AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಜೀವನದಲ್ಲಿ ದಿವ್ಯಾಗೆ ಶಾಶ್ವತ ಸ್ಥಾನ; ಮೊದಲು ಇವರೇ, ಕೊನೆಯೂ ಇವರೇ’! ಮಂಜು ಲವ್​ ಇನ್ನಷ್ಟು ಸೀರಿಯಸ್​

Bigg Boss Kannada: ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ನಡುವಿನ ಪ್ರೇಮ್​ ಕಹಾನಿ ಬೇರೊಂದು ಹಂತಕ್ಕೆ ತಲುಪಿದೆ. ಹಾಗಾಗಿ ಇಬ್ಬರೂ ವೈಷ್ಣವಿ ಬಳಿ ಕೌನ್ಸಲಿಂಗ್​ ಪಡೆದುಕೊಂಡಿದ್ದಾರೆ!

‘ನನ್ನ ಜೀವನದಲ್ಲಿ ದಿವ್ಯಾಗೆ ಶಾಶ್ವತ ಸ್ಥಾನ; ಮೊದಲು ಇವರೇ, ಕೊನೆಯೂ ಇವರೇ’! ಮಂಜು ಲವ್​ ಇನ್ನಷ್ಟು ಸೀರಿಯಸ್​
ಮಂಜು ಪಾವಗಡ - ದಿವ್ಯಾ ಸುರೇಶ್​
ಮದನ್​ ಕುಮಾರ್​
|

Updated on: Mar 30, 2021 | 12:41 PM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿರುವ ಜೋಡಿ ಎಂದರೆ ಅದು ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​. ಮೊದಲ ದಿನದಿಂದಲೂ ಇವರಿಬ್ಬರು ಕೈಕೈ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ತಾವಿಬ್ಬರು ಗಂಡ-ಹೆಂಡತಿ ಎಂದೇ ಭಾವಿಸಿಕೊಂಡಿದ್ದಾರೆ! ಹಾಗಾಗಿ ನಟಿ ವೈಷ್ಣವಿ ಗೌಡ ಬಳಿಗೆ ಬಂದು ತಮ್ಮಿಬ್ಬರ ನಡುವಿನ ಕೆಲವೊಂದು ಸಮಸ್ಯೆಗಳಿಗೆ ಕೌನ್ಸಲಿಂಗ್​ ಪಡೆದುಕೊಂಡಿದ್ದಾರೆ. ಈ ಮೂವರ ನಡುವೆ ನಡೆದ ಸಂಭಾಷಣೆ ತುಂಬ ಇಂಟರೆಸ್ಟಿಂಗ್​ ಆಗಿತ್ತು.

‘ಇವಳು ಸುಮ್ಮನೆ ಸಿಟ್ಟು ಮಾಡಿಕೊಳ್ಳುತ್ತಾಳೆ’ ಎಂದು ದಿವ್ಯಾ ಸುರೇಶ್​ ಮೇಲೆ ಮಂಜು ಆರೋಪ ಮಾಡಿದ್ದಾರೆ. ‘ಇವರಿಗೆ ಅನುಸರಿಸಿಕೊಂಡು ಹೋಗುವ ಭಾವನೆಯೇ ಇಲ್ಲ’ ಎಂದು ಮಂಜು ಪಾವಗಡ ಬಗ್ಗೆ ದಿವ್ಯಾ ದೂರಿದ್ದಾರೆ. ಪ್ರೀತಿ ಹೆಚ್ಚಾದಾಗ ಸಿಟ್ಟು ಸಹಜ. ನೀವಿಬ್ಬರು ಮಾದರಿ ಕಪಲ್​. ನಿಮ್ಮನ್ನು ನೋಡಿದರೆ ಹೀಗೆಯೇ ಬದುಕಬೇಕು ಅಂತ ಪ್ರತಿಯೊಬ್ಬರಿಗೂ ಅನಿಸುತ್ತದೆ. ಒಬ್ಬರನ್ನೊಬ್ಬರು ಬಿಟ್ಟುಕೊಡಬಾರದು ಎಂದು ವೈಷ್ಣವಿ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ.

