AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಬಿಗ್​ ಬಾಸ್​ ರದ್ದಾಗಿದ್ದು ಯಾಕೆ? ಟ್ರೋಲ್​ ಮಂದಿ ಹುಡುಕಿದ 2 ಫನ್ನಿ ಕಾರಣ ಇಲ್ಲಿದೆ

BBK8: ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಹಾಗೆ ಮಾತನಾಡಿದ್ದರಿಂದಲೇ ಈ ವರ್ಷ ಬಿಗ್​ ಬಾಸ್​ ಅರ್ಧಕ್ಕೆ ನಿಲ್ಲುವಂತಾಯಿತು ಎಂದು ಟ್ರೋಲ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

Bigg Boss Kannada: ಬಿಗ್​ ಬಾಸ್​ ರದ್ದಾಗಿದ್ದು ಯಾಕೆ? ಟ್ರೋಲ್​ ಮಂದಿ ಹುಡುಕಿದ 2 ಫನ್ನಿ ಕಾರಣ ಇಲ್ಲಿದೆ
ನಿಧಿ ಸುಬ್ಬಯ್ಯ - ದಿವ್ಯಾ ಸುರೇಶ್​ - ಮಂಜು ಪಾವಗಡ
ಮದನ್​ ಕುಮಾರ್​
|

Updated on: May 09, 2021 | 11:40 AM

Share

ಸತತ 70 ದಿನ ನಡೆದುಕೊಂಡು ಬಂದ ಕನ್ನಡ ಬಿಗ್​ ಬಾಸ್​ ಕೊನೆಗೊಳ್ಳುವ ಸಮಯ ಬಂದಿದೆ. ಕೊರೊನಾ ವೈರಸ್​ ನಿಯಂತ್ರಿಸುವ ಸಲುವಾಗಿ ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಿರುವುದರಿಂದ ಎಲ್ಲ ರಿಯಾಲಿಟಿ ಶೋ, ಸಿನಿಮಾ ಮತ್ತು ಧಾರಾವಾಹಿಗಳ ಶೂಟಿಂಗ್​ ಬಂದ್​ ಆಗುತ್ತಿದೆ. ಮೇ 24ರವರೆಗೆ ಯಾರೂ ಚಿತ್ರೀಕರಣದಲ್ಲಿ ಭಾಗವಹಿಸುವಂತಿಲ್ಲ. ಬಿಗ್​ ಬಾಸ್​ ಅಂತ್ಯವಾಗಲು ಕೂಡ ಇದೇ ಕಾರಣ. ಆದರೆ ಟ್ರೋಲ್​ ಮಂದಿ ಲೆಕ್ಕಾಚಾರವೇ ಬೇರೆ. ಅವರು ಬೇರೆ ಕಾರಣವನ್ನು ಹುಡುಕಿ ತೆಗೆದಿದ್ದಾರೆ.

ದಿವ್ಯಾ ಸುರೇಶ್​ಗೂ ಇದಕ್ಕೂ ಏನ್​ ಸಂಬಂಧ?

ಬಿಗ್​ ಬಾಸ್​ ಗ್ರ್ಯಾಂಡ್​ ಓಪನಿಂಗ್​ ದಿನ ನಟಿ ದಿವ್ಯಾ ಸುರೇಶ್​ ಅವರು ವೇದಿಕೆ ಮೇಲೆ ಮಾತನಾಡಿದ್ದರು. ಕಿಚ್ಚ ಸುದೀಪ್​ ಜೊತೆ ತಮ್ಮ ಬದುಕಿನ ಕೆಲವು ವಿವರಗಳನ್ನು ಹಂಚಿಕೊಂಡಿದ್ದರು. ‘ನಾನು ಒಂದು ಸೀರಿಯಲ್​ ಮಾಡಿದೆ. ಆದರೆ ಆ ಸೀರಿಯಲ್​ ಅರ್ಧಕ್ಕೆ ನಿಲ್ಲಿಸಿದರು. ಒಂದು ಸಿನಿಮಾ ಮಾಡಿದೆ. ಆ ಸಿನಿಮಾ ರಿಲೀಸ್​ ಆಗಲೇ ಇಲ್ಲ. ನಾನು ಏನೇ ಮಾಡಿದರೂ ಅದು ಅರ್ಧಕ್ಕೆ ನಿಂತು ಹೋಗುತ್ತಿತ್ತು’ ಎಂದು ದಿವ್ಯಾ ಸುರೇಶ್​ ಹೇಳಿದ್ದರು. ಅದೇ ಮಾತನ್ನು ನೆಟ್ಟಿಗರು ಈಗ ಮತ್ತೆ ನೆನಪಿಸಿಕೊಂಡಿದ್ದಾರೆ. ಆ ದೃಶ್ಯ ತುಣುಕು ಇಟ್ಟುಕೊಂಡು ಟ್ರೋಲ್​ ಮಾಡಲಾಗುತ್ತಿದೆ.

