AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಪ್ಟನ್ ರೇಸ್​ನಲ್ಲಿ ಉಳಿದವರ್ಯಾರು? ದಾರಿ ಸುಲಭವಾಯ್ತಾ ಸಂಗೀತಾಗೆ?

Bigg Boss: ಫಿನಾಲೆಗೆ ಹತ್ತಿರವಾದಂತೆ ಕ್ಯಾಪ್ಟೆನ್ಸಿಗೆ ಸ್ಪರ್ಧೆ ಜೋರಾಗಿದೆ. ಈ ವಾರದ ಕ್ಯಾಪ್ಟೆನ್ಸಿ ಓಟದಲ್ಲಿ ಉಳಿದವರ್ಯಾರು, ಜಾಣತನದಿಂದ ದಾರಿ ಸುಗಮ ಮಾಡಿಕೊಂಡರಾ ಸಂಗೀತಾ?

ಕ್ಯಾಪ್ಟನ್ ರೇಸ್​ನಲ್ಲಿ ಉಳಿದವರ್ಯಾರು? ದಾರಿ ಸುಲಭವಾಯ್ತಾ ಸಂಗೀತಾಗೆ?
ಸಂಗೀತಾ
ಮಂಜುನಾಥ ಸಿ.
|

Updated on: Jan 04, 2024 | 11:18 PM

Share

ಬಿಗ್​ಬಾಸ್ (BiggBoss) ಮನೆಯಲ್ಲಿ ಕ್ಯಾಪ್ಟನ್ ಆಗುವುದು ಮಹತ್ವದ ಸಂಗತಿ. ಕ್ಯಾಪ್ಟನ್ ಆದವರಿಗೆ ವಿಶೇಷ ಕೋಣೆ, ಒಂದು ವಾರ ಮನೆಯಲ್ಲಿ ನಿಯಮಗಳನ್ನು ಜಾರಿ ಗೊಳಿಸುವ ಅಧಿಕಾರದ ಜೊತೆಗೆ ಒಂದು ವಾರ ನಾಮಿನೇಷನ್​ನಿಂದ ಬಚಾವಾಗುವ ಸೌಕರ್ಯ ಸಿಗುತ್ತದೆ. ಹಾಗಾಗಿ ಕ್ಯಾಪ್ಟನ್ ಆಗಲು ಎಲ್ಲರೂ ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಅದರಲ್ಲೂ ಫಿನಾಲೆಗೆ ಹತ್ತಿರವಾದಾಗ ಕ್ಯಾಪ್ಟನ್ ಆದವರಿಗೆ ಫಿನಾಲೆಗೆ ನೇರ ಟಿಕೆಟ್ ಸಿಕ್ಕಿದಂತೆಯೇ ಸರಿ. ಈ ಬಾರಿಯೂ ಸಹ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಜೋರಾಗಿದ್ದು, ಸಂಗೀತಾ ಜಾಣತನದಿಂದ ತಮ್ಮ ದಾರಿ ಸುಗಮಗೊಳಿಸಿಕೊಂಡಿದ್ದಾರೆ.

ಗುರುವಾರದ ಎಪಿಸೋಡ್​ನಲ್ಲಿ ವಾರದ ಟಾಸ್ಕ್​ ಅಂತ್ಯವಾಗಿ ಹೊಸ ಕ್ಯಾಪ್ಟನ್ ಆಯ್ಕೆಗೆ ಪ್ರತಿಕ್ರಿಯೆಗೆ ಚಾಲನೆ ದೊರೆಯಿತು. ಸಿರಿ ಅವರು ನೀಡಿದ ವಿಶೇಷ ಅಧಿಕಾರದಿಂದ ಸಂಗೀತಾ ನೇರವಾಗಿ ಕ್ಯಾಪ್ಟನ್ ರೇಸ್​ಗೆ ಆಯ್ಕೆ ಆದರು. ಇನ್ನುಳಿದವರಲ್ಲಿ ಪ್ರತಿ ಇಬ್ಬರಂತೆ ಮನೆಯ ಇತರೆ ಸದಸ್ಯರ ಮುಂದೆ ಬಂದು ತಾವೇಕೆ ಕ್ಯಾಪ್ಟನ್ ಆಗಲು ಅರ್ಹ ಎಂದು ವಾದಿಸಬೇಕಿತ್ತು. ಮನೆಯವರು ಯಾರಿಗೆ ಮತ ಹಾಕುತ್ತಾರೆಯೋ ಅವರು ರೇಸ್​ಗೆ ಅರ್ಹರಾಗುತ್ತಾರೆ ಎಂದಾಯ್ತು. ಮನೆ ಸದಸ್ಯರು ತನಿಷಾರನ್ನು ರೇಸ್​ನಿಂದ ಹೊರಗಿಟ್ಟಿದ್ದರಿಂದ ಅವರು ಕ್ಯಾಪ್ಟನ್ ರೇಸ್​ಗೆ ಅರ್ಹತೆ ಕಳೆದುಕೊಂಡರು.

