Bigg Boss Kannada: ಶುಭಾ ಪೂಂಜಾ ಬಾಯ್​ಫ್ರೆಂಡ್​ ಧ್ವನಿ ಕೇಳಿ ಗಳಗಳನೆ ಅತ್ತ ವಿಶ್ವನಾಥ್​! ಇದೆಂಥಾ ಕನೆಕ್ಷನ್​?

| Updated By: ರಾಜೇಶ್ ದುಗ್ಗುಮನೆ

Updated on: Mar 28, 2021 | 4:15 PM

BBK8: ಕಣ್ಣೀರನ್ನು ತಡೆದುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ವಿಶ್ವನಾಥ್​ಗೆ ಸಾಧ್ಯವಾಗಲಿಲ್ಲ. ಅಷ್ಟಕ್ಕೂ ಶುಭಾ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ ಕೇಳಿ ಈ ಪುಟಾಣಿ ವಿಶ್ವ ಯಾಕೆ ಅಳುತ್ತಿದ್ದಾನೆ ಎಂದು ಮನೆಯ ಎಲ್ಲ ಸದಸ್ಯರಿಗೂ ಪ್ರಶ್ನೆ ಮೂಡಿತು.

Bigg Boss Kannada: ಶುಭಾ ಪೂಂಜಾ ಬಾಯ್​ಫ್ರೆಂಡ್​ ಧ್ವನಿ ಕೇಳಿ ಗಳಗಳನೆ ಅತ್ತ ವಿಶ್ವನಾಥ್​! ಇದೆಂಥಾ ಕನೆಕ್ಷನ್​?
ವಿಶ್ವನಾಥ್​ - ಶುಭಾ ಪೂಂಜಾ
Follow us on

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಭಾಗವಹಿಸಿರುವ ಅತಿ ಕಿರಿಯ ಸ್ಪರ್ಧಿ ವಿಶ್ವನಾಥ್​. ಚಿಕ್ಕವನು ಎಂಬ ಕಾರಣ ಪ್ರೀತಿ-ಪ್ರೇಮದ ಸಹವಾಸಕ್ಕೆ ವಿಶ್ವ ಕೈ ಹಾಕಿಲ್ಲ. ಮಹಿಳಾ ಸ್ಪರ್ಧಿಗಳನ್ನು ಅಕ್ಕ ಎಂದು ಕರೆಯುವ ಅವರು, ಟಾಸ್ಕ್​ನಲ್ಲಿಯೂ ಬಲು ಚೂಟಿ ಇದ್ದಾರೆ. ಆದರೆ ವೀಕೆಂಡ್​ ಎಪಿಸೋಡ್​ನಲ್ಲಿ ವಿಶ್ವ ಗಳಗಳನೆ ಅತ್ತಿದ್ದಾರೆ. ಅವರು ಹಾಗೆ ಬಿಕ್ಕಿ ಬಿಕ್ಕಿ ಅಳಲು ಕಾರಣ ಆಗಿರುವುದು ಶುಭ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ!

ಬಿಗ್​ ಬಾಸ್​ನಲ್ಲಿ ಸ್ಪರ್ಧಿಸುತ್ತಿರುವವರು ತಮ್ಮ ಕುಟುಂಬದ ಎಲ್ಲರಿಂದಲೂ ದೂರ ಇರುತ್ತಾರೆ. ಹಾಗಾಗಿ ಬಿಗ್​ ಬಾಸ್​ ಆಗೊಮ್ಮೆ ಈಗೊಮ್ಮೆ ಒಂದು ಸರ್ಪ್ರೈಸ್​ ನೀಡುತ್ತಿರುತ್ತಾರೆ. ಸ್ಪರ್ಧಿಗಳ ಕುಟುಂಬದವರಿಂದ ಯಾರಾದರೊಬ್ಬರ ಧ್ವನಿಯನ್ನು ರೆಕಾರ್ಡ್​ ಮಾಡಿ ಕೇಳಿಸುತ್ತಾರೆ. ಈ ಬಾರಿ ಶುಭಾ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ ಕೇಳಿಸಲಾಯಿತು. ಅದನ್ನು ಕೇಳಿಸಿಕೊಂಡು ಶುಭಾ ಪೂಂಜಾ ಅವರು ಸಿಕ್ಕಾಪಟ್ಟೆ ಖುಷಿ ಆದರು. ಆನಂದ ಭಾಷ್ಪ ಸುರಿಸಿದರು. ಆದರೆ ಅವರ ಜೊತೆಗೆ ವಿಶ್ವನಾಥ್​ ಕೂಡ ಅಳಲು ಶುರು ಮಾಡಿದರು!

