AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಕು ಇರಿತ ಪ್ರಕರಣ ನಡೆದ ಮೂರೇ ತಿಂಗಳಿಗೆ ಹೊಸ ಮನೆ ಖರೀದಿಸಿದ ಸೈಫ್ ಅಲಿ ಖಾನ್

ಮುಂಬೈನಲ್ಲಿ ಚಾಕು ಇರಿತದ ಘಟನೆ ನಡೆದ ಮೂರು ತಿಂಗಳ ನಂತರ, ನಟ ಸೈಫ್ ಅಲಿ ಖಾನ್ ಖತಾರ್‌ನ ಸೇಂಟ್ ರೆಗಿಸ್ ಮಾರ್ಸಾ ಅರೇಬಿಯನ್ ಐಸ್ಲ್ಯಾಂಡ್‌ನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಸುರಕ್ಷತೆ ಮತ್ತು ರಜಾ ದಿನಗಳಲ್ಲಿ ವಾಸಿಸಲು ಸ್ಥಳವನ್ನು ಹೊಂದುವ ಆಸೆ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಈ ಖರೀದಿಯು ಅವರ ಹೆಚ್ಚುತ್ತಿರುವ ಪ್ರವಾಸದ ಆಸಕ್ತಿಯನ್ನು ಸಹ ಸೂಚಿಸುತ್ತದೆ.

ಚಾಕು ಇರಿತ ಪ್ರಕರಣ ನಡೆದ ಮೂರೇ ತಿಂಗಳಿಗೆ ಹೊಸ ಮನೆ ಖರೀದಿಸಿದ ಸೈಫ್ ಅಲಿ ಖಾನ್
ಕರೀನಾ-ಸೈಫ್
ರಾಜೇಶ್ ದುಗ್ಗುಮನೆ
|

Updated on: Apr 22, 2025 | 7:38 AM

Share

ಸೈಫ್ ಅಲಿ ಖಾನ್ (Saif Ali Khan) ಅವರು ಪ್ರಾಪರ್ಟಿಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿಲ್ಲ. ಅವರ ಪೂರ್ವಜರ ಪಟೌಡಿ ಪ್ಯಾಲೇಸ್ ಹಾಗೂ ಬಾಂದ್ರಾ ಅಪಾರ್ಟ್​ಮೆಂಟ್ ಅವರ ದುಬಾರಿ ಹೂಡಿಕೆಗಳಲ್ಲಿ ಒಂದು. ಇದೇ ಬಾಂದ್ರಾ ಅಪಾರ್ಟ್​ಮೆಂಟ್​ನಲ್ಲಿ ಇದ್ದಾಗ ಅವರ ಮೇಲೆ ಚಾಕು ಇರಿತ ಪ್ರಕರಣ ನಡೆದಿತ್ತು. ಈಗ ಈ ಘಟನೆ ನಡೆದ ಮೂರು ತಿಂಗಳ ಬಳಿಕ  ಸೈಫ್ ಅಲಿ ಖಾನ್ ಅವರು ಹೊಸ ಮನೆ ಖರೀದಿ ಮಾಡಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಹಾಗಾದರೆ ಸೈಫ್ ಅಲಿ ಖಾನ್ ಅವರು ಮನೆ ಖರೀದಿಸಿದ್ದು ಮುಂಬೈನಲ್ಲಾ? ಅಲ್ಲ. ಅವರು ಐಷಾರಾಮಿ ಮನೆ ಖರೀದಿ ಮಾಡಿರೋದು ಖತಾರ್​ನಲ್ಲಿ. ಸೇಂಟ್ ರೆಗಿಸ್ ಮಾರ್ಸಾ ಅರೇಬಿಯನ್ ಐಸ್​ಲ್ಯಾಂಡ್​ನಲ್ಲಿ ಅವರು ಮನೆ ಖರೀದಿ ಮಾಡಿದ್ದಾರೆ. ದ್ವೀಪ ಪ್ರದೇಶ ಇದಾಗಿದೆ.

