Bigg Boss Kannada: ಬಿಗ್​ ಬಾಸ್​ ರದ್ದಾಗಿದ್ದು ಯಾಕೆ? ಟ್ರೋಲ್​ ಮಂದಿ ಹುಡುಕಿದ 2 ಫನ್ನಿ ಕಾರಣ ಇಲ್ಲಿದೆ

BBK8: ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಹಾಗೆ ಮಾತನಾಡಿದ್ದರಿಂದಲೇ ಈ ವರ್ಷ ಬಿಗ್​ ಬಾಸ್​ ಅರ್ಧಕ್ಕೆ ನಿಲ್ಲುವಂತಾಯಿತು ಎಂದು ಟ್ರೋಲ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

Bigg Boss Kannada: ಬಿಗ್​ ಬಾಸ್​ ರದ್ದಾಗಿದ್ದು ಯಾಕೆ? ಟ್ರೋಲ್​ ಮಂದಿ ಹುಡುಕಿದ 2 ಫನ್ನಿ ಕಾರಣ ಇಲ್ಲಿದೆ
ನಿಧಿ ಸುಬ್ಬಯ್ಯ - ದಿವ್ಯಾ ಸುರೇಶ್​ - ಮಂಜು ಪಾವಗಡ
Follow us
|

Updated on: May 09, 2021 | 11:40 AM

ಸತತ 70 ದಿನ ನಡೆದುಕೊಂಡು ಬಂದ ಕನ್ನಡ ಬಿಗ್​ ಬಾಸ್​ ಕೊನೆಗೊಳ್ಳುವ ಸಮಯ ಬಂದಿದೆ. ಕೊರೊನಾ ವೈರಸ್​ ನಿಯಂತ್ರಿಸುವ ಸಲುವಾಗಿ ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಿರುವುದರಿಂದ ಎಲ್ಲ ರಿಯಾಲಿಟಿ ಶೋ, ಸಿನಿಮಾ ಮತ್ತು ಧಾರಾವಾಹಿಗಳ ಶೂಟಿಂಗ್​ ಬಂದ್​ ಆಗುತ್ತಿದೆ. ಮೇ 24ರವರೆಗೆ ಯಾರೂ ಚಿತ್ರೀಕರಣದಲ್ಲಿ ಭಾಗವಹಿಸುವಂತಿಲ್ಲ. ಬಿಗ್​ ಬಾಸ್​ ಅಂತ್ಯವಾಗಲು ಕೂಡ ಇದೇ ಕಾರಣ. ಆದರೆ ಟ್ರೋಲ್​ ಮಂದಿ ಲೆಕ್ಕಾಚಾರವೇ ಬೇರೆ. ಅವರು ಬೇರೆ ಕಾರಣವನ್ನು ಹುಡುಕಿ ತೆಗೆದಿದ್ದಾರೆ.

ದಿವ್ಯಾ ಸುರೇಶ್​ಗೂ ಇದಕ್ಕೂ ಏನ್​ ಸಂಬಂಧ?

ಬಿಗ್​ ಬಾಸ್​ ಗ್ರ್ಯಾಂಡ್​ ಓಪನಿಂಗ್​ ದಿನ ನಟಿ ದಿವ್ಯಾ ಸುರೇಶ್​ ಅವರು ವೇದಿಕೆ ಮೇಲೆ ಮಾತನಾಡಿದ್ದರು. ಕಿಚ್ಚ ಸುದೀಪ್​ ಜೊತೆ ತಮ್ಮ ಬದುಕಿನ ಕೆಲವು ವಿವರಗಳನ್ನು ಹಂಚಿಕೊಂಡಿದ್ದರು. ‘ನಾನು ಒಂದು ಸೀರಿಯಲ್​ ಮಾಡಿದೆ. ಆದರೆ ಆ ಸೀರಿಯಲ್​ ಅರ್ಧಕ್ಕೆ ನಿಲ್ಲಿಸಿದರು. ಒಂದು ಸಿನಿಮಾ ಮಾಡಿದೆ. ಆ ಸಿನಿಮಾ ರಿಲೀಸ್​ ಆಗಲೇ ಇಲ್ಲ. ನಾನು ಏನೇ ಮಾಡಿದರೂ ಅದು ಅರ್ಧಕ್ಕೆ ನಿಂತು ಹೋಗುತ್ತಿತ್ತು’ ಎಂದು ದಿವ್ಯಾ ಸುರೇಶ್​ ಹೇಳಿದ್ದರು. ಅದೇ ಮಾತನ್ನು ನೆಟ್ಟಿಗರು ಈಗ ಮತ್ತೆ ನೆನಪಿಸಿಕೊಂಡಿದ್ದಾರೆ. ಆ ದೃಶ್ಯ ತುಣುಕು ಇಟ್ಟುಕೊಂಡು ಟ್ರೋಲ್​ ಮಾಡಲಾಗುತ್ತಿದೆ.

