ಬಿಗ್​ ಬಾಸ್​ನಿಂದ ರಘುಗೆ ಒಂದು ನ್ಯಾಯ, ಉಳಿದವರಿಗೊಂದು ನ್ಯಾಯ? ನಿಧಿ ತಲೆಯಲ್ಲಿ ಬಂತು ಡೌಟ್​

|

Updated on: Apr 05, 2021 | 10:32 PM

ಅರವಿಂದ್ ಕೆ.ಪಿ ಕೂಡ ಈ ವಾರ ನಾಮಿನೇಷನ್​ ಆಗಿದ್ದಾರೆ. ಅವರು, ಸ್ಟ್ರಾಂಗ್​ ಸ್ಪರ್ಧಿ ಎನ್ನುವ ಕಾರಣ ನೀಡಿದರು. ಪ್ರಶಾಂತ್​ ಸಂಬರಗಿ, ದಿವ್ಯಾ ಸುರೇಶ್​, ಶುಭಾ ಪೂಂಜಾ ಮೇಲೂ ನಾಮಿನೇಟ್​ ತೂಗುಗತ್ತಿ ಇದೆ.

ಬಿಗ್​ ಬಾಸ್​ನಿಂದ ರಘುಗೆ ಒಂದು ನ್ಯಾಯ, ಉಳಿದವರಿಗೊಂದು ನ್ಯಾಯ? ನಿಧಿ ತಲೆಯಲ್ಲಿ ಬಂತು ಡೌಟ್​
ರಘು ಗೌಡ-ನಿಧಿ ಸುಬ್ಬಯ್ಯ
Follow us on

ಬಿಗ್​ ಬಾಸ್​ ಮನೆಯಲ್ಲಿ ಆರನೇ ವಾರದ ಎಲಿಮಿನೇಷನ್​ಗೆ ನಾಮಿನೇಷನ್​ ನಡೆದಿದೆ. ಒಟ್ಟು ಏಳು ಜನರ ಮೇಲೆ ಎಲಿಮಿನೇಷನ್​​ ತೂಗುಗತ್ತಿ ತೂಗುತ್ತಿದೆ. ಈ ಬಾರಿಯ ನಾಮಿನೇಷನ್​ ವೇಳೆ ರಘು ಗೌಡ ಹೆಸರನ್ನು ನಿಧಿ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಇದನ್ನು ಬಿಗ್​ ಬಾಸ್​ ಸ್ವೀಕರಿಸಲೇ ಇಲ್ಲ. ಇದು ಏಕೆ ಎನ್ನುವ ಪ್ರಶ್ನೆಯನ್ನು ಕೂಡ ನಿಧಿ ಕೇಳಿದರು. ಆದರೆ, ಯಾರೂ ಇದಕ್ಕೆ ಉತ್ತರ ಕೊಟ್ಟಿಲ್ಲ. ಹಾಗಾದ್ರೆ ಹೀಗೆಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಈ ಬಾರಿ ನಾಮಿನೇಷನ್​ಗೆ ನಾಯಕ ಮಂಜು ಪಾವಗಡ, ನೇರವಾಗಿ ನಾಮಿನೇಟ್​ ಆದ ನಿಧಿ ಸುಬ್ಬಯ್ಯ ಹಾಗೂ ಈ ವಾರವಷ್ಟೇ ಬಂದ ಚಕ್ರವರ್ತಿ ಚಂದ್ರಚೂಡ ಅವರ ಹೆಸರನ್ನು ಎತ್ತಿಕೊಳ್ಳುವಂತಿರಲಿಲ್ಲ. ಹೀಗಾಗಿ, ಮನೆಯಲ್ಲಿ ಬಹುತೇಕರು ಶಮಂತ್​ ಬ್ರೋ ಗೌಡ ಅವರ ಹೆಸರನ್ನು ಆಯ್ಕೆ ಮಾಡಿಕೊಂಡರು. ಅವರು ತುಂಬಾನೇ ಸ್ಲೋ, ನಮ್ಮ ವೇಗಕ್ಕೆ ಅವರು ಹೊಂದಿಕೊಳ್ಳುತ್ತಿಲ್ಲ ಎಂದು ಹೇಳಿದರು.

ಅರವಿಂದ್ ಕೆ.ಪಿ ಕೂಡ ಈ ವಾರ ನಾಮಿನೇಷನ್​ ಆಗಿದ್ದಾರೆ. ಅವರು, ಸ್ಟ್ರಾಂಗ್​ ಸ್ಪರ್ಧಿ ಎನ್ನುವ ಕಾರಣ ನೀಡಿದರು. ಪ್ರಶಾಂತ್​ ಸಂಬರಗಿ, ದಿವ್ಯಾ ಸುರೇಶ್​, ಶುಭಾ ಪೂಂಜಾ ಮೇಲೂ ಎಲಿಮಿನೇಷನ್​​ ತೂಗುಗತ್ತಿ ಇದೆ. ನಿಧಿ ಸುಬ್ಬಯ್ಯ ಅವರನ್ನು ಶಂಕರ್ ಅಶ್ವತ್ಥ್​ ನೇರವಾಗಿ ನಾಮಿನೇಟ್​ ಮಾಡಿದ್ದರು.

ಮನೆಯ ನಾಯಕ ಮಂಜುಗೆ ಒಬ್ಬರನ್ನು ನಾಮಿನೇಟ್​ ಮಾಡುವ ಅವಕಾಶ ನೀಡಲಾಗಿತ್ತು. ಈ ವೇಳೆ, ರಾಜೀವ್​ ಅವರನ್ನು ಮಂಜು ಡೇಂಜರ್​ ಜೋನ್​ಗೆ ತಳ್ಳಿದರು. ಇದೇ ವೇಳೆ ರಘು ಹೆಸರನ್ನು ಶುಭಾ ನಾಮಿನೇಟ್​ ಮಾಡಿದ್ದರು. ಆದರೆ, ಅವರ ಹೆಸರು ನಾಮಿನೇಟ್​ ಲಿಸ್ಟ್​ಗೆ ಬಂದೇ ಇಲ್ಲ.

ಇದಕ್ಕೂ ಕಾರಣವಿದೆ. ಎಲಿಮಿನೇಷನ್​ಗೆ ನಾಮಿನೇಟ್​ ಆಗಬೇಕು ಎಂದರೆ ಎರಡಕ್ಕಿಂತ ಹೆಚ್ಚು ಜನರು ಅವರ ಹೆಸರನ್ನು ತೆಗೆದುಕೊಳ್ಳಬೇಕು. ರಘು ಹೆಸರನ್ನು ಎತ್ತಿಕೊಂದಿದ್ದು ಶುಭಾ ಮಾತ್ರ. ಹೀಗಾಗಿ, ರಘು ಹೆಸರು ನಾಮಿನೇಟ್​ ಲಿಸ್ಟ್​ಗೆ ಬಂದಿಲ್ಲ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಒಡೆದು ಆಳೋಕೆ ಸಿದ್ಧವಾಗಿದೆ ಪ್ಲ್ಯಾನ್​! ಸಂಬರಗಿ-ಚಂದ್ರಚೂಡ್​ ಕಿಂಗ್​ಪಿನ್​​