ಸೈಫ್ ಅಲಿ ಖಾನ್ ಅವರು ಚಿತ್ರರಂಗದಿಂದ ಬಿಡುವು ಪಡೆದು ವರ್ಷಕ್ಕೆ 2-3 ಬಾರಿ ಆದರೂ ಪ್ರವಾಸ ತೆರಳುತ್ತಾರೆ. ಅವರು ಖತಾರ್​ಗೂ ಆಗಾಗ ಭೇಟಿ ನೀಡುತ್ತಾರೆ. ಈಗ ಅವರು ಇಲ್ಲಿ ಮನೆ ಖರೀದಿ ಮಾಡಿದ್ದಾರೆ. ಪ್ರವಾಸಕ್ಕೆ ತೆರಳಲು ಹಾಗೂ ಹೂಡಿಕೆ ಉದ್ದೇಶವು ಈ ಖರೀದಿಯ ಹಿಂದಿದೆ.

ಇದನ್ನೂ ಓದಿ
Image
‘ನಾನು ಮಾತ್ರ ಅಲ್ಲಾರೀ’; ಸ್ಟಾರ್ ಕಲಾವಿದರ ಡ್ರಗ್ಸ್ ಪುರಾಣ ಬಿಚ್ಚಿಟ್ಟ ಶೈನ್
Image
ಈಗ ಪತ್ನಿಯೇ ಸರ್ವಸ್ವ; ವಿಜಯಲಕ್ಷ್ಮೀ ಜೊತೆ ಭರನಾಟ್ಯ ನೋಡಲು ಬಂದ ದರ್ಶನ್
Image
ಶಿವರಾಜ್​ಕುಮಾರ್-ಗೀತಾ ಪ್ರೇಮ ನೋಡಿ ಆ ವ್ಯಕ್ತಿಗೆ ನಿಜಕ್ಕೂ ಶಾಕ್ ಆಗಿತ್ತು..
Image
ರಾವಣನಾಗಿ ‘ರಾಮಾಯಣ’ ಆರಂಭಿಸುವುದಕ್ಕೂ ಮೊದಲು ಮಹತ್ವದ ಕೆಲಸ ಮಾಡಿದ ಯಶ್  

‘ರಜೆಯ ಸಂದರ್ಭದಲ್ಲಿ ಹೋಗಲು ಅಥವಾ ಎರಡನೇ ಮನೆಯ ಬಗ್ಗೆ ಯೋಚಿಸಿ ನಾನು ಇಲ್ಲಿ ಮನೆ ಖರೀದಿ ಮಾಡಿದ್ದೇನೆ. ಇದು ತುಂಬಾ ದೂರ ಏನೂ ಇಲ್ಲ. ಅತ್ಯಂತ ಮುಖ್ಯವಾದ ವಿಷಯವೆಂದರೆ ಇದು ತುಂಬಾ ಸುರಕ್ಷಿತವಾಗಿದೆ ಮತ್ತು ಅಲ್ಲಿ ಸಮಯ ಸಿಕ್ಕಾಗ ಇರೋದು ತುಂಬಾನೇ ಒಳ್ಳೆಯದು’ ಎಂದು ಸೈಫ್ ಹೇಳಿದ್ದಾರೆ.

ಚಾಕು ಇರಿತ ಪ್ರಕರಣದ ಬಳಿಕ ಸೈಫ್ ಅಲಿ ಖಾನ್ ಅವರು ಎಚ್ಚೆತ್ತುಕೊಂಡಿದ್ದಾರೆ. ವಿದೇಶದಲ್ಲಿ ಹೋಗಿ ತಂಗಲು ಹೋಟೆಲ್​ಗಳ ಬದಲು ತಮ್ಮದೇ ಮನೆ ಇದ್ದರೆ ಉತ್ತಮ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಕಾರಣದಿಂದಲೇ ಅವರು ಈ ಮನೆ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸೈಫ್ ಅಲಿ ಖಾನ್ ಮೇಲೆ ದಾಳಿ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು, ಮಹತ್ವದ ಅಂಶ ಬಹಿರಂಗ

ಜನವರಿಯಲ್ಲಿ ಸೈಫ್ ಅಲಿ ಖಾನ್ ಅವರ ಮೇಲೆ ಚಾಕು ಇರಿತ ಪ್ರಕರಣ ನಡೆಯಿತು. ಇದರಿಂದ ಅವರು ಸಾಕಷ್ಟು ಭಯಗೊಂಡಿದ್ದಾರೆ. ಅವರ ಬೆನ್ನಿನ ಭಾಗಕ್ಕೆ ಈಗಾಗಲೇ ಸರ್ಜರಿ ಮಾಡಲಾಗಿದೆ. ಸದ್ಯ ಅವರು ಮರಳಿ ಶೂಟಿಂಗ್​ಗೆ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್