‘ನನ್ ಪ್ರೀತಿ ಯಾರಿಗ್​ ಕಮ್ಮಿ’ ಎಂದು ಹಾಡಿನ ಮೂಲಕ ದಿವ್ಯಾಳ ಮನವೊಲಿಸಲು ಮಂಜು ಯತ್ನಿಸಿದರು. ‘ನಿನ್ನ ಪ್ರೀತಿ ಎಲ್ಲರಿಗೂ ಜಾಸ್ತಿ. ಅದೇ ತೊಂದರೆ ಆಗುತ್ತಿರುವುದು’ ಎಂದು ದಿವ್ಯಾ ಕಾಲೆಳೆದರು. ‘ಕಟ್ಟಿಕೊಂಡ ಹೆಂಡತಿ ಬಿಟ್ಟು ಊರವರಿಗೆಲ್ಲ ಪ್ರೀತಿ ಕೊಟ್ಟರೆ ಹೆಂಗೆ’ ಎಂದು ಉರಿಯುವ ಬೆಂಕಿಗೆ ವೈಷ್ಣವಿ ತುಪ್ಪ ಸುರಿದರು.

ಅವರ ಜಾಗದಲ್ಲಿ ನಾನು ಎಲ್ಲಿದ್ದೀನಿ? ಯಾವ ಸ್ಥಾನ ತೆಗೆದುಕೊಳ್ಳುತ್ತಿದ್ದೇನೆ ಎಂಬುದೇ ನನಗೆ ಅರ್ಥ ಆಗುತ್ತಿಲ್ಲ ಅಂತ ದಿವ್ಯಾ ಗೊಂದಲ ತೋಡಿಕೊಂಡರು. ‘ನಿನಗೆ ಪ್ರಥಮ ಸ್ಥಾನ ಕೊಟ್ಟಿದ್ದೇನೆ’ ಎಂದರು ಮಂಜು. ‘ನಾನು ಈ ಜಾಗದಿಂದ ಎದ್ದು ಹೋದ ತಕ್ಷಣ ಬೇರೆ ಯಾರಾದರೂ ಬಂದು ಕುಳಿತುಕೊಂಡರೆ ಅವರಿಗೂ ಪ್ರಥಮ ಸ್ಥಾನ ಕೊಡುತ್ತೀಯ’ ಎಂದು ದಿವ್ಯಾ ಪುನಃ ಛಾಟಿ ಬೀಸಿದರು. ‘ನನ್ನ ಜೀವನದಲ್ಲಿ ಶಾಶ್ವತ ಸ್ಥಾನ ಇವರಿಗೆ. ಮೊದಲು ಇವರೇ, ಕೊನೆಯೂ ಇವರೇ. ಸ್ವಲ್ಪ ಪೊಸೆಸಿವ್​ನೆಸ್​ ಇದೆ. ನನಗೆ ಫ್ರೆಂಡ್ಸ್​ ಇದ್ದಾರೆ ಗರ್ಲ್​ಫ್ರೆಂಡ್ಸ್​ ಇಲ್ಲ. ಇಷ್ಟು ಚೆನ್ನಾಗಿ ಇರುವ ಹುಡುಗಿ ನನ್ನ ಜೀವನದಲ್ಲಿ ಸಿಗುವುದಿಲ್ಲ’ ಎಂದು ಮಂಜು ಹೇಳಿದ್ದಾರೆ.

ಇದನ್ನೆಲ್ಲ ನೋಡುತ್ತಿರುವ ವೀಕ್ಷಕರಿಗೆ ಮಂಜು-ದಿವ್ಯಾ ಲವ್​ ಟ್ರ್ಯಾಕ್​ ಎತ್ತೆತ್ತಲೋ ಸಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಆದರೂ ದಿವ್ಯಾ ನಡವಳಿಕೆ ಕೆಲವೊಮ್ಮೆ ಇದಕ್ಕೆಲ್ಲ ತೀರಾ ವ್ಯತಿರಿಕ್ತ ಆಗಿರುತ್ತದೆ. ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳಲು ಅವರು ಈ ರೀತಿ ಡ್ರಾಮಾ ಮಾಡುತ್ತಿದ್ದಾರಾ ಎಂಬ ಅನುಮಾನ ಕೂಡ ಮೂಡದೇ ಇರದು.

ಇದನ್ನೂ ಓದಿ: ಕನ್ನಡ ಬಿಗ್​ ಬಾಸ್​ ಮನೆಗೆ ಬಂದ ಈ ಶೋಭಾ ಯಾರು?; ಸ್ಪರ್ಧಿಗಳಿಗೂ ಕನ್​ಫ್ಯೂಷನ್​!

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ-ಮಂಜು ನಡುವೆ ಘನಘೋರ ಫೈಟ್​; ಕಾರಣ ಮಾತ್ರ ವಿಚಿತ್ರ!

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