‘ನೀನು ಬಿಗ್​ ಬಾಸ್​ಗೆ ಹೋಗುತ್ತಿದ್ದೀಯ ಅಂದಾಗ, ಅಬ್ಬಾ ಆರಾಮಾಗಿ ಇರೋಣ ಎಂದುಕೊಂಡಿದ್ದೆ. ಆದರೆ ನಿನ್ನನ್ನು ಎಷ್ಟು ಮಿಸ್​ ಮಾಡುತ್ತಿದ್ದೇನೆ ಅಂತ ನೀನು ಹೋದ ಮರುದಿನ ಗೊತ್ತಾಯಿತು. ಮನೆಯಲ್ಲಿ ತಲೆಹರಟೆ ಮಾಡುತ್ತಿದ್ದ ಮಗುವೇ ಕಾಣಿಸುತ್ತಿಲ್ಲ ಎಂಬಂತೆ ಅನಿಸುತ್ತಿದೆ. ಮೌನ ಆವರಿಸಿದೆ. ಕಳೆದ ವರ್ಷ ಲಾಕ್​ಡೌನ್​ನಲ್ಲಿ ನಾವು ಮಂಗಳೂರಿನಲ್ಲಿ ಇದ್ವಿ. ಬೇರೆ ಯಾರೂ ಇರಲಿಲ್ಲ. ಈಗ ಎಲ್ಲರೂ ಇದ್ದಾರೆ. ಆದರೆ ನೀನು ಇಲ್ಲ. ಇದೇ ನನಗೆ ಕಷ್ಟದ ಲಾಕ್​ಡೌನ್​ ಎನಿಸುತ್ತಿದೆ’ ಎಂದು ಶುಭಾ ಪೂಂಜಾ ಬಾಯ್​ಫ್ರೆಂಡ್​ ವಾಯ್ಸ್​ ಮೆಸೇಜ್​ ಕಳಿಸಿದ್ದರು.

ಇದನ್ನು ಕೇಳಿಸಿಕೊಂಡ ವಿಶ್ವ ಸಿಕ್ಕಾಪಟ್ಟೆ ಅತ್ತು ಬಿಟ್ಟರು. ಕಣ್ಣೀರನ್ನು ತಡೆದುಕೊಳ್ಳಲು ಅವರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಷ್ಟಕ್ಕೂ ಶುಭಾ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ ಕೇಳಿ ಈ ಪುಟಾಣಿ ವಿಶ್ವ ಯಾಕೆ ಅಳುತ್ತಿದ್ದಾನೆ ಎಂದು ಮನೆಯ ಎಲ್ಲ ಸದಸ್ಯರಿಗೂ ಪ್ರಶ್ನೆ ಮೂಡಿತು. ಅಷ್ಟೇ ಅಲ್ಲದೆ, ನಿರೂಪಕ ಕಿಚ್ಚ ಸುದೀಪ್​ ಕೂಡ ವಿಶ್ವನಿಗೆ ಈ ಪ್ರಶ್ನೆ ಕೇಳಿದರು. ಆಗ ವಿಶ್ವ ಅಸಲಿ ಕಾರಣ ಬಾಯಿ ಬಿಟ್ಟರು.

‘ಮೊದಲು ಶುಭ ಅಕ್ಕನ್ನ ನೋಡಿದೆ. ಸಡನ್​ ಆಗಿ ಅಮ್ಮ ನೆನಪಾದರು. ಕಳೆದ ಬಾರಿ ನನಗೆ ಅಮ್ಮನ ವಾಯ್ಸ್​ ಮೆಸೇಜ್​ ಬಂದಿತ್ತು. ನಂತರ ಅಪ್ಪ ಮಾತನಾಡುತ್ತಾರೆ ಎಂದು ಕಾಯುತ್ತಿದ್ದೆ. ಆದರೆ ಅವರ ಧ್ವನಿ ಬರಲೇ ಇಲ್ಲ. ಅಂದು ನಾನು ಎಲ್ಲರ ಮುಂದೆ ಅಳು ತಡೆದುಕೊಂಡಿದ್ದೆ. ಆದರೆ ಇವತ್ತು ಏನೋ ಕನೆಕ್ಟ್​ ಆದಂತೆ ಆಯಿತು. ಅಪ್ಪನ ಧ್ವನಿ ನೆನಪಿಗೆ ಬಂತು’ ಸುದೀಪ್​ ಎದುರಿನಲ್ಲಿ ಎಲ್ಲವನ್ನೂ ಒಪ್ಪಿಕೊಂಡರು ವಿಶ್ವ.

ಇದನ್ನೂ ಓದಿ: Bigg Boss Elimination: ಬಿಗ್​ ಬಾಸ್​ನಿಂದ ಹೊರಬಿದ್ದ ಚಂದ್ರಕಲಾ ಮೋಹನ್​? ಎಲಿಮಿನೇಷನ್​ಗೆ ಆ ಒಂದು ವರ್ತನೆಯೇ ಕಾರಣ