AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗಂಡನಾಗಿ ನನ್ನಲ್ಲಿ ಏನು ಕೊರತೆ ಇತ್ತು?’: ಮಾಜಿ ಪತ್ನಿಯ ಪ್ರತಿಕ್ರಿಯೆ ಕೇಳಿದ ಆಮಿರ್​ ಖಾನ್​

ಡಿವೋರ್ಸ್​ ಪಡೆದ ಬಳಿಕ ಮುಖ ತಿರುಗಿಸಿಕೊಂಡು ಹೋಗುವವರೇ ಹೆಚ್ಚು. ಆದರೆ ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ಅವರು ಆ ರೀತಿ ಅಲ್ಲ. ವಿಚ್ಛೇದನ ಪಡೆದ ನಂತರವೂ ಅವರಿಬ್ಬರು ಪರಸ್ಪರ ಆಪ್ತವಾಗಿದ್ದಾರೆ. ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮದಲ್ಲಿ ಕೆಲವು ಇಂಟರೆಸ್ಟಿಂಗ್​ ವಿಚಾರಗಳನ್ನು ಈ ಮಾಜಿ ದಂಪತಿ ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಗಂಡನಾಗಿ ನನ್ನಲ್ಲಿ ಏನು ಕೊರತೆ ಇತ್ತು?’: ಮಾಜಿ ಪತ್ನಿಯ ಪ್ರತಿಕ್ರಿಯೆ ಕೇಳಿದ ಆಮಿರ್​ ಖಾನ್​
ಆಮಿರ್​ ಖಾನ್​, ಕಿರಣ್ ರಾವ್​
ಮದನ್​ ಕುಮಾರ್​
|

Updated on: Feb 25, 2024 | 7:19 AM

Share

ಬಾಲಿವುಡ್​ನ ಖ್ಯಾತ ನಟ ಆಮಿರ್ ಖಾನ್​ (Aamir Khan) ಅವರು ಪತ್ನಿ ಕಿರಣ್​ ರಾವ್​ಗೆ ವಿಚ್ಛೇದನ ನೀಡಿದ್ದು ಯಾಕೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಅಚ್ಚರಿ ಏನೆಂದರೆ, ಡಿವೋರ್ಸ್​ (Divorce) ಪಡೆದ ನಂತರವೂ ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ಅನ್ಯೋನ್ಯವಾಗಿಯೇ ಇದ್ದಾರೆ. ಒಟ್ಟಿಗೆ ಸೇರಿ ‘ಲಾಪತಾ ಲೇಡಿಸ್​’ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಈ ಸಿನಿಮಾಗೆ ಕಿರಣ್​ ರಾವ್ (Kiran Rao) ನಿರ್ದೇಶನ ಮಾಡಿದ್ದು, ಆಮಿರ್​ ಖಾನ್​ ನಿರ್ಮಾಣ ಮಾಡಿದ್ದಾರೆ. ಮಾರ್ಚ್​ 1ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ನಡುವೆ ಆಮಿರ್​ ಖಾನ್​ ಅವರು ಒಂದು ಅಚ್ಚರಿಯ ವಿಚಾರ ತಿಳಿಸಿದ್ದಾರೆ. ವಿಚ್ಛೇದನ ನೀಡಿದ ಬಳಿಕ ಕಿರಣ್​ ರಾವ್​ ಅವರಿಂದ ಫೀಡ್​ಬ್ಯಾಕ್​ ಕೇಳಲಾಗಿತ್ತು. ‘ಗಂಡನಾಗಿ ನನ್ನಲ್ಲಿ ಏನು ಕೊರತೆ ಇತ್ತು’ ಎಂದು ಮಾಜಿ ಪತ್ನಿಗೆ ಆಮಿರ್​ ಖಾನ್​ ಪ್ರಶ್ನೆ ಮಾಡಿದ್ದರು.

