ಲೈಟ್​ ಆಫ್​ ಆದಾಗ ಅರವಿಂದ್​-ದಿವ್ಯಾ ಕಣ್​ ಕಣ್ಣ ಸಲಿಗೆ! ಕದ್ದು ನೋಡಿದ ಶಮಂತ್​-ರಘು

Bigg Boss Kannada: ರಾತ್ರಿ ವೇಳೆ ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆ.ಪಿ. ಏನೆಲ್ಲ ಮಾಡುತ್ತಾರೆ ಎಂಬುದನ್ನು ಶಮಂತ್​ ಬ್ರೋ ಗೌಡ ಮತ್ತು ರಘು ಗೌಡ ಕದ್ದು ನೋಡಿದ್ದಾರೆ! ರಾತ್ರಿ ನಡೆದ ಸಂಗತಿಯ ಬಗ್ಗೆ ಬೆಳಗ್ಗೆ ಮನೆಯ ಇತರೆ ಸದಸ್ಯರಿಗೆ ಅವರು ವರದಿ ಒಪ್ಪಿಸಿದ್ದಾರೆ.

ಲೈಟ್​ ಆಫ್​ ಆದಾಗ ಅರವಿಂದ್​-ದಿವ್ಯಾ ಕಣ್​ ಕಣ್ಣ ಸಲಿಗೆ! ಕದ್ದು ನೋಡಿದ ಶಮಂತ್​-ರಘು
ಅರವಿಂದ್​ - ದಿವ್ಯಾ ಉರುಡುಗ
Edited By:

Updated on: Apr 10, 2021 | 3:31 PM

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದು ಕಡೆಯಾದರೆ, ಲವ್​ ಸ್ಟೋರಿಗಳು ಇನ್ನೊಂದು ಕಡೆ ಹೈಲೈಟ್ ಆಗುತ್ತಿವೆ. ಅದರಲ್ಲೂ ಅರವಿಂದ್​ ಕೆ.ಪಿ. ಹಾಗೂ ದಿವ್ಯಾ ಉರುಡುಗ ನಡುವಿನ ಆಪ್ತತತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದು ಮನೆಯ ಸದಸ್ಯರ ಕಣ್ಣು ಕುಕ್ಕುತ್ತಿದೆ. ವೀಕ್ಷಕರ ವಲಯದಲ್ಲೂ ಈ ಬಗ್ಗೆ ಚರ್ಚೆ ಜೋರಾಗಿದೆ. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಜೋಡಿಹಕ್ಕಿಗಳು ತಮ್ಮ ಪಾಡಿಗೆ ತಾವು ಹಾಯಾಗಿವೆ. ಇತ್ತೀಚೆಗೆ ದೊಡ್ಮನೆಯಲ್ಲಿ ಅವರಿಬ್ಬರ ಒಂದು ವಿಲಕ್ಷಣ ವರ್ತನೆ ಬೆಳಕಿಗೆ ಬಂದಿದೆ.

ಬಿಗ್​ ಬಾಸ್​ ಮನೆಯಲ್ಲಿ ರಾತ್ರಿ ಬೆಡ್​ ರೂಮ್​ ಲೈಟ್​ ಆಫ್​ ಆದ ಬಳಿಕ ಎಲ್ಲರೂ ಮಲಗುತ್ತಾರೆ. ಇನ್ನೊಬ್ಬರ ನಿದ್ರೆಗೆ ತೊಂದರೆ ಆಗಬಾರದು ಎಂದು ಪಿಸುಮಾತಿನಲ್ಲಿ ಸಂವಹನ ನಡೆಸುತ್ತಾರೆ. ಇಂಥ ಸಮಯದಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆ.ಪಿ. ಕಣ್ಸನ್ನೆಯಲ್ಲೇ ಏನೇನೋ ಮಾತನಾಡಿಕೊಂಡಿದ್ದಾರೆ. ಏ.9ರ ಎಪಿಸೋಡ್​ನಲ್ಲಿ ಈ ದೃಶ್ಯಗಳು ಪ್ರಸಾರ ಆಗಿವೆ. ಇಬ್ಬರ ನಡುವೆ ಆಪ್ತತೆ ಹೆಚ್ಚಿದೆ ಎಂಬುದಕ್ಕೆ ಈ ಸಂಗತಿಯೇ ಸಾಕ್ಷಿ ಒದಗಿಸುತ್ತಿದೆ.

