AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದೇ ವರ್ಷ ಪ್ರಾರಂಭವಾಗಲಿದೆ ‘ಮಹಾಭಾರತ’: ನಿರ್ದೇಶಕ ರಾಜಮೌಳಿ ಅಲ್ಲ, ಮತ್ಯಾರು?

Mahabharat: ಮಹಾಭಾರತದ ಕತೆ ಆಧರಿಸಿ ಹಲವು ಸಿನಿಮಾಗಳು ಹಲವು ಭಾಷೆಗಳಲ್ಲಿ ಬಂದಿವೆ. ಆದರೆ ಇಡೀ ಕತೆ ಒಟ್ಟಿಗೆ ಸಿನಿಮಾ ಆಗಿ ತೆರೆಗೆ ಬಂದಿದ್ದಿಲ್ಲ. ‘ಮಹಾಭಾರತ’ ಕತೆಯನ್ನು ಸಿನಿಮಾ ಮಾಡುವುದಾಗಿ ಈ ಹಿಂದೆ ರಾಜಮೌಳಿ ಹೇಳಿದ್ದರು. ಆದರೆ ಇದೀಗ ಸ್ಟಾರ್ ನಟರೊಬ್ಬರು ‘ಮಹಾಭಾರತ’ ಸಿನಿಮಾ ಇದೇ ವರ್ಷ ಪ್ರಾರಂಭ ಮಾಡುವುದಾಗಿ ಹೇಳಿದ್ದಾರೆ.

ಇದೇ ವರ್ಷ ಪ್ರಾರಂಭವಾಗಲಿದೆ ‘ಮಹಾಭಾರತ’: ನಿರ್ದೇಶಕ ರಾಜಮೌಳಿ ಅಲ್ಲ, ಮತ್ಯಾರು?
Mahabarath
ಮಂಜುನಾಥ ಸಿ.
|

Updated on: Apr 22, 2025 | 12:13 PM

Share

ಮಹಾಭಾರತ (Mahabarat) ಕತೆಯನ್ನು ಸಿನಿಮಾ (Cinema) ಮಾಡುವುದು ಭಾರತದ ಹಲವು ಟಾಪ್ ನಿರ್ದೇಶಕರ ಕನಸು. ‘ಮಹಾಭಾರತ’ ಕತೆಯ ಆಧಾರದ ಮೇಲೆ ಹಲವು ಭಾಷೆಗಳಲ್ಲಿ ಸಿನಿಮಾಗಳು ಬಂದಿವೆ. ಆದರೆ ಇಡೀ ‘ಮಹಾಭಾರತ’ವನ್ನು ಸಿನಿಮಾ ಆಗಿ ಯಾರಿಗೂ ತೆರೆಯ ಮೇಲೆ ತರಲು ಸಾಧ್ಯವಾಗಿಲ್ಲ. ಪೌರಾಣಿಕ ಕತೆಗಳನ್ನು ತೆರೆಯ ಮೇಲೆ ತರುವ ಪ್ರತಿಭೆ, ಧೈರ್ಯ ಇರುವ ಏಕೈಕ ನಿರ್ದೇಶಕ ರಾಜಮೌಳಿಗೂ ಸಹ ಈ ವರೆಗೆ ಮಹಾಭಾರತ ಯೋಜನೆಯಾಗಿಯೇ ಉಳಿದಿದೆ. ಆದರೆ ಇದೀಗ ಸ್ಟಾರ್ ನಟರೊಬ್ಬರು ‘ಮಹಾಭಾರತ’ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಇದೇ ವರ್ಷ ಸಿನಿಮಾ ಪ್ರಾರಂಭ ಆಗಲಿದೆ. ಆದರೆ ನಿರ್ದೇಶಕ ರಾಜಮೌಳಿ ಅಲ್ಲ.

‘ಮಹಾಭಾರತ’ ಕತೆಯನ್ನು ಸಿನಿಮಾ ಮಾಡಬೇಕು ಎಂಬುದು ನಟ ಆಮಿರ್ ಖಾನ್​ ಅವರ ಜೀವಮಾನದ ಆಸೆಯಂತೆ. ಈ ಹಿಂದೆಯೂ ಹಲವು ಬಾರಿ ಈ ಬಗ್ಗೆ ಮಾತನಾಡಿದ್ದಿದೆ. ಒಮ್ಮೆಯಂತೂ ಮಣಿರತ್ನಂ ನಿರ್ದೇಶನದಲ್ಲಿ ಮಹಾಭಾರತ ಕತೆ ಸಿನಿಮಾ ಆಗಲಿದೆ ಎಂಬ ಸುದ್ದಿ ಜೋರಾಗಿ ಹರಿದಾಡಿತ್ತು. ಆದರೆ ಅದು ಸುದ್ದಿಯಾಗಿಯೇ ಉಳಿಯಿತು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಆಮಿರ್ ಖಾನ್, ತಾವು ಇದೇ ವರ್ಷ ಮಹಾಭಾರತ ಸಿನಿಮಾ ಪ್ರಾರಂಭ ಮಾಡಲಿರುವುದಾಗಿ ಹೇಳಿದ್ದಾರೆ.