‘ಎಬಿಪಿ ನೆಟ್​ವರ್ಕ್​’ನ ಕಾರ್ಯಕ್ರಮವೊಂದರಲ್ಲಿ ಆಮಿರ್​ ಖಾನ್​ ಮತ್ತು ಕಿರಣ್ ರಾವ್​ ಅವರು ಜೊತೆಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಅವರು ತಮ್ಮ ವಿಚ್ಛೇದನದ ಬಗ್ಗೆಯೂ ಮಾತನಾಡಿದರು. ಅವರಿಬ್ಬರ ಮದುವೆ ನಡೆದಿದ್ದು 2005ರಲ್ಲಿ. 2021ರಲ್ಲಿ ಅವರು ಡಿವೋರ್ಸ್​ ಪಡೆದರು. ಈ ಜೋಡಿಗೆ ಆಜಾದ್ ಹೆಸರಿನ ಪುತ್ರ ಇದ್ದಾನೆ. ಆತನ ಜವಾಬ್ದಾರಿಯನ್ನು ಇಬ್ಬರೂ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪೋಷಕ ಪಾತ್ರಕ್ಕೆ ಆಡಿಷನ್​ ನೀಡಿದ ಆಮಿರ್​ ಖಾನ್​; ಅಚ್ಚರಿ ಸಂಗತಿ ಬಯಲು

‘ಒಂದು ಮಜವಾದ ವಿಚಾರ ಇದೆ. ಒಂದು ದಿನ ಸಂಜೆ ನಾವಿಬ್ಬರು ಕುಳಿತಿದ್ದಾಗ ಕಿರಣ್​ಗೆ ಒಂದು ಪ್ರಶ್ನೆ ಕೇಳಿದೆ. ಗಂಡನಾಗಿ ನನ್ನಲ್ಲಿ ನಿನಗೆ ಏನು ಕೊರತೆ ಕಾಣಿಸಿದೆ? ಜೀವನದಲ್ಲಿ ಮುಂದೆ ಸಾಗುತ್ತಿದ್ದೇನೆ. ನನ್ನನ್ನು ನಾನು ಸುಧಾರಿಸಿಕೊಳ್ಳಬೇಕು’ ಎಂದು ಕಿರಣ್​ ರಾವ್​ಗೆ ಆಮಿರ್​ ಖಾನ್​ ಹೇಳಿದ್ದರು. ಆ ಮಾತಿಗೆ ಕಿರಣ್​ ರಾವ್​ ಅವರು ಕೂಡಲೇ ಉತ್ತರ ನೀಡಿದ್ದರು. ‘ಓಕೆ.. ಬರೆದುಕೊಳ್ಳಿ ಅಂತ ಕಿರಣ್​ ನನಗೆ ಪಟ್ಟಿ ನೀಡಿದರು. ನೀವು ಬಹಳ ಮಾತನಾಡುತ್ತೀರಿ. ಬೇರೆಯವರಿಗೆ ಮಾತನಾಡಲು ನೀವು ಬಿಡುವುದಿಲ್ಲ. ನಿಮ್ಮದೇ ವಾದಕ್ಕೆ ಅಂಟಿಕೊಂಡಿರುತ್ತೀರಿ. ಈ ರೀತಿ 15-20 ವಿಷಯಗಳ ಪಟ್ಟಿ ನೀಡಿದರು’ ಎಂದು ಮಾಜಿ ಹೆಂಡತಿಯ ಫೀಡ್​ಬ್ಯಾಕ್​ ಬಗ್ಗೆ ಆಮಿರ್​ ಖಾನ್​ ಹೇಳಿದ್ದಾರೆ.

ಇದನ್ನೂ ಓದಿ: ಸಾಯಿ ಪಲ್ಲವಿ ಜೊತೆ ಆಮಿರ್​ ಖಾನ್​ ಮಗನ ಸುತ್ತಾಟ; ಫೋಟೋ ವೈರಲ್​

ಜೀವನದಲ್ಲಿ ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ಅವರು ತುಂಬ ಪ್ರಭುದ್ಧವಾಗಿ ಚಿಂತಿಸುತ್ತಾರೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಸದ್ಯಕ್ಕೆ ಆಮಿರ್​ ಖಾನ್​ ಸಿಂಗಲ್​ ಆಗಿ ಇದ್ದಾರೆ. ಮುಂದಿನ ದಿನಗಳಲ್ಲಿ ಅವರು ಯಾರನ್ನು ಮದುವೆ ಆಗಬಹುದು ಎಂಬ ಕೌತುಕ ಎಲ್ಲರಲ್ಲೂ ಇದೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಸೋತ ಬಳಿಕ ಆಮಿರ್​ ಖಾನ್​ ಅವರು ಬ್ರೇಕ್​ ತೆಗೆದುಕೊಂಡರು. ಈಗ ಅವರು ‘ಸಿತಾರೆ ಜಮೀನ್​ ಪರ್​’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ‘ಲಪತಾ ಲೇಡೀಸ್​’ ಸಿನಿಮಾದ ಪ್ರಮೋಷನ್​ನಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?