ಅಷ್ಟೇ ಅಲ್ಲ, ರಾತ್ರಿ ವೇಳೆ ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆ.ಪಿ. ಏನೆಲ್ಲ ಮಾಡುತ್ತಾರೆ ಎಂಬುದನ್ನು ಶಮಂತ್​ ಬ್ರೋ ಗೌಡ ಮತ್ತು ರಘು ಗೌಡ ಕದ್ದು ನೋಡಿದ್ದಾರೆ! ರಾತ್ರಿ ನಡೆದ ಸಂಗತಿಯ ಬಗ್ಗೆ ಬೆಳಗ್ಗೆ ಮನೆಯ ಇತರೆ ಸದಸ್ಯರಿಗೆ ಅವರು ವರದಿ ಒಪ್ಪಿಸಿದ್ದಾರೆ. ‘ದಿವ್ಯಾ ಉರುಡುಗ ಪದೇ ಪದೇ ಹೋಗಿ ಅರವಿಂದ್​ರನ್ನು ಮುಟ್ಟಿ ಬರುತ್ತಿದ್ದರು. ಸೊಳ್ಳೆ ಇರಬಹುದು ಎಂದುಕೊಂಡು ಅರವಿಂದ್​ ತೋಳಿಗೆ ಹೊಡೆದುಕೊಂಡರು’ ಎಂದು ರಘು ಮತ್ತು ಶಮಂತ್​ ಎಲ್ಲವನ್ನೂ ಬಹಿರಂಗ ಮಾಡಿದ್ದಾರೆ.

‘ಮಸಲ್​ ತೋರಿಸುವ ಸಲುವಾಗಿ ಅರವಿಂದ್​ ಆ ರೀತಿ ತೋಳಿಗೆ ಹೊಡೆದುಕೊಂಡಿರುತ್ತಾರೆ. ಒಂದು ನವಿಲು ಇನ್ನೊಂದು ನವಿಲನ್ನು ಆಕರ್ಷಿಸಲು ಗರಿ ಬಿಚ್ಚುತ್ತದೆ. ಇದೂ ಕೂಡ ಹಂಗೆ. ಇಬ್ಬರೂ ಆಚೆ ಹೋಗಿ ಮಾತನಾಡಬಹುದು. ಆದರೆ ಬೆಡ್​ ಮೇಲೆ ಕುಳಿತು ಮಾತನಾಡುವ ಮಜವೇ ಬೇರೆ’ ಎಂದು ರಘು ಕಾಮಿಡಿ ಮಾಡಿದ್ದಾರೆ. ಇದನ್ನೆಲ್ಲ ಕೇಳಿಸಿಕೊಂಡು ದಿವ್ಯಾ ಉರುಡುಗ ನಾಚಿ ನೀರಾಗಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಸ್ಪರ್ಧಿಯ ಲಿಪ್​ಲಾಕ್​ ವಿಡಿಯೋ ವೈರಲ್! ಪೂರ್ತಿ ಎಪಿಸೋಡ್​ ಪ್ರಸಾರ ಯಾವಾಗ?

ಮಂಜು ಬೇಡಿಕೆ ಈಡೇರಿಸಿದ ಬಿಗ್​ ಬಾಸ್​; ಒಂದೇ ದಿನ ಇಬ್ಬರು ಹೆಣ್ಮಕ್ಳು ವೈಲ್ಡ್​ ಕಾರ್ಡ್​ ಎಂಟ್ರಿ!

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us