಡ್ಮನೆಯಲ್ಲಿ ಗುಸುಗುಸು ಚರ್ಚೆಗೆ ಕಾರಣ ಆಗುತ್ತಿವೆ.

‘ಗಂಡಸರನ್ನು ಕಂಡರೆ ದಿವ್ಯಾ ಸುರೇಶ್​ಗೆ ವಾಕರಿಕೆ’! ಪ್ರಶಾಂತ್​ ಸಂಬರಗಿ ಗುಟ್ಟಾಗಿ ಇಂಥ ಮಾತು ಹೇಳಿದ್ದೇಕೆ?
ದಿವ್ಯಾ ಸುರೇಶ್
Follow us
ಮದನ್​ ಕುಮಾರ್​
|

Updated on: Mar 30, 2021 | 10:37 AM

ಬಿಗ್​ ಬಾಸ್​ನಲ್ಲಿ 4ನೇ ವಾರದ ಎಲಿಮಿನೇಷನ್​ ಕಳೆದ ಬಳಿಕ ಎಲ್ಲರೂ ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಬೇರೆ ಸ್ಪರ್ಧಿಗಳ ಬಲಾಬಲದ ಬಗ್ಗೆಯೂ ಚರ್ಚೆಗಳು ನಡೆದಿವೆ. ಎಲ್ಲಿ, ಏನು ತಪ್ಪಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದೇ ವಿಚಾರವಾಗಿ ಇತ್ತೀಚೆಗೆ ಪ್ರಶಾಂತ್​ ಸಂಬರಗಿ ಮತ್ತು ಶಮಂತ್​ ಬ್ರೋ ಗೌಡ ನಡುವೆ ಒಂದಷ್ಟು ಮಾತುಕತೆ ನಡೆಯಿತು. ಆಗ ಅವರು ದಿವ್ಯಾ ಸುರೇಶ್​ ಬಗ್ಗೆ ಗುಸಗುಗುಸು ಮಾತನಾಡಿಕೊಂಡಿದ್ದಾರೆ.

ಎಷ್ಟೇ ಪ್ರಯತ್ನ ಮಾಡಿದರೂ ಶಮಂತ್​ಗೆ ದಿವ್ಯಾ ಜೊತೆ ಕನೆಕ್ಟ್​ ಆಗಲು ಸಾಧ್ಯವಾಗುತ್ತಿಲ್ಲ. ಯಾಕೆ ಹೀಗಾಗುತ್ತಿದೆ ಎಂಬುದಕ್ಕೆ ಅವರು ಪ್ರಶಾಂತ್​ ಸಂಬರಗಿ ಹತ್ತಿರ ಹೋಗಿ ಸಲಹೆ ಕೇಳಿದ್ದಾರೆ. ಆಗ ಪ್ರಶಾಂತ್​ ಕೆಲವೊಂದು ಉಪಾಯಗಳನ್ನು ಹೇಳಿಕೊಟ್ಟಿದ್ದಾರೆ. ಇದೇ ಮಾತುಕತೆಯ ನಡುವೆ ‘ಗಂಡಸರನ್ನು ಕಂಡರೆ ದಿವ್ಯಾ ವಾಕರಿಕೆ ಮಾಡುತ್ತಾಳೆ’ ಎಂದು ಪ್ರಶಾಂತ್​ ಗುಟ್ಟಾಗಿ ಹೇಳಿದ್ದಾರೆ.

‘ನಿನಗೆ ಒಂದು ಸ್ಟ್ರಾಟಜಿ ಹೇಳಿಕೊಡುತ್ತೇನೆ. ನೀನು ಅವಳಿಗೆ ಕಾಳು ಹಾಕುತ್ತಿದ್ದೀಯ ಎಂಬುದನ್ನು ಮೊದಲು ತಲೆಯಿಂದ ತೆಗೆದುಬಿಡು. ಎರಡು-ಮೂರು ಸಲ ಹೋಗಿ ಸುಮ್ಮನೆ ಅವರ ಸಲಹೆ ಕೇಳು. ನೀನು ಅವಳಿಗೆ ಕಾಂಪಿಟೀಷನ್​ ಕೊಡುತ್ತಿದ್ದೀಯ ಅಂತಾನೇ ಅವಳು ನಿನ್ನ ಮೇಲೆ ರೇಗಾಡೋದು. ಅವಳು ತುಂಬ ಸಫರ್​ ಆಗಿ ಬಿಟ್ಟಿದ್ದಾಳೆ. ಗಂಡಸರನ್ನು ಕಂಡರೆ ವಾಕರಿಕೆ ಮಾಡುತ್ತಾಳೆ. ಅದು ಯಾವುದೇ ಗಂಡಸು ಆಗಿರಲಿ. ಅದನ್ನು ನೀನು ಅರ್ಥಮಾಡಿಕೋ. ಸ್ವಲ್ಪ ಗಟ್ಟಿಯಾಗಿ ಮಾತನಾಡು. ಸಾಫ್ಟ್​ ಆಗಿ ಮಾತನಾಡಬೇಡ’ ಎಂದು ಶಮಂತ್​ಗೆ ಪ್ರಶಾಂತ್ ಕಿವಿಮಾತು ಹೇಳಿದ್ದಾರೆ.

