AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೊರಗೆ ಕಾಲ್​ ಕಟ್​ ಮಾಡುತ್ತಿದ್ದ ಹುಡುಗಿ, ಈಗ ಅವನಿಗೆ ಊಟ ಮಾಡಿಸುತ್ತಿದ್ದಾಳೆ’

ಶಮಂತ್ ಬ್ರೋ ಗೌಡ ಮನೆಗೆ ಬಂದಾಗ ಕೆಲವರ ಹಿಂದೆ ಸುತ್ತಾಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಯಾವ ಹುಡುಗಿಯನ್ನೂ ಅವರಿಗೆ ಬೀಳಿಸಿಕೊಳ್ಳೋಕೆ ಸಾಧ್ಯವಾಗಿಲ್ಲವಲ್ಲ ಎಂದು ಅನೇಕರು ಟೀಕೆ ಮಾಡಿದ್ದರು.

‘ಹೊರಗೆ ಕಾಲ್​ ಕಟ್​ ಮಾಡುತ್ತಿದ್ದ ಹುಡುಗಿ, ಈಗ ಅವನಿಗೆ ಊಟ ಮಾಡಿಸುತ್ತಿದ್ದಾಳೆ’
ಶಮಂತ್​, ಪ್ರಿಯಾಂಕಾ, ಚಕ್ರವರ್ತಿ ಚಂದ್ರಚೂಡ್​
TV9 Web
| Edited By: |

Updated on:Jun 28, 2021 | 8:32 AM

Share

ಬಿಗ್​ ಬಾಸ್​ ಮನೆಯಲ್ಲಿ ಪ್ರಿಯಾಂಕಾ ತಿಮ್ಮೇಶ್​ ತುಂಬಾನೇ ನೇರವಾಗಿ ಮಾತನಾಡುತ್ತಾರೆ. ಈ ವಿಚಾರಕ್ಕೆ ಅನೇಕರಿಗೆ ಅವರು ಇಷ್ಟವಾಗುವುದಿಲ್ಲ. ಈಗ ಬಿಗ್​ ಬಾಸ್​ ಮನೆಯಲ್ಲಿ ಅವರು ನಡೆದುಕೊಂಡ ರೀತಿ ಅನೇಕರ ಕಣ್ಣು ಕುಕ್ಕಿದೆ. ಶಮಂತ್​ ಹಾಗೂ ಪ್ರಿಯಾಂಕಾ ನಡುವೆ ಫೇಕ್​ ಸಂಬಧವಿದೆ ಎಂದು ಮನೆ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಶಮಂತ್ ಬ್ರೋ ಗೌಡ ಮನೆಗೆ ಬಂದಾಗ ಕೆಲವರ ಹಿಂದೆ ಸುತ್ತಾಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಯಾವ ಹುಡುಗಿಯನ್ನೂ ಅವರಿಗೆ ಬೀಳಿಸಿಕೊಳ್ಳೋಕೆ ಸಾಧ್ಯವಾಗಿಲ್ಲವಲ್ಲ ಎಂದು ಮನೆಯವರು ಟೀಕೆ ಮಾಡಿದ್ದರು. ಈ ವೇಳೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ಪ್ರಿಯಾಂಕಾಗೂ ಮನೆಯಲ್ಲಿದ್ದ ಶಮಂತ್​ಗೂ ಒಳ್ಳೆಯ ಗೆಳೆತನ ಬೆಳೆದಿತ್ತು.

ಜೂನ್​ 26ರ ಎಪಿಸೋಡ್​ನಲ್ಲಿ ಶಮಂತ್​ಗೆ ಪ್ರಿಯಾಂಕಾ ಚಾಲೆಂಜ್​ ಒಂದನ್ನು ಮಾಡಿದ್ದರು. ಈ ಚಾಲೆಂಜ್​ನಲ್ಲಿ ಸೋತರೆ ಊಟ ಮಾಡಿಸುವುದಾಗಿ ಪ್ರಿಯಾಂಕಾ ಹೇಳಿದ್ದರು. ಈ ಚಾಲೆಂಜ್​ನಲ್ಲಿ ಸೋತ ನಂತರದಲ್ಲಿ ಶಮಂತ್​ಗೆ ಪ್ರಿಯಾಂಕಾ ಊಟ ಮಾಡಿಸಿದರು. ಹೀಗಾಗಿ ಇಬ್ಬರ ನಡುವೆ ಪ್ರೀತಿ ಹುಟ್ಟಿದೆ ಎನ್ನುವ ಗುಸುಗುಸು ಮನೆಯಲ್ಲಿ ಹರಿದಾಡಿದೆ.

ಶಮಂತ್​-ಪ್ರಿಯಾಂಕಾ ಕ್ಲೋಸ್​ ಆಗಿರುವ ಬಗ್ಗೆ ಚಕ್ರವರ್ತಿ ಚಂದ್ರಚೂಡ್​ ಬೇಸರ ಹೊರ ಹಾಕಿದ್ದಾರೆ. ಅಲ್ಲದೆ, ಈ ಫೇಕ್​ ರಿಲೇಶನ್​ಶಿಪ್​ ಬಗ್ಗೆ ಚಕ್ರವರ್ತಿ ಸಿಡಿದೆದ್ದಿದ್ದಾರೆ. ‘ಪ್ರಿಯಾಂಕಾರನ್ನು ಕಂಡರೆ ಅನೇಕರಿಗೆ ಆಗಲ್ಲ. ನಿನಗೆ ಪ್ರಿಯಾಂಕಾ ಊಟ ಮಾಡಿಸಿದ್ದು ಬೇರೆ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಲವ್​ ಗೇಮ್​ ಆಡಬೇಡ. ಇದು ಹೊರಗಿನವರಿಗೆ ಗೊತ್ತಾಗುತ್ತದೆ’ ಎಂದು ಶಮಂತ್​ಗೆ ಚಕ್ರವರ್ತಿ ತಿಳಿ ಹೇಳಿದರು.

ನಂತರ ಚಕ್ರವರ್ತಿ- ಪ್ರಶಾಂತ್​ ಮಾತನಾಡಿಕೊಂಡರು. ‘ಆ ಹುಡುಗಿ ಹೊರಗೆ ಶಮಂತ್​ನ ಮೀಟ್​ ಮಾಡುತ್ತಿರಲಿಲ್ಲ. ಕಾಲ್​ ಕಟ್​ ಮಾಡುತ್ತಿದ್ದಳು. ಇಲ್ಲಿ ಬಂದಮೇಲೆ ಇದೇನಿದು ಗೇಮ್​ ಪ್ಲ್ಯಾನ್​? ಆ ಹುಡುಗನನ್ನ ಏಕೆ ಹಾಳು ಮಾಡ್ತಾಳೆ? ಅದು ಬೇಜಾರಾಗ್ತಿದೆ’ ಎಂದರು ಚಕ್ರವರ್ತಿ.

ಇದನ್ನೂ ಓದಿ:

ಬಿಗ್​ ಬಾಸ್​ ಕ್ಯಾಪ್ಟನ್​ ರೂಂನಲ್ಲಿ ಭೂತ? ಕಪ್ಪಗಿನ ಆಕೃತಿ ಕಂಡು ಬೆಚ್ಚಿಬಿದ್ದ ಶಮಂತ್​

ಸಂಚಾರಿ ವಿಜಯ್ ಹೆಸರಿನಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಬಿಗ್​ ಬಾಸ್​ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್​ 

Published On - 7:39 am, Mon, 28 June 21

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