ಇದನ್ನೂ ಓದಿ:ಡ್ರೋನ್ ಪ್ರತಾಪ್ ಬಿಗ್​ಬಾಸ್ ಮನೆಯಲ್ಲಿ ಮಾತ್ರೆ ಸೇವಿಸುತ್ತಿದ್ದರೇ? ರಕ್ಷಕ್ ಹೇಳಿದ್ದು ಹೀಗೆ

ಮೊದಲು ಹೋದ ಮೈಖಲ್ ಹಾಗೂ ವಿನಯ್​ರಲ್ಲಿ ಮನೆ ಸದಸ್ಯರು ವಿನಯ್​ರನ್ನು ಆರಿಸಿದರು. ಬಳಿಕ ತುಕಾಲಿ ಸಂತು ಹಾಗೂ ವರ್ತೂರು ಸಂತು ಅವರಲ್ಲಿ ತುಕಾಲಿ ಸಂತು ಆಯ್ಕೆಯಾದರು. ಅದಾದ ಬಳಿಕ ಬಂದ ನಮ್ರತಾ ಹಾಗೂ ಕಾರ್ತಿಕ್ ಅವರನ್ನು ಕಾರ್ತಿಕ್ ಅವರನ್ನು ಹೆಚ್ಚು ಮಂದಿ ಆಯ್ಕೆ ಮಾಡಿದರು. ಆದರೆ ಸಂಗೀತಾ ಮಾತ್ರ ನಮ್ರತಾಗೆ ಮತ ಹಾಕಿದರು. ಅಲ್ಲಿಗೆ ವಿನಯ್, ಕಾರ್ತಿಕ್, ತುಕಾಲಿ ಸಂತು ಹಾಗೂ ಸಂಗೀತಾ ಅವರುಗಳು ಕ್ಯಾಪ್ಟನ್ಸಿ ರೇಸ್​ನಲ್ಲಿ ಉಳಿದರು.

ಬಳಿಕ ಸಂಗೀತಾಗೆ ಇನ್ನೊಂದು ಅವಕಾಶ ಕೊಟ್ಟ ಬಿಗ್​ಬಾಸ್, ನಿಮಗೆ ಬೇಡವಾದ ಇಬ್ಬರನ್ನು ಕ್ಯಾಪ್ಟೆನ್ಸಿ ಓಟದಿಂದ ಹೊರಗಿಡಬಹುದು ಎಂದರು. ಆಗ ಸಂಗೀತಾ ತಮಗೆ ಕಠಿಣ ಎದುರಾಳಿ ಆಗಬಹುದಾಗಿದ್ದ ಕಾರ್ತಿಕ್ ಹಾಗೂ ವಿನಯ್ ಇಬ್ಬರನ್ನೂ ಸಹ ಹೊರಗೆ ಇಟ್ಟರು. ಅಂತಿಮವಾಗಿ ತುಕಾಲಿ ಸಂತು ಹಾಗೂ ಸಂಗೀತಾ ಮಾತ್ರವೇ ಕ್ಯಾಪ್ಟೆನ್ಸಿ ರೇಸ್​ನಲ್ಲಿ ಉಳಿದರು. ಸಂಗೀತಾ ಹಾಗೂ ತುಕಾಲಿ ನಡುವೆ ಕ್ಯಾಪ್ಟೆನ್ಸಿಗಾಗಿ ಟಾಸ್ಕ್​ ನಡೆದು ಯಾರು ಕ್ಯಾಪ್ಟನ್ ಆಗಲಿದ್ದಾರೆ ಎಂಬುದು ಶುಕ್ರವಾರದ ಎಪಿಸೋಡ್​ನಲ್ಲಿ ತಿಳಿಯಲಿದೆ. ಅಂದಹಾಗೆ ಸಂಗೀತಾ ಕಾರ್ತಿಕ್ ಹಾಗೂ ವಿನಯ್ ರನ್ನು ಹೊರಗಿಟ್ಟಿದ್ದರಿಂದ ಮನೆಯ ಸದಸ್ಯರಿಗೆ ಐದು ಲಕ್ಷ ಹಣ ಹೆಚ್ಚುವರಿ ಹಣವೂ ದೊರೆಯಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?