ಬಿಗ್ ಬಾಸ್​ ಮನೆಗೆ ಕಾಲಿಟ್ಟ ದಿನದಿಂದಲೂ ದಿವ್ಯಾ ಸುರೇಶ್​ ಅವರು ಮಂಜು ಪಾವಗಡ ಜೊತೆ ಹೆಚ್ಚು ಬೆರೆತಿದ್ದಾರೆಯೇ ಹೊರತು ಬೇರೆ ಗಂಡಸರ ಜೊತೆ ಅವರು ಮಾತನಾಡುವುದು ಕಡಿಮೆ. ಅದೇ ಕಾರಣಕ್ಕಾಗಿ ಪ್ರಶಾಂತ್​ ಸಂಬರಗಿ ಈ ರೀತಿ ಹೇಳಿದ್ದಾರೆ. ದಿವ್ಯಾ ಬದುಕಿನಲ್ಲಿ ನಡೆದ ಕೆಲವು ಘಟನೆಗಳು ಇದಕ್ಕೆ ಕಾರಣ ಇರಬಹುದು ಎಂಬುದು ಪ್ರಶಾಂತ್​ ಅಭಿಪ್ರಾಯ. ಇನ್ನು, ಮಂಜು-ದಿವ್ಯಾ ನಡುವಿನ ಆಪ್ತತೆ ಆಗಾಗ ಸದ್ದು ಮಾಡುತ್ತಿದೆ. ವಾರದ ಪಂಚಾಯಿತಿಯಲ್ಲಿ ಸುದೀಪ್​ ಕೂಡ ಇದೇ ವಿಚಾರ ಇಟ್ಟುಕೊಂಡು ಇಬ್ಬರ ಕಾಲು ಎಳೆಯುತ್ತಿರುತ್ತಾರೆ.

ಬಿಗ್​ ಬಾಸ್ ಮನೆಯ ಆಟ 5ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರದ ಕ್ಯಾಪ್ಟನ್​ ಆಗಿ ವಿಶ್ವನಾಥ್​ ಆಯ್ಕೆ ಆಗಿದ್ದಾರೆ. ನಿಧಿ ಸುಬ್ಬಯ್ಯ, ಅರವಿಂದ್​, ಶುಭಾ ಪೂಂಜಾ, ಶಂಕರ್​ ಅಶ್ವತ್ಥ್​, ಪ್ರಶಾಂತ್​ ಸಂಬರಗಿ ಈ ವಾರ ನಾಮಿನೇಟ್​ ಆಗಿದ್ದಾರೆ. ದಿವ್ಯಾ ಸುರೇಶ್​ ಅವರನ್ನು ವಿಶ್ವನಾಥ್​ ಸೇವ್​​ ಮಾಡಿದ್ದಾರೆ.

ಇದನ್ನೂ ಓದಿ: ಗುಟ್ಟಾಗಿ ನಡೆಯುತ್ತಿದ್ದದ್ದು ಬಯಲಾಯ್ತು; ಮೊದಲ ಬಾರಿಗೆ ಮಂಜು ವಿರುದ್ಧ ತಿರುಗಿ ಬಿದ್ರು ದಿವ್ಯಾ ಸುರೇಶ್​

ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ
ರಾಷ್ಟ್ರಪತಿಯವರನ್ನು ಭೇಟಿಯಾಗಿ ಮಸೂದೆಗಳ ಅನುಮೋದನೆ ಜ್ಞಾಪಿಸಿದೆವು: ಸಿಎಂ
ರಾಷ್ಟ್ರಪತಿಯವರನ್ನು ಭೇಟಿಯಾಗಿ ಮಸೂದೆಗಳ ಅನುಮೋದನೆ ಜ್ಞಾಪಿಸಿದೆವು: ಸಿಎಂ
ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಚಿವ
ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಚಿವ
ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ
ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ
ನನ್ನನ್ನು ರಾಜನಾಗಿ ಮೆರೆಸಿದ್ದು ಹಂಸಲೇಖ: ರವಿಚಂದ್ರನ್
ನನ್ನನ್ನು ರಾಜನಾಗಿ ಮೆರೆಸಿದ್ದು ಹಂಸಲೇಖ: ರವಿಚಂದ್ರನ್