ಈ ಸಲ ಕಪ್​ ನಮ್ದೇ ಎಂದಿದ್ದ ಮಂಜು!

ಪ್ರತಿ ಬಾರಿ ಐಪಿಎಲ್​ ಶುರುವಾದಾಗ ಆರ್​ಸಿಬಿ ಅಭಿಮಾನಿಗಳು ‘ಈ ಸಲ ಕಪ್​ ನಮ್ದೇ’ ಎಂದು ಕೂಗುತ್ತಾರೆ. ಆದರೆ ಒಂದು ಬಾರಿಯೂ ಅವರ ಕೈಗೆ ಕಪ್ ಸಿಕ್ಕಿಲ್ಲ. ಅಚ್ಚರಿ ಎಂದರೆ, ಬಿಗ್​ ಬಾಸ್​ ಮನೆಯ ಒಳಗೂ ಈ ಸಲ ಕಪ್​ ನಮ್ದೇ ಎಂದು ಮಂಜು ಹೇಳಿದ್ದರು. ಬಿಗ್​ ಬಾಸ್​ನಲ್ಲಿ ಗಾಜಿನ ಲೋಟ ಒಡೆದುಹಾಕಿದ್ದಕ್ಕಾಗಿ ಮಂಜುಗೆ ಶಿಕ್ಷೆಯ ರೂಪದಲ್ಲಿ ಚಿಕ್ಕ ಕಪ್​ ನೀಡಲಾಗಿತ್ತು. ಬಿಗ್​ ಬಾಸ್​ ಮುಂದಿನ ಆದೇಶ ನೀಡುವವರೆಗೆ ಅದೇ ಕಪ್​ನಲ್ಲಿ ನೀರು ಕುಡಿಯಬೇಕು ಎಂದು ಸೂಚಿಸಲಾಗಿತ್ತು. ಆ ಸಂದರ್ಭದಲ್ಲಿ ‘ಈ ಸಲ ಕಪ್​ ನಮ್ದೇ’ ಎಂದು ಮಂಜು ಹೇಳಿದ್ದರು.

ಮಂಜು ಹಾಗೆ ಹೇಳಿದ್ದರಿಂದಲೇ ಐಪಿಎಲ್​ ರೀತಿಯೇ ಬಿಗ್​ ಬಾಸ್​ ಕೂಡ ಅರ್ಧಕ್ಕೆ ನಿಲ್ಲುವಂತಾಯಿತು ಎಂದು ಟ್ರೋಲ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಇಂದು ಬಿಗ್​ ಬಾಸ್ ಸೀಸನ್​ 8ರ​ ಕೊನೇ ಸಂಚಿಕೆ ಪ್ರಸಾರ ಆಗಲಿದೆ. ಒಟ್ಟಿನಲ್ಲಿ ಐಪಿಎಲ್​ ಮತ್ತು ಬಿಗ್​ ಬಾಸ್​ ರದ್ದಾಗಿರುವುದರಿಂದ ಟಿವಿ ಮುಂದೆ ಕೂರುತಿದ್ದ ಜನರಿಗೆ ಮನರಂಜನೆ ಇಲ್ಲದಂತಾಗಿದೆ. ಟಿವಿ ಸೀರಿಯಲ್​ ಚಿತ್ರೀಕರಣ ನಿಂತಿರುವುದರಿಂದ ಹಳೇ ಎಪಿಸೋಡ್​ಗಳನ್ನು ಮರುಪ್ರಸಾರ ಮಾಡುವುದು ಅನಿವಾರ್ಯ ಆಗಿದೆ.

ಇದನ್ನೂ ಓದಿ:

Bigg Boss Kannada: ಬಿಗ್​ ಬಾಸ್​ ರದ್ದು; ವಿನ್ನರ್​ ಯಾರು ಎಂದು ತೀರ್ಮಾನ ಮಾಡಿದ ಪ್ರೇಕ್ಷಕರು

Bigg Boss Kannada: ಮನಸ್ಸು ಭಾರವಾಗಿದೆ, ಬಿಗ್​ ಬಾಸ್​ ನಿಲ್ಲುತ್ತಿದೆ; ನೋವು ಹೊರಹಾಕಿದ ಪರಮೇಶ್ವರ್​ ಗುಂಡ್ಕಲ್​

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