ಈ ಸಲ ಕಪ್​ ನಮ್ದೇ ಎಂದಿದ್ದ ಮಂಜು!

ಪ್ರತಿ ಬಾರಿ ಐಪಿಎಲ್​ ಶುರುವಾದಾಗ ಆರ್​ಸಿಬಿ ಅಭಿಮಾನಿಗಳು ‘ಈ ಸಲ ಕಪ್​ ನಮ್ದೇ’ ಎಂದು ಕೂಗುತ್ತಾರೆ. ಆದರೆ ಒಂದು ಬಾರಿಯೂ ಅವರ ಕೈಗೆ ಕಪ್ ಸಿಕ್ಕಿಲ್ಲ. ಅಚ್ಚರಿ ಎಂದರೆ, ಬಿಗ್​ ಬಾಸ್​ ಮನೆಯ ಒಳಗೂ ಈ ಸಲ ಕಪ್​ ನಮ್ದೇ ಎಂದು ಮಂಜು ಹೇಳಿದ್ದರು. ಬಿಗ್​ ಬಾಸ್​ನಲ್ಲಿ ಗಾಜಿನ ಲೋಟ ಒಡೆದುಹಾಕಿದ್ದಕ್ಕಾಗಿ ಮಂಜುಗೆ ಶಿಕ್ಷೆಯ ರೂಪದಲ್ಲಿ ಚಿಕ್ಕ ಕಪ್​ ನೀಡಲಾಗಿತ್ತು. ಬಿಗ್​ ಬಾಸ್​ ಮುಂದಿನ ಆದೇಶ ನೀಡುವವರೆಗೆ ಅದೇ ಕಪ್​ನಲ್ಲಿ ನೀರು ಕುಡಿಯಬೇಕು ಎಂದು ಸೂಚಿಸಲಾಗಿತ್ತು. ಆ ಸಂದರ್ಭದಲ್ಲಿ ‘ಈ ಸಲ ಕಪ್​ ನಮ್ದೇ’ ಎಂದು ಮಂಜು ಹೇಳಿದ್ದರು.

ಮಂಜು ಹಾಗೆ ಹೇಳಿದ್ದರಿಂದಲೇ ಐಪಿಎಲ್​ ರೀತಿಯೇ ಬಿಗ್​ ಬಾಸ್​ ಕೂಡ ಅರ್ಧಕ್ಕೆ ನಿಲ್ಲುವಂತಾಯಿತು ಎಂದು ಟ್ರೋಲ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಇಂದು ಬಿಗ್​ ಬಾಸ್ ಸೀಸನ್​ 8ರ​ ಕೊನೇ ಸಂಚಿಕೆ ಪ್ರಸಾರ ಆಗಲಿದೆ. ಒಟ್ಟಿನಲ್ಲಿ ಐಪಿಎಲ್​ ಮತ್ತು ಬಿಗ್​ ಬಾಸ್​ ರದ್ದಾಗಿರುವುದರಿಂದ ಟಿವಿ ಮುಂದೆ ಕೂರುತಿದ್ದ ಜನರಿಗೆ ಮನರಂಜನೆ ಇಲ್ಲದಂತಾಗಿದೆ. ಟಿವಿ ಸೀರಿಯಲ್​ ಚಿತ್ರೀಕರಣ ನಿಂತಿರುವುದರಿಂದ ಹಳೇ ಎಪಿಸೋಡ್​ಗಳನ್ನು ಮರುಪ್ರಸಾರ ಮಾಡುವುದು ಅನಿವಾರ್ಯ ಆಗಿದೆ.

ಇದನ್ನೂ ಓದಿ:

Bigg Boss Kannada: ಬಿಗ್​ ಬಾಸ್​ ರದ್ದು; ವಿನ್ನರ್​ ಯಾರು ಎಂದು ತೀರ್ಮಾನ ಮಾಡಿದ ಪ್ರೇಕ್ಷಕರು

Bigg Boss Kannada: ಮನಸ್ಸು ಭಾರವಾಗಿದೆ, ಬಿಗ್​ ಬಾಸ್​ ನಿಲ್ಲುತ್ತಿದೆ; ನೋವು ಹೊರಹಾಕಿದ ಪರಮೇಶ್ವರ್​ ಗುಂಡ್ಕಲ್​

ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
Video:ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಫೈಟರ್ ಜೆಟ್ ಯುಕೆಗೆ ವಾಪಸ್
Video:ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಫೈಟರ್ ಜೆಟ್ ಯುಕೆಗೆ ವಾಪಸ್
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?