‘ಮಹಾಭಾರತ ಸಿನಿಮಾ ಮಾಡುವುದು ನನ್ನ ಜೀವಮಾನದ ಕನಸು. ಪ್ರಯತ್ನಗಳು ತೆರೆ ಮರೆಯಲ್ಲಿ ನಡೆಯುತ್ತಲೇ ಇದ್ದವು. ಕೊನೆಗೆ ಇದೇ ವರ್ಷ ಸಿನಿಮಾ ಪ್ರಾರಂಭ ಆಗುವ ಸಾಧ್ಯತೆ ಇದೆ. ಸಿನಿಮಾದ ನಟರು, ತಂತ್ರಜ್ಞರ ಘೋಷಣೆ ಸಮಯ ಕಳೆದಂತೆ ಆಗಲಿದೆ’ ಎಂದಿದ್ದಾರೆ. ಅಲ್ಲದೆ ಈ ಸಿನಿಮಾ ಹಲವು ಪಾರ್ಟ್​ಗಳಲ್ಲಿ ಬರಲಿದೆ ಎಂದು ಸಹ ಹೇಳಿದ್ದಾರೆ.

ಇದನ್ನೂ ಓದಿ:ರಜನೀಕಾಂತ್​ರನ್ನು ಮಹಾಭಾರತದ ಪಾತ್ರಕ್ಕೆ ಹೋಲಿಸಿದ ಉಪೇಂದ್ರ

‘ನನಗೆ ಕತೆಗಳೆಂದರೆ ಪ್ರಾಣ, ನನಗೆ ಕತೆಗಳ ಮೇಲೆ ನಂಬಿಕೆ ಇದೆ. ಜನರ ಹೃದಯಗಳನ್ನು ತಟ್ಟುವಂಥಹಾ ಕತೆಗಳನ್ನು ಹೇಳುವುದನ್ನು ನಾನು ಮುಂದುವರೆಸಲಿದ್ದೇನೆ. ನನ್ನ ಜೀವಮಾನದ ಆಸೆಗಳಲ್ಲಿ ಮಹಾಭಾರತ ಕತೆಯನ್ನು ಸಿನಿಮಾ ರೂಪದಲ್ಲಿ ಹೇಳುವುದು ಒಂದು. ಆ ಬಗ್ಗೆ ಕೆಲಸ ಚಾಲ್ತಿಯಲ್ಲಿದ್ದು, ಇದೇ ವರ್ಷ ಪ್ರಾರಂಭ ಆಗುವ ಸಾಧ್ಯತೆ ಇದೆ. ಇದು ಸುಲಭದ ಕೆಲಸವಲ್ಲ, ಬರವಣಿಗೆ ಕೆಲಸವೇ ಕೆಲವು ವರ್ಷಗಳ ಕಾಲ ನಡೆಯಲಿದೆ’ ಎಂದಿದ್ದಾರೆ ಆಮಿರ್ ಖಾನ್.

‘ಮಹಾಭಾರತ ಕತೆಯನ್ನು ಒಂದು ಭಾಗದಲ್ಲಿ ಹೇಳಲು ಸಾಧ್ಯವೇ ಇಲ್ಲ. ಹಲವು ಪಾರ್ಟ್​ಗಳಲ್ಲಿಯೇ ನಾವು ಸಿನಿಮಾ ಮಾಡಬೇಕಿರುತ್ತದೆ. ಅದು ಮಾತ್ರವೇ ಅಲ್ಲದೆ, ಸಿನಿಮಾಕ್ಕೆ ಹಲವು ನಿರ್ದೇಶಕರನ್ನು ಒಟ್ಟಿಗೆ ಕೆಲಸ ಮಾಡಿಸುವ ಯೋಜನೆಯೂ ಇದೆ. ಇಂಗ್ಲೀಷ್​ನ ಲಾರ್ಡ್ ಆಫ್ ದಿ ರಿಂಗ್ಸ್ ರೀತಿ ಒಂದೇ ಬಾರಿಗೆ ಹಲವು ಪಾರ್ಟ್​ಗಳ ಚಿತ್ರೀಕರಣ ಮಾಡಿ ಒಂದರ ಹಿಂದೆ ಒಂದರಂತೆ ಬಿಡುಗಡೆ ಮಾಡುವುದು ಸೂಕ್ತ. ಒಂದು ಮುಗಿದ ಬಳಿಕ ಇನ್ನೊಂದು ಶುರು ಮಾಡಿದರೆ ಬಹಳ ಸಮಯ ಹಿಡಿಯಲಿದೆ. ಸಿನಿಮಾದ ಪಾತ್ರವರ್ಗವನ್ನು ಇನ್ನೂ ಆಯ್ಕೆ ಮಾಡಬೇಕಿದೆ. ನಾನು ನಿರ್ಮಾಪಕನ ರೀತಿಯೇ ಯೋಚಿಸಿ ಸಿನಿಮಾ ಮಾಡಲಿದ್ದೇನೆ’ ಎಂದಿದ್ದಾರೆ ಆಮಿರ್ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